Wednesday 24 December 2014

ವ್ಹೆಜ್ ಚೀಜ್ ಮತ್ತು ನಾನ್ ವ್ಹೆಜ್ ಚೀಜ್ (ಶಾಕಾಹಾರಿ ಚೀಜ್ ಮತ್ತು ಮಾಂಸಹಾರಿ ಚೀಜ್)

ಚಾಯ್ ನೀಜ್ ಖಾದ್ಯಪ್ರಕಾರದ ಜೊತೆ ಈಗ ಇಟಾಲಿಯನ್, ಲೆಬನೀಜ್, ಕೋರಿಯನ್ ಅಂತಹ ಅನೇಕ ವಿದೇಶದ ಖಾದ್ಯಪ್ರಕಾರಗಳು ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಲೋಕಪ್ರಿಯವಾಗುತ್ತಿದೆ. ಈ ಖಾದ್ಯಪ್ರಕಾರದಲ್ಲಿ ಬಹಳ ಸಲ "ಚೀಜ್" ನ್ನು ಉಪಯೋಗಿಸಲಾಗುತ್ತಿದೆ. ಈ ಚೀಜ್ ನ ಪ್ರಕಾರವು ಭಾರತದಲ್ಲಿ ಅನೇಕ ವರ್ಷಗಳಿಂದ ಸಿಗುತ್ತಿದ್ದರು ಕೂಡ ಕಳೆದ ಹಲವು ವರ್ಷಗಳಲ್ಲಿ "ಚೀಜ್" ನ ಅಭಿರುಚಿಯು ಜನರಲ್ಲಿ ಬಹಳ ಹೆಚ್ಚಾಗಿದೆ. 

ಸದ್ಗುರು ಅನಿರುದ್ಧ ಬಾಪೂರವರು ( ಡಾ. ಅನಿರುದ್ಧ ಜೋಶಿ ) ದಿನಾಂಕ ೨೫ ಸಪ್ಟೆಂಬರ್ ೨೦೧೪ ರ ಹಿಂದಿ ಪ್ರವಚನದಲ್ಲಿ  " ವ್ಹೆಜ್ ಚೀಜ್ " ಮತ್ತು " ನಾನ್ ವ್ಹೆಜ್ ಚೀಜ್ " ಬಗ್ಗೆ ಮಾಹಿತಿಯನ್ನು ಹೇಳಿದರು. ಚೀಜ್, ಇಂದು ಅನೇಕರ ಬೆಳಗಿನ ಅಲ್ಪೋಪಹಾರದಿಂದ ರಾತ್ರಿಯ ಊಟದ ತನಕ ಸ್ಥಾನವನ್ನು ಪಡೆದಿದೆ. ಅದರ ಪ್ರಕಾರಗಳ ಬಗ್ಗೆ ಹಾಗು ಮಾಡುವ ಪ್ರಕ್ರಿಯೆಯ ವಿಷಯದಲ್ಲಿ ಬಹಳ ಕಡಿಮೆ ಜನರಿಗೆ ತಿಳಿದಿದೆ. ಆದ್ದರಿಂದ ಇದೊಂದು ಬಹಳ ಗಂಭೀರ ವಿಷಯವಾಗಿದೆ. ಆದರೆ ಇಂದು ಚೀಜ್ ಸ್ಯಾಂಡ್ ವೀಜ್, ಸೂಪ್. ಪರಾಠೆ, ಕೋಫ್ತಾ, ಪಾವ್ ಭಾಜಿ, ದೋಸೆ, ಪಕೋಡೆ, ಟೋಸ್ಟ್, ಸ್ಯಾಲಡ್, ರೋಲ್ಸ್, ಪೀಝಾ, ಬರ್ಗರ್ ಇಷ್ಟೇ ಅಲ್ಲದೆ ನಮ್ಮ ನಿತ್ಯದ ಕಾಯಿಪಲ್ಯೆಗಳ ರಸದಲ್ಲಿ ಮತ್ತು ನಾವು ಯಾವಾಗಲೂ ತಿನ್ನುವ ವಡಾಪಾವ್ ಗಳಲ್ಲಿ ಕೂಡ ಅದನ್ನು ಉಪಯೋಗಿಸಲಾಗುತ್ತಿದೆ. ಆದ್ದರಿಂದ ಈ ಚೀಜ್ ಬಗ್ಗೆ ಅಧಿಕವಾಗಿ ತಿಳಿದುಕೊಳ್ಳುವದು ಆವಶ್ಯಕವಾಗಿದೆ. ಆದ್ದರಿಂದ ಚೀಜ್ ಹೇಗೆ ಮಾಡುತ್ತಾರೆ ಎಂಬುದನ್ನು ಸಂಕ್ಷೇಪದಲ್ಲಿ ನೋಡುವ.

ಚೀಜ್ ಈ ಪದಾರ್ಥವು ಹಾಲಿನಿಂದ ಮಾಡಲಾಗುತ್ತದೆ. ಚೀಜ್ ಮಾಡುವಾಗ ಹಾಲನ್ನು ಕುದಿಸಿ ದಪ್ಪವಾಗಿ ಮಾಡುವ ಪ್ರಕ್ರಿಯೆಯಿದೆ. ಆದರೆ ಬಹಳ ಸಲ ಈ ಪ್ರಕ್ರಿಯೆಯನ್ನು ಬೇಗವಾಗಿ ಮಾಡಲೆಂದು ಅದರಲ್ಲಿ ಒಂದು ವಿಶಿಷ್ಟ ಪದಾರ್ಥ ಹಾಕಲಾಗುತ್ತದೆ ಅದರ ಹೆಸರು ರೆನೆಟ್ (Rennet) ಇದೆ. http://en.wikipedia.org/wiki/Rennet


ಆದರೆ ಈ ರೆನೆಟ್ ಎಲ್ಲಿಂದ ಬರುತ್ತದೆ ? ರೆನೆಟಿನ್ ಪಾರಂಪರಿಕ ಸ್ತ್ರೋತ ಅಂದರೆ ಗೋಮಾಂಸ. ದನದ ಅಥವಾ ದನದ ಕರುವಿನ ಹೊಟ್ಟೆಯಲ್ಲಿದ್ದ ಕರುಳಿನಲ್ಲಿ ರೆನೆಟ್ ಸಿಗುತ್ತದೆ, ಕಾರಣ ಸಸ್ತನ ಹಾಗು ಮೆಲುಕು ಹಾಕುತ್ತಿರುವ ಪ್ರಾಣಿಗಳ ಅನ್ನ ಪಚನದಲ್ಲಿ ಈ ರೆನೆಟ್ ನ ಆವಶ್ಯಕತೆ ಇರುತ್ತದೆ. ಈ ರೆನೆಟ್ ನ ಉಪಯೋಗ ಮಾಡಿ ಮಾಡಿದ ಚೀಜ್ ಗೆ " ನಾನ್ ವ್ಹೆಜ್ ಚೀಜ್ " ಹೇಳುತ್ತಾರೆ. ಆದ್ದರಿಂದ ಈ ರೆನೆಟ್ ನ್ನು ಹಾಕಿದ ಚೀಜ್ ನ್ನು ನಾವು ಯಾವಾಗ ತಿನ್ನುತ್ತೇವೆ ಆಗ ನಾವು ಅಪ್ರತ್ಯಕ್ಷರೀತಿಯಿಂದ ಗೋಮಾಂಸವನ್ನೇ ಭಕ್ಷಣ ಮಾಡುತ್ತಿರುತ್ತೇವೆ. ಭಾರತದ ಮಾರುಕಟ್ಟೆಗಳಲ್ಲಿ ವ್ಹೆಜಿಟೇರಿಯನ್ (ಶಾಕಾಹಾರಿ) ಚೀಜ್ ಕೂಡ ಸಿಗುತ್ತದೆ. ಅದನ್ನು ಕೆಲವು ಭಾರತದ ಕಂಪನಿಗಳು ಹಾಗು ಕೆಲವು ಮಲ್ಟಿನೇಶನಲ್ ಕಂಪನಿಗಳು ಉತ್ಪಾದಿಸಿದ್ದಾರೆ.

ಸನಾತನ ವೈದಿಕ ಧರ್ಮದಲ್ಲಿ ನಾವು ಆಕಳನ್ನು " ಗೋಮಾತಾ " ಎಂದು ನಂಬುತ್ತೇವೆ. ಶ್ರದ್ಧಾವಾನರ ೯ ಸಮಾನ ನಿಷ್ಠೆಯಲ್ಲಿ ಕೂಡ ಗೋಮಾತೆ, ಗಂಗಾಮಾತೆ ಮತ್ತು ಗಾಯತ್ರಿಮಾತೆಯರ ಉಲ್ಲೇಖವಿದೆ. ಆಕಳು ನಮಗಾಗಿ ಪಾವಿತ್ರೇಯ ಪ್ರತೀಕವಾಗಿದೆ.

ಚೀಜ್ ಮಾಡುವ ಪ್ರಕ್ರಿಯೆ ತಿಳಿಯದೆ ಅಜಾಗರೂಕತೆಯಿಂದಾಗಿ ಅನೇಕರಿಂದ "ನಾನ್ ವ್ಹೆಜ್" ಚೀಜ್ ತಿನ್ನಲಾಗುತ್ತದೆ. ಯಾರಿಗೆ ನಾನ್ ವ್ಹೆಜ್ ಚೀಜ್ ನ್ನು ತಿನ್ನುವುದನ್ನು ನಿಲ್ಲಿಸಲ್ಲಿಕ್ಕಿದೆ ಅವರು ಇಂದಿನ ಮುಂದೆ ಚೀಜ್ ಅಥವಾ ಚೀಜ್ ಹಾಕಿದ ಪದಾರ್ಥಗಳನ್ನು ತೆಗೆದುಕೊಳ್ಳುವಾಗ ಈ ಚೀಜ್ " ವ್ಹೆಜ್ ಚೀಜ್ " ಇದೆಯೇ ಅಥವಾ " ನಾನ್ ವ್ಹೆಜ್ ಚೀಜ್ " ಇದೆಯೇ ಎಂದು ಕೇಳುವದು ಆವಶ್ಯಕವಾಗಿದೆ. ಅನೇಕ ಸಲ ಉತ್ಪಾದಕರಿಂದ ಚೀಜ್ ನಲ್ಲಿ ರೆನೆಟ್ ಉಪಯೋಗಿಸಿದ್ದನ್ನು ಹೇತುಪೂರ್ವಕವಾಗಿ ಸ್ಪಷ್ಟೀಕರಿಸಲಾಗುವುದಿಲ್ಲ. ಆಗ ನಾವೇ ಜಾಗರೂಕರಾಗಿ ಹಾಗು ನಮ್ಮ ದಕ್ಷತೆಯನ್ನು ಉಪಯೋಗಿಸಬೇಕು. ಆದರೆ ಇದರ ಅರ್ಥ ಚೀಜ್ ತಿನ್ನಲೇ ಬಾರದು ಎಂದು ತಿಳಿಯುವದು ಯೋಗ್ಯವಲ್ಲ.


|| ಹರಿ ಓಂ || ಶ್ರೀರಾಮ || ಅಂಬಜ್ನ ||

ಮಾನವ ಸ್ವಭಾವ ತಿಳಿದ ಟೇಸಲಾ

ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಏರು-ಪೇರುಗಳು ಬರುತ್ತಿರುತ್ತವೆ. ಕೆಲಸದಲ್ಲಿಯ ವಿಫಲತೆ, ನಮ್ಮ ಆತ್ಮೀಯರನ್ನು ಕಳೆದುಕೊಳ್ಳುವದು ಅಥವಾ ಕೇವಲ ಆರ್ಥಿಕ ನಷ್ಟವೂ ಕೂಡ ಬಹಳ ಆಶಾವಾದಿಯಾದ ವ್ಯಕ್ತಿಯನ್ನು ನಿರಾಶವಂತನಾಗಿ ಮಾಡಲು ಸಾಧ್ಯವಿದೆ. ಹಾಗಿರುವಾಗ, ಯಾರು ತಾನು ಸ್ವಪ್ನಿಸಿದ ಕಾರ್ಯಗಳು, ಅವನು ಸಾಧಿಸಿದ್ದು ಹಾಗು ಅವನ ಜೀವನವಿಡಿ ಮಾಡಿದ ಎಲ್ಲಾ ಕಾರ್ಯಗಳು ನಾಶವಾಗುತ್ತಿರುವುದನ್ನು ಕಣ್ಣಾರೆ ಕಂಡಾಗ ಅವನಿಗೆಷ್ಟು ಕಷ್ಟವಾಗಿರಬೇಕೆಂದು ನೀವು ಕಲ್ಪಿಸಬಹುದು. ಇದನ್ನು ವಾಸ್ತವದಲ್ಲಿ ಸಂಪೂರ್ಣ ಧ್ವಂಸವೆನ್ನಬೇಕು. ಇಂತಹದನ್ನು ಎದುರಿಸಿದಾಗ ಹೆಚ್ಚಿನ ಜನರು ತನ್ನ ನಿದ್ದೆ, ಚಿತ್ತ ಮತ್ತು ದೇವರಲ್ಲಿಯ ವಿಶ್ವಾಸವನ್ನು ಕಳೆದುಕೊಳ್ಳುವರು.

ಹಿಂದಿನ ಲೇಖನದಲ್ಲಿ ಡಾ.ನಿಕೋಲಾ ಟೇಸಲಾರವರು ಅವರ ಪ್ರಯೋಗಶಾಲೆಯು ಬೆಂಕಿಯಿಂದಾಗಿ ಸುಟ್ಟಾಗ ಇಂತಹದೇ ಸಮಾನವಾದ ಪರಿಸ್ಥಿತಿಯನ್ನು   ಎದುರಿಸಿದರೆಂದು ನಾವು ನೋಡಿರುವೆವು. ಡಾ. ಟೇಸಲಾರವರಿಗೆ ತಾನು ಸಾಧಿಸಿದ ಕಾರ್ಯಗಳು , ಅವರ ಸ್ವಪ್ನಗಳು, ಅವರ ಮನೋರಾಜ್ಯವು ಅಗ್ನಿಯಲ್ಲಿ ಉರಿದು ಬೂದಿಯಾದದ್ದನ್ನು ನೋಡುವದು ನಿಜವಾಗಿಯೂ ಹೃದಯ ತಿರುಚಿದಂತಾಗಿತ್ತು. ಇದರ ಪರಿಣಾಮವಾಗಿ ಅವರು ತನ್ನನ್ನು ಜನರ ಗಮನದಿಂದ ದೂರ ಮಾಡಿಕೊಂಡರು. ಡಾ. ಟೇಸಲಾರವರು ಅವರ ತಾಯಿಯು ಅಮೇರಿಕಕ್ಕೆ ಬಂದಾಗ ಹೆಚ್ಚಾಗಿ ಹೋಗುತ್ತಿರುವ ಗ್ರಾಮಾಂತರ ಪ್ರದೇಶದ ಚರ್ಚಿಗೆ ತಿರುಗಿ ಬಂದರೆಂದು ಹೇಳಲಾಗುತ್ತದೆ. ಇಲ್ಲಿಯೇ ಡಾ. ಟೇಸಲಾರವರ ಪುರ್ನ್ಜನ್ಮವಾಯಿತು. ದೇವರು ಅವರನ್ನು ಯಾವುದೋ ಉದ್ದೇಶಕ್ಕಾಗಿ ಜೀವಂತವಾಗಿ ಇಟ್ಟಿದ್ದಾರೆಂದು ಮತ್ತು ಆದ ವಿನಾಶಕ್ಕೆ ದೇವರನ್ನು ದೂಷಿಸದೆ ಆ ಉದ್ದೇಶವನ್ನು ಅವರು ಪರಿಪೂರ್ಣಿಸಬೇಕೆಂದು ಅವರಿಗೆ ಅರಿವಾಯಿತು. ಅವರನ್ನು ತನ್ನ ದೈವಿಕ ಹಸ್ತಕ್ಷೇಪದಿಂದ  ಕಾಪಾಡಿದಕ್ಕಾಗಿ ಡಾ. ಟೇಸಲಾರವರು ದೇವರಿಗೆ ಕೃತಜ್ನತೆಯನ್ನು ಅಭಿವ್ಯಕ್ತಿಸಿದರು. ಯಾವುದೋ ಉದ್ದೇಶಕ್ಕಾಗಿ ದೇವರು ಹೀಗೆ ಆಗಲು ಬಿಟ್ಟರೆಂದು ಡಾ. ಟೇಸಲಾರವರ ನಂಬಿಕೆಯಾಗಿತ್ತು ಅದರ ಅರ್ಥ ಡಾ.ಟೇಸಲಾರವರು ಇದನ್ನು ಪುನ: ವಿಚಾರ ಮಾಡಿ ಅವರು ಮಾಡುವ ಕೆಲವು ಕಾರ್ಯಗಳನ್ನು ಬದಲಾಯಿಸುವ ಆವಷ್ಯಕತೆಯಿದೆ ಎಂದು ತಿಳಿದರು.

ಒಂದು ತಿಂಗಳ ತನಕ ಆಲೋಚನೆ ಮಾಡಿದ ನಂತರ, ಡಾ. ಟೇಸಲಾರವರು ಪುನ: ಶೂನ್ಯದಿಂದ ಅರಂಭಿಸಲು ಹಾಗು ಅಳಿಸಿ ಹೋದದ್ದನ್ನು ಇನ್ನೊಂದು ಸಲ ಮುಂದಿನಂತೆ ತಯಾರಿಸಿ ನಿಲ್ಲಿಸಲೆಂದು ದೃಢ ನಿರ್ಧಾರ ಮಾಡಿ ಹಿಂದಿರುಗಿ ನಿವ್ ಯಾರ್ಕಿಗೆ ಬಂದರು. ಇದನ್ನು ಸಾಧಿಸುವದು ನಿಜವಾಗಿಯೂ ಬಹಳ ದೊಡ್ಡ ಗುರಿಯಾಗಿತ್ತು. ಆಲ್ಟರ್ ನೇಟಿಂಗ್ ಕರಂಟಿನ ಆಧಾರದ ಮೇಲೆ ಹೈಡ್ರೊ-ಎಲೆಕ್ಟ್ರಿಕ್ ಪಾವರ್ ಜನರೇಶನ್ ಪ್ಲಾಂಟ್ ನ್ನು ನೈಗರ ಫಾಲ್ಸ್ ಮೇಲೆ ಕಟ್ಟುವ ಮೊದಲ ಧ್ಯೇಯವಾಗಿತ್ತು. ಇದು ಡಾ.ಟೇಸಲಾರವರು ಚಿಕ್ಕಂದಿನಿಂದ ನೋಡಿದ ಸ್ವಪ್ನವಾಗಿತ್ತು.
Tesla-_nigara


ಡಾ. ಕೆಲ್ವಿನ್ ಮತ್ತು ಅವರ ಕಮೀಶನ್ (ನಿಯೋಗಿಸುವವರು) ರವರು ನೈಗರದ ಪಾವರ್ ಸರಂಜಾಮು ಮಾಡುತ್ತಿದ್ದು ಬಫೆಲೊ ಪಟ್ಟಣಕ್ಕು ಕೂಡ ಪಾವರ್ (ಯಂತ್ರಶಕ್ತಿ) ಮಾಡುವ  ಅಧಿಕಾರಿಗಳಾಗಿದ್ದರು. ಮುಖ್ಯದ ಸಂಗತಿಯೆಂದರೆ ಇವತ್ತು ಅದು ನಿವ್ ಯಾರ್ಕ್ ಪ್ರಾಂತದ ಎರಡನೇಯ ಬಹಳ ಶಕ್ತಿಶಾಲಿ ನಗರವಾಗಿದ್ದು ಇದರ ಕರಾರನ್ನು ಸಂಯೋಜಕರಾಗಿರುವ ಜೊರ್ಜ್ ವೆಸ್ಟಿಂಗ್ ಹೌಸ್ ಹಾಗು ಡಾ.ಟೇಸಲಾರವರಿಗೆ ಕೊಡಲಾಯಿತು. ಇದರಿಂದ ಡಾ.ಟೇಸಲಾರವರ ಸ್ವಪ್ನ ಸಾಕಾರವಾದಂತಾಯಿತು. ಈ ಪ್ರಕಲ್ಪಕ್ಕಾಗಿ ಅವರು ನಿರಂತರ ಪರಿಶ್ರಮ ಮಾಡಿ ಮತ್ತು ಅಪರಮಿತ ಸಮರ್ಪಣೆಯಿಂದ ದುಡಿದರು ಹಾಗು ಅವರ ಈ ಕಠಿಣ ಪರಿಶ್ರಮದಿಂದಾಗಿ ಸಂಪೂರ್ಣ ಏಸಿ ಪಾವರ್ ಪ್ಲಾಂಟ್ ನ ಕೆಲಸವನ್ನು ನೈಗರದಲ್ಲಿ  ಹನ್ನೊಂದು ತಿಂಗಳಿನಲ್ಲಿ ಅಸಾಧ್ಯವಾಗಿರುವುದನ್ನು ಅಲ್ಪ ಸಮಯದಲ್ಲಿ ಸಾಧ್ಯ ಮಾಡಿ ತೋರಿಸಿದರು. ಇದು ೧೬ ನೇ ನವೆಂಬರ್ ೧೮೯೬ ದಿವಸದಂದು ಅಂದರೆ ಅವರ ಪ್ರಯೋಗಶಾಲೆಯು ಪೂರ್ಣ ಭೂಮಿಗತವಾಗಿ ಒಂದು ವರ್ಷ ಆಗುವ ಒಳಗೆ  ಡಾ. ನಿಕೋಲಾ ಟೇಸಲಾರವರು ಬಫೆಲೊದಲ್ಲಿಯ ಉದ್ಯೋಗಗಳಿಗಾಗಿ ನೈಗರದಲ್ಲಿರುವ ಎಡ್ ವರ್ಡ್ ಡೀನ್ ಆಡಮ್ಸ್ ಸ್ಟೇಷನ್ ನಿಂದ ಹೈಡ್ರೊಎಲೆಕ್ಟ್ರಿಕ್ ಜನರೇಟರ್ಸ್ ಮೂಲಕ ಎಲೆಕ್ಟ್ರಿಕ್ ಪಾವರನ್ನು ಜನರೇಟ್ ಹಾಗು ಟ್ರಾಂಸ್ ಮಿಟ್ ಮಾಡಿದರು. ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕೊರ್ಪೊರೇಶನ್ ರವರು ಡಾ. ಟೇಸಲಾರವರ ಏಸಿ ಸಿಸ್ಟಮ್ ನ ಪೇಟೆಂಟ್ ಗಳನ್ನು ಉಪಯೋಗಿಸಿ ಜನರೇಟರ್ಸ್ ನ್ನು ತಯಾರಿಸಿದ್ದರು. ಜನರೇಟರ್ಸ್ ಗಳ ಮೇಲೆ ನಿಕೋಲಾ ಟೇಸಲಾರವರ ಹೆಸರನ್ನು ನಮೂದು ಮಾಡಲಾಗಿತ್ತು. ಕೆಲವೇ ವರ್ಷದ ಒಳಗೆ ಒಟ್ಟು ಹತ್ತು ಜನರೇಟರ್ಸ್ ಗಳು ಪ್ರಕಲ್ಪದ ರಚನಾಕ್ರಮೆಯಂತೆಯೇ ನೈಗರಾದಲ್ಲಿ ಕೆಲಸ ಮಾಡ ತೊಡಗಿದವು. ಈಗ ಈ ಪ್ಲಾಂಟ್ ನ ಮೂಲಕವೇ ಸಂಪೂರ್ಣ ನಿವ್ ಯಾರ್ಕ್ ನಗರಕ್ಕೆ ಎಲೆಕ್ಟ್ರಿಸಿಟಿಯನ್ನು ಪೂರೈಸಲಾಗುತ್ತಿದೆ. ಸಿಟಿ ಬ್ರಾಡ್ ವೆಜ್, ಎಂದು ಕರೆಯಲಾಗುತ್ತಿರುವ ಬಹಳ ಲೋಕಪ್ರಿಯವಾದ ಮನೋರಂಜನೆಯ ಜಿಲ್ಲೆಗಳು ಪ್ರಕಾಶದಿಂದ ಜಗಜಗಿಸುತ್ತಿದೆ, ಲಿಫ್ಟ್ ಗಳು, ರೇಲ್ವೆಯ ಹಾದಿಗಳು ಮತ್ತು ಒಳಹಾದಿಗಳು ನೈಗರಾದಿಂದ ಪಡೆಯುವ ಎಲೆಕ್ಟ್ರಿಸಿಟಿಯಿಂದ ಪ್ರಕಾಶಿಸುತ್ತಿವೆ. ಆದರೆ ಬಹಳ ಆಶ್ಚರ್ಯಕರ ಹಾಗು ದಿಗ್ಬ್ರಮೆ ಮಾಡುವ ಮಾತೆಂದರೆ ಎಡಿಸನ್ ಕೂಡ ತನ್ನ ಸಾಂಪ್ರದಾಯಿಕ (ಕನ್ ವೆಂಶನಲ್) ಡಾಯ್ ರೆಕ್ಟ್ ಕರಂಟ್ ಸಿಸ್ಟಮನ್ನು ಆಲ್ಟರ್ ನೇಟಿಂಗ್ ಕರಂಟ್ ಸಿಸ್ಟಮ್ ಗೆ ಪರಿವರ್ತಿಸಿದನು. ಡಾ. ನಿಕೋಲಾ ಟೇಸಲಾರವರ ಪತನ ನಾಶನದಿಂದ ಅದ್ಭುತವಾದ ಏಳಿಕೆಯು ಅದು ಕೂಡ ಅವರ ಪ್ರಯೋಗಶಾಲೆಯು ನಾಶವಾಗಿ ಹನ್ನೊಂದು ತಿಂಗಳಿನ ಒಳಗೆ ಆದಾಗ ಅದನ್ನು ನಾವು ಪ್ರಸಿದ್ಧವಾದ ಫಿನಿಕ್ಸ್ ಪಕ್ಷಿಯು ಬೂದಿಯಿಂದ ಹೊರಬಂದು ಮೇಲೇರಿ ಹಾರಾಡಿತು ಎಂಬುದಕ್ಕೆ  ಹೋಲಿಸಬಹುದು. ಮತ್ತು ಹೀಗೆ ಹಿಂದಿರುಗಿ ಗೆದ್ದು ಬಂದ ಹೋರಾಟವನ್ನು ನಿಜವಾಗಿಯೂ ದೇವರಲ್ಲಿ ದೃಢ ವಿಶ್ವಾಸವಿದ್ದವನಿಂದಲೇ ಅಪೇಕ್ಷಿಸಬಹುದು. ಕೇವಲ ವಿಶ್ವಾಸವೇ ಇಂತಹ ತತ್ವವನ್ನು ಪಾಲಿಸುವದು.

೧೨ನೇ ಜನೇವರಿ ೧೮೯೭ ರಂದು ಪ್ಲಾಂಟಿನ ಪ್ರಾರಂಭೋತ್ಸವದ ಮುಖ್ಯವಾದ ಪ್ರಸಂಗದ ಸಮಯದಲ್ಲಿ ಡಾ.ನಿಕೋಲಾ ಟೇಸಲಾರವರು ಕೆಳಗಿನ ಶಬ್ದಗಳನ್ನು ಉಚ್ಚರಿಸಿದರು, " ನಮ್ಮ ಹತ್ತಿರ ಕಳೆದ ಕಾಲದ ಹಲವು ಸ್ಮಾರಕ ಚಿಹ್ನೆಗಳಿವೆ, ನಮ್ಮ ಹತ್ತಿರ ಅರಮನೆಗಳು ಹಾಗು ಗೋಪುರಗಳಿವೆ, ಗ್ರೀಕಿನ ದೇವಸ್ಥಾನಗಳು ಹಾಗು ಕ್ರೈಸ್ತ ಪ್ರಪಂಚದ ಆರಾಧನಾ ಮಂದಿರಗಳಿವೆ. ಅವುಗಳಲ್ಲಿ ನಿದರ್ಶನಕ್ಕೆ ಬರುವಂತಹದು ಮನುಷ್ಯನ ಶಕ್ತಿ, ರಾಷ್ಟ್ರಗಳ ಮಹತ್ವ, ಕಲೆ ಮೇಲಿನ ಪ್ರೀತಿ ಮತ್ತು ಧಾರ್ಮಿಕ ಭಕ್ತಿ. ಆದರೆ ನೈಗರಾದ ಸ್ಮಾರಕಚಿಹ್ಮೆಯು ತನ್ನಲ್ಲಿಯೇ ಒಂದು ಮಹತ್ವದ್ದುಳ್ಳದಾಗಿದೆ, ನಮ್ಮ ವರ್ತಮಾನದ ವಿಚಾರ ಹಾಗು ಪ್ರವೃತ್ತಿಯನ್ನು ಒಡಂಬಡಿಸಿದೆ. ಇದು ನಮ್ಮ ವಿಜ್ನಾನ ಕಾಲದ ಬಹಳ ಬಹುಮೂಲ್ಯವಾದ ಸ್ಮಾರಕಚಿಹ್ಮೆಯಾಗಿದೆ, ಜ್ನಾನೋದಯದ ಹಾಗು ಶಾಂತಿಯ ನಿಜವಾದ ಸ್ಮಾರಕಚಿಹ್ಮೆಯಾಗಿದೆ. ಇದು ಮಾನವನ ಸೇವೆಗಾಗಿ ನೈಸರ್ಗಿಕ ಶಕ್ತಿಯ ವಿಜಯವನ್ನು ಸೂಚಿಸುತ್ತದೆ. ಕ್ರೂರ ಪದ್ಧತಿಗಳಿಂದ ಬಿಡುಗಡೆ, ದಶಲಕ್ಷ (ಮಿಲ್ಲಿಯನ್ಸ್) ಜನರ ಕಷ್ಟತಾಪತ್ರಯಗಳನ್ನು ಪರಿಹರಿಸಿದೆ." ಡಾ.ಟೇಸಲಾರವರ ಉದಾತ್ತ ಧ್ಯೇಯದ ಉದ್ದೇಶ ಮತ್ತು ಅವರ ಅಸಮಾನತೆಯನ್ನು ಕೊನೆಗೊಳಿಸುವ ದೂರದೃಷ್ಟಿಯು ಅವರ ಈ ಮಾತುಗಳಿಂದ ವ್ಯಕ್ತವಾಗಿತ್ತು ಮತ್ತು ಡಾ.ಟೇಸಲಾರಂತಹ ಒಬ್ಬ ಸತ್ಪುರುಷನೇ ಇದನ್ನು ಸ್ವಪ್ನಿಸಬಹುದು ಹಾಗು ಆ ಪ್ರಕಲ್ಪವನ್ನು ನಿರ್ವಹಿಸಿ, ನಿರಹಂಕಾರಿಯಾಗಿ ಉಳಿದು ಹಾಗು ಮಾನವ ಜೀವನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಮಾಡಲು ಅವರು ತನ್ನ ಪ್ರಯೋಗಶಾಲೆಗೆ ಹಿಂದಿರುಗಿದರು.

