Monday 30 June 2014

ಆನ್ ಲಾಯಿನ್ ಬ್ಯಾಂಕಿಗ್ ಮೂಲಕ ಸ್ವೇಚ್ಛಾನಿಧಿ ಕೊಡುವ ಸೌಲಭ್ಯ ಎಲ್ಲರಿಗಾಗಿ ಮಾಡಲಾಗಿದೆ

ಕೆಲವು ದಿವಸದ ಮೊದಲು ಸದ್ಗುರು ಬಾಪೂರವರು ಎಲ್ಲಾ ಶ್ರದ್ಧಾವಾನರ ಹಿತಕ್ಕಾಗಿ ಮತ್ತು ಪವಿತ್ರ ಸ್ಪಂದನದ ಅಭಿಸರಣೆಗಾಗಿ ಆಳಂದಿಯಲ್ಲಿಯ ಮೊದಲ ’ಅನಿರುದ್ಧ ಧಾಮ್ ’ ಹಾಗು ಅದರ ರಚನೆಯ ಸಂಬಂಧದಲ್ಲಿ ಮಾಹಿತಿಯನ್ನು ಕೊಟ್ಟರು. ಅದರ ಜೊತೆ ಅಸಹಾಯ ವೃದ್ಧರಿಗಾಗಿ ಜುಯೀ ನಗರದಲ್ಲಿ ತಯಾರಿಸುತ್ತಿರುವ "ಇಂಸ್ಟಿಟ್ಯೂಟ್ ಆಫ್ ಜೆರಿಯಾಸ್ಟ್ರಿಕ್ಸ್ ಆಂಡ್ ರಿಸರ್ಚ್ ಸೆಂಟರ್" ನ ಕೆಲಸದ ಬಗ್ಗೆ ಮತ್ತು ಇವೆರೆಡರ ಪ್ರಕಲ್ಪದ ವ್ಯಾಪ್ತಿ, ಕಾರ್ಯ ಹಾಗು ಖರ್ಚಿನ ಬಗ್ಗೆಯೂ ಪ್ರವಚನದಲ್ಲಿ ಮಾಹಿತಿಯನ್ನು ಕೊಟ್ಟರು.


ರಾಮರಾಜ್ಯದ ಪ್ರವಚನದಲ್ಲಿ ವಿಸೃತ ಮಾಡಿದಂತೆ ಕಷ್ಟ ಪಡುವ ಹಾಗು ಬಡ ರೈತರ ಶ್ರೇಯಸ್ಸಿಗಾಗಿ ಕರ್ಜತ್ - ಕೋಠಿಂಬೆಯ ಹತ್ತಿರ ಗೋವಿದ್ಯಾಪೀಠಮ್ ದಲ್ಲಿ ನಡೆಯುತ್ತಿರುವ " ಅನಿರುದ್ಧಾಜ್ ಇಂಸ್ಟಿಟ್ಯೂಟ್ ಆಫ್ ಗ್ರಾಮ ವಿಕಾಸ " ದ ಪ್ರಕಲ್ಪ ಕೂಡ ಈಗ ಬಹಳ ವೇಗದಲ್ಲಿ ಕಾರ್ಯರತವಾಗಿದೆ. ಶ್ರದ್ಧಾವಾನರಿಂದ ಸಿಗುತ್ತಿರುವ ಬೆಂಬಲವನ್ನು ಲಕ್ಷ್ಯದಲ್ಲಿ ತೆಗೆದುಕೊಂಡು www.aniruddhafoundation.com ಈ ಸಾಯಿಟಿನಲ್ಲಿ ನಾವು ಎಲ್ಲಾ ಶ್ರದ್ಧಾವಾನರಿಗೆ ಸ್ವೇಚ್ಛಾನಿಧಿಯನ್ನು ಕೊಡಲು ಸುಲಭವಾಗಲೆಂದು ಮೊದಲಿದ್ದ ಕ್ರೆಡಿಟ್ ಕಾರ್ಡಿನ ಒಟ್ಟಿಗೆ ಈಗ ಇಂಟರ್ ನೆಟ್ ಬ್ಯಾಂಕಿಂಗಿನ ಪರ್ಯಾಯವನ್ನು ಸಹ ಮಾಡಿಕೊಡುತ್ತಿದ್ದೇವೆ.

ಇಂತಹ ಮಹತ್ವದ ಪ್ರಕಲ್ಪಕ್ಕಾಗಿ ಎಲ್ಲಾ ಇಚ್ಛುಕ ಶ್ರದ್ಧಾವಾನರು ’ಪೆಮೆಂಟ್ ಗೆಟ್ವೆ ’ ಯ ಉಪಯೋಗ ಮಾಡಿ ತಮ್ಮ ತಮ್ಮ ಕ್ಷಮತೆಯನುಸಾರವಾಗಿ ಸಂಸ್ಥೆಗೆ ಸ್ವೇಚ್ಛಾನಿಧಿಯ ಮೂಲ್ಯವನ್ನು ಕೊಡಬಹುದು. ಆನ್ ಲಾಯಿನ್ ಡೋನೇಶನ್ ನ ಸೌಕರ್ಯಕ್ಕಾಗಿ ಈ ಪ್ರಕಾರ ಪ್ರಕ್ರಿಯೆಗಳಿವೆ.

