Saturday 30 November 2013

ಸಪ್ತಮಾತೃಕಾ ಪೂಜನೆ

ಗುರುವಾರ ದಿ. ೨೪ ಅಕ್ಟೋಬರ್ ೨೦೧೩ ರಂದು ಪರಮಪೂಜ್ಯ ಬಾಪೂರವರು ಒಂದು ಬಹಳ ಮಹತ್ವಪೂರ್ಣ ವಿಷಯದ ಮೇಲೆ ಪ್ರವಚನ ಕೊಟ್ಟರು. ಪ್ರತಿಯೊಬ್ಬ ತಾಯಿ-ತಂದೆಯವರಿಗೆ ತನ್ನ ಮಗುವಿನ ಜೀವನ ನಿರೋಗಿಯಾಗಿದ್ದು ಮತ್ತು ಅವರಿಗೆ ದೀರ್ಘಾಯುಷ್ಯ ಲಭಿಸಬೇಕೆಂದು ಇಚ್ಛೆ ಇರುತ್ತದೆ. ಈ ದೃಷ್ಟಿಕೋನದಿಂದ  ಪ್ರಾಚೀನ ಪರಂಪರೆಯ ಅನುಸಾರವಾಗಿ ಮನೆಯಲ್ಲಿ ಮಗು ಜನ್ಮಕ್ಕೆ ಬಂದಾಗ ಷಷ್ಟೀ ಪೂಜೆಯನ್ನು ಮಾಡಲಾಗುತ್ತಿತ್ತು. ಆದರೆ ಕಾಲದ ಪ್ರವಾಹದಲ್ಲಿ ತಪ್ಪು ರೂಢಿಯನ್ನು ಅನುಸರಿಸಿದ ಕಾರಣದಿಂದಾಗಿ ಈ ಪೂಜನೆಯ ಮಹತ್ವವು ಕೇವಲ ಕರ್ಮಕಾಂಡವಾಗಿಯೇ ಮರ್ಯಾದಿತವಾಗಿ ಉಳಿಯಿತು.ಈ ಪೂಜನೆಯ ಉದ್ದೇಶ, ಅದರ ಮಹತ್ವ ಹಾಗು ಪೂಜನೆ ಪದ್ಧತಿಯ ಮೂಲದ ಬಗ್ಗೆ ಪರಮಪೂಜ್ಯ ಬಾಪೂರವರು ಪ್ರವಚನದ ಮೂಲಕ ಮಾರ್ಗದರ್ಶನೆ ಮಾಡಿದರು.

ಪರಮಪೂಜ್ಯ ಬಾಪೂರವರು ಹೇಳಿದರು, ’ಬ್ರಹ್ಮರ್ಷಿಯವರಲ್ಲಿ ಮೊಟ್ಟಮೊದಲನೆಯ ಸಲ ತಾಯಿಯಾದ ಲೋಪಾಮುದ್ರೆಯು (ಅಗಸ್ತ್ಯ ಋಷಿಯವರ ಪತ್ನಿ) ಹಾಗು ಅರುಂಧತಿ (ವಸಿಷ್ಟ ಋಷಿಯವರ ಪತ್ನಿ) ಇವರಿಬ್ಬರು ಒಂದೇ ಸಮಯಕ್ಕೆ ಪ್ರಸೂತರಾದರು. ಅಗಸ್ತ್ಯ-ಲೋಪಾಮುದ್ರಾ ಹಾಗು ವಸಿಷ್ಟ-ಅರುಂಧತಿ, ಈ ನಾಲ್ವರು ತನ್ನ ತನ್ನ ಬಾಲಕರ ಮೊದಲನೇಯದಾಗಿ ಮಾಡಿದ ಪೂಜನೆಯನ್ನು ’ಸಪ್ತಷಷ್ಟೀ ಪೂಜನೆ’ಎಂದು ಸಂಭೋಧಿಸಲಾಯಿತು.

ಮಾತೃವಾತ್ಸಲ್ಯವಿಂದಾನಮ್ ದಲ್ಲಿ ನಾವು ಓದುತ್ತೇವೆ ಏನೆಂದರೆ ಶುಂಭ-ನಿಶುಂಭ ರಾಕ್ಷಸರ ಜೊತೆ ಯುದ್ಧಮಾಡುವ ಸಮಯ ಬಂದಾಗ ಮಹಾಸರಸ್ವತಿಯ ಸಹಾಯಕ್ಕಾಗಿ ದೇವರೆಲ್ಲರು ತಮ್ಮ-ತಮ್ಮ ಶಕ್ತಿಯನ್ನು ಕಳುಹಿಸುತ್ತಾರೆ. ಆ ಏಳು ಶಕ್ತಿಗಳೇ ಸಪ್ತಮಾತೃಕಾ ಹಾಗು ಅವರ ಸೇನಾಪತಿ ಕಾಲಿ. ಆ ಏಳು ಮಾತೃಕರ ಹೆಸರುಗಳು ಕೆಳಗಿನಂತಿವೆ.

೧) ಮಾಹೇಶ್ವರಿ - ಇವಳು ಪಂಚಮುಖಿಯಾಗಿರುವಳು ಹಾಗು ವೃಷಭದ ಮೇಲೆ ಆರೂಢವಾಗಿರುವಳು. ಅವಳ ಕೈಯಲ್ಲಿ ತ್ರಿಶೂಲವಿದೆ.

೨) ವೈಷ್ನವಿ - ಇವಳು ಗರುಡದ ಮೇಲೆ ಆರೂಢವಾಗಿರುವಳು, ಅವಳ ಕೈಯಲ್ಲಿ ಚಕ್ರ, ಗದೆ ಹಾಗು ಪದ್ಮವಿದೆ.

೩) ಬ್ರಮ್ಹಾಣಿ - ಇವಳು ನಾಲ್ಕು ಮುಖದವಳಾಗಿ ಹಂಸದ ಮೇಲೆ ಆರೂಢವಾಗಿದ್ದಾಳೆ. ಅವಳ ಕೈಯಲ್ಲಿ ಕಮಂಡಲು ಹಾಗು ಅಕ್ಷಮಾಲೆಯಿದೆ.
 
೪) ಐಂದ್ರಿ - ಇವಳು ಇಂದ್ರನ ಶಕ್ತಿಯಾಗಿರುವಳು ಹಾಗು ಐರಾವತದ ಮೇಲೆ ಆರೂಢವಾಗಿರುವಳು.ಅವಳ ಕೈಯಲ್ಲಿ ವಜ್ರವಿದೆ.
 
೫) ಕೌಮಾರಿ - ಇವಳು ಆರು ಮುಖದವಳಾಗಿ ಮತ್ತು ನವಿಲಿನ ಮೇಲೆ ಆರೂಢವಾಗಿರುವಳು.
 
೬) ನಾರಸಿಂಹಿ - ಇವಳ ಮುಖ ಸಿಂಹದ್ದಾಗಿದೆ. ಅವಳ ಕೈಯಲ್ಲಿ ಗದೆ ಮತ್ತು ಖಡ್ಗವಿದೆ.
 
೭) ವಾರಾಹಿ - ಇವಳ ಮುಖ ವರಹದ್ದಾಗಿದೆ (ಹಂದಿ) ಹಾಗು ಇವಳು ಬಿಳಿ ಬಣ್ಣದ ಕೋಣದ ಮೇಲೆ ಆರೂಢವಾಗಿರುವಳು. ಅವಳ ಕೈಯಲ್ಲಿ ಚಕ್ರ, ಖಡ್ಗ, ಕತ್ತಿ ಮತ್ತು ಢಾಲು ಇದೆ.

ಈ ಸಪ್ತಮಾತೃಕರವರ ಪೂಜನೆಯೇ ’ಸಪ್ತಷಷ್ಟೀ ಪೂಜನೆ ". ಸ್ವತ: ಬಾಪೂರವರ ಜನ್ಮದ ನಂತರ ಅವರ ಮನೆಯಲ್ಲಿ ಈ ಪೂಜೆಯನ್ನು ಮೂಲ ಪದ್ಧತಿಯನುಸಾರವಾಗಿ ಮಾಡಲಾಯಿತು. ಈ ಪೂಜೆಯಲ್ಲಿ ಉಪಯೋಗಿಸಲಾಗುವ ಸಪ್ತಮಾತೃಕೆಯವರ ಚಿತ್ರವನ್ನು ಬಾಪೂರವರು ೨೪ ಅಕ್ಟೋಬರ್ ೨೦೧೩ ರಂದು ಪ್ರವಚನದ ಸಮಯದಲ್ಲಿ ಎಲ್ಲಾ ಶ್ರದ್ಧಾವಾನರಿಗೆ ತೋರಿಸಿದರು. ಈ ಪೂಜೆಯ ಮಹತ್ವವನ್ನು ಹೇಳುವಾಗ ಬಾಪೂ ಮುಂದೆ ಹೇಳಿದರು, "ಶುಂಭ ಹಾಗು ನಿಶುಂಭರ ವಧೆಯಾದ ನಂತರ ಅದರಲ್ಲಿ ಶುಂಭನ ಮಗನಾದ ದುರ್ಗಮನು ಮಾತ್ರ ಉಳಿದನು. ಅವನಿಗೆ ಕಾಗೆಯ ರೂಪವನ್ನು ಕೊಟ್ಟರೆಂದು ಅವನು ಉಳಿದವನಲ್ಲ, ಆದರೆ ಅವನನ್ನು ನೋಡಿದಾಗ ಈ ಏಳು ಸೇನಾಪತಿಯವರ ಮಾತೃಭಾವ ಜಾಗೃತವಾಯಿತು ಆದ್ದರಿಂದ ಅವರು ಮಾತೃತ್ವದ ಭಾವದಿಂದ ಶತ್ರುವಿನ ಬಾಲಕನಿಗೂ ಜೀವದಾನವನ್ನು ನೀಡಿದರು. ಅವರ ಈ ಕೃತ್ಯದಿಂದ ಪ್ರಸನ್ನವಾಗಿ ಮಹಾಸರಸ್ವತಿಯು ಅವರಿಗೆ ಆಶೀರ್ವಾದ ಕೂಟ್ಟರು, " ಯಾವ ಮಾನವನು ಅವರ ಮನೆಯಲ್ಲಿ ಮಗು ಜನ್ಮಕ್ಕೆ ಬಂದ ನಂತರ ಅವರ (ಅಂದರೆ ಈ ಏಳು ಮಾತೃಕರವರ) ಪೂಜನೆಯನ್ನು ಮಾಡುವನು, ಆ ಮಗುವಿನ ನೀವು ರಕ್ಷಣಕರ್ತ್ಯ ರಾಗುವಿರಿ " ಆದ್ದರಿಂದ ಮನೆ-ಮನೆಯಲ್ಲಿ ಮಗು ಜನ್ಮಕ್ಕೆ ಬಂದ ನಂತರ ಈ ಸಪ್ತಮಾತೃಕರವರ ಪೂಜನೆಯನ್ನು ಮಾಡುವ ವಾಡಿಕೆ ಆರಂಭವಾಯಿತು.’
ಅದರ ನಂತರ ಬಾಪೂರವರು ಈ ಪೂಜೆಯನ್ನು ಹೇಗೆ ಮಾಡಬೇಕು ಅದರ ಬಗ್ಗೆ ಸವಿಸ್ತರವಾದ ಮಾಹಿತಿಯನ್ನು ಕೊಟ್ಟರು.
 