ಆದರೆ ಅವರ ಈ ವಿಜಯವು ಸಿಹಿ-ಕಹಿಯಂತಿತ್ತು. ೧೮೮೯ರ ಸಮಯದಲ್ಲಿ ಥೋಮಸ್ ಎಡಿಸನ್ ರವರಿಗೆ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಉತ್ಪಾದಿಸುವ ಹಲವು ಕಂಪನಿಗಳಲ್ಲಿ ಔದ್ಯೋಗಿಕ ರುಚಿಯಿತ್ತು. ೧೮೮೯ ರಲ್ಲಿ  ಜೆ.ಪಿ ಮೊರ್ಗನ್ ಮತ್ತು ಅಂಥೋನಿ ಡ್ರೆಕ್ಸೆಲ್ ರವರು ಸ್ಥಾಪಿಸಿದ ಡ್ರೆಕ್ಸೆಲ್, ಮೊರ್ಗನ್ ಆಂಡ್ ಕಂಪನಿಗಳು ಎಡಿಸನ್ ರವರ ಸಂಶೋಧನೆಗಳಿಗಾಗಿ ಆರ್ಥಿಕ ಸಹಾಯ ಮಾಡುತಿತ್ತು ಮತ್ತು ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿಯನ್ನು ಸ್ಥಾಪಿಸಿ ಒಂದು ಸಂಸ್ಥೆಯ ಅಧಿಪತ್ಯದಲ್ಲಿ ಬರಲು ಈ ಕಂಪನಿಗಳಿಗೆ ಒಂದಾಗಲು ಸಹಾಯ ಮಾಡಿದ್ದರು. ಹೊಸತಾಗಿ ಸ್ಥಾಪಿತವಾದ ಈ ಕಂಪನಿಯು ಸ್ಪ್ರೇಗ್ ಎಲೆಕ್ಟ್ರಿಕ್ ರೇಲ್ವೆ ಆಂಡ್ ಮೋಟರ್ ಕಂಪನಿಯನ್ನು ಕೂಡ ಅದೇ ವರ್ಷದಲ್ಲಿ ಪಡೆದು ಕೊಂಡಿತು.

ಅದೇ ಸಮಯದಲ್ಲಿ ಚಾರ್ಲ್ಸ್ ಕೊಫಿನ್ ರವರ ಅಧಿಪತ್ಯದಲ್ಲಿ ಥೊಮಸನ್-ಹ್ಯುಸ್ಟನ್ ಎಲೆಕ್ಟ್ರಿಕ್ ಕಂಪನಿಯು ಹಲವು ಪ್ರತಿಸ್ಪರ್ಧಿಗಳನ್ನು ಹಾಗು ಅವರ ಬಹಳ ಮಹತ್ವದ ಪೇಟೆಂಟ್ ಗಳನ್ನು ಸುಗಮತೆಯಿಂದ ಪಡೆದುಕೊಂಡರು. ನಂತರ ೧೮೯೨ ರಲ್ಲಿ ಔಪಚಾರಿಕವಾಗಿ ಜನರಲ್ ಎಲೆಕ್ಟ್ರಿಕ್ ಸ್ಥಾಪಿತಮಾಡಿ ಎಡಿಸನ್ ಜನರಲ್ ಎಲೆಕ್ಟ್ರಿಕ್ ಕಂಪನಿ ಆಫ್ ಸ್ಕೆನೆಕ್ಟಡಿ, ನಿವ್ ಯಾರ್ಕ್ ಮತ್ತು ಥೊಮಸನ್ -ಹ್ಯುಸ್ಟನ್ ಎಲೆಕ್ಟಿಕ್ ಕಂಪನಿ ಆಫ್ ಲಿಯನ್ ಮ್ಯಾಸ್ಸಾಚುಸೆಟ್ಸ್ ಗಳನ್ನು ಅದರಲ್ಲಿ ಒಂದುಗೂಡಿಸಿದಾಗ ಎಡಿಸನ್ ತನ್ನ ಕಂಪನಿಯ ಕಸಬು ಪ್ರವೀಣರಾದ ಕಾರ್ಯಸ್ಥಾಪಕರ ಮೇಲಿನ ಅಧಿಕಾರವನ್ನು ಕಳೆದುಕೊಂಡರು ಹಾಗು ಜನರಲ್ ಎಲೆಕ್ಟ್ರಿಕ್ ಎಂಬ ಹೆಸರಿನಲ್ಲಿ ಒಂದಾಗಿ ಉದಯಕ್ಕೆ ಬಂದಿತು. ಮತ್ತು ಏಸಿ ಸಿಸ್ಟಮ್ ನ ಪೇಟೆಂಟಿಗಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯ ವಿರುದ್ಧ ಜನರಲ್ ಎಲೆಕ್ಟ್ರಿಕ್ ಕಂಪನಿಯು ಕಾನೂನಿನ ಸಹಾಯಪಡೆದುಕೊಂಡಿತು. ಆದರೆ ಈ ಕೇಸಿನಲ್ಲಿ ವೆಸ್ಟಿಂಗ್ ಹೌಸ್ ರವರು ವಿಜಯಿಯಾದರು ಕೂಡ ಈ ವಿಜಯಕ್ಕಾಗಿ ಬಹಳ ಹಣವು ವ್ಯಯವಾಯಿತು. ಇದರಿಂದಾಗಿ ವೆಸ್ಟಿಂಗ್ ಹೌಸ್ ಗೆ ತನ್ನನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಯಿತು. ೧೯೦೭ ರಲ್ಲಿ ಇಂತಹ ವಿಪತ್ಕರ ಸಂದರ್ಭದಲ್ಲಿ ಮತ್ತು ಆರ್ಥಿಕ ವ್ಯವಹಾರದ ಮಾರುಕಟ್ಟೆಯಲ್ಲಿ ಡಾ.ಟೇಸಲಾರವರಿಗೆ ವಿರೋಧಿಸುತ್ತಿರುವ ವಿಪರೀತ ಉದ್ದೇಶವುಳ್ಳ ಸಂಚುಗಾರರ ಕಾರಣದಿಂದಾಗಿ ವೆಸ್ಟಿಂಗ್ ಹೌಸ್ ಕಂಪನಿಯ ಸ್ಟಾಕ್ ನ ಬೆಲೆಯು ಬೀಳತೊಡಗಿತು.

ಇಂತಹ ಸಮಯದಲ್ಲಿ ಡಾ. ಟೇಸಲಾರವರು ಇನ್ನೊಮ್ಮೆ ವೆಸ್ಟಿಂಗ್ ಹೌಸ್ ರವರ ಸಹಾಯಕ್ಕೆಂದು ಮುಂದೆ ಬಂದರು. ಡಾ. ನಿಕೋಲಾ ಟೇಸಲಾರವರು ವೆಸ್ಟಿಂಗ್ ಹಾಸ್ ರವರ ಜೊತೆ ಮಾಡಿದ ೧೨ ಮಿಲ್ಲಿಯನ್ ಡಾಲರಿನ ಬೆಲೆಯ ಕರಾರನ್ನು ನಿಜದಲ್ಲಿ ಹರಿದು ಬಿಸಾಡಿದರು ಇದರ ಪ್ರಕಾರ ವೆಸ್ಟಿಂಗ್ ಹೌಸ್ ರವರು ಡಾ. ಟೇಸಲಾರವರಿಗೆ ಅವರ ಏಸಿ ಪೇಟಂಟ್ ನ್ನು ಉಪಯೋಗಿಸಿ  ಪ್ರತಿಯೊಂದು ಹೊರ್ಸ್ ಪಾವರ್ ಆಫ್ ಎನರ್ಜಿಯನ್ನು ಜನರೇಟ್ ಮಾಡಿದಾಗ ಒಂದು ಡಾಲರಿನಂತೆ ಕೊಡಲು ಅವರ ಕಂಪನಿಯು ವಚನ ಬದ್ಧವಾಗಿತ್ತು. ಚಿತ್ತಾಕರ್ಷಕದ ವಿಷಯವೆಂದರೆ ಇಂದಿನ ಕಾಲದಲ್ಲಿ ಈ ಕರಾರನ್ನು ೩೦೦ ಮಿಲ್ಲಿಯನ್ ಡಾಲರ್ಸ್ ನಷ್ಟು ಮೂಲ್ಯವಾಗಿದೆಯೆಂದು ಬ್ಯಾಂಕಿನವರು ಅಂದಾಜು ಹಾಕಿರುವರು.

ಡಾ. ಟೇಸಲಾರವರು ವೆಸ್ಟಿಂಗ್ ಹೌಸ್ ನ ಕಂಪನಿಯನ್ನು ಋಣ ಮುಕ್ತಮಾಡಲು ತನ್ನ ಆರ್ಥಿಕ ಲಾಭವನ್ನು ಹೀಗೆಯೇ ಬಿಟ್ಟು ಕೊಟ್ಟರು ಯಾಕೆಂದರೆ ಅವರ ಪ್ರಾರಂಭದ ಪೇಚಾಟದ ದಿವಸದಲ್ಲಿ ವೆಸ್ಟಿಂಗ್ ಹೌಸ್ ನವರು ಅವರಿಗೆ ಸಹಾಯ ಮಾಡಿದ್ದರು ಮತ್ತು ಜನಸಾಮಾನ್ಯರಿಗೆ ಬಹಳ ಕಡಿಮೆ ಕ್ರಯದಲ್ಲಿ ಎಲೆಕ್ಟ್ರಿಸಿಯನ್ನು ಪೂರೈಸಿದ್ದರು. ಡಾ. ಟೇಸಲಾರವರ ಇಂತಹ ನಿ:ಸ್ವಾರ್ಥದ ವರ್ತನೆಯಿಂದಾಗಿ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯು ಜೆ.ಪಿ. ಮೊರ್ಗನ್ ರವರ ಕೈಯಲ್ಲಿ ಸ್ಥಾನಾಂತರವಾಗುವದು ತಳ್ಳಿತು ಹಾಗು ಪಾವರ್ ಜನರೇಶನ್ ನ ವ್ಯಾಪಾರ ಸಂಸ್ಥೆಗಳಿಗೆ ಏಕಾಧಿಕಾರ ಸಿಗದಿದ್ದರಿಂದ ಸಾಮಾನ್ಯ ಜನರ ತನಕ ಅಗ್ಗವಾದ ಎಲೆಕ್ಟ್ರಿಸಿಟಿ ತಲುಪಲು ಅಡ್ಡಿ ಬರಲಾಗಲಿಲ್ಲ. ಅವರ ಪೇಟಂಟ್ಸ್ ಗಳನ್ನು ಮಾರಿದ್ದರಿಂದ ಮತ್ತು ಅವರ ೧೨ ಮಿಲ್ಲಿಯನ್ ಡಾಲರಿನ ಕರಾರನ್ನು ರದ್ದು ಮಾಡಿದ್ದರಿಂದ ಡಾ. ಟೇಸಲಾರವರ ಸ್ಥಾಯಿಕ ಉತ್ಪಾದನೆಯು ತೀವ್ರವಾಗಿ ನಶಿಸಿತು ಆದರೂ ಅವರು ಕೇವಲ ಒಂದೇ ಒಂದು ಕಾರಣಕ್ಕಾಗಿ ಅಂದರೆ ಮಾನವೀಯತೆಯ ಉದ್ಧಾರವನ್ನು ಬಯಸಿದ್ದರು.

ಈ ಮಹಾನ ಮನುಷ್ಯನ ಅದ್ಭುತಕಾರ್ಯಗಳು ಮತ್ತು ಶಬ್ದಗಳು ನಿಜವಾಗಿಯೂ ಪ್ರೇರಣೆ ಕೊಡುತ್ತದೆ. ಇಂತಹ ಆವ್ಹಾನಗಳನ್ನು ಮತ್ತು ವಿಷಮ ಪರಿಸ್ಥಿತಿಗಳನ್ನು               ಒಂಟಿಯಾಗಿಯೇ ಎದುರಿಸಿ ಯಾವುದಕ್ಕು ಕೂಡ ಬಗ್ಗದೆ ಅಭಿಮಾನದಿಂದ ನಡೆದ ಅವರು ಮೆಚ್ಚಿಗೆಯ ಪಾತ್ರವಲ್ಲದೆ ಅದನ್ನು ಕಲ್ಪಪಿಸಲು ಕೂಡ ಅಸಾಧ್ಯ. ನಮ್ಮ ಮುಂದಿನ ಲೇಖನದಲ್ಲಿ ನಾವು ಡಾ. ನಿಕೋಲಾ ಟೇಸಲಾರವರ ಕಥೆಯ ಬಹಳ ಚಿತ್ತಾಕರ್ಷಕ ಭಾಗವನ್ನು ನೋಡಲಿರುವೆವು. ಅಲ್ಲಿಯ ತನಕ ಹೇಗೆ ಒಬ್ಬ ಮನುಷ್ಯನು  ತನ್ನ ಸರ್ವಸ್ವವನ್ನು ಕಳೆದುಕೊಂಡರೂ ವಿಶ್ವಾಸ ಮಾತ್ರ ಕಳೆದುಕೊಳ್ಳದೆ ಕೇವಲ ದೇವರಲ್ಲಿಯ ದೃಢ ವಿಶ್ವಾಸದಿಂದಾಗಿ ತನ್ನ ತತ್ವ ಮತ್ತು ಉದ್ದೇಶವನ್ನು  ಸಾದಿಸಬಹುದೆನ್ನುವುದನ್ನು ವಿಚಾರ ಮಾಡಿ.


|| ಹರಿ ಒಂ ||  || ಶ್ರೀರಾಮ || || ಅಂಬಜ್ನ ||  

Saturday 15 November 2014

ತಂತಿರಹಿತ ವಿದ್ಯುತಚ್ಛಕ್ತಿ : ಭಾಗ-೨

ಹಿಂದಿನ ಲೇಖನದಲ್ಲಿ ನಾವು ಡಾ.ನಿಕೋಲಾ ಟೇಸಲಾರವರು ಹೇಗೆ ಇಂಪಲ್ಸೆಸ್ ನ ಮೂಲತತ್ವಗಳನ್ನು ಕಂಡುಹಿಡಿದು ಮತ್ತು ಅದನ್ನು ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ಗೆ ಪ್ರಯೋಗಿಸಿದರು ಹಾಗೆಯೇ ಕರಂಟ್ ಗಾಳಿಯ ಮೂಲಕ ಸಂಚಾರ ಮಾಡುವುದನ್ನು ನೋಡಿದೇವು.

ಇದೊಂದು ಕೇವಲ ತಂತಿರಹಿತ ವಿದ್ಯುತಚ್ಛಕ್ತಿಯ ಕಡೆಗೆ ಹೋಗುವ ಮೊದಲನೇಯ ಹೆಜ್ಜೆಯಾಗಿತ್ತು. ಲೇಖನದ ಈ ಸರದಿಗಳಲ್ಲಿ ನಾವು ತಂತಿರಹಿತ ವಿದ್ಯುತಚ್ಛಕ್ತಿಯ ಬಳಸುವಿಕೆ ಹಾಗೆಯೇ ಈ ಮೂಲತತ್ವಗಳು ಹೇಗೆ ಡಾ.ನಿಕೋಲಾ ಟೇಸಲಾರವರ ಮುಂದಿನ ಕೆಲವು ಹೊಸ ಪದ್ಧತಿಯ ಸಂಶೋಧನೆಗಳನ್ನು ರೂಪಿಸಿರುವುದನ್ನು ನೋಡಲಿರುವೆವು.



ಈಗ ನಾವು ಸ್ವಲ್ಪ ಹಿಂದೆ ಹೋಗಿ ಡಾ. ಟೇಸಲಾರವರು ಅವರ ಪ್ರಯೋಗಗಳನ್ನು ತನ್ನ ಪ್ರಯೋಗಶಾಲೆಯಲ್ಲಿ ಹೇಗೆ ಮಾಡುತ್ತಿದ್ದರೆಂದು ನೋಡುವ. ಡಾ. ಟೇಸಲಾರವರು ಇಂಪಲ್ಸಿನ ಮೂಲತತ್ವಗಳನ್ನು ಉಪಯೋಗಿಸಿ ವಿದ್ಯುತಚ್ಛಕ್ತಿಯನ್ನು ತಂತಿರಹಿತವಾಗಿ ಹೇಗೆ ಪ್ರವಹಿಸಬಹುದೆಂದು ತಿಳಿದಾಗ ಮುಂದೆ ಅವರು ಸರ್ಕಿಟಿನಲ್ಲಿ  ಬದಲಾವಣೆ ಮಾಡಿ ೬೦೦೦ ಆರ್ ಪಿಎಮ್ (ರೆವುಲುಶನ್ ಪರ್ ಮಿನಿಟ್) ನ ಗತಿಯಲ್ಲಿ ಹಚ್ಚಿಸುವ ಮತ್ತು ಆರಿಸುವ ರೋಟರಿ ಸ್ವಿಚ್ಚಿ (ಸರತಿಯ ಒತ್ತುಗುಂಡಿ) ನ ಸಂಕಲನೆ ಮಾಡಿ ಅದರಲ್ಲಿಯ ಕರಂಟ್ ನ್ನು ೧೫,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದರು.

ಈಗ ಸರ್ಕಿಟನ್ನು ಅವರು ಚಲಾಯಿಸಿದಾಗ ರೋಟರಿ ಸ್ವಿಚ್ಚಿನ ಕಾರ್ಯದ ಕಾರಣದಿಂದಾಗಿ ಸೂಜಿಯಂತೆ ತಿವಿಯುವ ನೋವಿನ ತೀವ್ರತೆಯು ಹೆಚ್ಚಾಯಿತು. ಟ್ರಾಂಸ್ ಫೊರಮರನ್ನು ಉಪಯೋಗಿಸಿದಾಗ ವೋಲ್ಟೇಜ್ ಹೆಚ್ಚಾಗುವದು ಎಂಬ ವಿಷಯ ಅವರಿಗೆ ತಿಳಿದಿತ್ತು, ಆದರೆ ಇಲ್ಲಿ ಟ್ರಾಂಸ್ ಫೊರಮರನ್ನು ಉಪಯೋಗಿಸದಿದ್ದಾಗ ಕಡಿಮೆ ಸಮಯದ ಅಂತರದಲ್ಲಿ ಇಂಪಲ್ಸೆಸ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಜನರೇಟ್ ಮಾಡಿದಾಗ ವೋಲ್ಟೇಜ್ ಗಳು ಹೆಚ್ಚಾಗುತ್ತಿರುವುದೆಂದು ಅವರ ಗಮನಕ್ಕೆ ಬಂತು (ಇಂಪಲ್ಸೆಸ್ ಗಳು ಕರಂಟ್ ಮತ್ತು ವೋಲ್ಟೇಜನ್ನು ಹೆಚ್ಚಿಸುವದು). ತಾಮ್ರದ ತಂತಿಗಳ ಸುತ್ತಲು ಬಿಳಿ ಮತ್ತು ನೀಲಿ ಬಣ್ಣದ ಅಗ್ನಿಕಣಗಳನ್ನು ಕೂಡ ಅವರು ನೋಡಿದರು.

ಈ ಪ್ರಯೋಗದ ಸಮಯದಲ್ಲಿ ಡಾ. ನಿಕೋಲಾ ಟೇಸಲಾರವರು ಸೂಜಿಯಂತೆ ತಿವಿಯುವ ತೀಕ್ಷಣತೆಯು ಹೆಚ್ಚಿದನ್ನು ಅನುಭವಿಸಿದರು. ಆದರೂ ಕೂಡ ಅವರು ವೋಲ್ಟೇಜ್ ನ್ನು ಮತ್ತು ಕಾಯಿಲ್ ನ್ನು ಹಚ್ಚಿಸಿ ಮತ್ತು ಆರಿಸುವ ಕ್ರಮವನ್ನು ಸ್ವಿಚ್ಚಿನ ಮೂಲಕ ಹೆಚ್ಚಿಸಿ ತನ್ನ ಪ್ರಯೋಗಗಳನ್ನು ಸತತವಾಗಿ ಮಾಡತೊಡಗಿದರು. ಇದನ್ನು ಅವರು ಕೇವಲ ವಿಜ್ನಾನದ ಜ್ನಾನದ ಮೇಲೆ ತನಗಿರುವ ವಿಶ್ವಾಸ ಮತ್ತು ಸರ್ವಸಮರ್ಥ ಪರಮೇಶ್ವರರ ಮೇಲಿದ್ದ ವಿಶ್ವಾಸದ ಕಾರಣದಿಂದಾಗಿಯೇ ಮಾಡಲಾಯಿತು. ಈ ಅದ್ಭುತವಾದ ರಕ್ಷಾಕವಚವನ್ನು ಸರಿಯಾಗಿ ಉಪಯೋಗಿಸಿದ್ದಲ್ಲಿ ಅದನ್ನು ಮಾನವಸಮಾಜಕ್ಕೆ ಪ್ರಯೋಜನಕಾರವಾದ ಹೊಸ ಪ್ರಕಾರದ ವಿದ್ಯುತಚ್ಛಕ್ತಿಯ ರೂಪದಲ್ಲಿ ಪಡೆಯಬಹುದು ಎಂದು ಅವರ ನಂಬಿಕೆಯಾಗಿತ್ತು.

ಅವರ ಪ್ರಯೋಗಗಳನ್ನು ಹೆಚ್ಚು ಸುಧಾರಿಸಲೆಂದು ಅವರು ಬಹಳ ಸಾಹಸದ ಪ್ರಯತ್ನಗಳನ್ನು ಮಾಡುತ್ತಿರುವಾಗ ಡಾ. ನಿಕೋಲಾ  ಟೇಸಲಾರವರು ತ್ವರಿತಗತಿಯ ಯಾಂತ್ರಿಕ ರೋಟರಿ ಸ್ವಿಚ್ಚನ್ನು ತಾವೇ ತಯಾರಿಸಿದರು ಮತ್ತು ಅದು ಒಂದು ಸೆಕೆಂದಿನಲ್ಲಿ ಹತ್ತು ಸಾವಿರದ ಭಾಗದಷ್ಟು ಕೆಲಸ ಮಾಡಿತು. ಅಂದರೆ ೬,೦೦,೦೦೦ ರೊಟೇಶನ್ ಪರ್ ಸೆಕೆಂದ್ (ಒಂದು ನಿಮಿಷದ ಆವರ್ತನೆ). ಅವರು ವೋಲ್ಟೇಜನ್ನು ೧,೦೦,೦೦೦ ವೋಲ್ಟ್ ಸ್ ತನಕ ಹೆಚ್ಚಿಸಿದಾಗ ಬಹಳ ಅದ್ಭುತದಂತಹ ಶೋಧನೆಯನ್ನು ಕಂಡು ಹಿಡಿದು ಅದನ್ನು ’ಎಲೆಕ್ಟ್ರಿಕಲ್ ಸೌನಾ’ಇಫೆಕ್ಟ್’ (ವಿದ್ಯುತಚ್ಛಕ್ತಿಯನ್ನು ಉಪಯೋಗಿಸಿ ಮಾಡಿದ ಬಿಸಿಬಾಷ್ಪದ ಸ್ನಾನಗೃಹ) ಎಂದು ಹೆಸರಿಟ್ಟರು.

ಡಾ. ನಿಕೋಲಾ ಟೇಸಲಾರವರು ಅವರ ಈ ಪ್ರಯೋಗದಲ್ಲಿ ಬದಲಾವಣೆ ಮಾಡಿ ಸ್ವಿಚ್ಚುಗಳ ಬದಲಾಗಿ ವರ್ತುಳಾಕಾರದ ಸಂದಿರುವ ಚುಂಬಕದ ಪರಿಚಯ ಮಾಡಿಕೊಟ್ಟರು. ಅವರು ಪ್ರಧಾನ ಹಾಗು ಎರಡನೆ (ಪರ್ಯಾಯ) ಕಾಯಿಲಿನ (ಸುರುಳಿಸುತ್ತು) ವ್ಯವಸ್ಥೆ ಮಾಡಿದರು, ಇವರು ಪ್ರಧಾನ ಸುರುಳಿಯಸುತ್ತಿನಲ್ಲಿರುವ (ಪ್ರೈಮರಿ ಕಾಯಿಲ್) ವೋಲ್ಟೇಜನ್ನು ಎರಡನೆ ಸುರುಳಿಸುತ್ತಿನಲ್ಲಿ (ಸೆಕೆಂಡರಿ ಕಾಯಿಲ್) ಬಹಳ ಹೆಚ್ಚಿನ ಪ್ರಮಾಣದಲ್ಲಿ ಪ್ರವರ್ತನೆ ಮಾಡಲು ಉಪಯೋಗಿಸಿದರು. ಡಾ. ಟೇಸಲಾರವರು ಅವರ ಹೊಸ ಇಂಪಲ್ಸ್ ಟ್ರಾಂಸ್ ಫೊರಮರ್ಸ್ ಗಳು ಅದಕ್ಕೆ ಪೂರೈಸಿದ ಪಾವರನ್ನು ಒಳ್ಳೆಯ ರೀತಿಯಿಂದ ಹೆಚ್ಚಿಸುತ್ತದೆ ಎಂದು ಕಂಡು ಹಿಡಿದರು. ಹೀಗೆ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ಕೂಡ ವಿಸ್ತಾರಗೊಳ್ಳುವದು. ಈ ಪದ್ಧತಿಯಿಂದ ವಿದ್ಯುತಚ್ಛಕ್ತಿಯು ’ಮಿಲ್ಲಿಯನ್ಸ್ ಆಫ್ ವೋಲ್ಟ್ ಸ್’ (ದಶಲಕ್ಷ ವೋಲ್ಟ್ ಸ್) ನ್ನು ಉತ್ಪನ್ನ ಮಾಡಲು ಸಾಧ್ಯವಿದೆ ಹಾಗೆಯೇ ಈ ಉಜ್ವಲ ಶಕ್ತಿಯು (ತಂತಿರಹಿತ ಶಕ್ತಿ) ತಂತಿಗಳಿಲ್ಲದೆ ದೂರದ ಅಂತರಕ್ಕೆ ಕಳುಹಿಸಲು ಕೂಡ ಸಹಾಯವಾಗಬಹುದೆಂದು ಡಾ ಟೇಸಲಾರವರು ಕಂಡು ಹಿಡಿದರು

ಹಾಗೆಯೇ ಅವರು ಈ ಪ್ರಯೋಗದಲ್ಲಿ, ಸಂಪೂರ್ಣ ಸುರುಳಿಯ (ಕಾಯಿಲ್) ಬಾಹ್ಯ ಸ್ವರೂಪದಿಂದ ನೀಲಿ-ಬಿಳಿ ಬಣ್ಣದ ಅಪರಿಮಿತ ಸ್ರಾವವು ಹಾರಾಡುತ್ತಿರುವುದನ್ನು ಗಮನಿಸಿದರು. ಒಂದು ಮುಖ್ಯವಾದ ವಿಷಯ ಧ್ಯಾನಕ್ಕೆ ತರಬೇಕಾದುದೆಂದರೆ ಹೊರಬರುತ್ತಿರುವ ಈ ಬಿಳಿ ಬಣ್ಣದ ಸ್ರಾವವು, ಕಡಿಮೆ ಪ್ರಮಾಣದ ಫ್ರಿಕ್ವೆನ್ಸಿಯಲ್ಲಿ ವಸ್ತುಗಳ ಒಳಗಿಂದ ಹಾದು ಹೋಗುವಾಗ ಸೂಜಿಯಂತೆ ತಿವಿಯುತ್ತಿರುವ ತೀಕ್ಷಣತೆ ಮತ್ತು ಉರಿ ಬರುವ ಸಂವೇದನೆಯನ್ನು ಕೊಡದೆ ಅದು ಶಾಂತವಾದ, ತಂಪಾದ ಅನುಭವವನ್ನು ಮಾಡಿಸಿ ಭೌತದ್ರವ್ಯ ಹಾಗೆಯೇ ಎಲ್ಲಾ ಸ್ಥೂಲ ಪದಾರ್ಥಗಳ ಒಳಗಿಂದ ಕೂಡ ಹೊರಬರುತ್ತಿದ್ದವು.

ಹಾಗೆಯೇ ಈ ಹೊರಬರುತ್ತಿರುವ ನೀಲಿ-ಬಿಳಿ ಬಣ್ಣದ ಸ್ರಾವಗಳು ಕೆಲವು ನಿಶ್ಚಯಾತ್ಮಕ ಫ್ರಿಕ್ವೆನ್ಸಿಯಲ್ಲಿ, ಈ ಕರಂಟ್ ನ್ನು ಪಡೆದ ಕಾಯಿಲ್ಸ್ ಗಳ ಸಮೀಪ ತಂದಾಗ ಆರಿಸಿರುವ ಟ್ಯುಬಗಳನ್ನು, ವಿಶಿಷ್ಠ ಬಲ್ಬುಗಳು ಹಾಗು ದೀಪಗಳನ್ನು ಕೂಡ ಹಚ್ಚಿಸುತ್ತಿದ್ದವು. ಡಾ. ನಿಕೋಲಾ ಟೇಸಲಾರವರು ದೀಪಗಳನ್ನು ಅವರ ಕೈಯಲ್ಲಿ ಹಿಡಿದು ತಂತಿರಹಿತ ವಿದ್ಯುತ್ತಿನ ಮೂಲಕ ಅದನ್ನು ಹಚ್ಚಿಸಿದರು.
ರಯೋಗದಲ್ಲಿ ಮುಂದಿನ ಸುಧಾರಣೆ ಮಾಡುವಾಗ, ಗೋಲಾಕಾರದ ತಾಮ್ರವನ್ನು ಸೆಕೆಂಡರಿ ಟ್ರಾಂಸ್ ಫೊರಮರ್ ನ ಕೊನೆಯಲ್ಲಿ ಕೂಡಿಸಿದರು. ಹೊರಬರುತ್ತಿರುವ  ಬಣ್ಣದ ಸ್ರಾವವೆಲ್ಲಾ ಈ ತಾಮ್ರದ ಗೋಲದಲ್ಲಿ ಒಟ್ಟಾಯಿತು, ಈಗ ಈ ತಾಮ್ರದ ಗೋಲದಿಂದ ಹೊರಬರುತ್ತಿರುವ ಬಣ್ಣದ ಸ್ರಾವವು ಬಹಳ ಜೋರಿನ ಶಬ್ದ ಮಾಡತೊಡಗಿತು. ಇದರಿಂದಾಗಿ ಆವಶ್ಯಕವಾಗಿರುವ ವಿದ್ಯುತ್ತಿನ ಪ್ರಮಾಣ ಕೂಡ ಕಡಿಮೆಯಾಗಿ ತಂತಿರಹಿತ ವಿದ್ಯುತಚ್ಛಕ್ತಿಯ ಸುತ್ತನ್ನು ಬಹಳ ನಿಶ್ಚಿತ ಮತ್ತು ಸುರಕ್ಷಿತ ಮಾಡಿತು. ಇದು ಪ್ರಖ್ಯಾತವಾಗಿ ಕರೆಯಲ್ಪಟ್ಟ " ಟೇಸಲಾ ಕಾಯಿಲ್ " ಗೆ ಜನ್ಮ ಕೊಟ್ಟಿತು. ಈ ಟೇಸಲಾ ಕಾಯಿಲ್ ನ ಸಹಾಯದಿಂದ ಡಾ. ನಿಕೋಲಾ ಟೇಸಲಾರವರು ಜನಸಾಮಾನ್ಯರ ಉಪಯೋಗಕ್ಕೆ ಬಹಳ ಸುರಕ್ಷಿತವಾಗಿರುವ ವಾಯರ್ ಲೆಸ್  ಎಲೆಕ್ಟ್ರಿಕಲ್ ಎನರ್ಜಿ (ತಂತಿರಹಿತ ವಿದ್ಯುತಚ್ಛಕ್ತಿಯ ಶಕ್ತಿ) ಯನ್ನು ತಯಾರಿಸಲು ಯಶಸ್ವಿಯಾದರು. ಈ ತಂತಿರಹಿತ ವಿದ್ಯುತಚ್ಛಕ್ತಿಯನ್ನು ವಿಶೇಷ ರೀತಿಯಲ್ಲಿ ತಯಾರಿಸಲಾದ ಸರ್ಕಿಟಿನ ಸಹಾಯದಿಂದ ಬಹಳ ದೂರದ ಅಂತರದಲ್ಲಿ ಪಡೆಯಬಹುದು. ಡಾ. ನಿಕೋಲಾ ಟೇಸಲಾರವರು ತಂತಿರಹಿತ ವಿದ್ಯುತಚ್ಛಕ್ತಿಯ ಸಂಕಲ್ಪನೆಗೆ ಜನ್ಮ ಕೊಟ್ಟರು.