೧) ಶ್ರೀ ಅನಿರುದ್ಧ ಉಪಾಸನಾ ಫೌಂಡೇಶ್ ನಿನ www.aniruddhafoundation.com ಈ ವೆಬ್ ಸಾಯಿಟ್ ಮೇಲಿನ ‘Click here to Donate Online’ ಈ ಬಟನ್ ನನ್ನು ಕ್ಲಿಕ್ ಮಾಡಬೇಕು.

೨) ಆ ನಂತರ ನಮ್ಮ ಸ್ಕ್ರೀನ್ ಮೇಲೆ ಬರುವ ಫಾರ್ಮ್ ದಲ್ಲಿಯ ಮಾಹಿತಿನ್ನು ತುಂಬಿಸಿ ‘Donate Now’ ಈ ಬಟನ್ ಮೇಲೆ ಕ್ಲಿಕ್ ಮಾಡಿ ಮಾತ್ರ ಅದರ ಮೊದಲು ಫಾರ್ಮ್ ದಲ್ಲಿರುವ ’Name’, ’E-mail’, ’Mobile No.’ ಮತ್ತು ’Donation amount’ ಈ ಮಾಹಿತಿಯನ್ನು ತುಂಬಿಸಿ ಹಾಗು ಅದರ ಜೊತೆ ’Card Payment’ ಅಥವಾ ’Internet Banking’ ಈ ಎರಡು ಪರ್ಯಾಯದಲ್ಲಿಯ ಒಂದನ್ನು ಆಯ್ಕೆ ಮಾಡುವದು ಆವಶ್ಯಕವಿದೆ.

೩) ಮುಂದಿನ ಪ್ರಕ್ರಿಯೆಗಳು ಪೂರ್ಣವಾದ ಮೇಲೆ ಸಿಸ್ಟಮ್ ತಯಾರಿಸಿದ ರಶೀದಿಯು ನೀವು ಕೊಟ್ಟ ಈ-ಮೇಲ್ ಗೆ ಸಂಸ್ಥೆಯ ಮೂಲಕ ಕಳುಹಿಸಲಾಗುವದು. ಶ್ರದ್ಧಾವಾನರು ಈ "ಪೆಮೆಂಟ್ ಗೆಟ್ವೆ" ಯ ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ  ತೆಗೆದುಕೊಂಡು ಹಾಗು ಈ ಪವಿತ್ರ ಕಾರ್ಯದಲ್ಲಿ ಆರ್ಥಿಕ ಸಹಾಯ ಮಾಡುವರೆಂದು ನನ್ನ ವಿಶ್ವಾಸವಿದೆ.

Wednesday 25 June 2014

ನಾನು ಪ್ರಸ್ಥಾಪಿಸಿದ ಹೊಸ ವ್ಹಿಡಿಯೋ ಬ್ಲಾಗ್


ಕಳೆದ ಮೂರು ತಿಂಗಳಿನಿಂದ ನಾನು ಪರಮ ಪೂಜ್ಯ ಬಾಪೂರವರ ವಿವಿಧ ಸುರಸವಾದ ವ್ಹಿಡಿಯೋಗಳನ್ನು ಪ್ರಮುಖವಾಗಿ ಸಂಕ್ಷಿಪ್ತವಾದ ಪ್ರವಚನಗಳ ಕ್ಲಿಪ್ಸ್ ನ್ನು ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಅದನ್ನು ನಿಮ್ಮಲ್ಲಿ ಹಲವಾರು ಜನರು ನಮ್ಮ ಮೆಚ್ಚಿನ ಸದ್ಗುರು ’ಶ್ರೀ ಅನಿರುದ್ಧ ಬಾಪೂ ’ರವರಿದ್ದ ಬ್ಲಾಗ್ ನ್ನು ಬಹಳ ಕೂತಹಲದಿಂದ ನೋಡುತ್ತಿರುವಿರಿಯೆಂದು ತಿಳಿದಿದೆ. ಆದರೆ ವ್ಹಿಡಿಯೋಗಳನ್ನು ಅಪ್ ಲೋಡ್ ಮಾಡುವ ಪ್ರಮಾಣ ಹೆಚ್ಚುತ್ತಿರುವುದರಿಂದ ಮತ್ತು ಅದನ್ನು ನೋಡುವವರ ಪ್ರಮಾಣ ಕೂಡ ಹೆಚ್ಚುತ್ತಿರುವದರಿಂದ ನಾನು ಹೊಸ ವಿಡಿಯೋ ಬ್ಲಾಗ್ ಪ್ರಸ್ಥಾಪಿಸುತ್ತಿದ್ದೇನೆ ಇದರ ಮೂಲಕ ನಾನು ಎಲ್ಲಾ ವ್ಹಿಡಿಯೋಗಳನ್ನು ಅಲ್ಲದೆ ಸದ್ಗುರು ಶ್ರೀ ಅನಿರುದ್ಧರವರ ಪ್ರವಚನದ ಕ್ಲಿಪ್ಸ್ ಗಳನ್ನು ಪ್ರಕಾಶಿಸುತ್ತೇನೆ. ನೀವು ಅದನ್ನು ವ್ಹಿಡಿಯೋ ಬ್ಲಾಗ್ ನ ಈ ವಿಳಾಸದಲ್ಲಿ ನೋಡಬಹುದು. http://www.aniruddhabapu.in/