ಪೂಜೆ ಮಾಡುವ ಕ್ರಮ:
೧) ಒಂದು ಮಣೆ ತೆಗೆದುಕೊಳ್ಳಬೇಕು. ಅದರ ಕೆಳಗೆ ’ಸ್ವಸ್ತಿಕ’ಅಥವಾ ’ಶ್ರೀ’ ರಂಗೋಲಿಯಿಂದ ತೆಗೆಯಬೇಕು ಯಾಕೆಂದರೆ ಇವು ಮಂಗಲಚಿಹ್ನಗಳಾಗಿವೆ. ಪೂಜೆಯ ಸಾಮಗ್ರಿಗಳನ್ನೆಲ್ಲ ಮಣೆಯ ಮೇಲೆಯೇ ಬಿಡಿಸಿ ಇಡಬೇಕು, ಚೌರಂಗದ ಮೇಲೆ ಅಥವಾ ಟೇಬಲಿನ ಮೇಲೆ ಮಾಡಬಾರದು ಯಾಕೆಂದರೆ ನಮ್ಮ ಮೋಠಿ  ಆಯೀಗೆ
(ದೊಡ್ಡ ತಾಯಿ - ಮಹಿಷಾಸುರಮರ್ದಿನೀ) ನಾವೆಲ್ಲರು ಅವಳ ಚಿಕ್ಕ ಮಕ್ಕಳೇ ಆಗಿರುವೆವು. ಮಗು ತನ್ನ ಮೊದಲ ಹೆಜ್ಜೆಯನ್ನು ಮಣೆಯ ಎತ್ತರದಷ್ಟೇ ಇಡುವದು ಆದ್ದರಿಂದ ಪೂಜೆ ಮಾಡಲು ಮಣೆಯನ್ನೇ ಉಪಯೋಗಿಸಬೇಕು.

೨) ಮಣೆಯ ಮೇಲೆ ಶಾಲು/ಸೊವಳ (ರೇಶ್ಮಿ ವಸ್ತ್ರ)/ಚದ್ದರು ಹಾಕಬೇಕು. ಮಣೆಯ ಸುತ್ತಲು ರಂಗೋಲಿ ಹಾಕಬಹುದು.

೩) ಒಂದು ಹರಿವಾಣದಲ್ಲಿ ಗೋದಿಯನ್ನು ತುಂಬಿ ಸಮಾನಾಗಿ ಹಾಕಬೇಕು.

೪) ಅದರ ಮದ್ಯದಲ್ಲೊಂದು ಮತ್ತು ಅದರ ಸುತ್ತಲು ಆರು ಅಡಿಕೆಯನ್ನಿಡಬೇಕು.

೫) ಮಣೆಯ ಮೇಲೆ ಹರಿವಾಣದ ಎರಡು ಬದಿಯಲ್ಲಿ ಎರಡು ತೆಂಗಿನಕಾಯಿಗಳನ್ನಿಡಬೇಕು. ತೆಂಗಿನಕಾಯಿಗೆ ಅರಶಿನ ಮತ್ತು ಕುಂಕುಮ ಹಚ್ಚಬೇಕು.

೬) ಎರಡು ತೆಂಗಿನಕಾಯಿಯ ಒಳಗಿನ ಬದಿಗೆ, ಹರಿವಾಣದ ಮುಂದೆ ಕೆಂಪು ಅಕ್ಷತದ ರಾಶಿಯನ್ನು ಮಾಡಿಡಬೇಕು. ಈ ರಾಶಿಗಳೆಂದರೆ ದೇವರ ವೈದ್ಯರಾಗಿದ್ದ ಅಶ್ವಿನಿಕುಮಾರರ ಪತ್ನಿಯರಾಗಿರುವರು. ಇವರು ಅವಳಿ ಜವಳಿ ಸೋದರಿಗಳು ಹಾಗು ಅವರಿಗೆ ಜರಾ ಹಾಗು ಜೀವಂತಿಕಾ ಎಂದು ಹೆಸರುಗಳಿವೆ. ಇವರಿಬ್ಬರು ಅಶ್ವಿನಿಕುಮಾರರಂತೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರರು ಮತ್ತು ಇವರಿಬ್ಬರೂ ಮಗು ಚಿಕ್ಕದಿರುವಾಗ ಅವರ ಜೊತೆ ಆಡುತ್ತಿರುತ್ತಾರೆ, ಅವರ ಜೋಪಾನ ಮಾಡುತ್ತಾರೆಂಬ ಧಾರಣೆಯಿದೆ. ಮೂರು ತಿಂಗಳಾಗುವ ತನಕ ಮಕ್ಕಳು ಯಾವಾಗ ನಗುವರು ಆಗ, ಅವರ ಈ ಹಾಸ್ಯವು ಇವರಿಬ್ಬರಿಗೆ ಕೊಟ್ಟ ಪ್ರತಿಸಾದವೆನ್ನುತ್ತಾರೆ.

ಅ) ಜರಾವೆಂದರೆ ಮುಪ್ಪುತನವನ್ನು ಕೊಡುವವಳು, ಮಗು ತುಂಬಾ ಮುಪ್ಪಾಗುವ ತನಕ ಬಾಳಲೆಂದು ಇವಳು ಆಶೀರ್ವಾದ ಕೊಡುವಳು.

ಬ) ಜೀವಂತಿಕಾವೆಂದರೆ ಮಗುವಿನ ಜೀವನದ ಅಂತ್ಯತನಕ ಅದರ ಆರೋಗ್ಯವನ್ನು ಕಾಪಾಡುವೆನೆಂದು ಆಶೀರ್ವಾದ ಕೊಡುವವಳು.

೭) ಮಣೆಯ ಮೇಲೆ ನಾಲ್ಕು ದಿಕ್ಕಿಗೆ ನಾಲ್ಕು ವೀಳ್ಯವನ್ನಿಡಬೇಕು. ಅದರ ಮೇಲೆ ಅಡಿಕೆಯನ್ನಿಡಿ. ಪೂಜನೆಯಲ್ಲಿ ವೀಳ್ಯವನ್ನು ಇಡುವುದೆಂದರೆ ದೇವರಿಗೆ ’ಆವ್ಹಾನ"ವನ್ನು ಮಾಡುವದು. ವೀಳ್ಯ-ಅಡಿಕೆಯಿಂದ ಮಾಡಿದ ಆವ್ಹಾನವು ಯಾವುದೇ ಮಂತ್ರವನ್ನು ಹೇಳದೆ ಮಾಡಿದ ಆವ್ಹಾನವಾಗಿರುವದು ಮತ್ತು ಇದನ್ನು ಸಾಕ್ಷಾತ್ ಆದಿಮಾತೆಯ ಸ್ವರೂಪವಾಗಿದ್ದ ಕಾತ್ಯಾಯನಿ ಹೇಳಿರುವರು. ವೀಳ್ಯವನ್ನಿಟ್ಟರೆ ದೇವರಿಗೆ ಆಮಂತ್ರಣವು ತಲುಪುವದು ಕಾರಣ ಇದು ಕಾತ್ಯಾಯನಿಯ ಸಂಕಲ್ಪವಾಗಿದೆ.

೮) ಹರಿವಾಣದ ಹಿಂದಿನ ಬದಿಗೆ ಹರಿವಾಣಕ್ಕೆ ತಾಗಿಸಿ ಸಪ್ತಮಾತೃಕೆಯ ಫೋಟೋವನ್ನಿಡಬೇಕು.
 

ಪೂಜನೆಯ ವಿಧಿಗಳು
೧) ಈ ಪೂಜೆಯನ್ನು ಸೂರ್ಯೋದಯದಿಂದ ಹಾಗು ಸೂರ್ಯಾಸ್ತದ ವಳಗೆ ಮಾಡಬೇಕು. ಯಾವುದೇ ದಿವಸದಂದು ಈ ಪೂಜೆಯನ್ನು ಮಾಡಬಹುದು. ಅಮಾವಾಸ್ಯೆಯ ದಿವಸದಂದು ಮಾಡಿದರೂ ಆಗಬಹುದು.

೨) ಮಗು ಜನ್ಮಕ್ಕೆ ಬಂದ ನಂತರವೇ ಇದರ ಮೊದಲನೇಯ ಪೂಜೆಯನ್ನು ಮಗುವಿನ ತಂದೆಯೇ ಮಾಡಬೇಕು. ಈ ಪೂಜೆಯನ್ನು ಮಾಡುವಾಗ ತಂದೆಯು ಮಗುವನ್ನು ಸ್ವಲ್ಪ ಸಮಯಕ್ಕಾದರು ತನ್ನ ಮಡಿಲಿನಲ್ಲಿ ತೆಗೆದುಕೊಂಡು ಕೂಡಬೇಕು. ಈ ಪೂಜೆಯನ್ನು ಮಗುವಿನ ಜನ್ಮದ ಮೂರು ದಿವಸದ ನಂತರ ಯಾವಾಗಲು ಕೂಡ ಮಾಡಬಹುದು.

೩) ಪೂಜೆಯನ್ನು ಆರಂಭಿಸುವಾಗ ಸರ್ವಪ್ರಥಮವಾಗಿ ’ವಕ್ರತುಂಡ ಮಹಾಕಾಯ...’ ಈ ಶ್ಲೋಕವನ್ನು ಹೇಳಬೇಕು.

೪) ಅದರ ನಂತರ ಗುರುಕ್ಷೇತ್ರಮ್ ಮಂತ್ರವನ್ನು ಹೇಳಬೇಕು. ಹಾಗು ಅದರ ನಂತರ ಸದ್ಗುರುವಿನ ನಾಮಸ್ಮರಣೆ ಆತ್ಯಾವಶ್ಯಕವಾಗಿದೆ.