ಇದು ತಂತಿರಹಿತ ಶಕ್ತಿಗಳನ್ನು (ವಾಯರ್ ಲೆಸ್ ಎನರ್ಜಿ) ಹತ್ತಿರದ ವಿಭಾಗಗಳಿಗೆ ಸ್ಥಾನಾಂತರ ಮಾಡುವ ಪ್ರಾತ್ಯಕ್ಷಿಕ ನಮೂನೆಯಾಯಿತು. ಈ ನಮೂನೆಯು ಬೇರೆ ಯಾವುದೇ ಆಗದೆ ಅದು ಟೇಸಲಾ ಕಾಯಿಲ್ ಆಗಿತ್ತು. ಇವತ್ತು ಹಲವು ಉತ್ಸಾಹಪೂರ್ಣ ಚಲನಚಿತ್ರಗಳಲ್ಲಿ ಮತ್ತು ಆಟಗಳಲ್ಲಿ ಟೇಸಲಾ ಕಾಯಿಲ್ ನಿಂದ ಹೊರಬರುವ ಸ್ರಾವಗಳನ್ನು ಅಂದರೆ ಕರಂಟ್ ಗಳು ಎಲ್ಲಿ ಬೀಳುವದು ಆ ಸ್ಥಳವನ್ನು ಅದು ಸುಡುತ್ತದೆ ಆದ್ದರಿಂದ ಅಪಾಯಕಾರಿಯೆಂದು ತೋರಿಸಲಾಗುತ್ತಿದೆ. ಆದರೆ ಡಾ. ಟೇಸಲಾರವರ ನಿರೂಪಣೆಗಳ ಪ್ರಕಾರ ಅದರ ಸತ್ಯಸ್ಥಿತಿಯು ಪೂರ್ಣ ವಿರುದ್ಧವಾಗಿತ್ತು. ಡಾ. ನಿಕೋಲಾ ಟೇಸಲಾರವರು ಟೇಸಲಾ ಕಾಯಿಲ್ ಪರಿಪೂರ್ಣವಾಗಿ ತಂತಿರಹಿತ ಶಕ್ತಿಯನ್ನು ಕಳುಹಿಸುವ ಸಲಕರಣೆಯಾಗಿದೆ ಎಂದು ತನ್ನ ವಿಧಾನದಿಂದ ಸಿದ್ಧಮಾಡಿದರು.

ಟೇಸಲಾರವರ ಈ ಕಾಯಿಲ್ ಪ್ರಯೋಗಗಳನ್ನು ವಿಶೇಷ ಪ್ರವೀಣರ ಮಾರ್ಗದರ್ಶನ ತೆಗೆದುಕೊಳ್ಳದೆ ಮಾಡಬಾರದು ಅಥವಾ ಆ ವಿಷಯದ ಒಳ್ಳೆ ಮತ್ತು ಪೂರ್ಣ ಜ್ನಾನವಿದ್ದಾಗ ಮಾತ್ರ ಮಾಡಬೇಕು. ಯೋಗ್ಯ ತಿಳುವಳಿಕೆ ಮತ್ತು ಪ್ರಯೋಗದಿಂದ ಟೇಸಲಾ ಕಾಯಿಲ್ ನ್ನು ಅನೇಕ ವಿಧದ ಉದ್ದೇಶಗಳಿಗಾಗಿ ಅಂದರೆ ತಂತಿರಹಿತವಾಗಿ ಬಲ್ಬುಗಳನ್ನು ಹಚ್ಚಿಸಲು ಮತ್ತು ವಾಯರ್ ಲೆಸ್ ಎಲೆಕ್ಟ್ರಿಕಲ್ ಸ್ಥಾನಾಂತರ ಮಾಡುವಾಗ ಉಪಯೋಗಿಸಬಹುದು.

|| ಹರಿ ಓಂ || ಶ್ರೀರಾಮ || ಅಂಬಜ್ನ ||

Wednesday 8 October 2014

ತಂತಿರಹಿತ ವಿದ್ಯುತಚ್ಛಕ್ತಿ (ಭಾಗ-೧)

೧೮೯೦ ರಲ್ಲಿ ಡಾ. ನಿಕೋಲಾ ಟೇಸಲಾರವರು ಸ್ವಪ್ರಯತ್ನದಿಂದ ಆಲ್ಟರ್ ನೇಟಿಂಗ್ ಕರಂಟ್ ನ ಸಂಕಲ್ಪನೆಯನ್ನು ವಿಕಸಿತಗೊಳಿಸಿದರು. ಇದರಲ್ಲಿ ಮಾಡಿದ  ಬದಲಾವಣೆಯಿಂದಾಗಿ ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಬಹಳ ಉತ್ತಮ ಪ್ರಕಾರದಿಂದ ಉಪಯೋಗಿಸಲು ಕಾರಣವಾಯಿತು ಮತ್ತು ನಂತರ ವಿಸ್ಮಯಕಾರಕದ ತಂತಿರಹಿತ ವಿದ್ಯುತಚ್ಛಕ್ತಿಯ ಶೋಧನೆ ಮಾಡಲಾಯಿತು. ಹಾಗು ಇವುಗಳು ಎಂದಿಗೂ ಪ್ರಕೃತಿಯ ಏಕತಾಳದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಡಾ. ಟೇಸಲಾರವರು ಯಾವಾಗಲು ಹೇಳುತ್ತಿದ್ದರು.

ಡಾ. ನಿಕೋಲಾ ಟೇಸಲಾರವರ ಏಸಿ ಸಿಸ್ಟಮ್ ಆಫ್ ಕರಂಟ್ ನ್ನು ದೂಷಿಸಲು ಎಡಿಸನ್ ಜನಸಮೂದಾಯದ ಮುಂದೆ ವಿದ್ಯುತ್ತಿನಿಂದ ಪ್ರಾಣಿಗಳನ್ನು ಕೊಲ್ಲುವ ಕೃತಿಗಳನ್ನು ಮಾಡಿ ತೋರಿಸುತ್ತಿದ್ದರೆಂದು ನಮಗೆಲ್ಲಾ ಗೊತ್ತಿದೆ. ಇದರಿಂದಾಗಿ ಡಾ. ಟೇಸಲಾರವರು ಅವರ ಏಸಿ ಪಾವರಿಂದ ಮಾಡಿದ ವಿದ್ಯುತ ಕುರ್ಚಿಗಳ ಉಪಯೋಗಮಾಡಿ ಕಾರಾಗೃಹದ ಕೈದಿಗಳನ್ನು ಸಾರ್ವಜನಿಕವಾಗಿ ವಿದ್ಯುತ್ತಿನಿಂದ ಕೊಲ್ಲುತ್ತಿರುವುದನ್ನು ನೋಡಿ ಅಸ್ವಸ್ಥಗೊಂಡರು. ಡಾ.ಟೇಸಲಾರವರು ಧಾರ್ಮಿಕ ಹಾಗು ಬಹಳ ಕರುಣಾಮಯಿ ವ್ಯಕ್ತಿಯಾಗಿದ್ದು ಅವರಿಗೆ ಕೈದಿಗಳ ಈ ಅವಸ್ಥೆಯನ್ನು ಹಾಗು ಪ್ರಾಣಿಗಳಿಗೆ ಕೊಡಲಾಗುತ್ತಿರುವ ಅಮಾನುಷ ಯಾತನೆಗಳನ್ನು ನೋಡಿ ಅವರ ಹೃದಯ ಕರಗುತ್ತಿತ್ತು. ಆದ್ದರಿಂದ ಡಾ. ಟೇಸಲಾರವರು ಈ ತಪ್ಪು ಸುದ್ದಿಗಳನ್ನು ಹರಡಿಸುತ್ತಿರುವ ಎಡಿಸನ್ ರವರ ವಿರುದ್ಧ ಹೋಗುವ ನಿರ್ಧಾರ ಮಾಡಿದರು.

ಅವರು  ಜೊರ್ಜ್ ವೆಸ್ಟಿಂಗ್ ಹೌಸರವರ ಸಹಾಯದಿಂದ ಪತ್ರಕಾರರ ಸಭೆಯನ್ನು ಕರೆದರು ಮತ್ತು ಹಲವು ಪ್ರಸಿದ್ಧ ವೈಜ್ನಾನಿಕ ಉದ್ಯೋಗಪತಿಗಳನ್ನು ತನ್ನ ಪ್ರಯೋಗಶಾಲೆಯಲ್ಲಿ ಆಲ್ಟರ್ ನೇಟಿಂಗ್ ಕರಂಟ್ ನ ಬಗ್ಗೆ ಪ್ರಾತ್ಯಕ್ಷಿಕವನ್ನು ಮಾಡಿ ತೋರಿಸಲು ಕರೆದರು. ಅಲ್ಲಿ ಅವರು ೧,೦೦,೦೦೦ ವೋಲ್ಟ್ ಸಿನ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಏಸಿ ಜನರೆಟೇರ್ಸ್ ನ್ನು ಸ್ಥಾಪಿಸಿದರು. ಏಸಿ ಸಿಸ್ಟಮ್ ನನ್ನು ಸರಿಯಾಗಿ ನಿರ್ಬಂಧದಲ್ಲಿಟ್ಟಾಗ ಅದು ಮನುಷ್ಯನ ಜೀವನಕ್ಕೆ ಹಾನಿಯಾಗಲಾರದೆಂದು ಪ್ರತಿಪಾದಿಸಿದರು. ಇದನ್ನು ಸಿದ್ದಪಡಿಸಲು ಡಾ. ಟೇಸಲಾರವರು ೧,೦೦,೦೦೦ ವೋಲ್ಟ್ ಸ್ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಜನರೇಟರಿನ ಬದಿಯಲ್ಲಿ  ಕುಳಿತುಕೊಂಡರು. ಜನಕಲ್ಯಾಣಕ್ಕಾಗಿ ಹಾಗು ಮನುಷ್ಯತ್ವಕ್ಕಾಗಿ ತನ್ನ ಜೀವವನ್ನು ಪಣಕ್ಕಿಟ್ಟರು ಇದನ್ನು ಕೇವಲ ಏಸಿ ಕರಂಟ್ ಬಗ್ಗೆ ಜನರಲ್ಲಿದ್ದ ಭಯವನ್ನು ಹೊರದೂಡಿಸಡಲೆಂದು ಮಾಡಿ ತೋರಿಸಿದರು, ಇದರಿಂದ ಯಾವ ಪ್ರಕಾರದ ಹಾನಿಯಾಗದೆ ಒಂದು ಗೀರು ಕೂಡ ಅವರ ಶರೀರದ ಮೇಲಾಗಲಿಲ್ಲ. ಇದನ್ನು ನೋಡಿದ ವೀಕ್ಷಕರು ಆಶ್ಚರ್ಯಚಕಿತರಾಗಿ ಜನರೆಲ್ಲಾ ಸಂಭ್ರಾಂತರಾದರು. ನೆನಪಿನಲ್ಲಿಡಿ, ಏನೆಂದರೆ ಎಡಿಸನ್ ಏಸಿ ವಿದ್ಯುತಚ್ಛಕ್ತಿಯನ್ನು ಪ್ರಾಣಿ ಹಾಗು ಕೈದಿಗಳ ಶರೀರದೊಳಗಿಂದ ತೆಗೆದರು ಅದರ ವಿಪರೀತವಾಗಿ ಡಾ. ಟೇಸಲಾರವರು ವಿದ್ಯುತಚ್ಛಕ್ತಿಯನ್ನು ತನ್ನ ಶರೀರದ ಒಳಗಿಂದ ತೆಗೆದು ತೋರಿಸಿದರು.


ಡಾ. ಟೇಸಲಾರವರು ಮೊದಲ ಬಾರಿಗೆ ತಂತಿರಹಿತ ವಿದ್ಯುತಚ್ಛಕ್ತಿಯನ್ನು ಸಾರ್ವಜನಿಕವಾಗಿ ಪ್ರಾತ್ಯಕ್ಷಿಕ ಮಾಡಿ ತೋರಿಸಿದರು. ಹೌದು, ನೀವು ಸರಿಯಾಗಿ ಕೇಳಿದ್ದಿರಿ!! " ತಂತಿರಹಿತ ವಿದ್ಯುತಚ್ಛಕ್ತಿ " ಅದೆಂದರೆ ’ತಂತಿಗಳಿಲ್ಲದ ವಿದ್ಯುತಚ್ಛಕ್ತಿ ’ಮತ್ತು ಇದನ್ನು ಮಾಡುವಾಗ ಅವರು ಫ್ಲುರೊಸೆಂಟ್ ಬಲ್ಬನ್ನು ಮತ್ತು ಟ್ಯುಬ್ಸ್ ಗಳನ್ನು ತನ್ನ ಕೈಯಲ್ಲಿ ಹಿಡಿದು ಹಚ್ಚಿಸಿದರು. ಅವರು ಇದನ್ನು ಹೇಗೆ ಸಾಧಿಸಿದರು ? ಟೇಸಲಾರವರು ಸಂಶೋಧನೆಯನ್ನು ಹೇಗೆ ಮಾಡಿದರು, ಅದಕ್ಕಾಗಿ ಅವರು ಮಾಡಿದ ಪ್ರಯೋಗಗಳನ್ನು ತಿಳಿಯಲೆಂದು ನಮಗೆ ಸ್ವಲ್ಪ ಹಿಂದೆ ಹೋಗಿ ಅವರ ನಿವ್ ಯಾರ್ಕ್ ನಲ್ಲಿದ್ದ ಪ್ರಯೋಗಶಾಲೆಗೆ ಹೋಗಬೇಕಾಗುತ್ತದೆ. ಡಾ. ಟೇಸಲಾರವರ ನಿವ್ ಯಾರ್ಕ್ ನಲ್ಲಿದ್ದ ಪ್ರಯೋಗಶಾಲೆಯು ಬಹುವಿಧದ ಸಂಶೋಧನೆ ಹಾಗು ಉತ್ಪನ್ನ ಮಾಡಲು ಸೌಕರ್ಯವಿದ್ದ ಪ್ರಯೋಗಶಾಲೆಯಾಗಿತ್ತು. ಅದರಲ್ಲಿ ಬಹಳ ಭಾಗಗಳಿದ್ದು ಅಸಂಖ್ಯ ಅಂತಸ್ತುಗಳಿದ್ದು ಮತ್ತು ಬಹುವಿಧದ ದ್ವಾರಮಂಟಪಗಳಿದ್ದವು. ಇದನ್ನು ನಾವು ಸಣ್ಣ ಸಂಶೋಧನ ಮತ್ತು ಸುಧಾರಿತ ಮಾಲಿನಂತೆ ಕಲ್ಪಿಸಬಹುದು. ಡಾ. ಟೇಸಲಾರವರು ಹಲವು ಟ್ರಾಂಸ್ ಫೊರ್ಮ್ ರ್ಸ್ ಮತ್ತು ಜನರೇಟರ್ಸ್ ನ್ನು ಕೆಳಗಿನ ಅಂತಸ್ತದಲ್ಲಿ ಮತ್ತು ಅವರ ಖಾಸಗಿ ಸಂಶೋಧನೆಯ ಪ್ರಯೋಗಶಾಲೆಯನ್ನು ಮೇಲಿನ ಅಂತಸ್ತದಲ್ಲಿಟ್ಟಿದ್ದರು. ಅವರಲ್ಲಿ ಕೆಲವರು ಟೆಕ್ನಿಶಿಯನ್ ನೌಕರರಾಗಿದ್ದರು. ಮಿ.ಕೊಲ್ ಮನ್ ಝಿಟೊ ಅವರಲ್ಲೊಬ್ಬರು ಮತ್ತು ಡಾ. ಟೇಸಲಾರವರ ವಿಶ್ವಾಸಯುಳ್ಳ ಮಿತ್ರರಾಗಿದ್ದು ಜೀವನದ ಕೊನೆಯ ತನಕ ಅವರ ಜೊತೆ ಇದ್ದರು.

ಇಲ್ಲಿ ನಮಗೆ ಗಮನಿಸಬೇಕೆಂದರೆ ಡಾ. ನಿಕೋಲಾ ಟೇಸಲಾರವರು ಬಹಳ ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದರು. ಅವರ ಇಷ್ಟು ದೊಡ್ಡ ಪ್ರಯೋಗಶಾಲೆಯನ್ನು ಕೇವಲ ಅವರಿಗೆ ಜೊರ್ಜ್ ವೆಸ್ಟಿಂಗ್ ಹೌಸ್ ರವರಿಂದ ಸಿಕ್ಕಿದ ಸಹಾಯದಿಂದ ಕಟ್ಟಿದ್ದರು. ಅವರ ಪ್ರಯೋಗದ ವೇಳೆಯಲ್ಲಿ ಮತ್ತು ಸಂಶೋಧನೆ ಮಾಡುತ್ತಿರುವಾಗ ಎನಾದರು ಕೂಟಕೃತ್ಯವನ್ನು ಕಂಡುಹಿಡಿದರೆ ಅವರು ಅದರ ತಕ್ಷಣವೇ ಪ್ರಯೋಗದ ಮೂಲಕ ಹೆಚ್ಚು ಅಭ್ಯಾಸಮಾಡಿ ಮತ್ತು ಅದರಲ್ಲಿ ನೂರಾರು ಅದಲು-ಬದಲು ಹಾಗು ಬೇರೆ-ಬೇರೆ ಜೋಡಣೆ ಮಾಡಿ ಅನುಸರಿಸುತ್ತಿದ್ದರು. ಈ ತರಹದ ಅಭ್ಯಾಸ ಮತ್ತು ಸಂಶೋಧನೆಗಳು ಅವರಿಗೆ ಅಪರಿಮಿತ ಜ್ನಾನ ಕೊಡುತ್ತಿತ್ತು ಮತ್ತು ಇದರಿಂದಾಗಿ ಅವರ ಹೊಸ ಸಂಶೋಧನೆಗಳು ರೂಪಗೊಳ್ಳುತ್ತಿದ್ದವು ಮತ್ತು ಹೊಸ ದಾಖಲೆಗಳನ್ನು (ಪೇಟಂಟ್ಸ್) ಸ್ಥಾಪಿಸುತ್ತಿದ್ದರು. ಇದೇ ಪ್ರಕಾರ ಅವರು ಸತತವಾಗಿ ತನ್ನ ಸಂಶೋಧನೆ ಹಾಗು ಪ್ರಯೋಗಗಳನ್ನು ತಿದ್ದುಪಡೆ ಮಾಡುತ್ತಿದ್ದರು.

ಡಾ. ನಿಕೋಲಾ ಟೇಸಲಾರವರು ದೂರದ ಅಂತರಕ್ಕೆ ವಿದ್ಯುತಚ್ಛಕ್ತಿಯನ್ನು ಪೂರೈಸುವ ಬಹಳ ಕಾರ್ಯಕ್ಷಮತೆಯುಳ್ಳ ಮತ್ತು ಉಚ್ಚ ಪ್ರಕಾರದಲ್ಲಿ ಕೆಲಸ ಮಾಡುವ ಸುಧಾರಿತ ಪೊಲಿಫೇಜ್ (ಮೂರು ತರಹದ) ಏಸಿ ಸಿಸ್ಟಮ್ ನ್ನು ತಯಾರಿಸಿದರು. ಆದರೆ ಟೇಸಲಾರವರು ಇಲ್ಲಿಯೇ ನಿಲ್ಲಲಿಲ್ಲ. ಅವರು ತನ್ನ ಸಂಶೋಧನಗಳನ್ನು ಮುಂದುವರಿಸಿದರು ಮತ್ತು ದೃಢತೆಯಿಂದ ಪ್ರಯತ್ನ ಮಾಡಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಪೊಲಿಫೇಸ್ ಏಸಿ ಸಿಸ್ಟಮ್ ನ್ನು ಪತ್ತೆ ಹಚ್ಚಿದರು ಮತ್ತು ಇದನ್ನು ಮಾಡುತ್ತಿರುವಾಗ ಡಾ. ಟೇಸಲಾರವರು ಅದರ ಪುನರಾವರ್ತನೆಯನ್ನು (ಫ್ರಿಕ್ವೆನ್ಸಿ) ಹೆಚ್ಚಿಸುವ ಜನರೇಟರ್ಸ್ ನ್ನು ಪ್ರಾರಂಭಿಸಿದರು. ಅವರು ಸತತವಾಗಿ ಮಾಡುತ್ತಿರುವ ಪ್ರಯೋಗಗಳಿಂದಾಗಿ ಏಸಿ ಫ್ರಿಕ್ವೆನ್ಸಿಯನ್ನು ೩೦೦೦೦ Hz (ಸೈಕಲ್ಸ್ ಪರ್ ಸೆಕೆಂದ್) ತನಕ ಹೆಚ್ಚಿಸಿದರು. ಇದರಿಂದಾಗಿ ಬಹಳ ಹೆಚ್ಚಿನ ಏಸಿ ಕರಂಟ್ ಫ್ರಿಕ್ವೆನ್ಸಿಯನ್ನು ತಯಾರಿಸಿದರು. ಈ ಹೆಚ್ಚಿಸಿದ ಆಲ್ಟರ್ ನೇಟಿಂಗ್ ಕರಂಟ್ ಫ್ರಿಕ್ವೆನ್ಸಿಯಿಂದಾಗಿ ಸಂಪೂರ್ಣ ಜಗತ್ತಿಗೆ ಪಾವರನ್ನು ಪೂರೈಸಲಾಗಬಹುದೆಂದು  ಡಾ. ಟೇಸಲಾರವರು ತಿಳಿದಿದ್ದರು. ಹಾಯರ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಪೂರೈಸುವ ಹಲವು ಅಸಾಧಾರಣ ಜನರೇಟರ್ಸ್ ನ್ನು ತಯಾರಿಸಿ ಅದರ ದಾಖಲೆಗಳನ್ನು (ಫೇಟಂಟ್ಸ್) ಮಾಡಿಕೊಂಡರು. ಹಾಯ್ ಫ್ರಿಕ್ವೆನ್ಸಿ ಕರಂಟ್ ಬಗ್ಗೆ ಬಹಳ ವಿಲಕ್ಷಣ ಸಂಗತಿಯೆಂದರೆ ಅದು ಮನುಷ್ಯನ ದೇಹಕ್ಕೆ ನೇರ‍ವಾಗಿ ಸಂಪರ್ಕಕ್ಕೆ ಬಂದರು ಕೂಡ ’ಪೂರ್ಣವಾಗಿ ನಿರೂಪದ್ರವ ’ವಾಗಿದೆಯೆಂದು ಡಾ. ಟೇಸಲಾರವರು ಕಂಡು ಹಿಡಿದಿದ್ದರು. ಒಂದು ವೇಳೆ ಮನುಷ್ಯನು ತಪ್ಪಿ ಚಲಿಸುತ್ತಿರುವ ಕರಂಟ್ ನ್ನು ಸ್ಪರ್ಷ ಮಾಡಿದರೆ ಅದರ ಹಾಯ್ ಫ್ರಿಕ್ವೆನ್ಸಿಯ ಕಾರಣದಿಂದಾಗಿ ಅದು ಮನುಷ್ಯನ ದೇಹದ ಹೊರಬದಿಯಿಂದ ಯಾವುದೇ ತರಹದ ಅಪಘಾತ ಮಾಡದೆ ಹೊರಬೀಳುವದು. ವೈಜ್ನಾನಿಕ ಭಾಷೆಯಲ್ಲಿ ಹಾಯ್ ಫ್ರಿಕ್ವೆನ್ಸಿಯ ಕರಂಟ್ ನ ಗುಣಧರ್ಮವನ್ನು ಸ್ಕಿನ್ ಇಫೆಕ್ಟ್ (ತ್ವಚದ ಪರಿಣಾಮ) ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಡಾ. ಟೇಸಲಾರವರು ಏಸಿ ಸಿಸ್ಟಮ್  ಮನುಷ್ಯನಿಗಾಗಿ ಪೂರ್ಣ ನಿರಪದ್ರವವಾಗಿದೆಯೆಂದು ಪ್ರಾತ್ಯಕ್ಷಿಕ ಮಾಡಿ ತೋರಿಸಿದರು. ಆದ್ದರಿಂದ ಇದರ ಪ್ರಾತ್ಯಕ್ಷಿಕ ಮಾಡುವಾಗ ವಿದ್ಯುತಪ್ರವಾಹ ಹರಿಯುತ್ತಿದ್ದಾಗ ಚಲಿಸುತ್ತಿರುವ ಕರಂಟ್ ನ್ನು ತನ್ನ ಕೈಯಲ್ಲಿ ಹಿಡಿದಾಗ ಡಾ.ಟೇಸಲಾರವರಿಗೆ ಅಪಾಯವಾಗದಿದ್ದನ್ನು ಜನರು ಕಣ್ಣಾರೆ ನೋಡಿದರು. ಹಾಯ್ ಫ್ರಿಕ್ವೆನ್ಸಿ ಆಲ್ಟರ್ ನೇಟಿಂಗ್ ಕರಂಟಿನ ಕೆಲಸ ಮಾಡುತ್ತಿರುವಾಗ ಡಾ. ಟೇಸಲಾರವರು ಜನರ ಸುರಕ್ಷತೆಯ ಬಗ್ಗೆ ಯಾವಾಗಲೂ ಜಾಗರುಕತೆ ವಹಿಸಿಕೊಳ್ಳುತ್ತಿದ್ದರು.

ಅವರ ಪ್ರಯೋಗಶಾಲೆಯಲ್ಲಿ ಹಾಯ್ ಫ್ರಿಕ್ವೆನ್ಸಿ ಏಸಿಯ ಪ್ರಯೋಗಗಳ ಸರದಿಯನ್ನು ಮಾಡುತ್ತಿರುವಾಗ ಡಾ. ಟೇಸಲಾರವರಿಗೆ ಬಹಳ ವಿಲಕ್ಷಣವಾದ ಅದ್ಭುತವು ಗೋಚರಿಸಿದಾಗ ಅದು ಅವರ ವಿದ್ಯುತಚ್ಛಕ್ತಿಯ ಬಗ್ಗೆ ಅವರಿಗಿದ್ದ ಅಭಿಪ್ರಾಯವನ್ನು ಬದಲಾಯಿಸಿ ಬಿಟ್ಟಿತು. ಒಮ್ಮೆ ಪ್ರಯೋಗ ಮಾಡುತ್ತಿರುವಾಗ ಅವರು ಲೋಹದ ತೆಳ್ಳಗಾದ ತಂತಿಯನ್ನು ತೆಗೆದುಕೊಂಡು ಹಾಯ್ ವೊಲ್ಟೇಜ್ ಏಸಿ ಕರಂಟ್ ಗೆ ತಾಗಿಸಿದಾಗ ಅದು ವಿದ್ಯುತಿನ ಪ್ರದಕ್ಷಿಣೆಯನ್ನು (ಸರ್ಕೀಟ್) ತಕ್ಷಣವೇ ನಿಲ್ಲಿಸಿತು. ಹೀಗೆ ಅಕಸ್ಮಾತಾಗಿ ತಗಲಿದ ಕರಂಟ್ ತಂತಿಯಲ್ಲಿದ್ದ ಹಬೆಯನ್ನು ಪರಿವರ್ತಿಸಿತು. ವೊಲ್ಟೇಜನ್ನು ಹೆಚ್ಚಿಸಿದಂತೆ ಡಾ. ಟೇಸಲಾರವರಿಗೆ ಬಹಳ ಶಕ್ತಿಯುತ ತಿಕ್ಕಾಟದ ಸ್ಪೋಟದ ಸೂಜಿಗಳು ಅವರ ಪೂರ್ಣ ಶರೀರಕ್ಕೆ ತಿವಿದಂತಾಯಿತು. ಮೊದಲು ಅವರು ಇದೊಂದು ಸ್ಪೋಟವಾದ ಲೋಹದ ತಂತಿಗಳ ಬಹಳ ಚಿಕ್ಕ ತುಂಡುಗಳಿರಬೇಕೆಂದು ತಿಳಿದರು. ಟೇಸಲಾರವರು ಯಾವುದೇ ಪ್ರಕಾರದ ಅಪಾಯ ಅಥವಾ ತಿವಿದಿದ್ದನ್ನು ನೋಡಲು ಅವರ ಕೈತೋಳ, ಮುಖ ಮತ್ತು ಎದೆಯನ್ನು ತಿಕ್ಕಿದಾಗ ಅವರ ದೇಹಕ್ಕೆ ಯಾವ ಹಾನಿ ಕೂಡ ಆಗಿರಲಿಲ್ಲ.