ಆದ್ದರಿಂದ ವಿವಿಧ ವ್ಹಿಡಿಯೋಗಳನ್ನು ನೋಡುವ ಸಲುವಾಗಿ ನೀವು ನನ್ನೊಡನೆ ನನ್ನ ವ್ಹಿಡಿಯೋ ಬ್ಲಾಗ್ ಅಥವಾ ಯು ಟ್ಯೂಬ್ ಚಾನೇಲ್ ಮೂಲಕ ಸಂಪರ್ಕದಲ್ಲಿರಿಯೆಂದು ವಿನಂತಿಸುತ್ತೇನೆ. ವ್ಹಿಡಿಯೋದಲ್ಲಿ ನಿಯಮಿತವಾಗಿ ಅಪ್ ಲೋಡ್ ಮಾಡಿದ್ದನ್ನು ನೋಡಲು ನೀವು ಯು ಟ್ಯೂಬ್ ಚಾನೇಲ್ ನ ನನ್ನ ವ್ಹಿಡಿಯೋ ಬ್ಲಾಗ್ ದಲ್ಲಿ ವರ್ಗಣಿದಾರರಾಗಿ ಅಥವಾ ಯು ಟ್ಯೂ ಚಾನೇಲ್ www.youtube.com/user/SamirsinhDattopadhye ದಲ್ಲಿ ನೇರವಾಗಿ ವರ್ಗಣಿ ಕಟ್ಟಬಹುದು.   
|| ಹರಿ ಓಂ || ಶ್ರೀರಾಮ || ಅಂಬಜ್ನ ||


Thursday 19 June 2014

ಸದ್ಗುರು ಅನಿರುದ್ಧ ಬಾಪೂರವರ ಉಪಾಸನೆ

ಪರಮಪೂಜ್ಯ ಸದ್ಗುರು ಬಾಪೂರವರು ಕಳೆದ ಮೂರು ಗುರುವಾರ ಶ್ರೀಹರಿಗುರುಗ್ರಾಮಕ್ಕೆ ಪ್ರವಚನಕ್ಕಾಗಿ ಬಂದಿಲ್ಲವೆಂದು ಸಮಸ್ತ ಶ್ರದ್ಧಾವಾನರಿಗೆ ಇದರ ಕಲ್ಪನೆಯಿದೆ. ಬಾಪೂರವರ ಸಲಗವಾಗಿ ೩ ಗುರುವಾರ ದರ್ಶನವಾಗದಿಲ್ಲದ್ದರಿಂದ ಅನೇಕ ಶ್ರದ್ಧಾವಾನರು ಬಾಪೂರವರ ಬಗ್ಗೆ ಆಸ್ಥೆಯಿಂದ ಹಾಗು ಪ್ರೇಮದಿಂದ ವಿಚಾರಣೆ  ಮಾಡಿರುವರು. ಆ ಎಲ್ಲಾ ಶ್ರದ್ಧಾವಾನರಿಗೆ ನಾನು ತಿಳಿಯಲಿಚ್ಛಿಸುವೆನೆಂದರೆ ಬಾಪೂ ಅವರ ಅತೀಶಯ ಕಠೋರವಾದ ಉಪಾಸನೆಯಲ್ಲಿ ವ್ಯಸ್ತರಿದ್ದು ಮುಂದಿನ ಕೆಲವು ಕಾಲದತನಕ ಈ ಉಪಾಸನೆಯು ನಡೆಯಲಿದೆ. ಈ ಉಪಾಸನೆಯ ಕಾರಣದಿಂದಾಗಿ ಪರಮಪೂಜ್ಯ ಬಾಪೂ ಕಳೆದ ೩ ಗುರುವಾರ ಶ್ರೀಹರಿಗುಗ್ರಾಮಕ್ಕೆ ಬರಲಿಲ್ಲ ಇದನ್ನು ಕೃಪೆಯಾಗಿ ಶ್ರದ್ಧಾವಾನರು ತಿಳಿದು ಕೊಳ್ಳ ಬೆಕೆಂದು ವಿನಂತಿ.

ಮುಂದೆ ಬರುವ ಕೆಲವು ಕಾಲದತನಕ ಪರಮಪೂಜ್ಯ ಬಾಪೂರವರ ಶ್ರೀಹರಿಗುರುಗ್ರಾಮದಲ್ಲಿ ಪ್ರವಚನಕ್ಕಾಗಿ ಬರುವದು ಅವರ ಉಪಾಸನೆಯನ್ನು ಅವಲಂಬಿಸರುತ್ತದೆ.



|| ಹರಿ ಓಂ || ಶ್ರೀರಾಮ || ಅಂಬಜ್ನ ||