೫) ವೀಳ್ಯದ ಮೇಲಿರುವ ಅಡಿಕೆಗೆ ಅರಶಿನ, ಕುಂಕುಮ, ಅಕ್ಷತೆ ಹಾಗು ಗಂಧವನ್ನು ಅರ್ಪಿಸಬೇಕು. ಕುಂಕುಮವನ್ನು ಸಾದ್ಯವಾದಲ್ಲಿ ಒದ್ದೆ ಮಾಡಿ ಹಚ್ಚಿರಿ. ಅದರ ನಂತರ ಹರಿವಾಣದ ಮೇಲಿರುವ ಅಡಿಕೆಗೆ ಅರಶಿನ, ಕುಂಕುಮ, ಅಕ್ಷತೆ ಹಾಗು ಗಂಧವನ್ನು ಅರ್ಪಿಸಬೇಕು..

೬) ಅದರ ನಂತರ ಮಾತೃವಾತ್ಸಲ್ಯವಿಂದಾನಮ್ ನಲ್ಲಿದ್ದ ’ನವಮಂತ್ರಮಾಲಾ ಸ್ತ್ರೋತ್ರಮ್ ನ’ ಪಠಣವನ್ನು ಮಾಡುತ್ತಾ ಪೂಜೆಯನ್ನು ಮಾಡಬೇಕು. ಈ ಸ್ತ್ರೋತ್ರವನ್ನು ಒಂದು ಸಲ ಅಥವಾ ನಿಮಗೆ ಬೇಕಾದಷ್ಟು ಸಲ ಹೇಳಿದರು ಆಗಬಹುದು.

೭) ಸ್ತ್ರೋತ್ರ ಪಠಣ ಮಾಡುವಾಗ ಗಂಧಾಕ್ಷತೆ ಸುಗಂಧಿತ ಹೂವನ್ನು ಅರ್ಪಣೆ ಮಾಡಬೇಕು. ಸುಗಂಧಿತ ಪುಷ್ಪಗಳಿಲ್ಲದಿದ್ದರೆ ಸಾಧಾರಣ ಹೂವು ಕೂಡ ಆಗಬಹುದು. ಹೂವನ್ನು ಅಡಿಕೆಯ ಮೇಲೆ, ಸಪ್ತಮಾತೃಕೆಯ ಚಿತ್ರಕ್ಕೆ ಹಾಗು ಜರಾ ಮತ್ತು ಜೀವಂತಿಕೆಯ ಪ್ರತೀಕವಾಗಿರುವ ಅಕ್ಷತದ ರಾಶಿಯ ಮೇಲೂ ಅರ್ಪಣೆ ಮಾಡಬೇಕು. ಸ್ತ್ರೋತ್ರವನ್ನು ಪಠಣೆ ಮಾಡುತ್ತಿರುವಾಗ ಕೇವಲ ಮೊದಲನೇಯ ಆವರ್ತನೆಯ ಸಮಯದಲ್ಲಿ ಮಾತ್ರ ಹೂವನ್ನು ಅರ್ಪಣೆ ಮಾಡಬೇಕು.

೮) ಅದರ ನಂತರ ದೀಪ ಮತ್ತು ಧೂಪವನ್ನು ಮಾಡಬೇಕು.

೯) ಅದರ ನಂತರ ನೈವೇದ್ಯದ ಏಳು ಬಟ್ಟಲುಗಳನ್ನು ಸಿದ್ಧ ಮಾಡಿ ಪೂರಣ್ - ವರಣ್ (ಬೇಳೆಯ ಸಿಹಿ ಮುದ್ದೆ-ಅನ್ನ ಮತ್ತು ಬೇಳೆಸಾರು) ಅರ್ಪಣೆ ಮಾಡಬೇಕು. ಅದರ ಜೊತೆ ಬೆಲ್ಲ-ಕೊಬ್ಬರಿಯ ಒಂದು ಭಾಗ (ಒಣಗಿದ ತೆಂಗಿನಕಾಯಿ) ದ ನೈವೇದ್ಯ ಅರ್ಪಣೆ ಮಾಡಬೇಕು. ಯಾವುದೇ ಕಾರಣದಿಂದಾಗಿ ನೈವೇದ್ಯದ ಏಳು ಬಟ್ಟಲುಗಳನ್ನು ಅರ್ಪಣೆ ಮಾಡಲು ಅಸಾಧ್ಯವಾದರೆ, ಕೇವಲ ಬೆಲ್ಲ-ಕೊಬ್ಬರಿಯ ನೈವೇದ್ಯವನ್ನು ಅರ್ಪಣೆ ಮಾಡಬಹುದು.
 
೧೦) ನೈವೇದ್ಯ ಅರ್ಪಣೆ ಮಾಡಿದ ಮೇಲೆ ಎಲ್ಲಕ್ಕಿಂತ ಕೊನೆಗೆ ಸಾಧ್ಯವಾದಲ್ಲಿ ಕಮಲದ ಹೂವನ್ನು ಅರ್ಪಣೆ ಮಾಡಬೇಕು ಯಾಕೆಂದರೆ ’ಕಮಲ’ ವು ಈ ದೇವತೆಗಳ ಮೆಚ್ಚಿನ ಪುಷ್ಪವಾಗಿದೆ.’


ಇದರ ನಂತರ ಬಾಪೂ ಹೇಳಿದರು, ’ಮಗು ಜನ್ಮಕ್ಕೆ ಬಂದ ಮೇಲೆ ಮಾಡುವ ಮೊದಲ ಪೂಜೆಯನ್ನು ಮಗುವಿನ ತಂದೆಯೇ ಮಾಡಬೇಕು.ಪೂಜೆಯು ನಡೆಯುತ್ತಿರುವಾಗ ಮಗುವಿನ ತಾಯಿಯು ಸ್ವಲ್ಪ ಸಮಯಕ್ಕಾಗಿ ಪೂಜೆಯಲ್ಲಿ ಕುಳಿತುಕೊಳ್ಳಬೇಕು ಹಾಗು ಪೂಜೋಪಚಾರವನ್ನು ಮಾಡಬೇಕು. ಆದರೆ ಮೂಲ ಪೂಜೆಯನ್ನು ಮಾತ್ರ ಮಗುವಿನ ತಂದೆಯೇ ಮಾಡಬೇಕು. ಯಾವುದಾದರು ಕಾರಣದಿಂದಾಗಿ ಮಗುವಿನ ತಂದೆ ಪೂಜೆಯ ಸಮಯದಲ್ಲಿ ಉಪಸ್ಥಿತವಾಗಿರದಿದ್ದರೆ ಪಿತಾಮಹ (ಮಗುವಿನ ತಂದೆಯ ತಂದೆ) ಅಥವಾ ಮಾತಾಮಹ (ಮಗುವಿನ ತಾಯಿಯ ತಂದೆ) ಈ ಪೂಜೆಯನ್ನು ಮಾಡಬಹುದು. ಒಂದು ವೇಳೆ ಅವರು ಕೂಡ ಇರದಿದ್ದರೆ ಆಗ ಹತ್ತಿರದ ಸಂಬಂಧಿಕರಾದ ಪುರುಷ ವ್ಯಕ್ತಿಯು ಈ ಪೂಜೆಯನ್ನು ಮಾಡಬೇಕು. ಮಗು ದೊಡ್ಡದಾದ ಮೇಲೆ ಮಾತ್ರ ಈ ಪೂಜೆಯನ್ನು ತಾಯಿ ತನ್ನ ಬೆಳೆದಿರುವ ಮಗುವಿಗಾಗಿ ಎಂದು ಕೂಡ ಮಾಡಬಹುದು.ಇದಕ್ಕಾಗಿ ವಯಸ್ಸಿನ ಯಾವುದೇ ಪ್ರಕಾರದ ಬಂಧನವಿಲ್ಲ. ನೀವು ನಿಮ್ಮ ಮಗುವಿನ ಈ ಪೂಜೆಯನ್ನು ಎಷ್ಟು ಸಲ ಕೂಡ ಮಾಡಬಹುದು.ಅವರ ಹುಟ್ಟುಹಬ್ಬದ ದಿವಸದಂದು ಮಾಡಿ, ಮಗು ಕಾಯಿಲೆಯಿಂದ ಒಳ್ಳೆದಾದ ಮೇಲೆ ಮಾಡಿ, ಅಥವಾ ಇನ್ನಿತರ ಯಾವುದೇ ದಿವಸದಂದು ಮಾಡಬಹುದು. ಇಂತಹ ಸಮಯದಲ್ಲಿ ಈ ಪೂಜೆಯನ್ನು ತಾಯಿ-ತಂದೆ ಒಬ್ಬರೇ ಅಥವಾ ಇಬ್ಬರು ಒಟ್ಟಾಗಿ ಕೂಡಿ ಮಾಡಬಹುದು. ಹಾಗೆಯೇ ಒಮ್ಮೆ ಪೂಜೆ ಮಾಡಿದ ಮೇಲೆ ಪುನ: ಪೂಜೆ ಮಾಡಲೇ ಬೇಕೆಂದಿಲ್ಲ. ಒಂದು ವೇಳೆ ಮನೆಯಲ್ಲಿ ಒಬ್ಬರಿಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪ್ರತಿಯೊಬ್ಬರಿಗಾಗಿ ಬೇರೆ ಬೇರೆ ಪೂಜೆ ಮಾಡಿದ್ದಲ್ಲಿ ಅದು ಬಹಳ ಶ್ರೇಯಸ್ಕರ. ಆದರೆ ಯಾವುದೇ ಅಪರಿಹಾರ್ಯ ಕಾರಣದಿಂದಾಗಿ ಸಮಯ ಸಿಗದಿಲ್ಲದಿದ್ದರೆ ಎಲ್ಲಾ ಮಕ್ಕಳಿಗಾಗಿ ಕೂಡಿ ಒಂದು ಪೂಜೆ ಮಾಡಿದರು ಆಗಬಹುದು.


ಧನಲಕ್ಷ್ಮಿ ಪೂಜನೆಯ ದಿವಸ ಅಂದರೆ ಶುಕ್ರವಾರ, ೧ ನವೆಂಬರ್ ೨೦೧೩ ರಂದು ಸಪ್ತಮಾತೃಕೆಯ ಫೋಟೋ ಎಲ್ಲಾ ಶ್ರದ್ಧಾವಾನರಿಗಾಗಿ ಶ್ರೀಹರಿಗುರುಗ್ರಾಮದಲ್ಲಿ ಉಪಲಬ್ಧವಾಗಿರುತ್ತದೆ.