ಮುಂದೆ ಡಾ. ಟೇಸಲಾರವರು ಒಂದು ಗಾಜಿನ ದಪ್ಪದ ದುಪ್ಪಟ್ಟಿಯನ್ನು ತನ್ನ ಮತ್ತು ಪ್ರಯೋಗದ ಮಧ್ಯೆ ಇಟ್ಟರು ನಂತರ ವಿದ್ಯುತಪ್ರವಾಹವನ್ನು ಹರಿಯುವ ತಾಮ್ರವನ್ನು ಕೂಡಿಸಿ ೧೦ ಫೂಟಿನ ಅಂತರದಲ್ಲಿ ನಿಂತಾಗಲು ಕೂಡ ವಿದ್ಯುತಿನ ಸರ್ಕಿಟ್ (ಪ್ರದಕ್ಷಿಣೆ) ಮುಗಿಸಿದಾಗ ಸೂಜಿ ಚುಚ್ಚಿದ ಪರಿಣಾಮವನ್ನೇ ಕಂಡರು. ಆದ್ದರಿಂದ ಅವರ ಪ್ರಯೋಗದಲ್ಲಿ ಅವರು ಬಹಳ ಪ್ರಕಾರದ ಬೇರೆ-ಬೇರೆ ಬದಲಾವಣೆ ಮಾಡಿ ಗಮನಿಸಿದರು, ಆದರೂ ಅದೇ ಅನುಭವವಾಯಿತು. ವಿದ್ಯುತ್ತಿನ ಕರಂಟ್ ನ್ನು  ಹಾಯ್ ಫ್ರಿಕ್ವೆನ್ಸಿಯಲ್ಲಿ ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಉಪಯೋಗಿಸುವ ಪರಿಣಾಮವೆಂದರೆ ಇಂಪಲ್ಸ್ (ತಾತ್ಕಾಲಿಕ ಉದ್ವೇಗ). ಇದು ವಾಯರ್ ಲೆಸ್ ಎಲೆಕ್ಟಿಸಿಟಿ (ತಂತಿರಹಿತ ವಿದ್ಯುತಚ್ಛಕ್ತಿ) ಯ ಸಂಕಲ್ಪನೆಗೆ ಜನ್ಮ ಕೊಟ್ಟಿತು. ಡಾ. ಟೇಸಲಾರವರು ಇದರ ನೀರಿಕ್ಷಣೆಯ ಆಧಾರದ ಮೇಲೆ ಸರ್ಕಿಟ್ (ಪ್ರದಕ್ಶಿಣೆ)  ಮುಗಿದಾಗ ಅದು ತಕ್ಷಣವೇ ಕರಂಟ್ ನ ಇಂಪಲ್ಸ್ ಗೆ (ತಾತ್ಕಾಲಿಕ ಉದ್ವೇಗ) ಕಾರಣವಾಗಿ ಗಾಳಿಯ ಮೂಲಕ ಸಂಚರಿಸುತ್ತದೆ - ಅಂದರೆ ತಂತಿರಹಿತವಾಗಿ ಚಲಿಸಿ ಮತ್ತು ಅದು ಅವರ ಶರೀರವನ್ನು ತಲುಪುವದು.

ಡಾ. ಟೇಸಲಾರವರ ಮುಂದಿನ ಎಲ್ಲಾ ಕೆಲಸಗಳು ಇಂಪಲ್ಸೆಸ್, ಫ್ರಿಕ್ವೆನ್ಸಿಸ್ ಮತ್ತು ರಿಝಾನನ್ಸ್ (ಪ್ರತಿಕಂಪನೆ) ಗಳ ಮೂಲತತ್ವಗಳನ್ನು ಆಧಾರಿತವಾಗಿದ್ದು ಅವುಗಳನ್ನು ನಾವು ಮುಂದಿನ ಲೇಖನದ ಸರದಿಯನ್ನು ನೋಡೋಣ.
         
ನಮ್ಮ ಮುಂದಿನ ಲೇಖನದಲ್ಲಿ ನಾವು ಡಾ. ಟೇಸಲಾರವರು ಕರಂಟ್ ನ್ನು ಗಾಳಿಯಲ್ಲಿ ಸಂಚಾರ ಮಾಡುವ ಸಂಕಲ್ಪನೆಯಲ್ಲಿ ಬದಲಾವಣೆ ಮಾಡಿ ನಂತರ ವಾಯರ್ ಲೆಸ್ ಎಲೆಕ್ಟಿಸಿಟಿ (ತಂತಿರಹಿತ ವಿದ್ಯುತಚ್ಛಕ್ತಿ) ಯ ಕೆಲಸದ ಮಾದರಿಯನ್ನು ತಯಾರಿಸಿದ ಪ್ರಕಾರವನ್ನು ನೋಡುವ.

 || ಹರಿ ಓಂ || ಶ್ರೀರಾಮ || ಅಂಬಜ್ನ ||


Saturday 20 September 2014

ವಿದ್ಯುತ್ ಪ್ರವಾಹಗಳ ಯುದ್ಧ

ಒಂದು ವೇಳೆ ನಿಕೋಲಾ ಟೇಸಲಾರವರ ನಂಬಿಕೆಗಳು ನಿಜವಾದರೆ ತನ್ನ ವ್ಯವಹಾರದ ಸಾಮ್ರಾಜ್ಯಕ್ಕೆ ಅಪಾಯವಿದೆಯೆಂದು ಥೋಮಸ್ ಎಡಿಸನ್ ಬಹಳ ಅಸ್ತವ್ಯಸ್ತನಾಗಿದ್ದನೆಂದು ನಾವು ಕಳೆದ ವಾರ ನೋಡಿರುವೆವು. ಆದ್ದರಿಂದ  ಟೇಸಲಾನ ಆಲ್ಟರ್ ನೆಟಿಂಗ್ ಕರಂಟಿನ (ಪರ್ಯಾಯ ವಿದ್ಯುತ್ ಪ್ರವಾಹ) ನಂಬಿಕೆಗಳನ್ನು ಎಡಿಸನ್ ನು ನಿಷೇದಿಸಿ ಅವರ ಪರಿಹಾಸ್ಯ ಮಾಡಿದ್ದರೂ ನಿಕೋಲಾ ಟೇಸಲಾನೊಬ್ಬ ಬಹಳ ಪ್ರತಿಭಾಶಾಲಿಯಾಗಿದ್ದು ಅವನನ್ನು ತನ್ನಲ್ಲಿ ಕೆಲಸದಲ್ಲಿಟ್ಟರೆ ಅವನೇ ನನ್ನ ವ್ಯವಹಾರದ ಸಾಮ್ರಾಜ್ಯವನ್ನು ಮುಂದೆ ತರಲು ಸಹಾಯ ಮಾಡಬಹುದೆಂಬ ವಿಶ್ವಾಸ ಎಡಿಸನ್ ಗಿತ್ತು. ಅವನಿಗೆ ಆಲ್ಟರನೇಟಿಂಗ್ ಕರಂಟ್ ಮತ್ತು ರೊಟೇಟಿಂಗ್ ಮ್ಯಾಗನೆಟ್ಸ್ ಬಗ್ಗೆ ಹೆಚ್ಚು ಅರ್ಥವಾಗದಿದ್ದರೂ ಟೇಸಲಾ ಮಾತ್ರ ಬಹಳ ಪ್ರತಿಭಾಶಾಲಿ ವ್ಯಕ್ತಿಯೆಂದು ತಿಳಿದಿತ್ತು. ಆದ್ದರಿಂದ ಅವನು ತನ್ನ ವ್ಯವಹಾರವನ್ನು ಹೆಚ್ಚು ಶಕ್ತಿಶಾಲಿ ಮಾಡಲು ಟೇಸಲಾರ ಪ್ರಭುತ್ವದ ಉಪಯೋಗವನ್ನು ಮಾಡುವ ನಿಶ್ಚಯ ಮಾಡಿದನು. ಆದ್ದರಿಂದ ಎಡಿಸನ್ ಇದಕ್ಕೆ ವಿರೋಧ ಮಾಡುವದಕ್ಕಿಂತ ನಿಕೋಲಾ ಟೇಸಲಾರನ್ನು ತನ್ನ ಸಹಕಾರಿಯೆಂದು ಮಿತಸಂಬಳ ಕೊಟ್ಟು ಭರ್ತಿಮಾಡಿಕೊಂಡನು. ಎಡಿಸನ್ ನಿನ ಕಂಪನಿಯು ತನ್ನ ಕೈಕೆಳಗಿರುವರಿಗೆ ಸಂಬಳ ಕೊಡುವ ಬಗ್ಗೆ ಜಿಪುಣನಾಗಿರುವುದಾಗಿ ಪ್ರಸಿದ್ಧವಾಗಿತ್ತು.

 ಥೋಮಸ್ ಎಡಿಸನ್ ಮತ್ತು ಡಾ. ನಿಕೋಲಾ ಟೇಸಲಾ

ಆದ್ದರಿಂದ ೧೮೮೪ ರರಿಂದ ನಿಕೋಲಾ ಟೇಸಲಾರು ಎಡಿಸನ್ ಮಶೀನ್ ವರ್ಕ್ಸ್ ಗಾಗಿ ಕೆಲಸ ಮಾಡತೊಡಗಿದರು. ಪ್ರಾರಂಭದಲ್ಲಿ ಟೇಸಲಾರವರಿಗೆ ವಿದ್ಯುತ್ ಯಂತ್ರಗಳ ಬಹಳ ಸಾಮಾನ್ಯ ಕೆಲಸಗಳನ್ನು ಕೊಡಲಾಯಿತು, ಆದರೆ ಅದರ ನಂತರ ತಕ್ಷಣವೇ ಕಂಪನಿಗೆ ಎದುರು ಬಂದ ಬಹಳ ತೊಡಕಾದ ಸಮಸ್ಯೆಗಳನ್ನು ಬಿಡಿಸುವ ಕೆಲಸವನ್ನು ಒಪ್ಪಿಸಲಾಯಿತು. ಟೇಸಲಾ ಅವರ ಪ್ರಥಮ ಭೇಟಿಯ ಸಮಯದಲ್ಲಿ ಎಡಿಸನ್ ನ ಡೀಸಿ ಸಿಸ್ಟಮ್ ನನ್ನು ವಿರೋಧ ಮಾಡಿದ್ದರೂ ಡೀಸಿ   ಸಿಸ್ಟಮ್ ನ ಕಾರ್ಯ ಪದ್ಧತಿಯನ್ನು ಕಣ್ಣು ಮುಚ್ಚಿ ಪೂರ್ಣವಾಗಿ ಅದನ್ನು ತ್ಯಜಿಸದೆ ಅದರಲ್ಲಿಯೇ ತನ್ನ ವಿಚಾರ ಮತ್ತು ಅಭಿಪ್ರಾಯವನ್ನು ಉಪಯೋಗಿಸಿ ಅವರಲ್ಲಿಯ ಡೀಸಿ ಸಿಸ್ಟಮಿನಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇನ್ನೂ ಒಳ್ಳೆಯ ರೀತಿಯ ಬದಲಾವಣೆಯನ್ನು ಮಾಡಿದರು.

ಇಲ್ಲಿ ನಾನು ತಪ್ಪು ಸಂಕಲ್ಪನೆಯ ಬಗ್ಗೆ ಸ್ಪಷ್ಟ ಮಾಡಲಿಚ್ಛಿಸುವೆನು. ಕೆಲವು ಪಾಠಗಳಲ್ಲಿ ಮತ್ತು ಸಂದರ್ಭಗಳಲ್ಲಿ ಡಾಯ್ ರೆಕ್ಟ್ ಕರಂಟಿನ ವಿದ್ಯುತ್ತನ್ನು ಎಡಿಸನ್ ಥೋಮಸ್  ಆವಿಷ್ಕಾರ ಮಾಡಿರುವರೆಂದು ಕೊಡಲಾಗಿದೆ. ಆದರೆ ನಿಜವಾದರೆ ಮೈಕಲ್ ಫರಾದಯ್ ಅವರು ೧೮೨೧ ರಲ್ಲಿ ಎಲೆಕ್ಟ್ರಿಕ್ ಮೋಟರ್ ನ ಆವಿಷ್ಕಾರ ಮಾಡಿದಾಗ ಮೊದಲ ಬಾರಿಗೆ ಡಾಯ್ ರೆಕ್ಟ್ ಕರಂಟ್ ನ್ನು ಉಪಯೋಗಿಸಿದ್ದರು ಆದರೆ ’ಡಾಯ್ ರೆಕ್ಟ್ ಕರಂಟ್ ’ನ ಹೆಸರನ್ನು ನಮೂದಿಸಲಿಲ್ಲ. ಎಡಿಸನ್ ಕೇವಲ ಈ ಡೀಸಿ ಪಾವರನ್ನು ವಿದ್ಯುತ್ತನ್ನು ದೂರದ ಅಂತರಕ್ಕೆ ಕಳಿಹಿಸುವಾಗ ತನ್ನ ಪಾವರ್ ಸಿಸ್ಟಮಿನಲ್ಲಿ ಉಪಯೋಗಿಸುವದಕ್ಕಾಗಿ ಅಂಗೀಕರಿಸಿದ್ದನು. ಆದ್ದರಿಂದ ಡೀಸಿ ಪಾವರಿನ ಉತ್ಪತ್ತಿಯು ಥೋಮಸ್ ಎಡಿಸನ್ ಕ್ಕಿಂತ ಮೊದಲೇ ಉಪಯೋಗದಲ್ಲಿತ್ತು.

ಥೋಮಸ್ ಎಡಿಸನ್ ಕೇವಲ ವಿದ್ಯುತ್ ಲಾಯಿಟ್ ಬಲ್ಬನ್ನು ಮಾತ್ರ ಜಗತ್ತಿಗೆ ತೋರಿಸಿದನು ಮತ್ತು ನಿಕೋಲಾ ಟೇಸಲಾರವರನ್ನು ಕೆಲಸದಲ್ಲಿಟ್ಟ ಸಮಯದಲ್ಲಿ ಅವನಿಗೆ ತನ್ನ ಗ್ರಾಹಕರ ಮನೆ-ಮನೆಗೆ ವಿದ್ಯುತ್ತನ್ನು ಸಂಚಲಿಸಲು ಒಂದು ಸಿಸ್ಟಮಿನ (ರಚನೆಯ) ಆವಶ್ಯಕತೆಯಿತ್ತು. ಆದರೆ ಎಡಿಸನ್ ನ ಇಂಜಿನಿಯರುಗಳು ತಯಾರಿಸಿದ್ದ ಡೀಸಿ ಸಿಸ್ಟಮಿನಲ್ಲಿ ಹಲವು ತಪ್ಪುಗಳು ಹಾಗು ಲೋಪಗಳಿದ್ದವು ಎಂದು ಹೇಳಲಾಗುತ್ತದೆ. ಆದರೆ ಎಡಿಸನ್ ಮಶೀನ್ ವರ್ಕ್ಸ್ ದಲ್ಲಿ ಕೂಡ ನಿಕೋಲಾ ಟೇಸಲಾರವರನ್ನು ಬಹಳ ಪ್ರತಿಭಾಶಾಲಿಯೆಂದು ಆದರಿಸಲಾಗುತ್ತಿತ್ತು. ಆದ್ದರಿಂದ ಎಡಿಸನ್ ನ ಡಾಯ್ ರೆಕ್ಟ್ ಕರಂಟ್ ಜನರೇಟರನ್ನು ಪುನ: ತಯಾರಿಸಲು ಟೇಸಲಾರವರಿಗೆ ಹೇಳಲಾಯಿತು. ಮತ್ತು ಅದು ಯಶಸ್ವಿಯಾದರೆ ಟೇಸಲಾರವರಿಗೆ ಐವತ್ತು ಸಾವಿರ ಡಾಲರ್ಸ್ ನ್ನು ಕೊಡಲು ಎಡಿಸನ್ ಒಪ್ಪಿದನು. ಎರಡು ತಿಂಗಳಿನಲ್ಲಿ ತನ್ನ ಕಠಿಣ ಪರಿಶ್ರಮದಿಂದ ಟೇಸಲಾರವರು ಪುನ: ಅದನ್ನು ಹೊಸ ಸ್ವರೂಪದಲ್ಲಿ ತಯಾರಿಸಿ ಯಶಸ್ವಿಯಾದರು. ಇದರ ಫಲಿತಾಂಶವಾಗಿ ಎಡಿಸನ್ ಮಶೀನ್ ವರ್ಕ್ಸ್ ಗೆ ಲಕ್ಷಗಟ್ಟಲೆ ಡಾಲರ್ಸಿನ ಉಳಿತಾಯವಾಯಿತು. ಇವತ್ತಿನ ಕಾಲದಲ್ಲಿ  ಅದನ್ನು ರೂಪಾಂತರಪಡಿಸಿದರೆ ಅದರ ನಿರ್ದಿಷ್ಟಮಾನ ಬಿಲಿಯನಷ್ಟು ಆಗಬಹುದು. ಆದ್ದರಿಂದ ಎಡಿಸನ್ ತನ್ನ ಕಂಪನಿಯಲ್ಲಿ ಸರಿಪಡಿಸಿದ ಡೀಸಿ ಸಿಸ್ಟಮ್ ನನ್ನು  ಉಪಯೋಗಿಸಿದಾಗ ಅದನ್ನು ಡಾ. ನಿಕೋಲಾ ಟೇಸಲಾರವರೇ ಪುನ; ತಯಾರಿಸಿದ್ದಾಗಿತ್ತು.

ತನಗೆ ಕೊಟ್ಟ ಕಾರ್ಯವನ್ನು ನಿಕೋಲಾ ಟೇಸಲಾರವರು ಸಾಧಿಸಿದ್ದರಿಂದ ತನ್ನ ಬಹುಮಾನದ ಬಗ್ಗೆ ಅವರು ಎಡಿಸನ್ ನನ್ನು ಕೇಳಿದರು. ಆದರೆ ಥೋಮಸ್ ಎಡಿಸನ್ ತನ್ನ ಮಾತನ್ನಿಡದೆ ನಾನು ಕುಚೇಷ್ಟೆ ಮಾಡಿದ್ದೇನೆಂದಾಗ ಅವರಿಗೆ ಬಹಳ ಆಶ್ಚರ್ಯ ಮತ್ತು ವೇದನೆ ಆಯಿತು. ಅವನು ಟೇಸಲಾರವರು ’ಸರ್ಬಿಯನ್” ಟೇಸಲಾನು ’ಅಮೇರಿಕದ ಹಾಸ್ಯ’ವನ್ನು ಅರ್ಥಮಾಡಿಕೊಳ್ಳಲಿಲ್ಲವೆಂದು ಅವರ ಅಪಹಾಸ್ಯ ಮಾಡಿದನು. ಎಡಿಸನ್ ಮಾನ್ಯ ಮಾಡಿದ ಐವತ್ತು ಸಾವಿರ ಡಾಲರ್ಸ್ ನ್ನು ಕೊಡುವ ಬದಲು ಟೇಸಲಾರವರ ಸಂಬಳದಲ್ಲಿ ಮಿತ ಹಣವನ್ನು ಹೆಚ್ಚಿಸಿ ಕೊಡಲು ಒಪ್ಪಿದನು. ವಿಶ್ವಾಸಘಾತ ಮಾಡಿದ್ದರಿಂದ ಟೇಸಲಾರವರು ತನ್ನ ಗೌರವವನ್ನು ಉಳಿಸಲೆಂದು ಎಡಿಸನ್ ನ ಕೆಲಸವನ್ನು ತ್ಯಜಿಸಿದರು. ಎಡಿಸನ್ ಆ ಕ್ಷಣದಿಂದಲೇ ಟೇಸಲಾರವರ ಜೊತೆ ವೈರತ್ವ ಸಾಧಿಸಿ ನಿಕೋಲಾ ಟೇಸಲಾರವರ ಬಗ್ಗೆ ಅಪಕೀರ್ತಿ ಹಾಗು ಅವರ ಶೋಧನೆಗಳಿಗೆ ವಿರೋಧ ಮಾಡಿ ತನ್ನ ಉಳಿದ ಆಯುಷ್ಯವನ್ನು ಕಳೆದನು.

ಈ ಘಟನೆಯು ಥೋಮಸ್ ಎಡಿಸನ್ ರನ್ನು ಡಾ. ನಿಕೋಲಾ ಟೇಸಲಾರವರ ಘೋರ ವಿರೊಧಕರನ್ನಾಗಿ ಮಾಡಿತು. ಎಡಿಸನ್ ಎಲ್ಲಾ ತರಹದಲ್ಲಿ ಡಾ. ನಿಕೋಲಾ ಟೇಸಲಾರವರನ್ನು ದೂಷಿಸಿದರು ಮತ್ತು ಅವರ ಶೋಧನೆಗಳು ಮಾನವ ಜೀವನಕ್ಕೆ ಬಹಳ ಹಾನಿಕಾರಕವಾಗಿ ಅದು ಉಪಯೋಗದಲ್ಲವೆಂದು ಸಾಧಿಸ ತೊಡಗಿದರು ಟೇಸಲಾರವರನ್ನು ನಿರ್ನಾಮಮಾಡಲು ಎಡಿಸನ್ ಪ್ರಯತ್ನಿಸಿದ ಪ್ರತಿಯೊಂದು ಘಟನೆಗಳ ಸರದಿಗಳನ್ನು ’ವಾರ್ ಆಫ್ ಕರಂಟ್ಸ್ (ವಿದ್ಯುತ್ ಪ್ರವಾಹಗಳ ಯುದ್ಧ) ಎಂದು ಪ್ರಸಿದ್ಧವಾಯಿತು.

ಎಡಿಸನ್ ನಲ್ಲಿ ರಾಜೀನಾಮೆ ಕೊಟ್ಟು ಟೇಸಲಾರವರು ತನ್ನದೇಯಾದ ಟೇಸಲಾ ಎಲೆಕ್ ಟ್ರಿಕ್ ಲಾಯಿಟ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಆರಂಭಿಸಿದರು. ಇದರ ನಂತರ ನಿಕೋಲಾ ಟೇಸಲಾರವರು ಟೇಸಲಾ ಎಲೆಕ್ರ್ಟಿಕ್ ಕಂಪನಿ ಮಾಡಿದರು. (ಇವೆರೆಡರ ಬಗ್ಗೆ ನಾವು ಡಾ. ನಿಕೋಲಾ ಟೇಸಲಾರವರ ಮುಂದಿನ ಲೇಖನದಲ್ಲಿ ನೋಡಲಿರುವೆವು) ಅಂತ್ಯದಲ್ಲಿ ಟೇಸಲಾರವರು  ಜೊರ್ಜ್ ವೆಸ್ಟಿಂಗ್ ಹೌಸಿನ ವೆಸ್ಟಿಂಗ್ ಹೌಸ್ ಎಲೆಕ್ರ್ಟಿಕ್ ಆಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯನ್ನು ಸೇರಿದರು. ಆ ಸಮಯದಲ್ಲಿ ಪಾವರ್ ಇಂಡಸ್ಟ್ರಿಯಲ್ಲಿ ಇವರೊಬ್ಬರು ಪ್ರತಿಷ್ಟಿತ ವ್ಯಕ್ತಿಯಾಗಿದ್ದರು. ಟೇಸಲಾರವರೊಡನೆ ಕೂಡಿ ವೆಸ್ಟಿಂಗ್ ಹೌಸರವರು ತನ್ನ ಡೀಸಿ ಪಾವರ್ ಸಿಸ್ಟಿಮ್ ನ್ನು ಏಸಿ ಪಾವರಿಗೆ ರೂಪಾಂತರಪಡಿಸಿದರು.

ಏಸಿ ಪಾವರ್ ರೂಪಾಂತರಗೊಳಿದರೆ ತನ್ನ ವ್ಯವಹಾರ ಸಾಮ್ರಾಜ್ಯಕ್ಕೆ ಹಾನಿಯಾಗುವದೆಂದು ಎಡಿಸನ್ ಏಸಿ ಪಾವರನ್ನು ದೂರಿ ಅದರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಹಾಗು ಅಪಪ್ರಚಾರ ಮಾಡಿ ಅದನ್ನು ಉಪಯೋಗಿಸದಂತೆ ಪರಾವೃತ್ತ ಮಾಡತೊಡಗಿದನು. ಇದಕ್ಕಾಗಿ ಅವನು ಬಹಳ ಕೆಳ ಮಟ್ಟದ ಮತ್ತು ಅಮಾನುಷ ತರಹದ ಉಪಯೋಗ ಮಾಡತೊಡಗಿದನು. ಪ್ರಾರಂಭದಲ್ಲಿ ಎಡಿಸನ್ ಏಸಿ ಪಾವರಿನ ಉಪಯೋಗದಿಂದಾಗಿ ಅಪಘಾತಗಳಾಗುತ್ತಿರುವ ಸುಳ್ಳು ಸುದ್ದಿಗಳನ್ನು ಹರಡಿಸಿದನು. ಇದಕ್ಕಾಗಿ ಅವನು ತನ್ನ ರಾಜಕಾರಣದಲ್ಲಿಯ ತನ್ನ ಪರಿಚಯ ಮತ್ತು ಹಣದ ಬಲವನ್ನು ಏಸಿ ಪಾವರ್ ಸಿಸ್ಟಮ್ ಅದರ ಉಪಯೋಗದ ವಿರುದ್ಧವಾಗಿ ವಿವಿಧ ರಾಜ್ಯ ಶಾಸನ ಮತ್ತು ಕಸಬುದಾರರ ಕ್ಲಬ್ ಹಾಗು ಸಂಸ್ಥೆಗಳ ಮೇಲೆ ಉಪಯೋಗಿಸಿದನು.

 Electrocuting An Elephant (https://www.youtube.com/watch?v=VD0Q5FeF_wU)

ಎಡಿಸನ್ ಅಲ್ಲಿಯೇ ನಿಲ್ಲಲಿಲ್ಲ ಅವನು ಸಾಮಾನ್ಯ ಜನಸಮೂದಾಯದ ಮುಂದೆ ಎಲೆಕ್ರ್ಟಿಕ್ ಕರಂಟಿನ ಸಂಪರ್ಕಕ್ಕೆ ಬಂದ ವಿವಿಧ ಪ್ರಾಣಿಗಳು ಹೇಗೆ ಸಾಯುತ್ತವೆ ಹಾಗೆಯೇ ಇದು ಅನೈಸರ್ಗಿಕವಾಗಿದ್ದು ಕ್ರೌರ್ಯ ರೀತಿಯಿಂದಾಗುವದೆಂದು ಪ್ರದರ್ಶನೆ ಮಾಡಿ ತೋರಿಸತೊಡಗಿದ. ಇದಕ್ಕಾಗಿ ಮಾರ್ಗದ ಬೆಕ್ಕು, ನಾಯಿ, ದನಕರು ಹಾಗು ಕುದುರೆಗಳನ್ನು ಉಪಯೋಗಿಸಿದ. ಇದಲ್ಲದೆ ೧೯೦೩ ರ ಜಾನೇವರಿ ೪ ರಂದು, ಎಡಿಸನ್ ಏಸಿ ಪಾವರನ್ನು ಉಪಯೋಗಿಸಿ ಸರ್ಕಸ್ಸಿನ ಆನೆಯನ್ನು ಜನಸಮೂದಾಯದ ಮುಂದೆ ವಿದ್ಯುತ್ ಪ್ರವಾಹ ಚಲಿಸಿ ಬಹಿರಂಗವಾಗಿ ಕೊಂದನು. ಇಂತಹ ಕ್ರೂರ ಕೃತಿಯಿಂದ ಸಮಾಧಾನ ಪಡಲಿಲ್ಲ ಹಾಗು ಇದರಿಂದ ಆನಂದವನ್ನು ಅನುಭವಿಸಲು ಎಡಿಸನ್ ಈ ಮರಣದಂಡನೆಯನ್ನು ಚಿತ್ರೀಕರಿಸಿ ಅದರ ಭಾಗಗಳನ್ನು ಒಟ್ಟು ಮಾಡಿ ೧೯೦೩ ರಲ್ಲಿ ’ಎಕ್ಝೆಕ್ಯೂಶನ್ ಆನ್ ಎಲೆಫೆಂಟ್ ’ ಎಂಬ ಚಲನಚಿತ್ರವನ್ನು ಪ್ರಕಾಶಿಸಿದನು. ಇವೆಲ್ಲವನ್ನು ಮತ್ತು ಮುಖ್ಯವಾಗಿ ಆನೆಯ ಮರಣದಂಡನೆಯಿಂದ ಎಡಿಸನ್ ಜನಸಮುದಾಯಕ್ಕೆ ಏಸಿ ಪಾವರ್ ನ ಉಪಯೋಗದಿಂದಾಗಿ ಆನೆಯು ಸಾಯುತ್ತಿದ್ದರೆ ಅದು ಜನರಿಗಾಗಿ ಅದರಲ್ಲಿ ಮುಖ್ಯವಾಗಿ ಮಕ್ಕಳಿಗೆ ಖಂಡಿತವಾಗಿ ಅಪಾಯಕಾರಕವಾಗಿದೆ ಎಂದು ಸಿದ್ಧ ಮಾಡುವ ಪ್ರಯತ್ನ ಮಾಡಿದ. ಹೀಗೆ ಜನರಲ್ಲಿ ಭೀತಿ ಉತ್ಪನ್ನ ಮಾಡಿ ಏಸಿ ಪಾವರನ್ನು ಉಪಯೋಗಿಸದಂತೆ ಜನರ ಮನೋಭಾವವನ್ನು ಗೆಲ್ಲುವುದರಲ್ಲಿ ಸ್ವಲ್ಪ ಪ್ರಮಾಣದಲ್ಲಿ  ಯಶಸ್ವಿಯಾದನು.

 ಇದನ್ನು ಜನಸಮುದಾಯದ ಮುಂದೆ ತಂದು ತೋರಿಸಲು ಮತ್ತು ಅವರಲ್ಲಿ ಭೀತಿಯನ್ನು ಹರಡಿಸುವ ಕೆಲಸ ಮಾಡಲೆಂದು ಅವನು ತನ್ನ ಎರಡು ಇಂಜಿನಿಯರುಗಳನ್ನು ನೇಮಿಸಿದನು. ಇವರಿಬ್ಬರಲ್ಲಿ ಒಬ್ಬ ಹೆರಾಲ್ಡ್ ಬ್ರೌನ್, ಇವನು ಎಲೆಕ್ರ್ಟಿಕ್ ಚೇರ್ (ವಿದ್ಯುತ್ ಕುರ್ಚಿ) ನ ಆವಿಷ್ಕಾರವನ್ನು ಮಾಡಿರುವನು. ತನ್ನ ಸಹಕಾರಿಗಳು ಮಾಡಿರುವ ಎಲ್ಲಾ ಆವಿಷ್ಕಾರಗಳ ಶ್ರೇಯಸ್ಸನ್ನು ಎಡಿಸನ್ ಗೆ ತನ್ನ ಹೆಸರಿನಲ್ಲಿ  ಪ್ರಸಿದ್ಧ ಪಡಿಸುವ ಅಭ್ಯಾಸವಿದ್ದರಿಂದ ಈಗ ಕೂಡ ಹಾಗೆಯೇ ಮಾಡಿದನು .ಇದರ ನಿರ್ಮಾಣ ಮತ್ತು ಅದರ ಉಪಯೋಗವನ್ನು ಯುನಾಯ್ ಟೇಡ್ ಸ್ಟೇಸ್ಟ್ ನಲ್ಲಿಯ ಎಲ್ಲಾ ಸೆರೆಮನೆಗಳಲ್ಲಿ ಮರಣೆದಂಡನೆಯ ಯಾದಿಗಳಲ್ಲಿದ್ದ ಕೈದಿಗಳಿಗಾಗಿ ಅವಲಂಬಿಸಲಾಯಿತು. ಎಡಿಸನ್ ಉದ್ದೇಶಪೂರ್ವಕವಾಗಿ ಎಲೆಕ್ರ್ಟಿಕ್ ಚೇರ್ ತಯಾರಿಸುವಾಗ ಬ್ರೌನ್ ಗೆ  ಏಸಿ ಪಾವರಿನ ಪದ್ಧತಿಯನ್ನು ಉಪಯೋಗಿಸಲು ಆಜ್ನೆ ಮಾಡಿದನು ಯಾಕೆಂದರೆ ಇದರಿಂದಾಗಿ ಜನರ ಮನಸ್ಸಿನಲ್ಲಿ ಭೀತಿ ಉತ್ಪನ್ನವಾಗುವದರಿಂದ ಏಸಿ ಪಾವರ್ ನ್ನು ಉಪಯೋಗ ಮಾಡಲಾರರು. ಎಡಿಸನ್ ಈ ಮರಣದಂಡನೆಯ ಪ್ರಕಾರವನ್ನು ವೆಸ್ಟಿಂಗ್ ಹೌಸಿಂಗ್ ಎಂದು ಕರೆದನು ಯಾಕೆಂದರೆ ವೆಸ್ಟಿಂಗ್ ಹೌಸ್ ನು ನಿಕೋಲಾ ಟೇಸಲಾರವರ ಏಸಿ ಪಾವರ್ ಟೆಕ್ನೊಲಾಜಿಯ ಮುಖ್ಯ ಪ್ರತಿಪಾದಕನಾಗಿದ್ದನು.  ಮೃತ್ಯು ಶಿಕ್ಷೆಯನ್ನು ಪಡೆದವನನ್ನು ವಿದ್ಯುತ್ ಕುರ್ಚಿಯಲ್ಲಿ ವಿದ್ಯುತ್ ಪ್ರವಾಹಿಸಿ ಕೊಲ್ಲಲಾಗುವದೆಂದು ಜನರಲ್ಲಿ ರೂಢಿನುಡಿಯಾಗಿ ಕ್ಷಣದಲ್ಲಿಯೇ ಪ್ರಸಿದ್ದವಾಯಿತು. ಮೊದಲನೇಯ ಎಲೆಕ್ರ್ಟಿಕ್ ಚೇರ್ ನ್ಯೂಯಾರ್ಕ್ ಸ್ಟೇಟ್ ನ ಕಾರವಾಸಕ್ಕಾಗಿ ತಯಾರಿಸಲಾಯಿತು ಮತ್ತು ಇದನ್ನು ವಿಲ್ಲಿಯಮ್ ಕೆಮ್ಲರ್ ಎಂಬ ಕೈದಿಯ ಮರಣೆದಂಡನೆಯ ಸಮಯದಲ್ಲಿ ಮೊದಲಬಾರಿಗೆ ಉಪಯೋಗಿಸಲಾಯಿತು. ಇದನ್ನು ಉಪಯೋಗಿಸಿದಾಗ ಕೆಮ್ಲರ್ ನು ಶಾಂತವಾಗಿ ಮರಣಹೊಂದಬಹುದೆಂದು ತಿಳಿದಿದ್ದರು. ಆದರೆ ಇದು ಅವನನ್ನು ಪೂರ್ಣ ಸುಡದೆ ಅರ್ಧವೇ ಸುಟ್ಟಿತು. ಇದನ್ನು ಪೂರ್ಣಗೊಳಿಸಿಲು ಅವರಿಗೆ ಈ ಪದ್ಧತಿಯನ್ನು ಹಲವು ಸಲ ಕ್ಲೆಮರ್ ನ ಮೇಲೆ  ಉಪಯೋಗಿಸಬೇಕಾಯಿತು. ಈ ಪೂರ್ಣ ಘಟನೆಯನ್ನು ಜನಸಮುದಾಯದ ತನಕ ತಲುಪಿಸಲೆಂದು ಪತ್ರಕಾರರನ್ನು ಬೇಕೆಂತಲೇ ಕರೆದು ಅದನ್ನು ತೋರಿಸಲಾಯಿತು. ಇದನ್ನು ನೋಡಿದ ವರದಿಗಾರರು ಈ ರೀತಿಯ ಮರಣಾವಸ್ಥೆಯು ಗಲ್ಲಿಗೇರುಸುವದಕ್ಕಿಂತ ಈ ಪದ್ಧತಿಯು ಎಷ್ಟು ಕ್ರೂರ ಮತ್ತು ಅಮಾನುಷ  ಪ್ರಕಾರವೆಂದು ವಿವರಿಸಿ ಹೇಳತೊಡಗಿದರು. ಹೀಗೆ ನಿರ್ದಯತೆಯಿಂದ ಹಾಗು ಕ್ರೂರ ರೀತಿಯಿಂದ ಕೊಲ್ಲುವ ಪ್ರಕಾರ ಈಗಿನ ಕಾಲದಲ್ಲಿ ಕೂಡ ಯುನಾಯ್ ಟೇಡ್ ಸ್ಟೇಸ್ಟ್ಸ್ ಆಫ್ ಅಮೇರಿಕಾದ ಒಂದೇ ರಾಷ್ಟ್ರದಲ್ಲಿ  ಮಾತ್ರ  ಪಾಲಿಸಲಾಗುತ್ತಿದೆ ಇದನ್ನು ಮುಖ್ಯವಾಗಿ ನಮೂದು ಮಾಡಿ ಗಮನಕ್ಕೆ ತರುವಂತಿದೆ.

ಈಗ ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್, ಮೋಬೈಲ್ ಮೊದಲಾದ ಯಂತ್ರಣಗಳಲ್ಲಿ ಈ ಲೇಖನವನ್ನು ನಿಮ್ಮ ಮನೆ, ಆಫೀಸು ಮತ್ತು ಸಂಸ್ಥೆಗಳಲ್ಲಿ ಆಲ್ಟರ್ ನೇಟಿಂಗ್ ಪಾವರಿನ ಕಾರಣದಿಂದ ಓದಲು ಸಾಧ್ಯವಾಗಿದೆಯೆಂದು ನೆನಪಿನಲ್ಲಿಡಿರಿ. ಇದರಿಂದ ಇಷ್ಟೇ ಸಿದ್ಧವಾಗುತ್ತದೆಂದರೆ ಸಮಯವು ಯಾವಾಗಲು ಸತ್ಯದ ಬದಿಯಲ್ಲಿರುವದು. ಹಲವು ಸುಳ್ಳು ಸುದ್ದಿಯ ಪ್ರಚಾರ ಮತ್ತು ಒಳಸಂಚನ್ನು ಡಾ, ನಿಕೋಲಾ ಟೇಸಲಾರವರ ವಿರುದ್ಧ ಮಾಡಿದ್ದರೂ ವಾರ್ ಆಫ್ ಕರಂಟ್ ಅಂದರೆ ವಿದ್ಯುತ್ ಪ್ರವಾಹಗಳ ಯುದ್ಧದಲ್ಲಿ  ಅವರ ಆಲ್ಟರ್ ನೇಟಿಂಗ್ ಕರಂಟ್ ಯಶಸ್ವಿಯಾಗಿ ಬಂತು. ಡಾ. ನಿಕೋಲಾ ಟೇಸಲಾರವರ ದೊಡ್ಡತನವೆಂದರೆ  ಥೋಮಸ್ ಎಡಿಸನ್ ನು ಎಲ್ಲಾ ಪ್ರಕಾರದ ನೀಚ ತಂತ್ರಗಳನ್ನು ಉಪಯೋಗಿಸಿದರೂ ಅವರು ಮಾತ್ರ ಎಡಿಸನ್ ವಿರುದ್ಧ, ಅವರ ಕುತಂತ್ರಗಳ ಬಗ್ಗೆ ಅಥವಾ ಒಬ್ಬರನೊಬ್ಬರನ್ನು ದೂರುವ ಕಾರಸ್ಥಾನದಲ್ಲಿ ಭಾಗವಹಿಸಲಿಲ್ಲ . ಹಾಗೆಯೇ ಅವರ ವಿರುದ್ಧ ಚಕಾರ ಶಬ್ದ ಉಚ್ಚರಿಸದಿದ್ದರು ಕೊನೆಗೆ ಅವರೇ ಯಶಸ್ವನ್ನು ಪ್ರಾಪ್ತ ಮಾಡಿದರು.

|| ಹರಿ ಓಂ || ಶ್ರೀರಾಮ || ಅಂಬಜ್ನ ||


Tuesday 12 August 2014

ಆಲ್ಟರ್ನೇಟಿಂಗ್ ಕರೆಂಟ್ ಮತ್ತು ಡಾ ನಿಕೋಲಾ ಟೆಸ್ಲಾ (Alternating current & Dr. Nikola Tesla)

ಒಂದು ಬಹಳ ಪ್ರಸಿದ್ಧ ಲೋಕೋಕ್ತಿಯಿದೆ, "ದುರಂಹಕಾರವೆಂದರೆ ಬಲವಲ್ಲ, ಆದರೆ ಅದು ಭಯದ ಇನ್ನೊಂದು ಮುಖವಾಡವಾಗಿದೆ." ಈ ಲೇಖನವನ್ನು ಮುಗಿಸುವಾಗ ಇದೇ ಮಾತನ್ನು ಸಾಧಿಸುವ ಮುಖ್ಯವಾದ ಪರಿಸಮಾಪ್ತಿಗೆ ನಾವು ಬರುತ್ತೇವೆ.

ನೀವು ಆಲ್ಟರ್ ನೇಟಿಂಗ್ ಕರಂಟ್ (ಏಸಿ) ಬಗ್ಗೆ ಕೇಳಿರುವಿರೆಂದು ನನಗೆ ಖಾತ್ರಿಯಿದೆ. ಆಲ್ಟರ‍್ ನೇಟಿಂಗ್ ಕರಂಟ್ (ಪರ್ಯಾಯ ವಿದ್ಯುತಚ್ಛಕ್ತಿ) ನಲ್ಲಿ ವಿದ್ಯುತಚ್ಛಕ್ತಿಯು ತನ್ನ ಪ್ರವಾಹವನ್ನು ನಿಯಮಿತಕಾಲಗಳಲ್ಲಿ ವಿಪರೀತ ದಿಶೆಗಳಿಗೆ ತಿರುಗಿಸುತ್ತದೆ. ಇದರ ತುಲನೆಯಲ್ಲಿ ಡಾಯ್ ರೆಕ್ಟ್ ಕರಂಟ್ (ಡೀಸಿ) ತನ್ನ ವಿದ್ಯುತಚ್ಛಕ್ತಿಯ ಪ್ರವಾಹವನ್ನು ಒಂದೇ ದಿಶೆಯಲ್ಲಿ ತೆಗೆದುಕೊಳ್ಳುವದು. ಇದರ ಬಹಳ ಸುಲಭದ ಉದಾಹರಣೆ ಕೊಡಬೇಕಾದರೆ ಅದು ನಮ್ಮ ನಿತ್ಯದ ಜೀವನದಲ್ಲಿಯ ಏಸಿಯ ಬಳಕೆ ಅಂದರೆ; ನಮ್ಮ ಮನೆಗಳಿಗೆ ಪೂರೈಸಲಾಗುತ್ತಿರುವ ವಿದ್ಯುತಚ್ಛಕ್ತಿ. ಇತ್ತೀಚೆಗೆ ಇಂಡಿಯನ್ ರೇಲ್ವೆಯ ಹಲವು ವಿಭಾಗಗಳಲ್ಲಿ ಟ್ರೇನುಗಳನ್ನು ಚಲಿಸಲು ಅವರು ಡೀಸಿ ಸಿಸ್ಟಮ್ ನ್ನು ಏಸಿ ಸಿಸ್ಟಮಿನಲ್ಲಿ ಸ್ಥಾನಾಂತರ ಮಾಡಿರುವರು ಎಂದು ನಾವು ಕೇಳಿರುವೆವು. ಪ್ರತಿದಿನ ೭.೫ ಮಿಲ್ಲಿಯನ್ ಗಿಂತಲು ಹೆಚ್ಚಿಗೇನೆ ಇರುವ ರೇಲ್ವೆ ಯಾತ್ರಿಗಳನ್ನು ಕರೆದೊಯ್ಯುವಾಗ ಮುಂಬಯಿಯಲ್ಲಿ ಮಿತಿಮೀರಿ ಉಪಯೋಗಿಸಲಾಗುತ್ತಿರುವ ನೆಟ್ ವರ್ಕ್ ಗಳಿಗಾಗಿ ಸುಲಭವಾಗಲೆಂದು ಮುಖ್ಯವಾಗಿ ಈ ಬದಲಾಣೆಯನ್ನು ಬಳಕೆಗೆ ತಂದಿದ್ದಾರೆ.




ಡಾ. ನಿಕೋಲಾ ಟೇಸಲಾರವರೇ ೧೮೮೨ ರಲ್ಲಿ ಆಲ್ಟರ್ ನೇಟಿಂಗ್ ಕರಂಟ್ ನ್ನು ಪೂರೈಸುವ  ಪ್ರಸಿದ್ಧ ಸಿಸ್ಟಮ್ ನ್ನು ಉತ್ಪಾದಿಸಿ ಅದರ ಬಳಕೆಯು ವ್ಯವಹಾರಕ್ಕಾಗಿ ಸಮರ್ಥವಾಗಿರುವುದೆಂದು ವಿವರಿಸಿದರು. ಈ ಆಲ್ಟರ್ ನೇಟಿಂಗ್ ಕರಂಟ್ ನ ವಿಚಾರ ಡಾ. ನಿಕೋಲಾ ಟೇಸಲಾರವರಿಗೆ ಹೇಗೆ ಸೂಚಿರಬೇಕೆಂಬುದು ಬಹಳ ಕುತೂಹಲಕಾರವಾಗಿದೆ. ಡಾ ಟೇಸಲಾರವರು ಅವರ ಎಲ್ಲಾ ಸಂಶೋಧನೆಗಳನ್ನು ತನ್ನ ಸ್ವಪ್ನದೃಷ್ಟಾಂತದಲ್ಲಿ ಕಾಣಿದ್ದಾರೆಂದು ಹೇಳುತ್ತಿದ್ದರು. ಏಸಿ ಕರಂಟ್ ಮೋಟರಿನ ಸಂಕಲ್ಪನೆಯು ಇದೇ ಸ್ವಪ್ನದೃಷ್ಟಾಂತದಲ್ಲಿ ಬಂದಿತ್ತೆಂದು ಹೇಳುತ್ತಾರೆ. ೧೮೮೨ ರಲ್ಲಿ ಒಮ್ಮೆ ನಿಕೋಲಾ ಟೇಸಲಾರವರು ಬುಡಾಪೇಸ್ಟ್ ನಲ್ಲಿದ್ದರು. ಒಮ್ಮೆ ಮದ್ಯಾಹ್ನ ನಿಕೋಲಾರವರು ಸಿಟಿ ಪಾರ್ಕ್ ನಲ್ಲಿ ತನ್ನೊಬ್ಬ ಮಿತ್ರನೊಡನೆ ತಿರುಗಾಡುತ್ತಿರುವಾಗ ಕಾವ್ಯವನ್ನು ಹಾಡುತ್ತಿದ್ದರು. ಆ ಪ್ರಾಯದಲ್ಲಿ ತರುಣ ನಿಕೋಲಾರವರಿಗೆ ಅವರ ಪುಸ್ತಕದಲ್ಲಿದ್ದೆಲ್ಲಾ ಶಬ್ದಶ: ಪಾಠಾಂತರವಾಗಿತ್ತು. ಅವುಗಳಲ್ಲಿ ಗೊಯೆಥ್ ರವರ ಫೌಸ್ಟ್ ಒಂದಾಗಿತ್ತು. ಸೂರ್ಯಾಸ್ತದ ಸಮಯವಾಗಿತ್ತು ಆಗ ನಿಕೋಲಾರವರಿಗೆ ಆ ಕಾವ್ಯದ ಅತ್ಯುತಮ ಪರಿಚ್ಛೇದನಗಳ ನೆನಪಾಯಿತು, "ದ ಗ್ಲೋ ರಿಟ್ರೀಟ್ಸ್, ಡನ್ ಈಜ್ ದ ಡೇ ಅಫ್ ಟೋಯಿಲ್; ಇಟ್ ಯ್ಯೊಂಡರ್ ಹೇಸ್ಟ್ಸ್, ನಿವ್ ಫೀಲ್ಡ್ಸ್ ಅಫ್ ಲಾಯಿಫ್ ಎಕ್ಸ್ ಪ್ಲೋರಿಂಗ್: ಆಹ್, ದ್ಯಾಟ್ ನೊ ವಿಂಗ್ ಕ್ಯಾನ್ ಲಿಫ್ಟ್ ಮಿ ಫ್ರಮ್ ದ ಸೊಯಿಲ್ ಅಪೊನ್ ಇಟ್ಸ್ ಟ್ರಾಕ್ಟ್ ಟು ಫಾಲೊ, ಫಾಲೊ ಸೋರಿಂಗ್ !" ನಿಕೋಲಾ ಈ ಉತ್ಸಾಹಪೂರ್ಣ ಶಬ್ದಗಳನ್ನು ಉಚ್ಚಾರಿಸತೊಡಗಿದರು ಆಗ ಅವರ ತಲೆಯಲ್ಲಿ ಮಿಂಚಿನ ಪ್ರಕಾಶ ಹೊಳೆದಂತೆ ಈ ವಿಚಾರ ಅವರಿಗೆ ಬಂತು. ಕ್ಷಣದಲ್ಲಿಯೇ ಅವರಿಗೆ ಸತ್ಯದ ಪರಿಚಯವಾಯಿತು. ಇದನ್ನು ಅವರು ಆ ಸರ್ವಸಮರ್ಥ ದೇವರ ಕೆಲಸವೆಂದು ತಿಳಿದರು. ನಿಕೋಲಾ ಟೇಸಲಾರವರು ತಾನು ಸ್ವಪ್ನದೃಷ್ಟಾಂತದಲ್ಲಿ ಕಂಡ ಆಲ್ಟರ್ ನೇಟಿಂಗ್ ಸಿಸ್ಟಮಿನ ಆಕೃತಿಯನ್ನು ಮರುಳಿನಲ್ಲಿ ಕೋಲಿನಿಂದ ತೆಗೆದರು. ಈ ಆಕೃತಿಯು ರೊಟೇಟಿಂಗ್ ಮ್ಯಾಗ್ನೆಟಿಕ್ ಫೀಲ್ಡ್ ನದ್ದಾಗಿತ್ತು. ಡಾ. ಟೇಸಲಾರವರು ಆರು ವರ್ಷದ ನಂತರ ಅಮೇರಿಕನ್ ಇಂಸ್ಟಿಟ್ಯುಟ್ ಆಫ್ ಎಲೆಕ್ರ್ಟಿಕಲ್ ಇಂಜಿನಿಯರ್ಸ್ ಗಳ ಮುಂದೆ ಈ ಆಕೃತಿಯನ್ನು ವಿವರಿಸಿ ಮತ್ತು ಪ್ರಾತ್ಯಕ್ಷಿಕವಾಗಿ ಮಾಡಿ ತೋರಿಸಿದರು. ಇದರ ಪ್ರತಿಮೆಗಳು ಆಶ್ಚರ್ಯಕರವಾಗಿ ಸ್ಪಷ್ಟ ಮತ್ತು ನಿಚ್ಛಳ ಹಾಗು ಲೋಹದಂತೆ ಸ್ಥಿರವಾಗಿತ್ತು. ಇದನ್ನು ವರ್ಣಿಸುವಾಗ ನಿಕೋಲಾ ಟೇಸಲಾರವರು "ಇಲ್ಲಿ ನನ್ನ ಮೋಟರನ್ನು ನೋಡಿ ಮತ್ತು ನಾನು ಅದನ್ನು ಹಿಂದಿರುಗಿಸುವದನ್ನು ಗಮನಿಸಿ" ಎಂದು ಹೇಳಿದರು.

ನಿಕೋಲಾ ಟೇಸಲಾರವರು ಅವರ ಸ್ವಪ್ನದೃಷ್ಟಾಂತದ ಮೂಲಕ ಆಲ್ಟರ್ ನೇಟಿಂಗ್ ಸಿಸ್ಟಮ್ ಆಫ್ ಜನರೇಟರ್ಸ್ ಗಳಲ್ಲಿ ಅನೇಕ ತರಹದ (ಮೂರು ತರಹ) ಬದಲಾವಣೆಗಳನ್ನು ವಿಕಸಿತ ಮಾಡಿದರು, ಆಲ್ಟರ್ ನೇಟಿಂಗ್ ಕರಂಟ್ ಡೈನಮೋವನ್ನು ಒಳಗೊಂಡ ಮೋಟರ್ಸ್ ಆಂಡ್ ಟ್ರಾಂಸ್ ಫೊರಮರ್ಸ್, ಸ್ಟೆಪ್ ಅಪ್ ಆಂಡ್ ಸ್ಟೆಪ್ ಡೌನ್ ಟ್ರಾಂಸ್ ಫೊರಮರ್ಸ್ ಮತ್ತು ಇನ್ನೊಂದು ಬದಿಯಲ್ಲಿ ಏಸಿ ಮೋಟರ್ಸ್ ನ್ನು ಮಾಡಿ ತೋರಿಸಿದರು. ಈ ಸಿಸ್ಟಮಿನಲ್ಲಿ ೪೦ ಮೂಲ ದಾಖಲೆಗಳನ್ನು ಯುಎಸ್ ನಲ್ಲಿ ಡಾ. ನಿಕೋಲಾ ಟೇಸಲಾರವರು ನಮೂದು ಮಾಡಿರುವರು. ೧೮೮೮ ರಲ್ಲಿ ಡಾ. ನಿಕೋಲಾ ಟೇಸಲಾರವರು ಒಂದು ವಾರ್ತೆಪತ್ರಿಕೆಯಲ್ಲಿ " ಏ ನಿವ್ ಸಿಸ್ಟಮ್ ಆಫ್ ಆಲ್ಟರ್ ನೇಟಿಂಗ್ ಕರಂಟ್ ಮೋಟರ್ಸ್ ಆಂಡ್ ಟ್ರಾಂಸ್ ಫೊರಮರ್ಸ್ ’ಎಂಬ ಶಿರೋನಾಮೆ ಕೊಟ್ಟು ತನ್ನ ಮೋಟರ್ಸ್ ಆಂಡ್ ಎಲೆಕ್ ಟ್ರಿಕಲ್ ಸಿಸ್ಟಮ್ ನ ಪರಿಚಯ ಮಾಡಿಸಿದರು ಮತ್ತು ಇದನ್ನೇ ಅವರು ೧೮೮೮ ರಲ್ಲಿ ಅಮೇರಿಕನ್ ಇಂಸ್ಟಿಟ್ಯುಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ರವರ ಮುಂದಿಟ್ಟಾಗ ಅಲ್ಲಿ ಉಪಸ್ಥಿತ ಜನರೆಲ್ಲರ, ಉದ್ಯೋಗ ಸಮಾಜದವರ ಅಲ್ಲದೆ ವರ್ತಮಾನ ಪತ್ರಕಾರರ ಗಮನ ಸೆಳೆಯಿತು. ಡಾ. ನಿಕೋಲಾ ಟೇಸಲಾರವರು ಮೂರು ತರಹದ ಆಲ್ಟರ್ ನೇಟಿಂಗ್  ಕರಂಟ್ ಸಿಸ್ಟಮ್ ನ್ನು ತಯಾರಿಸುವಾಗ ನಿಜವಾಗಿಯೇ ಅವರು ಪಾವನ ತ್ರೈಮೂರ್ತಿತ್ವವನ್ನು ಸ್ವಪ್ನದೃಷ್ಟಾಂತದಲ್ಲಿ ಕಂಡದಂತಿತ್ತು .

ಡಾ. ನಿಕೋಲಾ ಟೇಸಲಾರವರು ಪ್ರಸ್ಥಾಪಿಸಿದ ಭವ್ಯವಾದ ಏಸಿ ಸಿಸ್ಟಮ್ ಆಫ್ ಎಲೆಕ್ಟ್ರಿಸಿಟಿ ಜನರೇಶನ್, ೧೮೮೮ ರಿಂದ ನಮ್ಮ ಮನೆ, ವಾಣಿಜ್ಯ ಹಾಗು ಟ್ರಾಂಸ್ ಪೋರ್ಟ್ ಗಳಿಗಾಗಿ ಇವತ್ತು ಕೂಡ ಅದೇ ಪದ್ಧತಿ ಮತ್ತು ವಿಶಿಷ್ಟ ಪ್ರಕಾರದಿಂದ ಉಪಯೋಗಿಸಲಾಗುತ್ತಿದೆ. ಡಾ. ನಿಕೋಲಾ ಟೇಸಲಾರವರ ಈ ಸಂಶೋಧನೆಯನ್ನು ೧೮೬೦ ರಲ್ಲಿ ಪ್ರಾರಂಭವಾದ ಎರಡನೇಯ ಉದ್ಯೋಗ ಕ್ರಾಂತಿಯ ಗತಿಶಕ್ತಿಗೆ ಕಾರಣಿಭೂತವಾಗಿ ಮತ್ತು ಇದರಿಂದಾಗಿಯೇ ಮುಂದೆ ಫ್ಯಾಕ್ಟರಿ ಎಲೆಕ್ಟ್ರಿಫಿಕೇಶನ್, ಮಾಸ್ ಪ್ರೊಡಕ್ಷನ್, ಪ್ರೊಡಕ್ಷನ್ ಲಾಯಿನ್ ಮೊದಲಾದವುಗಳ ಸಂಶೋಧನೆಗಳಾದವು.

ಡಾ. ನಿಕೋಲಾ ಟೇಸಲಾರವರು ಅವರ ಹೆಸರಿನಲ್ಲಿ ೭೦೦ ಕ್ಕಿಂತ ಮೀರಿದ ದಾಖಲೆಗಳನ್ನು ನಮೂದುಮಾಡಲಾಗಿ ಮುಂದೆ ಇದರಿಂದಾಗಿಯೇ ನೂರಕ್ಕಿಂತಲು ಹೆಚ್ಚು ಸಂಶೋಧನೆಗಳಾಗಿ ಅವುಗಳ ಸಾವಿರಾರು ಪ್ರಕಾರಗಳಲ್ಲಿ ಉಪಯೋಗ ಮಾಡಲಾಯಿತು. ಅವರು ಮಾಡಿದ ಮೊದಲನೇಯ ಸಂಶೋಧನವಾದ ಏಸಿ ಪಾವರ್ ಮತ್ತು ಆ ಸಂಶೋಧನೆಗಳಂತೆಯೇ ಮುಗಿಯಲಾರದ ಅಗಣಿತ ಪಟ್ಟಿಗಳನ್ನು ನೋಡಿದಾಗ ಡಾ. ನಿಕೋಲಾ ಟೇಸಲಾರವರ ಸಂಶೋಧನೆಗಳು ನಮ್ಮ ಜೀವನದ ಪ್ರತಿಯೊಂದು ಸೆಕೆಂದುಗಳನ್ನು ಸ್ಪರ್ಷಿಸುತ್ತಿರುವದು ಸ್ಪಟಿಕದಂತೆ ನಿಶ್ಛಳವಾಗಿದೆ. ಹೀಗಿರುವಾಗ ನಮ್ಮಲ್ಲಿ ಹಲವರು ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನಗಳಲ್ಲಿ ಹೇಳುವ ತನಕ ಅವರ ಹೆಸರನ್ನೇ ಅಂದಿನವರೆಗೆ ಕೇಳಿರಲಿಲ್ಲ,
 

ಕಳೆದ ವಾರದ ಲೇಖನವನ್ನು ಮುಂದುವರಿಸುವಾಗ ನಾವು ಡಾ. ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ರವರನ್ನು ಭೇಟಿ ಮಾಡುವ ತನಕ ಅವರನ್ನು ಪೂಜಿಸುತ್ತಿದ್ದರೆಂದು ನೋಡಿದೇವು. ಅವರ ಪ್ರಥಮ ಭೇಟಿಯಲ್ಲಿಯೇ ಟೇಸಲಾರವರ ಬಗ್ಗೆ ಮಾಹಿತಿಯನ್ನು ಎಡಿಸನ್ ಪಡೆದುಕೊಂಡರು. ಆ ಸಮಯದಲ್ಲಿ ಎಡಿಸನ್ ರವರನ್ನು "ಕಿಂಗ್ ಆಫ್ ಎಲೆಕ್ಟ್ರಿಸಿಟಿ" ಎಂದು ಜಗತ್ತಿನಲ್ಲೆಲ್ಲಾ ಕರೆಯಲಾಗುತ್ತಿತ್ತು. ಆಗ ಡೀಸಿ ಪಾವರ್ ನ್ನು ನೂರಾರು ಪಾವರ್ ಸ್ಟೇಶನ್ ಗಳಿಂದ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಅದರ ಎಡಿಸನ್ ಮಾಲಿಕರಾಗಿದ್ದು ಆ ಸಮಯದಲ್ಲಿಯ ಎಲೆಕ್ಟ್ರಿಕಲ್ ಇಂಸ್ಟ್ರುಮೆಂಟ್ ಗಳಿಗೆ ಪಾವರ್ ಮತ್ತು ಜನರೇಟ್ ಮಾಡುತ್ತಿತ್ತು. ಕಾರಣ ಅದನ್ನು ಕೇವಲ ಡೀಸಿ ಪಾವರಿಗಾಗಿ ಉದ್ದೇಶಪೂರ್ವಕವಾಗಿ ತಯಾರಿಸಲಾಗಿತ್ತು.