ಅದೇ ರೀತಿ ಸಪ್ತಮಾತೃಕೆಯ ಪೂಜನೆಯನ್ನು ಮಾಡಲು ಅಗತ್ಯವಿರುವ ’ನವಮಂತ್ರಮಾಲಾ ಸ್ತ್ರೋತ್ರಮ್’ನ ಸಂಸ್ಕೃತದ ಪದಛೇದ ಮಾಡಿದ ಪ್ರತಿಯು ಹಾಗೆಯೇ ಮರಾಠಿ ಮತ್ತು ಹಿಂದಿಯಲ್ಲಿ ಕೂಡ  ಸ್ತ್ರೋತ್ರದ ಪ್ರತಿಗಳನ್ನು ಈ ಪೋಸ್ಟ್ ನಲ್ಲಿ ಜೋಡಿಸಲಾಗಿದೆ. ಪರಮಪೂಜ್ಯ ಬಾಪೂರವರು ಹೇಳಿದ ಪ್ರಕಾರ ಪೂಜೆಯ ಸಮಯದಲ್ಲಿ ಈ ಸ್ತ್ರೋತ್ರವನ್ನು ಸಂಸ್ಕೃತ, ಮರಾಠಿ ಹಾಗು ಹಿಂದಿಯ ಯಾವುದೇ ಒಂದು ಭಾಷೆಯಲ್ಲಿ ಹೇಳಿದರು ಆಗಬಹುದು.


|| ಹರಿ ಓಂ ||
ಅಥನವಮಂತ್ರಮಾಲಾಸ್ತ್ರೋತ್ರಮ್ |
(ಪದಛೇದ)

ಯಾ ಮಾಯಾ ಮಧುಕೈಟಭ-ಪ್ರಮಥನೀ ಯಾ ಮಹಿಷೋನ್ಮೂಲಿನೀ
ಯಾ ಧೂಮ್ರೇಕ್ಷಣ-ಚಂಡಮುಂಡ-ಮಥನೀ ಯಾ ರಕ್ತಬೀಜಾಶನೀ |
ಶಕ್ತಿ: ಶುಂಭನಿಶುಂಭ-ದೈತ್ಯ-ದಲಿನೀ ಯಾ ಸಿದ್ಧಿಲಕ್ಷ್ಮೀ: ಪರಾ
ಸಾ ಚಂಡಿ ನವ-ಕೋಟಿ-ಮೂರ್ತಿ-ಸಹಿತಾ ಮಾಂ ಪಾತು ವಿಶ್ವೇಶ್ವರೀ ||

ಸ್ತುತಾ ಸುರೈ: ಪೂರ್ವಮ್-ಅಭೀಷ್ಟ-ಸಂಶ್ರಯಾತ್ ತಥಾ ಸುರೇಂದ್ರೇಣ ದಿನೇಷು ಸೇವಿತಾ |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಯಾ ಸಾಂಪ್ರತಂ ಚೋದ್ಧತ-ದೈತ್ಯ-ತಾಪಿತೈ: ಅಸ್ಮಾಭಿರೀಶಾ ಚ ಸುರೈರ್-ನಮಸ್ಯತೆ |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಯಾ ಚ ಸೃತಾ ತತ್ಕ್ಷಣಮೇವ ಹಂತಿ ನ: ಸರ್ವಾಪದೋ ಭಕ್ತಿ-ವಿನಮ್ರ-ಮೂರ್ತಿಭಿ: |
ಕರೋತು ಸಾ ನ: ಶುಭಹೇತುರೀಶ್ವರೀ ಶುಭಾನಿ ಭದ್ರಾಣ್ಯಭಿಹಂತು ಚಾಪದ: ||

ಸರ್ವಬಾಧಾಪ್ರಶಮನಮ್ ತ್ರೈಲೋಕ್ಯಸ್ಯ ಅಖಿಲೇಶ್ವರಿ |
ಏವಮೇವ ತ್ವಯಾ ಕಾರ್ಯಮ್ ಅಸ್ಮದ್-ವೈರಿ-ವಿನಾಶನಮ್ ||

ಸರ್ವಮಂಗಲಮಾಂಗಲ್ಯೆ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರಿ ನಾರಾಯಣಿ ನಮೋಸ್ತು ತೆ ||

ಸೃಷ್ಟಿ-ಸ್ಥಿತಿ-ವಿನಾಶಾನಾಮ್ ಶಕ್ತಿಭೂತೆ ಸನಾತನಿ |
ಗುಣಾಶ್ರಯೆ ಗುಣಮಯೆ ನಾರಾಯಣಿ ನಮೋಸ್ತು ತೆ ||

ಶರಣಾಗತ-ದೀನಾರ್ತ-ಪರಿತ್ರಾಣ-ಪರಾಯಣೆ |
ಸರ್ವಸ್ಯಾರ್ತಿಹರೆ ದೇವಿ ನಾರಾಯಣಿ ನಮೋಸ್ತು ತೆ ||

ಸರ್ವಸ್ವರೂಪೆ ಸರ್ವೇಶೆ ಸರ್ವಶಕ್ತಿ-ಸಮನ್ವಿತೆ |
ಭಯೆಭ್ಯಸ್-ತ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತು ತೆ ||
 _____________________________________________________


|| ಹರಿ ಓಂ ||
|| ಅಥ ನವಮಂತ್ರಮಾಲಾಸ್ತೋತ್ರಮ್ ||
(ಮರಾಠಿ)

ಜೀ ಮಾತಾ ಮಧು-ಕೈಟಭ-ಘಾತಿನೀ ಮರ್ದಿ ಜೀ ಮಹಿಷಾಸುರಾ
ಜೀ ಧೂಮ್ರೇಕ್ಷಣ-ಚಂಡ-ಮುಂಡ-ನಾಶಿನೀ ವಧೆ ರಕ್ತಬೀಜಾಸುರಾ |
ನಿರ್ದಾಳೀ ಶುಂಭ-ನಿಶುಂಭ-ದೈತ್ಯಾ ಜೀ ಸಿದ್ಧಿಲಕ್ಷ್ಮೀ ಪರಾ
ತೀ ಚಂಡಿಕಾ ನವ-ಕೋಟಿ-ಮೂರ್ತಿ-ಸಹಿತಾ ಪ್ರತಿಪಾಳೊ ಆಮ್ಹಾ ಲೇಕರಾ ||

ಅನಿರುದ್ಧಮಾತಾ ನವಮಂತ್ರಮಾಲಿನಿ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಅಭೀಷ್ಟ-ಪೂರ್ತಿಸಾಠಿ ದೇವಾದಿಕಾನೀ ಸ್ತವಿಲೀ ಭಜಿಲೀ ಜಿಲಾ ತೀ ಆದಿಮಾತಾ |
ಶುಭಹೇತುರೀಶ್ವರೀ ತೀ ಮಾಯ ಆಮುಚೀ  ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನಿ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಉನ್ಮತ್ತ ದೈತ್ಯಾಮುಳೆ ಗಾಂಜಲೇಲ್ಯಾ ಆಮುಚೆ ಕ್ಷೇಮ ಕರೋ ಪರಾಂಬಾ ಸುರವಂದಿತಾ |
ಶುಭಹೇತುರೀಶ್ವರಿ ತೀ ಮಾಯ ಆಮುಚೀ ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಜೀ ಸ್ಮರಣ ಕರತಾಚಿ ಹರೆ ದು:ಖಕ್ಲೇಶ | ಭಕ್ತಿಶೀಲ ಆಮ್ಹೀ ತಿಲಾ ಶರಣ ಅಸತಾ |
ಶುಭಹೇತುರೀಶ್ವರೀ ತೀ ಮಾಯ ಆಮುಚೀ  ಕರೋ ಶುಭಭದ್ರ, ಹರೋ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಬಾಧಾಂಚೆ ಪ್ರಶಮನ ಕರೀ ತ್ರೈಲೋಕ್ಯಾಚಿ ಅಖಿಲಸ್ವಾಮಿನೀ |
ಆಮುಚ್ಯಾ ವೈರ್ಯಾಂಚೆ ನಿರ್ದಾಲನ ಕರಾವೆ ಹೇಚಿ ತ್ವಾ ಭಕ್ತ-ಉದ್ಧಾರಿಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಮಂಗಲಾಂಚ್ಯಾ ಮಾಂಗಲ್ಯೆ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರೀ  ನಾರಾಯಣಿ ನಮೋ ಅಂಬಿಕೆ ||                                                                                                                 ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸೃಷ್ಟಿಚೀ ಉತ್ಪತ್ತಿ ಸ್ಥಿತಿ ಲಯ ಕರೀ ಜೀ ಆಧ್ಯಶಕ್ತಿ ಸನಾತನೀ |
ವಂದಿತೋ ಗುಣಾಶ್ರಯೆ ಗುಣಮಯೆ ವಾತ್ಸಲ್ಯನಿಲಯೆ ನಾರಾಯಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಶರಣಾಗತ ಪಾಮರ ಲೇಕರಾ ತತ್ಪರ ಜೀ ಪ್ರತಿಪಾಲನೀ |
ಪ್ರಣಾಮ ತುಜ ಸರ್ವಪೀಡಾಹಾರಿಣೀ ಕ್ಷಮಾಸ್ವರೂಪೆ ನಾರಾಯಣಿ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||

ಸರ್ವಸ್ವರೂಪೆ ಸರ್ವೇಶ್ವರಿ ಸರ್ವಶಕ್ತಿ-ಸಮನ್ವಿತೆ |
ಭಯಾಪಾಸೂನ ರಕ್ಷಿ ಆಮ್ಹಾ ದೇವಿ ದುರ್ಗೆ ಆದಿಮಾತೆ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೋ ಬಾಳಾಚೆ ಸಂರಕ್ಷಣ ಮಾತೃಕಾಸಮ್ರಾಜ್ನೀ ||
 _____________________________________________________

 || ಹರಿ ಓಂ ||
|| ಅಥ ನವಮಂತ್ರಮಾಲಾಸ್ತೋತ್ರಮ್ ||
(ಹಿಂದಿ}

ಜೋ ಮಾತಾ ಮಧುಕೈಟಭ-ಘಾತಿನೀ ಮಹಿಷಾಸುರಮರ್ದಿನೀ
ಜೋ ಧೂಮ್ರೇಕ್ಷಣ-ಚಂಡಮುಂಡ-ನಾಶಿನೀ ರಕ್ತಬೀಜ-ನಿರ್ಮೂಲಿನೀ |
ಜೋ ಹೈ ಶುಂಭನಿಶುಂಭ-ದೈತ್ಯಛೇದಿನೀ ಜೋ ಸಿದ್ಧಿಲಕ್ಷ್ಮೀ ಪರಾ
ವಹ ಚಂಡಿಕಾ ನವಕೋಟೀಮೂರ್ತಿಸಹಿತಾ ಚರಣೋ ಮೇ ಹಮೆ ದೇ ಆಸರಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಅಭೀಷ್ಟ-ಪೂರ್ತಿಹೇತು ಸುರಗಣೋ ನೆ ಕೀ ಜಿಸಕೀ ಸ್ತುತಿ ಭಕ್ತಿ ವಹ ಆದಿಮಾತಾ |
ಶುಭಹೇತುರೀಶ್ವರೀ ವಹ ಮಾ ಹಮಾರೀ  ಕರೆ ಶುಭಭದ್ರ, ಹರೇ ಸರ್ವ ಆಪದಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಉನ್ಮತ್ತ ದೈತ್ಯೋ ಸೆ ಗ್ರಸ್ತ ಹೈ ಹಮ್  ಕರೋ ಕ್ಷೇಮ ಹಮಾರಾ ಪರಾಂಬಾ ಸುರವಂದಿತಾ |
ಶುಭಹೇತುರೀಶ್ವರೀ ವಹ ಮಾ ಹಮಾರೀ  ಕರೇ ಶುಭಭದ್ರ, ಹರೇ ಸರ್ವ ಆಪದಾ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸ್ಮರಣ ಕರತೆ ಹೀ ದು:ಖಕ್ಲೇಶ ಹೈ ಹರತೀ |  ಭಕ್ತಿಶೀಲ ಹಮ್ ಜಬ್ ಶರಣ ಮೇ ಹೋ ಉಸಕೆ |
ಶುಭಹೇತುರೀಶ್ವರೀ ವಹ ಮಾ ಹಮಾರೀ | ಕರೇ ಶುಭಭದ್ರ, ಹರೇ ಸರ್ವ ಆಪದಾ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸರ್ವಬಾಧಾವೋಂ ಕಾ ಪ್ರಶಮನ  ಕರೇ ತ್ರೈಲೋಕ್ಯ ಕೀ ಅಖಿಲಸ್ವಾಮಿನೀ |
ಹಮಾರೆ ಬೈರಿಯೋಂಕಾ ನಿರ್ದಾಲನ  ಕರೋ ಯಹೀ ಮಾ ತುಮ್ ಭಕ್ತೋದ್ಧಾರಿಣೀ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||

ಸರ್ವಮಂಗಲೋಂಕಾ ಮಾಂಗಲ್ಯ ಶಿವೆ ಸರ್ವಾರ್ಥಸಾಧಿಕೆ |
ಶರಣ್ಯೆ ತ್ರ್ಯಂಬಕೆ ಗೌರೀ  ನಾರಾಯಣೀ ನಮೋ ಅಂಬಿಕೆ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸೃಷ್ಟಿ ಕೀ ಉತ್ಪತ್ತಿ ಸ್ಥಿತಿ ಲಯ್ ಕರೆ ಜೋ ಆಧ್ಯಶಕ್ತಿ ಸನಾತನೀ |
ವಂದನ ತುಮ್ಹೆ ಗುಣಾಶ್ರಯೆ ಗುಣಮಯೆ ವಾತ್ಸಲ್ಯನಿಲಯೆ ನಾರಾಯಣೀ ||

ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಶರಣಾಗತ ದೀನದು:ಖಿ ಸಂತಾನೋಂಕೆ ಪರಿಪಾಲನ ಮೇ ತತ್ಪರ ಜನನೀ |
ಪ್ರಣಾಮ ತುಮ್ಹೆ ಸರ್ವಪೀಡಾಹಾರಿಣೀ ಕ್ಷಮಾಸ್ವರೂಪೆ ನಾರಾಯಣೀ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||
ಸರ್ವಸ್ವರೂಪೆ ಸರ್ವೇಶ್ವರೀ ಸರ್ವಶಕ್ತಿಸಮನ್ವಿತೆ |
ಭಯ ಸೇ ಹಮಾರೀ ಸುರಕ್ಷಾ ಕರನಾ ದೇವಿ ದುರ್ಗೆ ಆದಿಮಾತೆ ||
ಅನಿರುದ್ಧಮಾತಾ ನವಮಂತ್ರಮಾಲಿನೀ | ಕರೇ ಬಚ್ಚೆ ಕೀ ಸುರಕ್ಷಾ ಮಾತೃಕಾಸಮ್ರಾಜ್ನೀ ||

ಪ್ರತಿಯೊಬ್ಬ ಶ್ರದ್ಧಾವಾನರು ತನ್ನ-ತನ್ನ ಮನೆಯಲ್ಲಿ ಈ ಪೂಜನೆಯನ್ನು ಖಂಡಿತವಾಗಿ ಮಾಡುವೆರೆಂದು ನನಗೆ ಪೂರ್ಣ ವಿಶ್ವಾಸವಿದೆ.

ಹರಿ ಓಂ
ಶ್ರೀರಾಮ

Saturday 2 November 2013

ಶ್ರೀಗಂಗಾ ತ್ರಿವೇಣಿ Algorithm

ಮೊನ್ನೆ ಅಂದರೆ ೧೯ ಸಪ್ಟೆಂಬರ್ ೨೦೧೩ ರಂದು ಸದ್ಗುರು ಬಾಪೂರವರು ’ಶ್ರೀಗಂಗಾ ತ್ರಿವೇಣಿ Algorithm’ ನ್ನು ಎಲ್ಲಾ ಶ್ರದ್ಧಾವಾನರಿಗೆ ತಿಳಿಸಿ ಹೇಳಿದಾಗ, ಬಾಪೂರವರು Pascal Triangle ನ Algorithm ಒಟ್ಟಿಗೆ ಇದ್ದ ಸಂದರ್ಭವನ್ನು ಕೊಟ್ಟರು. ಶ್ರೀಗಂಗಾ ತ್ರಿವೇಣಿ algorithm (ಎಲ್ಗೋರಿದಮ್) ಬಗ್ಗೆ ತಿಳಿಸುವಾಗ ಬಾಪೂ ಹೇಳಿದರು, ’ಗಂಗಾ-ಯಮುನಾ-ಸರಸ್ವತಿ ಈ ಮೂರು ನದಿಗಳ ಎಲ್ಲಿ ಸಂಗಮವಾಗುವದು ಅದಕ್ಕೆ ತ್ರಿವೇಣಿ ಸಂಗಮ ಹೇಳುತ್ತಾರೆ. "ಗಂಗಾ, ಯಮುನಾ ಮತ್ತು ಸರಸ್ವತಿ ಈ ಮೂರು ನದಿಗಳು ನಮ್ಮ ದೇಹದಲ್ಲಿ ಇಡಾ, ಪಿಂಗಲಾ ಹಾಗು ಸುಷುಮ್ನಾ ನಾಡಿಯ ರೂಪದಲ್ಲಿರುತ್ತದೆ, "ಮನುಷ್ಯನ ಹಣೆಯ ಮಧ್ಯಭಾಗದಲ್ಲಿ ಅಂದರೆ ಆಜ್ನಾಚಕ್ರದಲ್ಲಿ ಈ ಮೂರು ನಾಡಿಗಳ ತ್ರಿವೇಣಿ ಸಂಗಮವಾಗುವದು. ಸುಷುಮ್ನೆಯಲ್ಲಿ ಹನುಮಂತನ ಸಂಚಾರವಿರುವದು ಅಂದರೆ ಅದರಲ್ಲಿ ಮಹಾಪ್ರಾಣನ ಸಾಮ್ರಾಜ್ಯವಿರುವದು.

ನಮ್ಮ ಮನದಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದ ಕುರಿತಾಗಿ ನಮಗೆ ಗೊತ್ತಿರುವುದು ಆವಶ್ಯಕವಾಗಿದೆ. ಈ ಮೂರು ನದಿಯ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ನಮ್ಮೆಲ್ಲಾ ಪಾಪಗಳ ಕ್ಷಾಲನವಾಗುವುದೆಂಬ ಸಿದ್ಧಾಂತವಿದೆ. ಆದರೆ ತ್ರಿವೇಣಿ ಸಂಗಮದಲ್ಲಿ ನಿಜವಾಗಲೂ ಸ್ನಾನಮಾಡುವುದೆಂದರೆ ನಮ್ಮ ಮನದಲ್ಲಿಯ ಗಂಗಾ, ಯಮುನಾ ಸರಸ್ವತಿಯ ಸಂಗಮದಲ್ಲಿ ಅಂದರೆ ಇಡಾ, ಪಿಂಗಲಾ ಹಾಗು ಸುಷುಮ್ನೆಯ ಸಂಗಮದಲ್ಲಿ ಸ್ನಾನ ಮಾಡಿದಂತಿರುವದು. ಮತ್ತು ಈ ಸಂಧಿಯು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ.

 
                                          श्रीगंगा त्रिवेणी Algorithm

ಮೇಲಿನ ಆಕೃತಿಯು ನಮ್ಮ ದೇಹದಲ್ಲಿಯ ಇಡಾ, ಪಿಂಗಲಾ ಹಾಗು ಸುಷುಮ್ನಾ ಅಂದರೆ ಗಂಗಾ, ಯಮುನಾ ಹಾಗು ಸರಸ್ವತಿಯ ಕಾರ್ಯವನ್ನು ತೋರಿಸುವದು. ಈ ತ್ರಿಕೋನದಲ್ಲಿ ೧ ರಿಂದ ೯ ಹಾಗು ೦ ಯ ಅಂಕೆಯು ಒಂದು ನಿರ್ಧಾರಿತ ಕ್ರಮದಲ್ಲಿ ಬರುವದು. ಕೇವಲ ಸುಷುಮ್ನಾ ನಾಡಿಯ ಮೇಲೆ ನಮಗೆ ಶೂನ್ಯ ಕಾಣುತ್ತದೆ. ಈ ಶೂನ್ಯಾವಸ್ಥೆ ಅಂದರೆ ಶಾಂತ-ತೃಪ್ತಾವಸ್ಥೆ ಅಂದರೇನೆ ಪೂರ್ಣತ್ವ. ಹನುಮಂತನು ಪೂರ್ಣನಿರುವರು. ಆದ್ದರಿಂದ  ಸುಷುಮ್ನಾ ನಾಡಿಯಲ್ಲಿ ಅವರ ಸಂಚಾರವಿರುವದು. ಈ ಸುಷುಮ್ನೆಯನ್ನೇ ’ಜ್ಯೋತಿಷಮತಿ’ ಕೂಡ ಹೇಳುವರು ಯಾಕೆಂದರೆ ಇದಕ್ಕೆ ಮುಂದಿನದು ಗೊತ್ತಿರುವದು.