ಎಡಿಸನ್ ರ ಭೇಟಿಯ ಸಮಯದಲ್ಲಿ ನಿಕೋಲಾ ಟೇಸಲಾರವರು ಆಲ್ಟರ್ ನೇಟಿಂಗ್ ಕರಂಟ್ ಮೋಟರಿಗೆ ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡಲು ಮೂಲವಾದ ರೋಟೆಟಿಂಗ್ ಮ್ಯಾಗ್ನೇಟಿಕ್ ಫೀಲ್ಡ್ ನ ಮೂಲತತ್ವವನ್ನು ವಿವರಿಸಿ ಹೇಳಿದರು. ವಿದ್ಯುತಚ್ಛಕ್ತಿಯನ್ನು ಜನರೇಟ್ ಮಾಡುವ ಮೂಲತತ್ವದ ಉಪಯೋಗದ ಬಗ್ಗೆ ಎಡಿಸನ್ ವಿಚಾರ ಕೂಡ ಮಾಡಿರಲಿಲ್ಲ ಹಾಗು ಅದನ್ನು ಅರ್ಥ ಕೂಡ ಮಾಡಿಕೊಳ್ಳಲು ಅಸಮರ್ಥರಾಗಿರುವರೆಂದು ಟೇಸಲಾರವರಿಗೆ ಬಹಳ ಆಶ್ಚರ್ಯವಾಯಿತು. ಟೇಸಲಾರವರು ಎಡಿಸನ್ ಗೆ ವಿವರಿಸುವಾಗ ಡೀಸಿ ಪಾವರನ್ನು ದೂರದ ಅಂತರಕ್ಕೆ ಕಳುಹಿಸುವಾಗ ಏಸಿ ಪಾವರಿನ ತುಲನೆಯಲ್ಲಿ ಎಡಿಸನ್ ರವರ ಡೀಸಿ ಗೆ ನಿವ್ ಯಾರ್ಕ್ ನ ಪಟ್ಟಣಕ್ಕೆ ಕಳುಹಿಸಲು ನೂರಾರು ಪಾವರ್ ಸ್ಟೇಶನ ಗಳ ಪಾವರ್ ಬೇಕಾಗುವದು ಹಾಗು ಆಗ ಸಹ ಆ ಪಟ್ಟಣದ ಹೊರ ಭಾಗ ಕತ್ತಲೆಯಲ್ಲಿ ಉಳಿಯುವದು ಮತ್ತು ಅದರ ತುಲನೆಯಲ್ಲಿ ನಿಕೋಲಾ ಟೇಸಲಾರವರ ಆಲ್ಟರ್ ನೇಟಿಂಗ್ ಕರಂಟ್ ಮಾಡುವ ಕೆಲಸವನ್ನು ಕೇವಲ ಒಂದೇ ಪಾವರ್ ಸ್ಟೇಶನ್ ನೆರವೇರಿಸುತ್ತದೆ. ಇದು ಕೇವಲ ನಿವ್ ಯಾರ್ಕ್ ಪಟ್ಟಣಕ್ಕಲ್ಲದೆ ಪೂರ್ಣ ನಿವ್ ಯಾರ್ಕ್ ಸ್ಟೇಟಿಗೆ ಸ್ಥಳಾಂತರ ಮಾಡುವದು ಎಂದು ಹೇಳಿದರು.

ನಿಕೋಲಾ ಟೇಸಲಾರವರು ಡೀಸಿ ಸ್ಯಿಸ್ಟಮ್ ದೂರದ ಅಂತರಕ್ಕೆ ಕಳುಹಿಸುವಾಗ ಪಾವರ್ ನ್ನು  ವ್ಯಯ ಮಾಡುತ್ತದೆ ಆದರೆ ಏಸಿ ಸಿಸ್ಟಮ್ ಹಾಗೆ ಮಾಡುವುದಿಲ್ಲ ಎಂದು ವಿವರಿಸಿ ಹೇಳಿದರು. ಅದಲ್ಲದೆ ಡಾ. ನಿಕೋಲಾ ಟೇಸಲಾರವರ ಏಸಿ ಕರಂಟ್ ಸಿಸ್ಟಮ್ ನಲ್ಲಿ ಸ್ಟೆಪ್ ಅಪ್ ಮತ್ತು ಸ್ಟೆಪ್ ಡೌನ್ ಟ್ರಾಂಸ್ ಫೊರಮರ್ಸ್ ಇದ್ದು ಅದು ವೊಲ್ಟೇಜ್ ನ್ನು ಹೆಚ್ಚು ಕಡಿಮೆ ಮಾಡಲು ಉಪಯೊಗಿಸಬಹುದು. ಈ ಸಿಸ್ಟಮ್ ಸಾವಿರ ಪಾಲಿನಷ್ಟು ಸುರಕ್ಷಿತವಾಗಿದ್ದು ಮತ್ತು ಆರ್ಥಿಕ ದೃಷ್ಟಿಯಲ್ಲಿಯೂ ಬಹಳ ಸಮರ್ಪಕವಾಗಿದೆ. ಮುಂದೆ ಅವರಿಗೆ ವಿವರಿಸುವಾಗ ಟೇಸಲಾರವರು ನಾವು ನೈಸರ್ಗಿಕವಾಗಿ ಪಡೆದ ಈ ಪಾವರನ್ನು ಗಾಳಿಯಲ್ಲಿ ಬಿಸಾಡಿದಂತೆ ವ್ಯಯವಾಗುವದು ಎಂದು ಹೇಳಿದರು. ಈ ಡೀಸಿ ಪಾವರ್ ನ ಎಲೆಕ್ಟ್ರಿಕ್ ಪಾವರ್ ಅಪೂರ್ಣವಾಗಿದ್ದು ಅದು ಅನೈಸರ್ಗಿಕವಾಗಿದೆಯೆಂದು ಕೂಡ ಹೇಳಿದರು. ಅಲ್ಲದೆ ಅದು ನಿಸರ್ಗದ ಏಕತಾಳವನ್ನು ನಷ್ಟ ಮಾಡುತ್ತಿದೆಯೆಂದು ಸಹ ಹೇಳಿದರು.ಈ ಡೀಸಿಯನ್ನು ಏಸಿಯಲ್ಲಿ ರೂಪಾಂತರಗೊಳಿಸಿದಾಗ ಒಂದು ದೊಡ್ಡ ಹೆಜ್ಜೆ ಮುಂದಿಟ್ಟಂತೆ ಅದು ಪೂರ್ಣ ಜಗತ್ತನ್ನೇ ಬದಲಾಯಿಸುವದು ಮತ್ತು ಮಾನವನಿಗೆ ಲಾಭದಾಯಿಯಾಗುವದೆಂದು ವಿಸ್ತಾರದಿಂದ ವಿವರಿಸಲು ಪ್ರಯತ್ನಿಸಿದರು

ಈ ಕ್ರಾಂತಿಕಾರಕ ವಿಚಾರಗಳನ್ನು ಕೇಳಿದಾಗ, ಥೋಮಸ್ ಎಡಿಸನ್ ಆಶ್ಚರ್ಯಪಟ್ಟು ಅಸ್ವಸ್ಥಗೊಂಡರು. ನಿಕೋಲಾ ಟೇಸಲಾರವರ ಈ ವಿಚಾರಗಳು ನಿಜದಲ್ಲಿ ರೂಪಗೊಂಡರೆ ಅವರ ಪಾವರ್ ಉದ್ಯೋಗಕ್ಕೆ ಗಂಡಾಂತರವಿದೆಯೆಂದು ಎಡಿಸನ್ ಗೆ ಸ್ಪಷ್ಟವಾಗಿ ತೋರಿತು. ಇದರ ವಿಚಾರಗಳೇ ಎಡಿಸನ್ ನನ್ನು ಬಹಳ ಕದಡಿಸಿ ಅವರು ಕ್ಷುಭ್ದಗೊಂಡರು. ತನ್ನ ಪಾವರ್ ಸಾಮ್ರಾಜ್ಯವನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಎಡಿಸನ್ ರವರು ಟೇಸಲಾರವರ ವಿಚಾರಗಳನ್ನು ಆಗಲೇ ಅಲ್ಲಿಯೇ ತ್ಯಜಿಸಿದರು ಮತ್ತು ಅವರ ಪರಿಹಾಸ್ಯ ಮಾಡಿ, ಅವರು ಮುಂದೆ ಹೋಗಲಾರದ ತಪ್ಪು ಹಾದಿಯಲ್ಲಿ ಹೋಗುತ್ತಿದ್ದಾರೆಂದು ಹೇಳಿದರು.



ಆದ್ದರಿಂದ ಮೇಲಿನ ಸಂಗ್ರಹದಿಂದ ನಿಕೋಲಾ ಟೇಸಲಾರವರು ಬಹಳ ಸ್ಪಷ್ಟವಕ್ತರಾಗಿದ್ದು, ಪ್ರಾಮಾಣಿಕವಾಗಿ ಸತ್ಯದ ಬದಿಯಲ್ಲಿ ಸ್ಥಿರತೆಯಿಂದ ನಿಲ್ಲುವವರಾಗಿದ್ದರೆಂದು ತೋರಿಸಿಕೊಳ್ಳುತ್ತದೆ. ಅವರ ಈ ಮೂಲತತ್ವದ ಕಾರಣದಿಂದಾಗಿಯೇ ಡಾ. ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ಗೆ  ಅವರ ಪಾವರ್ ಜನರೇಶನಿನ ಮಾದರಿಯಲ್ಲಿ ಕುಂದು ಇದ್ದು ನಿಕೋಲಾ ಟೇಸಲಾರವರು ಪ್ರಸ್ಥಾಪಿಸುತ್ತಿರುವ ಆಲ್ಟರ್ ನೇಟಿಂಗ್ ಕರಂಟ್ ಬಹಳ ಸುಧಾರಿತವಾದ ಹಾಗು ಎಲ್ಲಾ ತರಹದಿಂದ ಸಮರ್ಥವಾಗಿದೆಯೆಂದು ಪ್ರಾಮಾಣಿಕತೆಯಿಂದ ಹಾಗು ಧೈರ್ಯದಿಂದ ಹೇಳಲು ಸಾಧ್ಯವಾಯಿತು. ಈ ಧೈರ್ಯವು ಟೇಸಲಾರವರ ದೇವರಲ್ಲಿದ್ದ ಪಾವನ ನಂಬಿಕೆಯಿಂದಾಗಿ ಉತ್ಪನ್ನವಾಗಿತ್ತು. ಮತ್ತು ವಿಜ್ನಾನದಲ್ಲಿಯ ಅವರ ಆತ್ಮವಿಶ್ವಾಸ ಹಾಗು ಅದನ್ನು ಅರ್ಥಮಾಡಿಕೊಂಡಿದ್ದರಿಂದ ಅವರು ಬಹಿರಂಗವಾಗಿ ಆ ಕಾಲದಲ್ಲಿ ಧೀರನೆಂದುಕೊಂಡವನನ್ನು ಎದುರಿಸಲು ಯಾವುದೇ ಪ್ರಕಾರದಿಂದ ಹಿಂದುಳಿಯಲಿಲ್ಲ. "ದುರಂಹಕಾರವೆಂದರೆ ಬಲವಲ್ಲ, ಆದರೆ ಅದು ಭಯದ ಇನ್ನೊಂದು ಮುಖವಾಡವಾಗಿದೆ" ಎಂದು ಹೇಳುವ ಲೋಕೋಕ್ತಿಯನ್ನು ಸಿದ್ಧಪಡಿಸುತ್ತದೆ ಎಂಬುದನ್ನು ಈ ಲೇಖನದ ಪ್ರಾರಂಭದಲ್ಲಿ ನೋಡಿದ್ದೇವೆ. ಮುಂದಿನ ಲೇಖನದಲ್ಲಿ ವಿದ್ಯುತಚ್ಛಕ್ತಿಯ ಶಕ್ತಿ ಮತ್ತು ಬುದ್ಧಿಯುಳ್ಳ ಘರ್ಷಣೆಯನ್ನು ನೋಡಲಿರುವೆವು.....(ಮುಂದುವರಿಯಲಿದೆ) 

 || ಹರಿ ಓಂ || ಶ್ರೀರಾಮ || ಅಂಬಜ್ನ ||


    

Friday 8 August 2014

ಡಾ. ನಿಕೋಲಾ ಟೇಸಲಾರವರ - ಆರಂಭಿಕ ಜೀವನ

ಹಿಂದಿನ ಲೇಖನದಲ್ಲಿ ನಾವು ಅತೀ ಉಚ್ಚದ ವ್ಯಕ್ತಿಮತ್ವ ಪಡೆದ ಡಾ. ನಿಕೋಲಾ ಟೇಸಲಾ ಎಂದು ಜಗತ್ತಿನಲ್ಲಿ ಪ್ರಸಿದ್ದರಾಗಿರುವರ ಪರಿಚಯ ಮಾಡಿ ಕೊಂಡೆವು. ಡಾ. ಟೇಸಲಾರವರ ಮಹತ್ಕಾರ್ಯಗಳು ಮತ್ತು ಅವರ ಜೀವನವನ್ನು ವರ್ಣಿಸುವಾಗ’ ಅತೀ ಉಚ್ಚ’ ಶಬ್ದದ ಉಪಯೋಗ ಬಹಳ ಸಣ್ಣದಾಗಿದೆಯೆಂದು ಎಣಿಸುವದು. ನನಗೆ ಅದನ್ನು ಸರಿಯಾದ ಅರ್ಥದಲ್ಲಿ ಉಪಯೋಗಿಸಬೇಕಾದರೆ ನಾನು ಅದನ್ನು ’ಹಿಮಾಲಯದಂತಿರುವ ವ್ಯಕ್ತಿಮತ್ವ’ ಹೇಳಬಲ್ಲೆ ಯಾಕೆಂದರೆ ಡಾ. ಟೇಸಲಾರವರು ನಿಜವಾಗಿಯೂ ಅತಿ ದೊಡ್ಡ ಎತ್ತರವನ್ನು ಪಾರು ಮಾಡಿದವರು ಮತ್ತು ಅದಕ್ಕಾಗಿಯೇ ಅವರನ್ನು ವಿಜ್ನಾನದ ದೇವರು’ (ಗಾಡ್ ಆಫ್ ಸಾಯನ್ಸ್) ಎಂದು ಗುರುತಿಸಲಾಗಿತ್ತು. ಇವತ್ತು ನಾವು ಈ ಪ್ರತಿಭಾವಂತನ ಬಗ್ಗೆ ಹೆಚ್ಚು ಪರಿಚಯ ಮಾಡಿಕೊಳ್ಳುವ.

ನನ್ನ ಹಿಂದಿನ ಬ್ಲಾಗ್ ಪೋಸ್ಟ್ ನಲ್ಲಿ ನಾನು ವಿಶೇಷವಾಗಿ ನಿಕೋಲಾ ಟೇಸಲಾರವರ ಜನ್ಮ ಮತ್ತು ಅವರ ಶಿಕ್ಷಣ, ಅವರಿಗೆ ಸಿಕ್ಕಿದ ಮಾನ್ಯತೆ ಮತ್ತು ಅವರ ಕೆಲವು ಪ್ರತಿಷ್ಠಿತ ಶೋಧನೆಗಳ ಬಗ್ಗೆ ಬರೆದಿದ್ದೆ. ಇವತ್ತಿನ ಬ್ಲಾಗ್ ಪೋಸ್ಟ್ ನಲ್ಲಿ , ಅವರ ಬಾಲ್ಯತನದ ಜೀವನ ಪರಿಚಯ, ತಾರುಣ್ಯಕ್ಕೆ ಬರುವ ಮೊದಲಿನ ವರ್ಷಗಳು ಮತ್ತು ಆನಂತರ ತಾರುಣ್ಯದಲ್ಲಿ ಉದಯಕ್ಕೆ ಬರುತ್ತಿರುವ ಸಂಶೋಧಕನ ಕೆಲೈಡೋಸ್ಕೋಪ್ (ವಿವಿಧ ಚಿತ್ರದರ್ಶಕ) ನ್ನು ಕೊಡಲಿದ್ದೇನೆ. ಈ ಕಾಲದಲ್ಲಿಯೇ ಡಾ. ಟೇಸಲಾರವರು ಭಕ್ತಿಯಲ್ಲಿ ಸುಸ್ಥಾಪಿತರಾದರು ಮತ್ತು ಇದೇ ಅವರನ್ನು ನವೀನತೆಯ ಸಂಶೋಧಕನಾಗಿ ಆಕಾರಕ್ಕೆ ತಂದಿತು.
 
ಡಾ. ನಿಕೋಲಾ ಟೇಸಲಾರವರು ಧರ್ಮನಿಷ್ಠ ಕೆಥೊಲಿಕ ಕುಟುಂಬದಲ್ಲಿ ಜನ್ಮಿಸಿದರೆಂದು ನಮಗೆ ಈಗ ತಿಳಿದಿದೆ. ಅವರ ತಂದೆ, ಮಿಲುಟಿನ್ ಟೇಸಲಾರವರು ಪಾದ್ರಿಯಾಗಿದ್ದು ಅವರ ತಾಯಿಯ ತಂದೆಯವರು ಕೂಡ ಪಾದ್ರಿಯಾಗಿದ್ದರು. ಅವರ ತಾಯಿ, ಡ್ಯುಕಾ ಟೇಸಲಾ ಅಶಿಕ್ಷಿತರಾಗಿದ್ದರು. ಅವರಿಗೆ ಯಾವ ಶಿಕ್ಷಣ ಸಿಗದಿದ್ದರೂ ಕೂಡ ಹೊಸ ಪದ್ಧತಿಯಲ್ಲಿ ರುಚಿಯುಳ್ಳ ಗೃಹಿಣಿಯಾಗಿದ್ದರು. ಅವರ ಪ್ರತಿದಿನದ ಹೊಸ ಕಲ್ಪನೆಯಿಂದಾಗಿ ಅವರು ಮೊಟ್ಟೆಯನ್ನು ಒಡೆದು ಏಕಜೀವ  ಮಾಡುವ ಯಂತ್ರ (ಮೆಕ್ಯಾನಿಕಲ್ ಎಗ್ ಬೀಟರ್) ವನ್ನು ತಯಾರಿಸಿದರು. ಹೀಗೆ ತಾರುಣ್ಯದಿಂದಲೇ ನಿಕೋಲಾರವರಿಗೆ ಅವರ ಬೆಳೆಯುತ್ತಿರುವ ವಯಸ್ಸಿನಲ್ಲಿ ವಿಜ್ನಾನ ಮತ್ತು ಆಧ್ಯಾತ್ಮಿಕ (ಭಕ್ತಿ) ದ ಪರಿಚಯವಾಯಿತು. ಅವರ ಜೀವನವನ್ನು ಮುಂದುವರಿಸಲು, ಅವರ ಉತ್ಕೃಷ್ಟವಾದ ಸುಧಾರಿತ ವಿಜ್ನಾನ ಹಾಗು ಅಚಲ ಭಕ್ತಿಯು  ಎರಡು ಸಮಾನ ಶಕ್ತಿಗಳಾಗಿ ಆಧಾರಸ್ತಂಭಗಳಂತಾಗಿದ್ದವು. ಡಾ. ನಿಕೋಲಾ ಟೇಸಲಾರವರು ಅವರ ತಾಯಿಗೆ ಬಹಳ ಹತ್ತಿರವಾಗಿದ್ದು ತನಗೆ ಲಭಿಸಿದ ಛಾಯಾಚಿತ್ರಣದಂತಹ ಸೃತಿಶಕ್ತಿ ಹಾಗು ನಿರ್ಮಾಣಮಾಡುವ ಕೃತಿಯ ಶ್ರೇಯಸ್ಸನ್ನು ಅವರ ತಾಯಿಗೆ ಕೊಟ್ಟಿರುವರು. ನಿಜವಾಗಿಯೇ ಪಾಲಕರೇ ತನ್ನ ಮಕ್ಕಳ ವ್ಯಕ್ತಿಮತ್ವವನ್ನು ಬಾಲ್ಯತನದಿಂದಲೇ ನಿರ್ಮಿಸಿ ಮತ್ತು ರೂಪಿಸುತ್ತಾರೆ ಮತ್ತು ಅವರನ್ನು ಮುಂದಿನ ಪ್ರಯಾಣಕ್ಕಾಗಿ ಸಿದ್ಧಪಡಿಸುತ್ತಾರೆ. ಆದರೆ ಅವರ ತಂದೆ-ತಾಯಿಗಳು ತನ್ನ ಮಗುವನ್ನು ನಿಕೋಲಾ ಟೇಸಲಾನಂತೆ ರೂಪಿಸಬೇಕಾದರೆ ಅವರು ನಿಜವಾಗಿಯೂ ಅವರ ಜೀವನದಲ್ಲಿ ವಿಶಾಲ ಮನಸ್ಸಿನ, ನವೀನತೆಯನ್ನು ಕಲ್ಪಿಸುವ, ವಾದ ಸಾಮರ್ಥ್ಯಯುಕ್ತ, ಭಯರಹಿತ ಹಾಗು ವಿಶೇಷವಾಗಿ ಧರ್ಮನಿಷ್ಠರಾಗಿರಬೇಕು.

ಅವರ ತಾಯಿ-ತಂದೆಯಲ್ಲದೆ ಡಾ. ನಿಕೋಲಾ ಟೇಸಲಾರವರಿಗೆ ಮಿಲ್ಕಾ, ಎಂಜಲೀನಾ, ಮತ್ತು ಮಾರಿಕಾ ಅಂತ ಮೂರು ಅಕ್ಕ-ತಂಗಿಯರು ಹಾಗು ಡೇನ್ ಅಂತ ದೊಡ್ಡ ಅಣ್ಣ ಕುಟುಂಬದಲ್ಲಿದ್ದರು. ದುರ್ದೈವದಿಂದ ಡೇನ್ ಕುದುರೆ ಅಪಘಾತದಲ್ಲಿ ಅಕಾಲಿಕ ಹಾಗು ದು;ಖದ ಮರಣ ಹೊಂದಿದ್ದನು.ಈ ಅಪಘಾತದಲ್ಲಿ ನಿಕೋಲಾರವರ ಕೈ ಇದೆಯೆಂದು ಟೇಸಲಾರವರ ಪ್ರತಿರೋಧಿಗಳು ಕಥೆಮಾಡಿ ಹೇಳತೊಡಗಿದರು. ಇದು ಕೇವಲ ಡಾ. ನಿಕೋಲಾ ಟೇಸಲಾರವರನ್ನು ದೂಷಿಸಲೆಂದು ಅಸತ್ಯವನ್ನು ಪ್ರಚಾರಮಾಡಿದ್ದಾಗಿತ್ತು.

ನಿಕೋಲಾರವರ ಜನ್ಮಭೂಮಿಯಾದ ಸ್ಮಿಲ್ಜನ್ ನಲ್ಲಿ ಜರ್ಮನ್, ಗಣಿತಶಾಸ್ತ್ರ ಮತ್ತು ಧರ್ಮವನ್ನು ಶಿಶುವಿಹಾರ ಹಾಗು ಪ್ರಾಥಮಿಕ ಶಾಲೆಗಳಲ್ಲಿ ಕಲಿತ ನಂತರ ನಿಕೋಲಾರವರ ತಂದೆಯು ಪಾದ್ರಿಯ ಕೆಲಸ ತೆಗೆದುಕೊಂಡ ಕಾರಣಕ್ಕಾಗಿ ಟೇಸಲಾ ಕುಟುಂಬವು ಗೊಸ್ಪಿಕ್ ಗೆ ಸ್ಥಲಾಂತರ ಮಾಡಿತು. ನಿಕೋಲಾರವರ ಶಾಲೆಯ ಶಿಕ್ಷಣ ಮುಗಿದಂತೆ ಟೇಸಲಾರವರು ೧೮೭೦ ರಲ್ಲಿ ಕಾರ್ವೋಲಾಕ್ ಗೆ ಸ್ಥಲಾಂತರ ಮಾಡಿಕೊಂಡರು ಇಲ್ಲಿ ನಿಕೋಲಾರವರು ತನ್ನ ಉಚ್ಚ ಶಿಕ್ಷಣವನ್ನು ಮುಂದುವರಿಸಿದರು. ಇಲ್ಲಿ ನಿಕೋಲಾರವರು ಪೂರ್ಣಾಂಕದ ನಿಶ್ಚಿತರೀತಿಯ ಪ್ರಶ್ನೆಗಳ ಒಗಟುಗಳನ್ನು ಕಾಗದದ ಮೇಲೆ ಬಿಡಿಸದೆ ತನ್ನ ಮನಸ್ಸಿಲ್ಲಿ ಬಿಡಿಸುತ್ತಿದ್ದರು. ಕೇವಲ ಮನಸ್ಸಿನಲ್ಲಿ ...ಇದು ನಂಬಲು ಅಸಾಧ್ಯವಾದದ್ದು ಮತ್ತು ಶಿಕ್ಷಕರು ಆರಂಭದಲ್ಲಿ ನಿಕೋಲಾರವರು ನಮಗೆ ಮೋಸ ಮಾಡುತ್ತಿದ್ದಾನೆಂದು ತಿಳಿದಿದ್ದರು. ಆದರೆ ಅದು ನಿಜವಾಗಿರಲಿಲ್ಲ. ಯಾಕೆಂದರೆ ಇದರ ನಂತರ ನಿಕೋಲಾರವರು ತನ್ನ ಪದವಿಯ ಶಿಕ್ಷಣವನ್ನು ನಾಲ್ಕು ವರ್ಷ ತೆಗೆದುಕೊಳ್ಳದೆ ಕೇವಲ ಮೂರು ವರ್ಷಗಳಲ್ಲಿ ಮುಗಿಸಿ ತನ್ನ ಅಸಾಧಾರಣ ಬುದ್ಧಿಶಕ್ತಿಯನ್ನು ಸಿದ್ದಪಡಿಸಿದರು. ಮತ್ತು ೧೮೭೩ ರಲ್ಲಿ ಉತ್ತೀರ್ಣರಾದರು. ಅದೇ ವರ್ಷ ಅವರು ಸ್ಮಿಲ್ಜನ್ ಗೆ ಹಿಂತಿರುಗಿ ಬಂದರು ಆದರೆ ಪ್ರಾಣಾಂತಕವಾದ ಕೊಲೇರಾ ರೋಗದಿಂದ ಪೀಡಿತರಾದರು ಇದರಿಂದಲು ಅವರು ಹೆಚ್ಚು ಬಲಶಾಲಿಯಾಗಿ ಹೊರಬಂದರು.
 
೧೮೭೪ ರಲ್ಲಿ ಡಾ. ನಿಕೋಲಾ ಟೇಸಲಾರವರು ಪರ್ವತೀಯ ಗ್ರಾಮಾಂತರ ಪ್ರದೇಶಗಳ ಬಗ್ಗೆ ಪರಿಚಯ ಮಾಡಿ, ಅರ್ಥಮಾಡಿ, ದೇವರು ಮತ್ತು ನಿಸರ್ಗ ಹಾಗು ಅದರ ಕಾರ್ಯಪದ್ಧತಿಗಳನ್ನು ತಿಳಿಯಲೆಂದು ಅಲ್ಲಿ ಸಂಚಾರಿಸಿದರು.ಇದು ಟೇಸಲಾರವರನ್ನು ಮಾನಸಿಕವಾಗಿ ಅಲ್ಲದೆ ಶಾರೀರಿಕ ದೃಷ್ಟಿಯಲ್ಲಿಯು ಹೆಚ್ಚು ಬಲಶಾಲಿ ಮಾಡಿ ನೈಸರ್ಗಿಕ ಕಾರ್ಯ ಪದ್ಧತಿಯ ಬಗ್ಗೆಯೂ ಪರಿಚಿತರಾದರು. ಇದೇ ಮುಂದೆ ಅವರಿಗೆ ಅವರ ಸಂಶೋಧನೆಗಳಿಗಾಗಿ ಮೂಲ ಕಾರಣವಾಯಿತು.

೧೮೭೫ ರಿಂದ ಡಾ. ನಿಕೋಲಾ ಟೇಸಲಾರವರು ಗ್ರೇಝಿನ್ ಆಸ್ಟ್ರಿಯನ್ ಪೊಲಿಟೆಕ್ನಕ್ ನಲ್ಲಿ ತನ್ನನ್ನು ಸೇರಿಸಿಕೊಂಡರು. ಇಲ್ಲಿಯ ಅವರ ವಾಸ್ತವ್ಯ ವಿಶೇಷವಾಗಿ ಗಮನಿಸುವಂತಿದೆ. ಮೊದಲು ಅವರು ವಿದ್ಯಾರ್ಥಿವೇತನವನ್ನು ಪಡೆದು ದಾಖಲೆ ತೆಗೆದುಕೊಂಡರು. ಜ್ನಾನ ಪಡೆಯಲು ತವಕಗೊಂಡ ನಿಕೋಲಾರವರು ಯಾವುದೇ ಲೆಕ್ಚರನ್ನು ತಪ್ಪಿಸಲಿಲ್ಲ ಆದ್ದರಿಂದ ಅವರು ಎಲ್ಲರಿಗಿಂತ ಉಚ್ಚ ಕ್ರಮಾಂಕ ಪಡೆದರು, ವಾಸ್ತವ್ಯದಲ್ಲಿ ಆವಶ್ಯಕತೆಯಿಂದ ಎರಡು ಪಾಲರಷ್ಟು ಹೆಚ್ಚಾಗಿರುವ ಒಂಬತ್ತು ಪರೀಕ್ಷೆಗಳಲ್ಲಿ ಉತ್ತೀರ್ಣರಾದರು ಮತ್ತು ಸರ್ಬಿಯನ್ ಕಲ್ಚರ್ ಕ್ಲಬ್ ನ್ನು ಕೂಡ ಆರಂಭಿಸಿದರು. ಅಂತ್ಯದಲ್ಲಿ ಪೊಲಿಟೆಕ್ನಿಕಿನ ಡೀನ್ (ವೈದ್ಯಕೀಯ ಕಾಲೇಜಿನ ಮುಖ್ಯಸ್ಥ) ಗುಣವಿವೇಚನೆಯ ಪತ್ರವನ್ನು ನಿಕೋಲಾರವರ ತಂದೆಗೆ ಬರೆದು ನಿಕೋಲಾರವರನ್ನು ಪ್ರಶಂಸಿದರು ಮತ್ತು ನಿಕೋಲಾರವರನ್ನು ’ಸ್ಟಾರ್ ಆಫ್ ಫರ್ಸ್ಟ್ ರೆಂಕ್ ’ ಕೊಡಲು ನಿರ್ಣಯಿಸಿದ್ದನ್ನು ತಿಳಿಸಿದರು. ಇಲ್ಲಿಂದಲೇ ಮುಂದೆ ಡಾ. ನಿಕೋಲಾ ಟೇಸಲಾರವರು ತನ್ನ ಕಠೋರ ಪರಿಶ್ರಮದ ವಿವರಪಟ್ಟಿಯನ್ನು ಆರಂಭಿಸಿದರು, ಬೆಳಿಗ್ಗೆ ೩.೦೦ ರಿಂದ ರಾತ್ರಿಯ ೧೧.೦೦ ಗಂಟೆಯತನಕ ಅಂದರೆ ದಿವಸದಲ್ಲಿ ೨೦ ಗಂಟೆಯ ಕಾಲ ಕೆಲಸ ಮಾಡತೊಡಗಿದರು, ಅದು ಕೂಡ ಯಾವುದೇ  ಹಬ್ಬ ಅಥವಾ ರಜೆಯನ್ನು ತೆಗೆದುಕೊಳ್ಳದೆ. ೧೮೭೮ ರ ಡಿಸೆಂಬರ್ ತಿಂಗಳಿನಲ್ಲಿ ನಿಕೋಲಾ ಗ್ರೇಝ್ ನ್ನು ಬಿಟ್ಟು ಪುನ: ಗೊಸ್ಪಿಕ್ ಗೆ ಬಂದು ಅವರು ಮಾಧ್ಯಮಿಕ ಶಾಲೆಯಲ್ಲಿ ಕಲಿಸ ತೊಡಗಿದರು.