ಆದರೆ ಈ ಗಂಗಾ-ತ್ರಿವೇಣಿಯ ತ್ರಿಕೋನದಲ್ಲಿ ಸ್ನಾನ ಹೇಗೆ ಮಾಡಬೇಕು? ನಮ್ಮ ಮೆಚ್ಚಿನ ದೇವರ ಪ್ರತಿಮೆಗೆ (ಮೂರ್ತಿ/ಫ್ರೇಮ್) ಅಭಿಷೇಕವನ್ನು ಮಾಡುವಾಗ ಹರಿವಾಣದ ಕೆಳಗೆ ಈ ಶ್ರೀಗಂಗಾ ತ್ರಿವೇಣಿ algorithm ತೆಗೆದಿರುವ ಕಾಗದವನ್ನಿಡಬೇಕು. ಇದರಿಂದ ಗಂಗಾ-ತ್ರಿವೇಣಿ ಸಂಗಮದ ಪಾವಿತ್ರ್ಯವು ಅಭಿಷೇಕದ ತೀರ್ಥದಲ್ಲಿ ಇಳಿಯುವದು. ಆನಂತರ ದೇವರ ಅಭಿಷೋಕ್ತ ಪ್ರತಿಮೆಗೆ ಅತ್ಯಂತ ಪ್ರೀತಿಯಿಂದ ಹಾಗು ಜಾಗರೂಕತೆಯಿಂದ ಒರೆಸಬೇಕು. ಅಭಿಷೇಕ ಮಾಡಿದ ಮೇಲೆ ಈ ತೀರ್ಥವನ್ನು ಗಂಗಾ, ಯಮುನಾ ಸರಸ್ವತಿಯ ಸ್ಮರಣೆ ಮಾಡುತ್ತ ನಾವು ಅದರ ಪ್ರಾಶನ ಮಾಡಬೇಕು. ಈ ಜಲವು ಗಂಗಾ, ಯಮುನಾ, ಸರಸ್ವತಿಯದ್ದೇ ಆಗಿದೆಯೆಂಬ ಭಾವವಿಡಬೇಕು. ಹಾಗೆಯೇ ನಮ್ಮ ಮೇಲೆ ಯಾರು ನಿಜವಾದ ಪ್ರೀತಿ ಮಾಡುವರು ಆ ಪ್ರತಿಯೊಬ್ಬರಿಗಾಗಿ ಕೂಡ ಈ ತೀರ್ಥವನ್ನು ಪ್ರಾಶನ ಮಾಡುತ್ತಿರುವೆಂಬ ಭಾವ ಇರಬೇಕು. ಆ ತೀರ್ಥವನ್ನು ತೆಗೆದುಕೊಂಡ ಮೇಲೆ ಅದೇ ಒದ್ದೆ ಕೈಯನ್ನು ಎರಡು ಕಣ್ಣು, ಆಜ್ನಾಚಕ್ರ ಹಾಗು ತಲೆಯ ಹಿಂದೆ ಅಂದರೆ Circle of Willis ನ ಸ್ಥಳದಲ್ಲಿ ಇಡಬೇಕು. ಈ ರೀತಿಯ ಅಭಿಷೇಕವನ್ನು ನಾವು ದಿನಂಪ್ರತಿ ಮಾಡಿದರೆ ಅದು ನಮಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದಂತಾಗಿರುವದು.

ಇದರ ಚಿಹ್ನೆಯನ್ನು ತೆಗೆಯುವಾಗ ಅದರ ಮೇಲಿನ ಭಾಗದಲ್ಲಿ ಶ್ರೀಗಂಗಾ ತ್ರಿವೇಣಿ ಬರೆಯಬೇಕು. ಅದರ ಕೆಳಗೆ ಮಧ್ಯಭಾಗದಲ್ಲಿ algorithm ನ ಚಿಹ್ನೆಯನ್ನು ತೆಗೆಯಬೇಕು. ಚಿಹ್ನೆಯ ಕೆಳಗೆ ನಮ್ಮ ಮೆಚ್ಚಿನ ದೇವರ ಹೆಸರನ್ನು ಬರೆಯಬೇಕು. ಕಾಗದದಮೇಲೆ, ವಸ್ತ್ರದಮೇಲೆ ಬರೆದು ದೇವರಿಡುವ ಸ್ಥಳದ ಕೆಳಗೆ ಈ algorithm ನ್ನು ಇಟ್ಟರೆ ಬಹಳ ಶ್ರೇಯಸ್ಕರವಾಗಿರುವದು. ಒಂದು ವೇಳೆ ನಾವು ಈ ಪ್ರತಿಮೆಗೆ ಅರಶಿನ ಹಾಗು ಕುಂಕುಮವನ್ನು ಹಚ್ಚಲು ಮರೆತರೂ ನಡೆಯಬಹುದು. ಕೇವಲ ನಾವು ಎನು ಮಾಡುತ್ತೇವೆ ಅದನ್ನು ಬಹಳ ಪ್ರೀತಿಯಿಂದ ಮಾಡಬೇಕು. ಈ algorithm ನ ಪ್ರತಿಮೆಯನ್ನು ನಮ್ಮ ವಾಹನದಲ್ಲಿಟ್ಟರು ಕೂಡ ನಡೆಯಬಹುದು, ಯಾಕೆಂದರೆ ಹೀಗೆ ಮಾಡುವುದರಿಂದ ಈ ಪ್ರತಿಮೆಯ ಮೇಲೆ ಸೂರ್ಯಕಿರಣದ ಅಭಿಷೇಕವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯಕಿರಣದ ಅಭಿಷೇಕವನ್ನು ಬಹಳ ಪವಿತ್ರ ಹಾಗು ಸರ್ವೋತ್ತಮವೆಣಿಸಲಾಗುತ್ತದೆ. ಈ algorithm ನ್ನು ನಾವು ರಂಗೋಲಿಯಲ್ಲಿಯೂ ತೆಗೆಯಬಹುದು ಮತ್ತು ಇದರಲ್ಲಿ ಯಾವುದೇ ಬಣ್ಣವನ್ನು ಉಪಯೋಗಿಸಿದರೂ ಆಗಬಹುದು. ಈ ಗಂಗಾ-ತ್ರಿವೇಣಿಯ ಚಿಹ್ನೆಯನ್ನು ನಾವು ದೇವರನ್ನು ಯಾವ ವಸ್ತ್ರದ ಮೇಲೆ ಇಡುತ್ತೇವೆ ಆ ವಸ್ತ್ರದ ಕೆಳಗಿಟ್ಟರೆ ದೇವರಪೂಜೆ ಮಾಡುವ ಸಮಯದಲ್ಲಿ ನಮ್ಮ ಕೈಯಿಂದ ಯಾವುದೇ ಪ್ರಕಾರದ ತಪ್ಪಾದರೆ ಹೆದರುವ ಕಾರಣವಿಲ್ಲ.

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ-೨)

[continued from Part I (dated: 5th October 2013)...]
ಯು ಎಸ್ ಮತ್ತು ರಶಿಯಾ ಎರಡೂ ದೇಶಗಳ ಹೇತುಗರ್ಭಿತವಾದ ಅಭಿರುಚಿ ಈ ಪ್ರದೇಶದಲ್ಲಿದೆ. ರಶಿಯಾದವರಿಗೆ, ಅವರಿಗೆ ಅನುಕೂಲವಾದ ಶಾಸನ ಶಿರಿಯಾದಲ್ಲಿರುವದು ಬಹಳ ಮಹತ್ವದ್ದಾಗಿದೆ. ಶಿರಿಯಾದ ಟಾರ್ಟ್ಸ್ ಪಟ್ಟಣದಲ್ಲಿ ಬಂದರು ಇದ್ದು ರಶಿಯಾದವರ ಬಹಳ ಮಹತ್ವದ ನೌಕಾದಲದ ಸೈನ್ಯದ ಮುಖ್ಯ ಸ್ಥಳವಾಗಿದೆ ಮತ್ತು ಮೊದಲಿನ ಸೋವಿಯತ್ ಯುನಿಯನ್ ನವರಿಂದ ಪರದೇಶದಲ್ಲಿ ಸ್ಥಾಪಿಸಲ್ಪಟ್ಟ ಇದೊಂದೇ ಸದ್ಯದ ಸೈನ್ಯ ಸೌಕರ್ಯವಾಗಿದೆ. ಮತ್ತು ಇದೇ  ಕಾರಣದಿಂದಾಗಿ ರಶಿಯಾ ಅಸ್ಸಾದಿನ ಶಾಸನಕ್ಕೆ ತನ್ನ ಸ್ಥಿರವಾದ ಬೆಂಬಲ ಕೊಡುತ್ತಿದೆ.

ಆದರೆ ಅದರ ಒಟ್ಟಿಗೆ ಮಿಡಲ್ ಈಸ್ಟೀನ ಇತರ ದೇಶಗಳು, ಮುಖ್ಯತ: ಯು ಎಸ್ ನ ಮಿತ್ರರಾಗಿದ್ದ  ಸುನ್ನಿ ರಾಷ್ಟ್ರಗಳು ಬಹಳ ಆತುರತೆಯಿಂದ ಅಸ್ಸಾದ್ ಸರಕಾರವನ್ನು ಪರಾಭವಗೊಳಿಸಲು ಕಾಯುತ್ತಿದ್ದಾರೆ. ಕತಾರ್ ದೇಶವು ಯುರೋಪಿಗೆ ನ್ಯಾಚುರಲ್ ಗ್ಯಾಸ್ ನ್ನು ಸರಬರಾಯಿ ಮಾಡುವ ಇಚ್ಛೆ ಪಡೆದುಕೊಂಡಿದೆ. ಕತಾರ್ ದೇಶವು ಯುರೋಪ್ ದೇಶಗಳಿಗೆ ನ್ಯಾಚುರಲ್ ಗ್ಯಾಸನ್ನು ಸರಬರಾಯಿ ಮಾಡುವ ಸಲುವಾಗಿ ಪೈಪ್ ಲಾಯಿನ್ ಹಾಕಿದಾಗ ಅದು ಶಿರಿಯಾದಿಂದ ಹೋಗಬೇಕಿತ್ತು. ಆದರೆ ಈ ಯೋಜನೆಗೆ ಶಿರಿಯಾದ ರಾಷ್ಟ್ರಪತಿಯಾದ ಬಶಾರ್ ಅಲ್-ಅಸ್ಸಾದ್ ಅವರು ವಿರೋಧ ಮಾಡಿದ್ದಾರೆ. ಒಂದು ಕಡೆಯಲ್ಲಿ ಅಸ್ಸಾದ್ ಶಾಸನ ಯುರೋಪ್ ದೇಶಗಳಲ್ಲಿ ಕತಾರಿನ ಪೈಪ್ ಲಾಯಿನಿನ ಪ್ರಸ್ತಾಪವನ್ನು ನಿರಾಕರಿಸಿದರೆ, ಇನ್ನೊಂದು ಕಡೆಯಲ್ಲಿ  ಹತ್ತು ಬಿಲಿಯನ್ ಡಾಲರಿನ ಅದೇ ಕರಾರಿಗೆ ಕಳೆದ ವರ್ಷ ಜುಲ್ಯ ತಿಂಗಳಿನಲ್ಲಿ ಇರಾಣ್ ಮತ್ತು ಇರಾಕ್ ಜೊತೆ ಕೂಡಿ ಸಮ್ಮತಿಯನ್ನು ಕೊಟ್ಟಿದ್ದಾರೆ. ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾದೆಂದರೆ ಶಿರಿಯಾದ ಸೈನ್ಯಬಲ ಮತ್ತು ದಂಡೆಕೋರರ ನಡುವಿನ ತಿಕ್ಕಾಟವು ಶಿರಿಯಾ ಮಾಡಿದ ಈ ಕರಾರಿನ ಸಮಯದಲ್ಲೇ ಆಗಿದೆ. ಕತಾರ್ ದೇಶವು ತನ್ನ ಗ್ಯಾಸ್ ಪೈಪ್ ಲಾಯಿನ್ ನ ಪ್ರಸ್ತಾಪವನ್ನು ಇಡುವ ಸಮಯದಲ್ಲಿ ಸೌದಿ ಅರೇಬಿಯಾದವರು ಕೂಡ ಸಮಿತಿಯಲ್ಲಿ ತನ್ನನ್ನು ಒಳಗೂಡಿಸಬೇಕೆಂದು ರಶಿಯಾದವರ ಮೇಲೆ ತನ್ನ ಪ್ರಭಾವ ಬೀಳಿಸಲು ಪ್ರಯತ್ನ ಪಟ್ಟಿದ್ದರೆಂದು ತಿಳಿಯಲಾಗುತ್ತಿದೆ. ಇಂಧನಿನ ಉದ್ದಿಮೆಯಲ್ಲಿ ತನ್ನ ವರ್ಚಸ್ಸನ್ನಿಡಲು ಹಾಗು ಅದನ್ನು ವೃದ್ಧಿಸುವ ದೃಷ್ಟಿಕೋನದಿಂದ ಸೌದಿ ಅರೇಬಿಯಾದವರು ಕೂಡ ಸಂವೇದನಶೀಲವಾದ ಶಿರಿಯಾದಂತಹ ಭೂರಾಜ್ಯದಲ್ಲಿ ಮೈತ್ರಿಯ ಶಾಸನವನ್ನು ಇಚ್ಛಿಸುತ್ತಿದ್ದಾರೆ.
 
ಆದರೆ ಯುರೋಪ್ ದೇಶಗಳಿಗೆ ರಶಿಯಾ ಪರಂಪರೆಯಿಂದ ಇಂಧನನ್ನು ಪೂರೈಸುವದರಲ್ಲಿ ಅಗ್ರವಾಗಿದೆ. ಆದ್ದರಿಂದ ರಶಿಯಾವು ಯುರೋಪಿಯನ್ ದೇಶಗಳ ವಿರುದ್ಧ ಈ ಇಂಧನನ್ನು ಅಸ್ತ್ರದ ರೂಪದಲ್ಲಿ ಉಪಯೋಗ ಮಾಡುತ್ತಿದೆಯೆಂದು ಆರೋಪಣೆ ಮಾಡುತ್ತಿದ್ದಾರೆ. ಆದಕ್ಕಾಗಿ ಮಿಡಲ್ ಈಸ್ಟೀನಿಂದ ಯುರೋಪಿಗೆ ಇಂಧನ ತಲುಪಬಾರದೆಂದು ರಶಿಯಾ ಇಚ್ಛಿಸುತ್ತಿದೆ. ಈ ಒಂದು ಕಾರಣದಿಂದಾಗಿ ರಶಿಯಾ, ಶಿರಿಯಾದ ಅಸ್ಸಾದ್ ರೆಜಿಮಿಗೆ ನಿರಂತರ ಬೆಂಬಲ ಕೊಡುತ್ತಿದೆ. ಇದರ ಪರಿಣಾಮವಾಗಿ  ತನ್ನ ಲಾಭದ ಕುರಿತಾಗಿಯೇ ಆಸಕ್ತಿಯುಳ್ಳ ಎಲ್ಲಾ ಪಕ್ಷದಾರರು ಶಿರಿಯಾದಲ್ಲಿಯ ವಿಷಮ ಸ್ಥಿತಿಯನ್ನು ಜಟಿಲವಾದ ಜಾಲದಂತಾಗಿ ಮಾಡಿ ಅದಕ್ಕೆ ನಿರ್ಧಾರವಾದ ಪರಿಹರಣೆ ತರಬಹುದೆಂಬುದು ಒಂದು ದೂರದ ಮಾತಾಗಿದೆ ಮತ್ತು ಸದ್ಯದಲ್ಲಿ ಮಾಡಿದ ಶಾಂತತೆಯ ಪ್ರಯತ್ನವು ಕೇವಲ ತಾತ್ಕಾಲಿನ ವ್ಯವಸ್ಥೆಯಂತಾಗಿದೆ. 


 ಮಿಡಲ್ ಈಸ್ಟರ್ನ್ ರಾಷ್ಟ್ರದೊಡನೆ ಯು ಎಸ್ ಮತ್ತು ರಶಿಯಾ ಹಾಗು ಇತರ ರಾಷ್ಟ್ರಗಳು ಕೂಡ ಮೆಲ್ಲ ಮೆಲ್ಲನೆ ಈ ವಿವಾದದಲ್ಲಿ ಬರತೊಡಗಿದ್ದಾರೆ. ಯು ಎಸ್ ನ ಯುರೋಪದ ಮಿತ್ರ ರಾಷ್ಟ್ರಗಳಾದ, ಯುನೈಟೇಡ್ ಕಿಂಗ್ ಡಮ್, ಜರ್ಮನಿ, ಫ್ರಾಂಸ್, ಇಟಲಿ, ಡೆನ್ ಮಾರ್ಕ್, ಲಕ್ಜೆಂಬರ್ಗ್, ಸ್ಪೇನ್ ಹಾಗು ನಿದರ್ ಲ್ಯಾಂಡಗಳು ೪೩೦ ಮಿಲಿಯನ್ ಡಾಲರಿನ ಆರ್ಥಿಕ ಸಹಾಯ ಶಿರಿಯಾದ ನಿರಾಶ್ರಿತರಿಗೆ ಕೊಡಲು ಮಾತು ಕೊಟ್ಟಿದ್ದಾರೆ. ಯುನೈಟೇಡ್ ಕಿಂಗ್ ಡಮ್ ಮೂರು ಮಿಲಿಯನ್ ಡಾಲರ್ ಅತಿರಿಕ್ತ ಸಹಾಯ ಕೇವಲ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಮತ್ತು ಅದರ ಸೌಲಭ್ಯಗಳನ್ನು ನಾಶಮಾಡಲು ಕೊಡಲಾಗುವುದೆಂದು ಜಾಹಿರು ಮಾಡಿದೆ. ರಶಿಯಾದೊಡನೆ ಚೈನಾವು ಪಾರಂಪರೆಯಿಂದ ಶಿರಿಯಾದ ಜೊತೆಗಿದ್ದು, ಯು ಎಸ್ ನವರು ಶಿರಿಯಾದ ವಿರುದ್ಧ ಸಿದ್ಧ ಮಾಡಿದ ಹಲವು ಒಪ್ಪಂದಗಳಿಗೆ ಯು ಎನ್ ನಲ್ಲಿ ಅದಕ್ಕೆ ಅಡ್ಡ ಬಂದಿರುವರು. ಶಿರಿಯಾದ ವಿರುದ್ಧ ಯಾವುದೇ ಪ್ರಕಾರದ ಸೈನ್ಯ ಬಲದ ಉಪಯೋಗವನ್ನು ಚೈನಾ ಮಾಡಲು ಬಿಡುವುದಿಲ್ಲ. ಮತ್ತು ಇತ್ತೀಚೆಗೆ ಶಿರಿಯಾದ ವಿವಾದವನ್ನು ಬಿಡಿಸಲು ’ಸಂವಾದ’ವೇ ಒಂದು ಮಾರ್ಗ ಮತ್ತು ಒಳ್ಳೆಯ ವಿಕಲ್ಪವೆಂದು ಹೇಳಿದೆ.