೧೮೮೦ ರಲ್ಲಿ ಪ್ರೇಗಿನಲ್ಲಿದ್ದ ಮೇಲೆ ಡಾ. ನಿಕೋಲಾ ಟೇಸಲಾರವರು ಬುಡಾಪೇಸ್ಟ್ ಗೆ ಬಂದು ಬುಡಾಪೇಸ್ಟ್ ನಲ್ಲಿ ಫೆರೆನ್ ಪುಸ್ಕಸ್ ದಲ್ಲಿ ಕಟ್ಟಲ್ಪಡುತ್ತಿರುವ ಟೆಲಿಫೋನ್ ಎಕ್ಸ್ ಚೆಂಜ್ ನಲ್ಲಿ ಕೆಲಸ ಮಾಡತೊಡಗಿದರು. ಹೀಗೆ ಟೇಸಲಾರವರು ಸೆಂಟ್ರಲ್ ಟೆಲೆಗ್ರಾಫ್ ಕಾರ್ಯಾಲಯದಲ್ಲಿ ಕರಡುಪ್ರತಿಗಳನ್ನು ತಯಾರಿಸುವ ಕೆಲಸ ತೆಗೆದುಕೊಂಡರು ಇಲ್ಲಿಂದ ಸ್ವಲ್ಪ ತಿಂಗಳಿನಲ್ಲಿ ಬುಡಾಪೇಸ್ಟಿನ ಟೆಲಿಫೋನ್ ಎಕ್ಶ್ ಚೆಂಜ್ ಕಾರ್ಯರತವಾಯಿತು ಮತ್ತು ಟೇಸಲಾರವರನ್ನು ಮುಖ್ಯವಾಗಿ ಚೀಫ್ ಎಲೆಕ್ಟ್ರಿಶೀಯನ್ ನ್ನಾಗಿ ಮಾಡಿದರು. ಇಲ್ಲಿರುವಾಗ ಆವರು ಸೆಂಟ್ರಲ್ ಸ್ಟೇಶನ್ ಎಕ್ವಿಪ್ ಮೆಂಟ್ ನಲ್ಲಿ ಅನೇಕ ಪ್ರಕಾರದ ಬದಲಾವಣೆಗಳನ್ನು ಮಾಡಿದರು. ಇಲ್ಲಿರುವಾಗಲೇ ಡಾ. ಟೇಸಲಾರವರು ತಮ್ಮ ಪ್ರಥಮ ಸಂಶೋಧನೆಯನ್ನು ಮಾಡಿದರು. ಡಾ. ಟೇಸಲಾರವರು ಟೆಲಿಫೋನ್ ರಿಪೀಟರ್ ಮತ್ತು ಎಂಪ್ಲಿಫೈರ್ ನ್ನು ಪೂರ್ಣಗೊಳಿಸಿದರು. ಟೇಸಲಾರವರು ತಾನು ಮಾಡಿದ ಈ ಸಂಶೋಧನೆಯ ಶ್ರೇಯಸ್ಸನ್ನು ಕೂಡ ಜನಕಲ್ಯಾಣಕ್ಕಾಗಿ ಸಮರ್ಪಿತ ಮಾಡಿದರು.

ಇದರ ನಂತರ ಟೇಸಲಾರವರು ಫ್ರಾಂಸ್ ನಲ್ಲಿರುವ ಪ್ಯಾರೀಸಿನಲ್ಲಿ ಕೊಂಟಿನೆಂಟಲ್ ಎಡಿಸನ್ ಕಂಪನಿಯಲ್ಲಿ ಇಂಜಿನಿಯರ್ ಆಗಿ, ವಿದ್ಯುತಚ್ಛಕ್ತಿಯ ಸಾಧನಸಲಕರಣೆಗಲ್ಲಿ ಶಕ್ಯವಾದ ಸುಧಾರಣೆ ಮಾಡುವ ಕೆಲಸಕ್ಕೆ ಸೇರಿದರು. ಇಲ್ಲಿ ಕೂಡ ಟೇಸಲಾರವರು ಫಲೋತ್ಪಾದಕ ಕಾರ್ಯ ಮಾಡಿ ತೋರಿಸಿದರು.ಇದರ ಪರಿಣಾಮವಾಗಿ ಚಾರ್ಲ್ಸ್ ಬಾಚುಲರ್ ಯಾರಿಗೆ ನಿಕೋಲಾ ಟೇಸಲಾರವರು ವರದಿಕೊಡುತ್ತಿದ್ದರು, ಅವರು ಟೇಸಲಾರವರನ್ನು ನಿವ್ ಯಾರ್ಕ್, ಯುನಾಯಿಟೇಡ್ ಸ್ಟೇಸ್ಟ್ ಗೆ ಥೋಮಸ್ ಆಲ್ವಾ ಎಡಿಸನ್ ರನ್ನು ನೇರವಾಗಿ ಭೇಟಿ ಮಾಡಲು ಕಳುಹಿಸಿದರು. ’ನನಗೆ ಎರಡು ಸರ್ವೋತ್ತಮ ವ್ಯಕ್ತಿಗಳ ಪರಿಚಯವಿದೆ; ಅದರಲ್ಲಿ ಒಬ್ಬರು ನೀವು ಮತ್ತೊಬ್ಬ ಈ ತರುಣನು " ಎಂದು ಅವರನ್ನು ಕಳುಹಿಸಿದಾಗ ಬಾಚುಲರರು ಎಡಿಸನ್ ಗೆ ವಿಶೇಷ ಶಿಫಾರಸಿನ ಪತ್ರ ಬರೆದು ಕೊಟ್ಟರು. ಹೀಗೆ ೧೮೮೪ ರಲ್ಲಿ ಕೇವಲ ನಾಲ್ಕು ಸೆಂಟ್ಸ್ ನ್ನು ಜೇಬಿನಲ್ಲಿಟ್ಟು ಡಾ. ನಿಕೋಲಾ ಟೇಸಲಾರವರು ಯುನಾಯಿಟೇಡ್ ಸ್ಟೇಸ್ಟ್ ಆಫ್ ಅಮೇರಿಕಾದ ಭೂಮಿಯ ಮೇಲೆ ಕಾಲಿಟ್ಟರು. ಇದೇ ಭೂಮಿಯಲ್ಲಿ ಅವರು ೭೦೦ ಕ್ಕಿಂತ ಮೇಲೆ ಮೀರಿದ ಹೊಸ ದಾಖಲೆಗಳನ್ನು ಮುಂದಿನ ಅರವತ್ತು ವರ್ಷಗಳಲ್ಲಿ ತನ್ನ ಹೆಸರಿನಲ್ಲಿ ನಮೂದು ಮಾಡಿದರು.

ನಿಕೋಲಾ ಟೇಸಲಾರವರು ಥೋಮಸ್ ಎಡಿಸನ್ ನನ್ನು ಪ್ರತ್ಯಕ್ಷದಲ್ಲಿ ಭೇಟಿಯಾಗಲು ಬಹಳ ಉತ್ತೇಜಿತರಾಗಿದ್ದರು ಯಾಕೆಂದರೆ ಅಷ್ಟರವರೆಗೆ ಟೇಸಲಾರವರು ಎಡಿಸನ್ ನನ್ನು ಪೂಜಿಸುತ್ತಿದ್ದರು. ಆದರೆ ತೀವ್ರದಲ್ಲಿಯೇ ಅದು ಹಾಗೆ ಆಗಲಿಕ್ಕಿಲ್ಲ...... (ಮುಂದುವರಿಯಲಿದೆ)

|| ಹರಿ ಓಂ || ಶ್ರೀರಾಮ || ಅಂಬಜ್ನ ||

Wednesday 23 July 2014

ಡಾ. ನಿಕೋಲಾ ಟೇಸಲಾ - ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಅವರ ಪೂರ್ವ ಪರಿಚಯ

೨೭ ಮಾರ್ಚ್ ೨೦೧೪ ರ, ಗುರುವಾರದಂದು, ಸದ್ಗುರು ಅನಿರುದ್ಧಾ ಬಾಪೂರವರು ನಮಗೆ ಡಾ.ನಿಕೋಲಾ ಟೇಸಲಾರವರ ಬಗ್ಗೆ ಪರಿಚಯ ಮಾಡಿಕೊಟ್ಟರು. ಡಾ. ಟೇಸಲಾರವರನ್ನು  ಜಗತ್ತಿನಲ್ಲಿ ಎಂದಿಗೂ ಕಾಣ ಸಿಗದ ಬಹಳ ಪ್ರಖ್ಯಾತ ಶಾಸ್ತ್ರಜ್ನರೆಂದು ತಿಳಿಯಲಾಗುತ್ತದೆ. ಈ ಪೃಥ್ವಿಯ ಮೇಲೆ ಪ್ರತಿಯೊಬ್ಬ ಮಾನವನು  ತನ್ನ ನಿತ್ಯದ ಜೀವನದಲ್ಲಿ ಅವರ ಸಂಶೋಧನೆಗಳನ್ನೇ ಅಂಗೀಕರಿಸಿದ್ದನ್ನು ಮರೆತು ಹೋಗಿದ್ದಾರೆ. ಆದ್ದರಿಂದ ಇವತ್ತಿನಿಂದ ನಾನು ಡಾ.ನಿಕೋಲಾ ಟೇಸಲಾರವರ ಪವಿತ್ರ ವ್ಯಕ್ತಿಮತ್ವದ ಹಾಗು ಸಮಯದ ಮೊದಲೇ ಮಾಡಿದ ಆವಿಷ್ಕಾರಗಳ ಬಗ್ಗೆ ಪುನ: ಗಮನ ಸೆಳೆಯಲು ಸರದಿಯನ್ನು ಪ್ರಾರಂಭಿಸುತ್ತಿದ್ದೇನೆ.

ಡಾ. ನಿಕೋಲಾ ಟೇಸಲಾರವರು ಸರ್ಬಿಯಾದಲ್ಲಿ ಜನ್ಮಿಸಿದ  ಅಮೇರಿಕದವರಾಗಿದ್ದರು. ಅವರನ್ನು ಸಹಸ್ರವಾರ್ಷಿಕ ಕಾಲದ ಶಾಸ್ತ್ರಜ್ನರು (ದ ಗ್ರೇಟೆಸ್ಟ್ ಸೈಂಟಿಸ್ಟ್ ಆಫ್ ದ ಮಿಲೇನಿಯಮ್) ಎಂದು ಕರೆದದ್ದು ಉಚಿತವಾಗಿದ್ದರೂ ನಿಜವಾಗಿಯು ಅವರು ಪ್ರಖ್ಯಾತ ಸಂಶೋಧಕರೇ, ಭವಿಷ್ಯತ್ಕಾಲದ ಸ್ಥಿತಿಯನ್ನು ಅರಿತುಕೊಂಡವರು ಮತ್ತು ಭ್ರಾಮಕ ಭೌತವಿಜ್ನಾನಿಯೆಂದು ಜಗತ್ತಿನ ಎಲ್ಲಾ ಕಡೆಯಲ್ಲಿಯೂ ಪ್ರಸಿದ್ಧಿ ಪಡೆದವರಾಗಿದ್ದು ಪರ್ಯಾಯ ವಿದ್ಯುತ್ ಪ್ರವಾಹ (ಆಲ್ಟರ್ ನೇಟಿಂಗ್ ಕರಂಟ್), ಮುಕ್ತ ಊರ್ಜೆ(ಫ್ರೀ ಎನರ್ಜಿ), ತಂತಿ ವಿರಹಿತ ಯಂತ್ರಶಕ್ತಿಯ ಸಂಚಾರಣೆ (ವಾಯರ್ ಲೆಸ್ ಪಾವರ್ ಟ್ರಾಂಸ್ ಮಿಶನ್) ಇಂತಹ ಸಾವಿರಾರು ಸಂಶೋಧನೆಗಳನ್ನು ಕಂಡು ಹಿಡಿದವುಗಳಲ್ಲಿ ಇವುಗಳಾಗಿವೆ.

ಡಾ. ನಿಕೋಲಾ ಟೇಸಲಾರವರು ಆಸ್ಟ್ರೀಯ ಸಾಮ್ರಾಜ್ಯ (ಈಗಿನ ಕ್ರೋಶಿಯಾ) ದಲ್ಲಿ ೧೦ನೇ ಜುಲ್ಯ ತಿಂಗಳಿನ ಉಗ್ರ ಬೇಸಿಗೆಕಾಲದ ಮಿಂಚಿನ ಬಿರುಗಾಳಿಯಿರುವಾಗ ಮಧ್ಯರಾತ್ರಿಯ ಸಮಯದಲ್ಲಿ ಕೆಥೊಲಿಕ ಧರ್ಮನಿಷ್ಠ ಕುಟುಂಬದಲ್ಲಿ ಜನ್ಮಿಸಿದರು. ಅವರ ತಾಯಿಗೆ ನಿಕೋಲಾರವರನ್ನು ಹೆತ್ತುವಾಗ ಸಹಾಯ ಮಾಡಿದ ಪ್ರಸವಕಾರಿಣಿಯು ಅವರನ್ನು ಬಿರುಗಾಳಿಯ ಮಗು (ದ ಚೈಲ್ಡ್ ಆಫ್ ಸ್ಟೊರ್ಮ್) ಎಂದು ಭವಿಷ್ಯನುಡಿ ಹೇಳಿದ್ದಳು ಮತ್ತು ಅವಳು ಹೇಳಿದಂತೆ ನಿಜವಾಗಿ ಅದು ಸತ್ಯದಲ್ಲಿ ಪರಿವರ್ತಿತವಾಯಿತು.

ವಿದ್ಯುತಚ್ಛಕ್ತಿ  ಮತ್ತು ಯಂತ್ರವಿದ್ಯೆಯನ್ನು ಸಂಗ್ರಹಿಸಿದ ಡಾ. ನಿಕೋಲಾ ಟೇಸಲಾರವರು ಗ್ರೇಝಾದಲ್ಲಿ ಆಸ್ಟ್ರೀಯನ್ ಪೊಲಿಟೆಕ್ನಿಕ್ ಸ್ಕೂಲಿನಲ್ಲಿ ಮಿಲಿಟರಿ ಬೊರ್ಡರ್ ಸ್ಕೊಲರ್ ಶಿಪ್ ನ್ನು ಪಡೆದು ತನ್ನ ದಾಖಲೆ ಮಾಡಿಕೊಂಡರು. ಮುಂದೆ ಫಿಲೋಸಫಿ (ತತ್ವಶಾಸ್ತ್ರ) ಕ್ಕಾಗಿ ಡಾ.ಟೇಸಲಾರವರು ಪ್ರೇಗಿನ ಮಹಾವಿದ್ಯಾಲಯದಲ್ಲಿ ಕಲಿಯಲು ಹೋದರು. ಯೇಲ್ ಮಹಾವಿದ್ಯಾಲಯದ ಹಾಗು ಕೊಲಂಬಿಯಾ ಮಹಾವಿದ್ಯಾಲಯದ ಮೂಲಕ ಡಾ. ಟೇಸಲಾ ಅವರಿಗೆ ಗೌರವಾರ್ಹ ಡಾಕ್ಟರೇಟಿನಿಂದ ಸನ್ಮಾನಿಸಲಾಯಿತು. ಡಾ.ಟೇಸಲಾರವರಿಗೆ ೧೮ ಭಾಷೆಗಳು ಗೊತ್ತಿದ್ದು ಅವರ ೧೨ ಭಾಷೆಗಳಲ್ಲಿ ಪ್ರಭುತ್ವವಿದ್ದು ಅವುಗಳಲ್ಲಿ ಅವರ ಮಾತೃಭಾಷೆ ಸರ್ಬೊ-ಕ್ರೊಅಟ್  ಮತ್ತು ಲ್ಯಾಟಿನ್, ಇಟಾಲಿಯನ್, ಫ್ರೆಂಚ್, ಜರ್ಮನ್ ,ಮತ್ತು ಇಂಗ್ಲಿಷ್ ಭಾಷೆಗಳು ಕೂಡಿವೆ.

ಡಾ. ನಿಕೋಲಾ ಟೇಸಲಾರವರ ಹೆಸರಿನಲ್ಲಿ ೭೦೦ಕ್ಕಿಂತ ಹೆಚ್ಚು ಪ್ರಕಾರಗಳು ಗಣ್ಯತೆ ಪಡೆದದ್ದೇ ಒಂದು ಅಘಟಿತ ದಾಖಲೆಯಾಗಿದೆ. ಹಲವಾರು ಅಸಂಖ್ಯಾತ ಸಂಶೋಧನೆಗಳ ಪಟ್ಟಿಗಳಲ್ಲಿ ಡಾ. ಟೇಸಲಾರವರು ಆಲ್ಟರ್ ನೇಟಿಂಗ್ ಕರಂಟ್, ಪೀಸ್ ರೆ, ಹ್ಯುಮನಾಯಿಡ್ ರೊಬೋಟ್ಸ್, ಟೆಲಿವಿಜನ್, ರಿಮೋಟ್ ಕಂಟ್ರೋಲ್, ಎಕ್ಸ್-ರೇಜ್, ವಾಯರ್ ಲೆಸ್ ಪಾವರ್ ಟ್ರಾನ್ಸ್ ಮಿಶನ್, ಫ್ರೀ ಎನರ್ಜಿ ಫ್ರಮ್ ಕೊಸ್ಮಿಕ್ ರೇಜ್, ಇಂಡಕ್ಷನ್ ಮೋಟರ್, ರೇಡಿಯೋ, ರೊಟೇಟಿಂಗ್ ಮ್ಯಾಗ್ನೇಟಿಕ್ ಫೀಲ್ಡ್ ಪ್ರಿನ್ಸಿಪಲ್, ಟೆಲಿಫೋನ್ ರಿಪೀಟರ್, ಟೇಸಲಾ ಕಾಯಿಲ್ ಟ್ರಾನ್ಸ್ ಫೊರ್ಮರ್, ವಾಯರ್ ಲೆಸ್ ಕಮ್ಯುನಿಕೇಶನ್, ಟೆಲೆಪೋರ್ಟೇಶನ್ , ಸ್ಪೇಸ್ ಟೈಮ್ ಬೆಂಡಿಂಗ್, ಟೈಮ್ ಟ್ರಾವೆಲ್, ಇತ್ಯಾದಿಗಳನ್ನು ಸಂಶೋಧಿಸಿದ ಅಗ್ರಗಾಮಿಯಾಗಿರುವರು. ಈ ಪಟ್ಟಿಯು ಮುಗಿಯುವಂತಿಲ್ಲ.

ಡಾ. ನಿಕೋಲಾ ಟೇಸಲಾರವರನ್ನು ಅನೇಕ ಬಹುಮಾನಗಳಿಂದ ಪ್ರಶಂಸಿಸಲಾಗಿ ಮತ್ತು ನವೀನತೆಯಿಂದ ಕೂಡಿದ ಹಾಗೆಯೇ ವಿಚಾರ ಮಾಡಲು ಅಸಾಧ್ಯವಾದ ಸಂಶೋಧನೆಗಳಿಗಾಗಿ ಮನ್ನಣಿಸಲಾಗಿದೆ. ಇದರಲ್ಲಿ  ಸರ್ಬಿಯಾದ ಮಿಲನಿನ ರಾಜ - ೧ ರವರ ಮೂಲಕ ೧೮೮೩ ರಲ್ಲಿ ’ ದ ಆರ್ಡರ್ ಆಫ್ ಸೇಂಟ್ ಸಾವಾ’ ಎಂಬ ಪದವಿಯು ಈ ಪಟ್ಟಿಯಲ್ಲಿ ಸೇರಿದೆ. ಫ್ರಾಂಕಲಿನ್ ಸಂಸ್ಥೆಯ ಮೂಲಕ  ’ದ ಎಲಿಯೆಟ್ ಕ್ರೆಸನ್ ಮೆಡಲ್’ಎಂಬ ಎಲ್ಲಕ್ಕಿಂತ ಉನ್ನತವಾದ ಬಹುಮಾನ , ಮಾನವನ ’ಸುಖ-ಸಾಧನೆ, ಸುಸ್ಥಿತಿ ಮತ್ತು ಆನಂದ ’ವನ್ನು ಪಡೆಯು ಸಾಧನೆಗಳಿಗೆ ಸಹಾಯವಾಗುವ ಸಂಶೋಧನೆಗಳಿಗಾಗಿ ’ದ ಜೋನ್ ಎವಾರ್ಡ್ ’ಕೊಡಲಾಯಿತು. ಮತ್ತೀತರ ಬಹುಮಾನಗಳಲ್ಲಿ ’ ದ ಆರ್ಡರ್ ಆಫ್ ಪ್ರಿಂಸ್ ಡ್ಯಾನಿಲೊ ’ವನ್ನು ಮೊಂಟೆನೆಗ್ರೊದ ನಿಕೋಲಾ ರಾಜನಿಂದ,  ಯು ಎಸ್ ನಲ್ಲಿ ಬಹುಮೂಲ್ಯ ಪರಿಗಣಿಸಲಾದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾರಿತೋಷಕ ಎಡಿಸನ್ ಮೆಡಲ್ ನ್ನು ೧೯೧೭ ರಲ್ಲಿ ಅವರಿಗೆ ಕೊಡಲಾಗಿದೆ, ಇತ್ಯಾದಿಗಳು.

ಇಂಟರ್ ನೇಶನಲ್ ಯುನಿಟ್ ಆಫ್ ಮ್ಯಾಗ್ನೇಟಿಕ್ ಫ್ಲಕ್ಸ್ ಡೆಂಸಿಟಿಯನ್ನು ಡಾ. ನಿಕೋಲಾ ಟೇಸಲಾರವರ ಹೆಸರಿಂದ ಅಂದರೆ ’ಟೇಸಲಾ ಎಂದು ಕರೆಯಲಾಗುತ್ತಿದೆ   ೧೯೭೫ ರಲ್ಲಿ ಡಾ. ಟೇಸಲಾರವರನ್ನು ಸಂಶೋಧಕರ ಅಂದರೆ ಇನ್ ವೆಂಟರ್ಸ್ ಹಾಲ್ ಆಫ್ ಫೇಮ್ ದಲ್ಲಿ ಸೇರಿಸಲಾಯಿತು. ಯುಎಸ್ ನ ಅಂಚೆ ವಿಭಾಗದವರು ಡಾ.ನಿಕೋಲಾ ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೯೮೩ ರಲ್ಲಿ ಅಂಚೆ ಚೀಟಿ (ಸ್ಟಾಂಪ್) ಯನ್ನು ಜಾರಿಗೆ ತಂದು ಗೌರವಿಸಿದರು. ’ದ ನಿಕೋಲಾ ಟೇಸಲಾ ಎವಾರ್ಡ್’ ನ್ನು ಬಹಳ ಕೀರ್ತಿಯುಕ್ತ ಮನ್ನಣೆ ಪಡೆದ ಬಹುಮಾನವೆಂದು ತಿಳಿಯಲಾಗಿ ಅದನ್ನು ಇಂಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ಮೂಲಕ ೧೯೭೬ ರಿಂದ ಪ್ರತಿವರ್ಷ ಕೊಡಲಾಗುತ್ತಿದೆ. ಇದಲ್ಲದೆ ಡಾ. ಟೇಸಲಾರವರ ಮಹತ್ಕಾರ್ಯಗಳ ಸ್ಮರಣಾತ್ಮಕವಾಗಿ ೧೦ ಜುಲ್ಯದಂದು ಯುನಾಯ್ ಟೇಡ್ ಸ್ಟೇಸ್ಟ್ಸ್ ನಲ್ಲಿ  ’ನಿಕೋಲಾ ಟೇಸಲಾ ಡೇ’ ಎಂದು ಪ್ರತಿ ವರ್ಷ ಆಚರಿಸಲಾಗುತ್ತದೆ.

ಡಾ. ನಿಕೋಲಾ ಟೇಸಲಾರವರ ಎಲ್ಲಾ ಸಂಶೋಧನೆಗಳು ಬಹಳವೇ ಪ್ರಗತಿಶೀಲವಾಗಿದ್ದು ಅದು ಸಮಯದ ಮೊದಲೇ ಶೋಧಿಸಲ್ಪಟ್ಟು ಅವರು ಎರಡನೇ ಉದ್ಯೋಗದ ಕ್ರಾಂತಿಗೆ  ಜನ್ಮ ಕೊಟ್ಟಿದಂತಿದೆ ಮತ್ತು  ಅವರಿಂದಾಗಿ ’ವಿದ್ಯುಚ್ಛಕ್ತಿಯ ಕಾಲ’ (ದ ಎಲೆಕ್ಟ್ರಿಕಲ್ ಎರಾ) ವು ನಿಜವಾಗಿಯೂ ವಿಶೇಷಧಿಕಾರ ಪಡೆಯಿತು. ಸಂಕ್ಷಿಪ್ತದಲ್ಲಿ, ಡಾ. ಟೇಸಲಾರವರ ಸಂಶೋಧನೆಗಳು ೨೦ ನೇ ಶತಮಾನದಲ್ಲದೇ ೨೧ ನೇಯ ಶತಮಾನದ ತಳಹದಿ ಹಾಕಿದಂತಾಯಿತು. ಡಾ. ಟೇಸಲಾರವರ  ಸಂಶೋಧನೆಗಳು ಸಮಯದ ಮೊದಲೇ  ಶೋಧವಾದುದರಿಂದ ಪೃಥ್ವಿ ಮೇಲಿರುವ ಪ್ರತಿಯೊಂದು ದೊಡ್ಡ ರಾಷ್ಟ್ರಗಳು ಈ ಅಸಾಧಾರಣ ಪ್ರಾವಿಣ್ಯತೆಯನ್ನು  ಪಡೆದವನ ಗತಿವಿಧಿಗಳನ್ನು ವೀಕ್ಷಿಸಲು ತನ್ನ ಗೂಢಚಾರರನ್ನು ನೇಮಿಸಿದರು. ಡಾ. ನಿಕೋಲಾ ಟೇಸಲಾರವರು ಶಾಸ್ತ್ರಜ್ನರು, ಹೊಸ ಪದ್ಧತಿಯ ಸಂಶೋಧಕರು, ಒಳ್ಳೆಯ ಮತ್ತು ಅಪರೂಪ ವ್ಯಕ್ತಿಮತ್ವ ಪಡೆದ ಮಾನವ.

ಅವರು ವಿಜ್ನಾನದಲ್ಲಿ ದೇವರ ಅದ್ಭುತತೆಯನ್ನು ಕಂಡರು. ಅವರ ಪ್ರತಿಯೊಂದು ಸಂಶೋಧನೆಗಳಲ್ಲಿ ವಿಜ್ನಾನ ಮತ್ತು ಆಧ್ಯಾತ್ಮವು ಒಂದೇ ನಾಣ್ಯದ ಎರಡು ಬದಿಗಳಾಗಿ ಅವು ಒಬ್ಬೊರಿಗೊಬ್ಬರು ಪ್ರಶಂಸಾಪೂರ್ಣವಾಗಿರುವುದಾಗಿ  ಮತ್ತು ಅದು ’ಪರಮಶ್ರೇಷ್ಟ ಬಲ’ದಿಂದ ಅಂದರೆ ದೇವರಿಂದ ಆಳಿಸಲಾಗಿದೆ ಎಂದು ಸಾಧಿಸಿದರು. ವಿಜ್ನಾನದ ಪರಿಶೋಧಕ ಮತ್ತು ಅಧ್ಯಾತ್ಮಿಕ ಹಾಗು ದೂರದೃಷ್ಟಿಯನ್ನು ಪಡೆದ ಇಂತಹ ಪ್ರತಿಭಾಶಾಲಿಯನ್ನು ಪುನ: ಪಡೆಯಲು ಅಸಾಧ್ಯ. ಅವರ ಎಲ್ಲಾ ಸಂಶೋಧನೆಗಳಿಂದಾಗಿ ಮತ್ತು ಹೊಸ ಪದ್ಧತಿಯ ಸಂಶೋಧಕರೆಂದು ಅವರನ್ನು ವಿಜ್ನಾನದ ದೇವರು (ದ ಗಾಡ್ ಆಫ್ ಸಾಯನ್ಸ್) ಎಂದು ಸನ್ಮಾನದಿಂದ ಆದರಿಸಲಾಗುತ್ತಿದೆ.

|| ಹರಿ ಓಂ || ಶ್ರೀರಾಮ || ಅಂಬಜ್ನ ||


ಶಾಸ್ತ್ರಜ್ನ ನಿಕೋಲಾ ಟೇಸಲಾರವರ (Scientist Nikola Tesla) ಬಗ್ಗೆ ಸದ್ಗುರು ಅನಿರುದ್ಧ ಬಾಪೂರವರು ಅವರ ಪ್ರವಚನದಲ್ಲಿ ಹೇಳಿದ ಮಾಹಿತಿ

ಪರಮ ಪೂಜ್ಯ ಸದ್ಗುರು ಶ್ರೀ ಅನಿರುದ್ಧ ಬಾಪೂರವರು ಗುರುವಾರ ದಿ. ೨೭ ಮಾರ್ಚ್ ೨೦೧೪ ರಂದು ಮರಾಠಿ ಪ್ರವಚನದಲ್ಲಿ ಶ್ರೀ ಹರಿಗುರುಗ್ರಾಮದಲ್ಲಿ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾರವರ ಬಹುಮೂಲ್ಯ ಸಂಶೋಧನೆಯ ಕಾರ್ಯದ ಬಗ್ಗೆ ಹೇಳಿದರು.




ಅಸಂಖ್ಯ ತೊಡಕುಗಳನ್ನು ಎದುರಿಸಲಾಗುತ್ತಿದ್ದರೂ ಕೂಡ ಭಗವಂತನ ಮೇಲಿರುವ ಶ್ರದ್ಧೆಯನ್ನು ಸ್ವಲ್ಪ ಕೂಡ ವಿಚಲಿತಗೊಳಿಸದ ವಿಖ್ಯಾತ ಶಾಸ್ತ್ರಜ್ನರಾದ ನಿಕೋಲಾ ಟೇಸಲಾ ಅವರು ಅಥಕ ಪರಿಶ್ರಮದಿಂದ ಬಹುಮೂಲ್ಯ ಸಂಶೋಧನೆಗಳನ್ನು ಮಾಡಿ ಲೋಕೋಪಯೋಗಕ್ಕಾಗಿ ಅನೇಕ ಶೋಧನೆಗಳನ್ನು ಮಾಡಿದರು. ಬಾಪೂರವರು ಅವರ ಮಹಾನ ಕಾರ್ಯದ ಪರಿಚಯವನ್ನು ಮಾಡಿ ಕೊಟ್ಟರು. ಅದನ್ನು ನಾವು ಈ ವ್ಹಿಡಿಯೋದಲ್ಲಿ ನೋಡಬಹುದು.

Tuesday 8 July 2014

ಬಾಪೂರವರ ನಿತ್ಯದ ಬೆಳಿಗ್ಗೆಯ ಅಲ್ಪೋಪಹಾರ (ನಾಷ್ಟಾ) - ಆಂಬೀಲ ಅಥವಾ ಇಡ್ಲಿ

ಇವತ್ತಿನ ತರಾತುರಿಯ ಜೀವನದಲ್ಲಿ ಬೆಳಗಿನ ಅಲ್ಪೋಪಹಾರಕ್ಕಾಗಿ (ನಾಷ್ಟಾ) ಸಮಯ ಸಿಗುವುದಿಲ್ಲವೆಂದು ಅನೇಕ ಜನರು ಹೇಳುತ್ತಿರುವದನ್ನು ನಾವು ಕೇಳುತ್ತೇವೆ....ಮತ್ತು ಆ ಸಮಯದಲ್ಲಿ ಸಿಕ್ಕಿದ್ದನ್ನು ಹೆಚ್ಚಿನದಾಗಿ ಬ್ರೆಡ್ ನಮ್ಮ ಅಲ್ಪೋಪಹಾರದ ಅವಿಭಾಜ್ಯ ಭಾಗವಾಗುವದು. ’ಬ್ರೆಡ್ ನ ಹೊರತು ನಾಷ್ಟಾ’ ಈ ಸಂಕಲ್ಪನೆಯು ಹಲವರಿಗೆ ಒಪ್ಪುವದಿಲ್ಲ. ಹೀಗಿದ್ದರು ಕೂಡ ಅನೇಕರ ಮನೆಗಳಲ್ಲಿ ಇವತ್ತು ಸಹ ವಿವಿಧ ಪದಾರ್ಥಗಳನ್ನು ಮಾಡಲಾಗುತ್ತದೆ.


ಆದರೆ ಬಾಪೂರವರ ನಾಷ್ಟಾ ಮಾತ್ರ ಸ್ಟಾಂಡರ್ಡ್ ಆಗಿದೆ. ಬಾಪೂ ತನ್ನ ನಾಷ್ಟಕ್ಕಾಗಿ ಆಂಬೀಲ ಅಥವಾ ಇಡ್ಲಿಯನ್ನು ತಿನ್ನುತ್ತಾರೆ, ಮತ್ತು ಇಡ್ಲಿ ಕೂಡ ಅಕ್ಕಿ ಮಾತ್ತು ಉದ್ದಿನಬೇಳೆಯ ಹಿಟ್ಟಿನ್ನದ್ದೇ ! ಹಲವು ಕಡೆಯಲ್ಲಿ ಇಡ್ಲಿಯನ್ನು ಕೇವಲ ಅಕ್ಕಿಯಿಂದಲೇ ಮಾಡುವ ಪದ್ಧತಿಯಿದೆ. ಆದರೆ ಈ ತರಹ ಮಾಡಿದ ಇಡ್ಲಿಯನ್ನು ಬಾಪೂ ಸಾಧ್ಯವಾದಲ್ಲಿ ತಿನ್ನುತ್ತಿಲ್ಲ. " ಆಂಬೀಲ " ಮಾತ್ರ ಬಾಪೂ ಬೆಳಗಿನ ನಾಷ್ಟಾದಲ್ಲಿ ಹೆಚ್ಚಾಗಿ ತಿನ್ನುತ್ತಾರೆ. ಇವತ್ತಿನ ತರುಣ ಸಂತಾನಕ್ಕೆ ಒಂದು ವೇಳೆ ಆಂಬೀಲದ ಬಗ್ಗೆ  ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ನಾನು ಯಾರೊಡನೆ ಮಾತನಾಡಿದೆ ಅವರು ಆಂಬೀಲವನ್ನು ಬಹಳ ವಿರಳವಾಗಿ ತಿಂದಿರುವದು ತಿಳಿದು ಬಂತು. ಅಕ್ಕಿಯಿಂದ ಮಾಡಿದ, ಮಾಡಲು ಸುಲಭವಾದ ಮತ್ತು ಕಡಿಮೆ ಖರ್ಚಿನಿಂದ ಮಾಡಿದ ಈ ಆಂಬೀಲವು ಶರೀರಕ್ಕಾಗಿ ಮಾತ್ರ ಅತ್ಯಂತ ಗುಣಕಾರಿಯಾಗಿದೆ.

ಇವತ್ತು ಬಾಪೂರವರ ಮಾರ್ಗದರ್ಶನನುಸಾರವಾಗಿ ನಾವು ನಾಷ್ಟಕ್ಕೆ ಆಂಬೀಲವನ್ನೇ ತೆಗೆದುಕೊಳ್ಳುತ್ತೇವೆ. ಚಿಕ್ಕ ಒಂದುವರೆ-ಎರಡು ಬಾವುಲ್ ತುಂಬಿಸಿ ಆಂಬೀಲವು ಒಬ್ಬ ಮನುಷ್ಯನಿಗೆ ಪರ್ಯಾಪ್ತವಾಗಿದೆ. ಆಂಬೀಲವನ್ನು ಅಲ್ಪೋಪಹಾರವಾಗಿ ತೆಗೆದುಕೊಂಡಾಗ ನಾವು ಅದರ ಜೊತೆ ಇನ್ನೇನಾದರು ಪದಾರ್ಥ ತೆಗೆದು ಕೊಳ್ಳುತ್ತಿದ್ದರೆ ಅದರ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಅತಿರಿಕ್ತ ಕ್ಯಾಲರೀಜ್ ಹೊಟ್ಟೆಗೆ ಹೋಗುವ ಪ್ರಶ್ನೆ ಬರಲಾರದು. ಆಂಬೀಲದಿಂದ ಹಸಿವು ತಣಿಯುವದು ಮತ್ತು ಹೊಟ್ಟೆಗಾಗಿ ಶಾಮಕವು ಆಗುವದು. ಇವತ್ತು ಎಲ್ಲರಿಗೂ ತಿಳಿಯಲೆಂದು ಪರಮಪೂಜ್ಯ ನಂದಾಯೀಯವರು ಮನೆಯಲ್ಲಿ ಮಾಡುತ್ತಿರುವ ಆ ಆಂಭೀಲದ ರೆಸಿಪಿಯನ್ನು ಕೆಳಗೆ ಕೊಡುತ್ತಿದ್ದೇನೆ.



ಸಾಹಿತ್ಯ -

ಪರಿಮಲ್ ಅಕ್ಕಿ - ೧ ವಾಟಿ

ಸಕ್ಕರೆ - ೧ ಚಮಚೆ

ಮೊಸರಿನ ಮಜ್ಜಿಗೆ - ೫ ವಾಟಿ

ನೀರು - ೭ ವಾಟಿ

ಉಪ್ಪು - ರುಚಿಗನುಸಾರ


ಮಾಡುವ ಕೃತಿ -

ಮೊಟ್ಟಮೊದಲು ೧ ವಾಟಿ ಪರಿಮಲ್ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಆ ನಂತರ ಆ ಅಕ್ಕಿಯನ್ನು ಮೂರು ಸಲ ನೀರಿನಿಂದ ತೊಳೆದು ತೆಗೆಯಿರಿ. ತೊಳೆದ ನಂತರ ಅದರಲ್ಲಿ ೭ ವಾಟಿ ನೀರು ತೆಗೆದುಕೊಳ್ಳಿ. ನಾವು ಅಕ್ಕಿಯನ್ನು ಅಳೆಯಲು ಯಾವ ವಾಟಿಯನ್ನು ತೆಗೆದುಕೊಂಡಿದ್ದೇವೆ ಅದೇ ವಾಟಿಯನ್ನು ನೀರಿಗಾಗಿ ಉಪಯೋಗಿಸಿರಿ. ಇದರಿಂದ ಪ್ರಮಾಣದಲ್ಲಿ ಅಂತರ ಬರುವುದಿಲ್ಲ. ನೀರನ್ನು ಹಾಕಿದ ಮೇಲೆ ಅಕ್ಕಿಯ ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಮೂರು ಶಿಟಿಯಾಗುವ ತನಕ ಬೇಯಿಸಬೇಕು.


 
ಅಕ್ಕಿ ಬೇಯಿದ ಮೇಲೆ ಅನ್ನದ ಪಾತ್ರೆಯನ್ನು ಕುಕ್ಕರಿನಿಂದ ಹೊರತೆಗೆದಿಡಬೇಕು. ನಾವು ಯಾವಾಗ ಅನ್ನದ ಪಾತ್ರೆಯನ್ನು ಹೊರಗೆ ತೆಗೆದಿಡಿತ್ತೇವೆ ಆಗ ಅದರಲ್ಲಿ ನೀರು ಇರುವದು. ಈಗ ಈ ಅನ್ನ ತಣ್ಣಗಾದಾಗ ಅದನ್ನು ಮಿಕ್ಸರಿನಲ್ಲಿ ೫ ಸೆಕೆಂದಿನ ತನಕ ಮಾತ್ರ ಸಣ್ಣ ಮಾಡಿ ತೆಗೆಯಬೇಕು. ಮಿಕ್ಸರಿನಿಂದ ಆ ಅನ್ನವನ್ನು ಪುನ: ಅದೇ ಪಾತ್ರೆಯಲ್ಲಿ ತೆಗೆಯಬೇಕು. ಈಗ ಅದರಲ್ಲಿ ೧ ಚಮಚೆ ಸಕ್ಕರೆ ಹಾಗು ರುಚಿಗೆ ಅನುಸಾರವಾಗಿ ಉಪ್ಪನ್ನು ಹಾಕಬೇಕು. ಸಕ್ಕರೆ ಮತ್ತು ಉಪ್ಪು ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಬೇಕು.

ನಂತರ ಹೀಗೆ ಮಿಕ್ಸ್ ಮಾಡಿದ ಅನ್ನದಲ್ಲಿ ೫ ವಾಟಿ ಮಜ್ಜಿಗೆಯನ್ನು ಹಾಕಬೇಕು. ಮಜ್ಜಿಗೆ ಹಾಕಿದ ನಂತರ ಈ ಅನ್ನವನ್ನು ಪುನ: ಒಳ್ಳೆ ರೀತಿಯಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಮಿಕ್ಸ್ ಮಾಡಿದ ಅನ್ನದ ರುಚಿಯನ್ನು ನೋಡಿಕೊಂಡು ಅಗತ್ಯವೆಣಿಸಿದಲ್ಲಿ ಇನ್ನು ಸ್ವಲ್ಪ ಉಪ್ಪು ಹಾಕಿಕೊಳ್ಳಿ. ಆ ನಂತರ ಈ ಅನ್ನದ ಪಾತ್ರೆಯನ್ನು ಪೂರ್ಣ ರಾತ್ರೆ ಹಾಗೆಯೇ ಇಡಬೇಕು. ಫ್ರಿಜ್ಜಿನಲ್ಲಿ ಇಡಬಾರದು. ಆಂಬೀಲ ಸಿದ್ದವಾಗಲು ಸಾಧಾರಣ ೧೨-೧೪ ಗಂಟೆಯ ಕಾಲ ಬೇಕಾಗುತ್ತದೆ.


ಈ ತರಹ ಸಿದ್ಧವಾದ ಆಂಬೀಲವನ್ನು ನಾವು ಮರುದಿವಸ, ಅಂದರೆ ೧೪ ಗಂಟೆಯಾದ ಮೇಲೆ ತಿನ್ನಬಹುದು. ಅಂದರೆ ಸಾಯಂಕಾಲ ೮ ಗಂಟೆಗೆ ಮಾಡಿದ ಆಂಬೀಲವನ್ನು ನಾವು ಮರುದಿವಸ ಬೆಳಿಗ್ಗೆ ೧೦ ಗಂಟೆಗೆ ತಿನ್ನಬಹುದು. 
 
|| ಹರಿ ಓಂ || ಶ್ರೀರಾಮ || ಅಂಬಜ್ನ ||


Monday 30 June 2014

ಆನ್ ಲಾಯಿನ್ ಬ್ಯಾಂಕಿಗ್ ಮೂಲಕ ಸ್ವೇಚ್ಛಾನಿಧಿ ಕೊಡುವ ಸೌಲಭ್ಯ ಎಲ್ಲರಿಗಾಗಿ ಮಾಡಲಾಗಿದೆ

ಕೆಲವು ದಿವಸದ ಮೊದಲು ಸದ್ಗುರು ಬಾಪೂರವರು ಎಲ್ಲಾ ಶ್ರದ್ಧಾವಾನರ ಹಿತಕ್ಕಾಗಿ ಮತ್ತು ಪವಿತ್ರ ಸ್ಪಂದನದ ಅಭಿಸರಣೆಗಾಗಿ ಆಳಂದಿಯಲ್ಲಿಯ ಮೊದಲ ’ಅನಿರುದ್ಧ ಧಾಮ್ ’ ಹಾಗು ಅದರ ರಚನೆಯ ಸಂಬಂಧದಲ್ಲಿ ಮಾಹಿತಿಯನ್ನು ಕೊಟ್ಟರು. ಅದರ ಜೊತೆ ಅಸಹಾಯ ವೃದ್ಧರಿಗಾಗಿ ಜುಯೀ ನಗರದಲ್ಲಿ ತಯಾರಿಸುತ್ತಿರುವ "ಇಂಸ್ಟಿಟ್ಯೂಟ್ ಆಫ್ ಜೆರಿಯಾಸ್ಟ್ರಿಕ್ಸ್ ಆಂಡ್ ರಿಸರ್ಚ್ ಸೆಂಟರ್" ನ ಕೆಲಸದ ಬಗ್ಗೆ ಮತ್ತು ಇವೆರೆಡರ ಪ್ರಕಲ್ಪದ ವ್ಯಾಪ್ತಿ, ಕಾರ್ಯ ಹಾಗು ಖರ್ಚಿನ ಬಗ್ಗೆಯೂ ಪ್ರವಚನದಲ್ಲಿ ಮಾಹಿತಿಯನ್ನು ಕೊಟ್ಟರು.


ರಾಮರಾಜ್ಯದ ಪ್ರವಚನದಲ್ಲಿ ವಿಸೃತ ಮಾಡಿದಂತೆ ಕಷ್ಟ ಪಡುವ ಹಾಗು ಬಡ ರೈತರ ಶ್ರೇಯಸ್ಸಿಗಾಗಿ ಕರ್ಜತ್ - ಕೋಠಿಂಬೆಯ ಹತ್ತಿರ ಗೋವಿದ್ಯಾಪೀಠಮ್ ದಲ್ಲಿ ನಡೆಯುತ್ತಿರುವ " ಅನಿರುದ್ಧಾಜ್ ಇಂಸ್ಟಿಟ್ಯೂಟ್ ಆಫ್ ಗ್ರಾಮ ವಿಕಾಸ " ದ ಪ್ರಕಲ್ಪ ಕೂಡ ಈಗ ಬಹಳ ವೇಗದಲ್ಲಿ ಕಾರ್ಯರತವಾಗಿದೆ. ಶ್ರದ್ಧಾವಾನರಿಂದ ಸಿಗುತ್ತಿರುವ ಬೆಂಬಲವನ್ನು ಲಕ್ಷ್ಯದಲ್ಲಿ ತೆಗೆದುಕೊಂಡು www.aniruddhafoundation.com ಈ ಸಾಯಿಟಿನಲ್ಲಿ ನಾವು ಎಲ್ಲಾ ಶ್ರದ್ಧಾವಾನರಿಗೆ ಸ್ವೇಚ್ಛಾನಿಧಿಯನ್ನು ಕೊಡಲು ಸುಲಭವಾಗಲೆಂದು ಮೊದಲಿದ್ದ ಕ್ರೆಡಿಟ್ ಕಾರ್ಡಿನ ಒಟ್ಟಿಗೆ ಈಗ ಇಂಟರ್ ನೆಟ್ ಬ್ಯಾಂಕಿಂಗಿನ ಪರ್ಯಾಯವನ್ನು ಸಹ ಮಾಡಿಕೊಡುತ್ತಿದ್ದೇವೆ.

ಇಂತಹ ಮಹತ್ವದ ಪ್ರಕಲ್ಪಕ್ಕಾಗಿ ಎಲ್ಲಾ ಇಚ್ಛುಕ ಶ್ರದ್ಧಾವಾನರು ’ಪೆಮೆಂಟ್ ಗೆಟ್ವೆ ’ ಯ ಉಪಯೋಗ ಮಾಡಿ ತಮ್ಮ ತಮ್ಮ ಕ್ಷಮತೆಯನುಸಾರವಾಗಿ ಸಂಸ್ಥೆಗೆ ಸ್ವೇಚ್ಛಾನಿಧಿಯ ಮೂಲ್ಯವನ್ನು ಕೊಡಬಹುದು. ಆನ್ ಲಾಯಿನ್ ಡೋನೇಶನ್ ನ ಸೌಕರ್ಯಕ್ಕಾಗಿ ಈ ಪ್ರಕಾರ ಪ್ರಕ್ರಿಯೆಗಳಿವೆ.

೧) ಶ್ರೀ ಅನಿರುದ್ಧ ಉಪಾಸನಾ ಫೌಂಡೇಶ್ ನಿನ www.aniruddhafoundation.com ಈ ವೆಬ್ ಸಾಯಿಟ್ ಮೇಲಿನ ‘Click here to Donate Online’ ಈ ಬಟನ್ ನನ್ನು ಕ್ಲಿಕ್ ಮಾಡಬೇಕು.

೨) ಆ ನಂತರ ನಮ್ಮ ಸ್ಕ್ರೀನ್ ಮೇಲೆ ಬರುವ ಫಾರ್ಮ್ ದಲ್ಲಿಯ ಮಾಹಿತಿನ್ನು ತುಂಬಿಸಿ ‘Donate Now’ ಈ ಬಟನ್ ಮೇಲೆ ಕ್ಲಿಕ್ ಮಾಡಿ ಮಾತ್ರ ಅದರ ಮೊದಲು ಫಾರ್ಮ್ ದಲ್ಲಿರುವ ’Name’, ’E-mail’, ’Mobile No.’ ಮತ್ತು ’Donation amount’ ಈ ಮಾಹಿತಿಯನ್ನು ತುಂಬಿಸಿ ಹಾಗು ಅದರ ಜೊತೆ ’Card Payment’ ಅಥವಾ ’Internet Banking’ ಈ ಎರಡು ಪರ್ಯಾಯದಲ್ಲಿಯ ಒಂದನ್ನು ಆಯ್ಕೆ ಮಾಡುವದು ಆವಶ್ಯಕವಿದೆ.

೩) ಮುಂದಿನ ಪ್ರಕ್ರಿಯೆಗಳು ಪೂರ್ಣವಾದ ಮೇಲೆ ಸಿಸ್ಟಮ್ ತಯಾರಿಸಿದ ರಶೀದಿಯು ನೀವು ಕೊಟ್ಟ ಈ-ಮೇಲ್ ಗೆ ಸಂಸ್ಥೆಯ ಮೂಲಕ ಕಳುಹಿಸಲಾಗುವದು. ಶ್ರದ್ಧಾವಾನರು ಈ "ಪೆಮೆಂಟ್ ಗೆಟ್ವೆ" ಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ  ತೆಗೆದುಕೊಂಡು ಹಾಗು ಈ ಪವಿತ್ರ ಕಾರ್ಯದಲ್ಲಿ ಆರ್ಥಿಕ ಸಹಾಯ ಮಾಡುವರೆಂದು ನನ್ನ ವಿಶ್ವಾಸವಿದೆ.

Wednesday 25 June 2014

ನಾನು ಪ್ರಸ್ಥಾಪಿಸಿದ ಹೊಸ ವ್ಹಿಡಿಯೋ ಬ್ಲಾಗ್


ಕಳೆದ ಮೂರು ತಿಂಗಳಿನಿಂದ ನಾನು ಪರಮ ಪೂಜ್ಯ ಬಾಪೂರವರ ವಿವಿಧ ಸುರಸವಾದ ವ್ಹಿಡಿಯೋಗಳನ್ನು ಪ್ರಮುಖವಾಗಿ ಸಂಕ್ಷಿಪ್ತವಾದ ಪ್ರವಚನಗಳ ಕ್ಲಿಪ್ಸ್ ನ್ನು ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ನಿಮ್ಮಲ್ಲಿ ಹಲವಾರು ಜನರು ನಮ್ಮ ಮೆಚ್ಚಿನ ಸದ್ಗುರು ’ಶ್ರೀ ಅನಿರುದ್ಧ ಬಾಪೂ ’ರವರಿದ್ದ ಬ್ಲಾಗ್ ನ್ನು ಬಹಳ ಕೂತಹಲದಿಂದ ನೋಡುತ್ತಿರುವಿರಿಯೆಂದು ತಿಳಿದಿದೆ. ಆದರೆ ವ್ಹಿಡಿಯೋಗಳನ್ನು ಅಪ್ ಲೋಡ್ ಮಾಡುವ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಅದನ್ನು ನೋಡುವವರ ಪ್ರಮಾಣ ಕೂಡ ಹೆಚ್ಚುತ್ತಿರುವದರಿಂದ ನಾನು ಹೊಸ ವಿಡಿಯೋ ಬ್ಲಾಗ್ ಪ್ರಸ್ಥಾಪಿಸುತ್ತಿದ್ದೇನೆ ಇದರ ಮೂಲಕ ನಾನು ಎಲ್ಲಾ ವ್ಹಿಡಿಯೋಗಳನ್ನು ಅಲ್ಲದೆ ಸದ್ಗುರು ಶ್ರೀ ಅನಿರುದ್ಧರವರ ಪ್ರವಚನದ ಕ್ಲಿಪ್ಸ್ ಗಳನ್ನು ಪ್ರಕಾಶಿಸುತ್ತೇನೆ. ನೀವು ಅದನ್ನು ವ್ಹಿಡಿಯೋ ಬ್ಲಾಗ್ ನ ಈ ವಿಳಾಸದಲ್ಲಿ ನೋಡಬಹುದು. http://www.aniruddhabapu.in/



ಆದ್ದರಿಂದ ವಿವಿಧ ವ್ಹಿಡಿಯೋಗಳನ್ನು ನೋಡುವ ಸಲುವಾಗಿ ನೀವು ನನ್ನೊಡನೆ ನನ್ನ ವ್ಹಿಡಿಯೋ ಬ್ಲಾಗ್ ಅಥವಾ ಯು ಟ್ಯೂಬ್ ಚಾನೇಲ್ ಮೂಲಕ ಸಂಪರ್ಕದಲ್ಲಿರಿಯೆಂದು ವಿನಂತಿಸುತ್ತೇನೆ. ವ್ಹಿಡಿಯೋದಲ್ಲಿ ನಿಯಮಿತವಾಗಿ ಅಪ್ ಲೋಡ್ ಮಾಡಿದ್ದನ್ನು ನೋಡಲು ನೀವು ಯು ಟ್ಯೂಬ್ ಚಾನೇಲ್ ನ ನನ್ನ ವ್ಹಿಡಿಯೋ ಬ್ಲಾಗ್ ದಲ್ಲಿ ವರ್ಗಣಿದಾರರಾಗಿ ಅಥವಾ ಯು ಟ್ಯೂ ಚಾನೇಲ್ www.youtube.com/user/SamirsinhDattopadhye ದಲ್ಲಿ ನೇರವಾಗಿ ವರ್ಗಣಿ ಕಟ್ಟಬಹುದು.   
|| ಹರಿ ಓಂ || ಶ್ರೀರಾಮ || ಅಂಬಜ್ನ ||


Thursday 19 June 2014

ಸದ್ಗುರು ಅನಿರುದ್ಧ ಬಾಪೂರವರ ಉಪಾಸನೆ

ಪರಮಪೂಜ್ಯ ಸದ್ಗುರು ಬಾಪೂರವರು ಕಳೆದ ಮೂರು ಗುರುವಾರ ಶ್ರೀಹರಿಗುರುಗ್ರಾಮಕ್ಕೆ ಪ್ರವಚನಕ್ಕಾಗಿ ಬಂದಿಲ್ಲವೆಂದು ಸಮಸ್ತ ಶ್ರದ್ಧಾವಾನರಿಗೆ ಇದರ ಕಲ್ಪನೆಯಿದೆ. ಬಾಪೂರವರ ಸಲಗವಾಗಿ ೩ ಗುರುವಾರ ದರ್ಶನವಾಗದಿಲ್ಲದ್ದರಿಂದ ಅನೇಕ ಶ್ರದ್ಧಾವಾನರು ಬಾಪೂರವರ ಬಗ್ಗೆ ಆಸ್ಥೆಯಿಂದ ಹಾಗು ಪ್ರೇಮದಿಂದ ವಿಚಾರಣೆ  ಮಾಡಿರುವರು. ಆ ಎಲ್ಲಾ ಶ್ರದ್ಧಾವಾನರಿಗೆ ನಾನು ತಿಳಿಯಲಿಚ್ಛಿಸುವೆನೆಂದರೆ ಬಾಪೂ ಅವರ ಅತೀಶಯ ಕಠೋರವಾದ ಉಪಾಸನೆಯಲ್ಲಿ ವ್ಯಸ್ತರಿದ್ದು ಮುಂದಿನ ಕೆಲವು ಕಾಲದತನಕ ಈ ಉಪಾಸನೆಯು ನಡೆಯಲಿದೆ. ಈ ಉಪಾಸನೆಯ ಕಾರಣದಿಂದಾಗಿ ಪರಮಪೂಜ್ಯ ಬಾಪೂ ಕಳೆದ ೩ ಗುರುವಾರ ಶ್ರೀಹರಿಗುಗ್ರಾಮಕ್ಕೆ ಬರಲಿಲ್ಲ ಇದನ್ನು ಕೃಪೆಯಾಗಿ ಶ್ರದ್ಧಾವಾನರು ತಿಳಿದು ಕೊಳ್ಳ ಬೆಕೆಂದು ವಿನಂತಿ.

ಮುಂದೆ ಬರುವ ಕೆಲವು ಕಾಲದತನಕ ಪರಮಪೂಜ್ಯ ಬಾಪೂರವರ ಶ್ರೀಹರಿಗುರುಗ್ರಾಮದಲ್ಲಿ ಪ್ರವಚನಕ್ಕಾಗಿ ಬರುವದು ಅವರ ಉಪಾಸನೆಯನ್ನು ಅವಲಂಬಿಸರುತ್ತದೆ.



|| ಹರಿ ಓಂ || ಶ್ರೀರಾಮ || ಅಂಬಜ್ನ ||

Saturday 11 January 2014

ದೈನಿಕ ಪ್ರತ್ಯಕ್ಷ - ನವ ವರ್ಷದ ವಿಶೇಷಾಂಕ ೨೦೧೪

ಭಾರತವು ಸರ್ವಾಧಿಕವಾಗಿ ತರುಣರ ದೇಶವಾಗುತ್ತ ಹೋಗುತ್ತಲಿದೆ. ಅಷ್ಟೇ ಪ್ರಮಾಣದಲ್ಲಿ ಈ ದೇಶದ ತರುಣರ ಸರ್ವಾಧಿಕ ಮೆಚ್ಚಿನ ಮಾಧ್ಯಮವಾಗಿರುವ ಸೋಶಲ್ ಮೀಡಿಯಾದ ಪ್ರಭಾವ ಪ್ರಚಂಡ ಪ್ರಮಾಣದಲ್ಲಿ ಹೆಚ್ಚುತ್ತಲಿದೆ. ದೇಶದ ನೆಟಿಝಂಸ್ ನ ಸಂಖ್ಯೆಯು ಕೋಟ್ಯಾವಧಿ ಪ್ರಮಾಣದಲ್ಲಿ ಹೆಚ್ಚುತ್ತಲ್ಲಿರುವಾಗ, ಸೋಶಲ್ ಮೀಡಿಯಾದ ಹೆಚ್ಚುತಿರುವ ಪ್ರಭಾವವನ್ನು ಯಾರೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ.

ತಂತ್ರಜ್ನಾನದ ವಿಕಾಸದ ಜೊತೆಗೆ ಅಧಿಕಾಧಿಕವಾಗಿ ವ್ಯಾಪಕವಾಗುತ್ತಿರುವ ಈ ಮಾಧ್ಯಮ, ಇವತ್ತು ದೇಶದಲ್ಲೆಲ್ಲ ಅಧಿರಾಜ್ಯವನ್ನು ಸ್ಥಾಪಿಸುತ್ತಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಸೋಶಲ್ ಮೀಡಿಯಾದ ಅಪರಿಹಾರ್ಯ ಪರಿಣಾಮ ಬಹಳ ಸ್ಪಷ್ಟವಾಗಿ ತೋರಿಬರುತ್ತಿದೆ.

ಆದ್ದರಿಂದಲೇ ಈಗ ಸಮಯ ಬಂದಿದೆ, ಅದೆಂದರೆ ಬಹಳ ಕ್ಷಮತೆಯುಳ್ಳ ಈ ಮಾಧ್ಯಮವನ್ನು ಅಧಿಕ ಪೂರ್ತತೆಯಿಂದ, ಕಲ್ಪಕತೆಯಿಂದ ಹಾಗು ಹೊಣೆಗಾರಿಕೆಯಿಂದ ನೋಡಬೇಕಾಗಿದೆ. ಅದಕ್ಕಾಗಿಯೇ ಬರುತ್ತಲಿದೆ, "ದೈನಿಕ ಪ್ರತ್ಯಕ್ಷದ" ೧ ನೇ ಜನೇವರಿ ೨೦೧೪ ರ ನವವರ್ಷದ ವಿಶೇಷಾಂಕ, ಅದರ ವಿಷಯವಾಗಿದೆ....

ಸೋಶಲ್ ಮೀಡಿಯಾ - ಪರಿಪೂರ್ಣ ವ ಪರಿಪಕ್ವ ವಾಪರ್ " (ಸೋಶಲ್ ಮೀಡಿಯಾ-ಪರಿಪೂರ್ಣ ಹಾಗು ಪರಿಪಕ್ವದ ಬಳಕೆ)