ಆ ಸ್ಥಳದಲ್ಲಿ ಹೆಚ್ಚುತ್ತಿರುವ ಅಶಾಂತಿಯು ಅಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸುವವರಿಗಾಗಿ ಮುಖ್ಯವಾದ ಅಹ್ವಾನವಾಗಿದೆ. ಆದರೆ ಅದರ ಜೊತೆ ಇದು ಭಾರತದಂತಹ ರಾಷ್ಟ್ರಗಳಿಗು ಕೂಡ ಗಂಭೀರವಾದ ಆವ್ಹಾನವಾಗಿದೆ. ಯಾಕೆಂದರೆ ಈ ರಾಷ್ಟ್ರಗಳು ೮೦% ಇಂಧನಿನ ಪೂರೈಕೆಯನ್ನು ಆಮದು ಮಾಡಿಕೊಳ್ಳುವರು ಮತ್ತು ಅದಕ್ಕಾಗಿ ಅವರು ಮಿಡಲ್ ಈಸ್ಟೀನ್ ದೇಶಗಳ ಮೇಲೆಯೇ ಹೊಂದಿವೆ. ಭಾರತಕ್ಕೆ ಇಂಧನನ್ನು ಮುಖ್ಯವಾಗಿ ಒದಗಿಸುವ ರಾಷ್ಟ್ರವಾದ ಇರಾಣಿನ ಮೇಲೆ ಯು ಎಸ್ ನವರು ನಿಷೇಧ ಹಾಕಿರುವರು. ಇರಾಣ ದೇಶವು ಹಣ ಜಮೆ ಮಾಡಲು ೯೦ ದಿವಸದ ಅವಧಿಯನ್ನು ಭಾರತದ ಎಣ್ಣೆ ಕಂಪನಿಗಳಿಗೆ ಕೊಡುತ್ತಿದೆ. ಮತ್ತು ಅವರಲ್ಲಿಯ ಕಚ್ಚಾ ಎಣ್ಣೆಯು (ಕ್ರೂಡ್ ಆಯಿಲ್) ಸೌದಿ ಅರೇಬಿಯ ಹಾಗು ಇರಾಕ್ ದೇಶಗಳಿಗಿಂತ ಅಗ್ಗವಾಗಿದೆ. ಮತ್ತು ಅದರ ವೆಚ್ಚದ ಹಣವನ್ನು ಅಲ್ಪ ಭಾಗದಲ್ಲಿ ಭಾರತದ ರೂಪಾಯಿಯ ಸ್ವರೂಪದಲ್ಲಿಯೂ ಸ್ವೀಕರಿಸುತ್ತಾರೆ. ಆದ್ದರಿಂದ ಭಾರತವು ಇರಾಣ್ ದೇಶದಿಂದ ಇಂಧನನ್ನು ಆಮದು ಮಾಡಿಕೊಳ್ಳುವುದರಿಂದ ಪರದೇಶಕ್ಕೆ ಹಣವನ್ನು ಬದಲಾಯಿಸುವಾಗ (ಫೊರೇನ್ ಎಕ್ಸ್ ಚೇಂಜ್) ತಾಗುವ ವೆಚ್ಚವನ್ನು ಉಳಿಸಿಕೊಳ್ಳುತ್ತದೆ. ಆದರೆ ಯು ಎಸ್ ನವರು ಇರಾಣಿನ ಮೇಲೆ ಬಂದಿಯನ್ನು ಹಾಕಿದ್ದರಿಂದ ಭಾರತಕ್ಕೆ ಅಲ್ಲಿಂದ ಇಂಧನನ್ನು ಆಮದು ಮಾಡುವ ಪ್ರಮಾಣ ಕಡಿಮೆ ಮಾಡಬೇಕಾಗಿದೆ. ಆದರೆ ಶಿರಿಯಾವು ಭಾರತಕ್ಕೆ ಎಣ್ಣೆ ಮತ್ತು ಗ್ಯಾಸ್ ಕ್ಷೇತ್ರಗಳಲ್ಲಿ ಸಹಾಯ ಸಲ್ಲಿಸಲು ಒಪ್ಪಿದ್ದಾರೆ. ಅವರಲ್ಲಿ ಸಮುದ್ರದ ಹೊರಗೆ ೧೪ ಎಣ್ಣೆಯ ಸಂಚಯ ಮತ್ತು  ೬ ಸಮುದ್ರದಲ್ಲಿಯ ಎಣ್ಣೆ ಸಂಚಯದ ಸ್ಥಳಗಳಿವೆ. ಆದರೆ ಶಿರಿಯಾದ ಸದ್ಯದ ಪರಿಸ್ಥಿತಿಯನ್ನು ನೋಡಿ ಭಾರತದ ಕಂಪನಿಗಳು ತಾತ್ಕಾಲಿನವಾಗಿ ತನ್ನ ಕೆಲಸವನ್ನು ನಿಲ್ಲಿಸಿವೆ. ಓಎನ್ ಜೀಸಿಯ ಪ್ರಕಲ್ಪ ಮತ್ತು ಭಾರತ್ ಎಲೆಕ್ತ್ರಿಕಲ್ಸ್ ಲಿಮಿಟೇಡ್ ಕಂಪನಿಗಳು ಇವುಗಳ ಭಾಗವಾಗಿವೆ. ಶಿರಿಯಾದಲ್ಲಿದ್ದ  ಕಬ್ಬಿಣದ ಪ್ಲಾಂಟ್ ನಲ್ಲಿ ಕೂಡ ಭಾರತ  ಸಮಾವೇಷಗೊಂಡಿದೆ.

ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಇಂಧನಿನಿಂದ ತುಂಬಿದ ಮಿಡಲ್ ಈಸ್ಟೀನಲ್ಲಿ ಇಂಧನಿನ ಬೆಲೆ ಮೇಲೆ ಕೆಳಗಾಗುತ್ತಿದೆ. ಭಾರತದ ರೂಪಾಯಿಯ ಬೆಲೆ ಕೆಳಗೆ ಬೀಳುತ್ತಿದ್ದರಿಂದ ಪರದೇಶದ ಇಂಧನವು ದುಬಾರಿಯಾಗತೊಡಗಿದೆ. ಇಂಧನಿನ ಬೆಲೆ ಹೆಚ್ಚಾಗುತ್ತಿದ್ದರಿಂದ ಮೊದಲೇ ಕುಂದುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿದ್ದ ಭಾರತೀಯ ಅರ್ಥಶಾಸ್ತ್ರದ ಮೇಲೆ ಪರಿಣಾಮ ಬೀರುತ್ತಿದೆ. ಎಣ್ಣೆಯ ಲೆಕ್ಕಾಚಾರವು ಭಾರತದ ಆಮದು ಬೆಲೆಪಟ್ಟಿಯ ಮೂರನೇ ಭಾಗವಾಗಿದೆ. ವಿಶ್ಲೇಷಕರ ಪ್ರಕಾರ ಶಿರಿಯಾದ ಆಕ್ರಮಣದಿಂದಾಗಿ ಎಣ್ಣೆಯ ದರವು ಈಗಿರುವ ೧೧೫ ಡಾಲರ್ ನಿಂದ ೧೫೦ ಡಾಲರ್ ತನಕ ಹೋಗಬಹುದು. ಎಣ್ಣೆಯ ದರ ಇಷ್ಟು ಮೇಲೆ ಹೋದರೆ ಭಾರತ ಸರಕಾರಕ್ಕೆ ಹಣ ಚಲಾವಣೆಯ ಉಬ್ಬರವನ್ನು (ಇನ್ ಫ್ಲೇಶನ್) ತಡೆಯಲು ಕಠಿಣವಾಗಬಹುದು.

ಈಗಿನ ಪರಿಸ್ಥಿತಿಯು ಅರ್ಥವ್ಯವಸ್ಥೆಗೊಂದು ಆವ್ಹಾನವಾಗಿದೆ ಆದರೆ ಅದಕ್ಕಿಂತ ಮಹತ್ವದೆಂದರೆ ಇದು ಯುದ್ಧ ಕುಶಲರ ಕೂಟ ನೀತಿಯಾಗಿರುವುದರಿಂದ ಬಹಳವೇ ಅಪಾಯಕಾರಿಯಾಗಿದೆ ಎಂದು ತೋರಿಸಿ ಕೊಡುತ್ತದೆ. ಯಾಕೆಂದರೆ ಇಸ್ರಾಯಿಲಿನ ಪ್ರಕಾರ ಇರಾಣ್ ದೇಶದವರು ಅಣುಶಕ್ತಿಯ ಉಪಯೋಗ ಮಾಡಲು ಕೇವಲ ಆರು ತಿಂಗಳಿನ ದೂರದಲ್ಲಿರುವರು. ಲಿಬನಿನ ಹೆಝ್ ಬೊಲ್ಲಾಹ ರವರು ಮಿಸ್ಸಾಯಿಲನ್ನು ಪಡೆದಿದ್ದು ಇಸ್ರಾಯಿಲ್ ನಂತಹ ಸೈನ್ಯಬಲದಿಂದ ಬಹಳ ಸಮರ್ಥವಾದ ದೇಶವನ್ನು ಕೂಡ ಬಗ್ಗಿಸಲು ಯಶಸ್ವಿಯಾಗಿದ್ದಾರೆ. ಅದಲ್ಲದೆ ಶಿರಿಯಾದ ಸೈನ್ಯ ಪರಿತ್ಯಜಿಸಿದ ಬ್ರಿಗೇಡಿಯರ್ ಜನರಲ್ ಝಾಹೇರ್ ಸಾಕೇತ್ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಕಮಾಂಡರ್ ರಾಗಿದ್ದು ಅವರು ಕಳೆದ ವಾರದಲ್ಲಿ ಯು ಎನ್ ಎಸ್ ಸಿ ಒಪ್ಪಂದದ ಪ್ರಕಾರ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಅಸ್ಸಾದ್ ರೆಜಿಮ್ ಒಪ್ಪಿದ್ದರು ಕೂಡ ಅದನ್ನು ಗುಪ್ತರೂಪದಲ್ಲಿ ಲಿಬನಿನ ಹೆಝ್ ಬೊಲ್ಲಾಹ ರಲ್ಲಿಗೆ ಮತ್ತು ಇರಾಕಿಗೆ ಕಳುಹಿಸುತ್ತಿದೆ ಎಂದು ಹೇಳಿರುವರು. ತಮ್ಮ ಮೇಲೆ ಹೆಚ್ಚುತ್ತಿರುವ ಸಂಕಟಗಳಿಂದಾಗಿ ಇಸ್ರಾಯಿಲ್ ತವಕಗೊಳ್ಳುತ್ತಿದೆ ಮತ್ತು ಇರಾಣ್ ಹಾಗು ಶಿರಿಯಾದ ವಿರುದ್ಧ ಸೈನ್ಯಬಲದ ಉಪಯೋಗ ಮಾಡಬೇಕೆನ್ನುವ ಮಾತನ್ನು ಬಹಳ ಸಮಯದಿಂದ ಹೇಳುತ್ತಿದೆ. ಆದರೆ ಇನ್ನೊಂದು ಕಡೆಯಲ್ಲಿ ಯು ಎಸ್ ಈ ಭಾಗದಲ್ಲಿ ತನ್ನ ಸೈನ್ಯಬಲದ ಸ್ಥಾಪಿತವನ್ನು ಕತಾರ್, ಯುಏಈ, ಹಾಗು ಸೌದಿ ಅರೇಬಿಯಾ ದೇಶದ ಸಮ್ಮತದೊಡನೆ ಹೆಚ್ಚಿಸುತ್ತಿದೆ. ಇಸ್ರಾಯಿಲ್ ಹಾಗು ಟರ್ಕಿಯವರು ಕೂಡ ಇತ್ತೀಚಿಗೆ ತನ್ನ ಬಲಪ್ರದರ್ಶನವನ್ನು ಮಾಡಿರುವರು ಮತ್ತು ಒಮ್ಮತದಿಂದ ಶಿರಿಯಾದ ವಿರುದ್ಧ ಸೈನ್ಯಬಲವನ್ನು ಉಪಯೋಗಿಸಿರುವರು. ಈ ಪರಿಸ್ಥಿತಿಯನ್ನು ಸಮತೋಲಮಾಡಲೆಂದು ಮಿಡಲ್ ಇಸ್ಟೀನಲ್ಲಿ ರಶಿಯಾ ತನ್ನ ಸೈನ್ಯ ಬಲವನ್ನು ಹೆಚ್ಚಿಸಿದೆ. ಆದ್ದರಿಂದ ಇರಾಣಿನಿಂದ ಅಣುಶಕ್ತಿಯ ಭಯ ಅದರೊಡನೆ ಇರಾಣಿನ ಎರಡು ಮಿತ್ರರಾಷ್ಟ್ರಗಳಾದ ಶಿರಿಯಾದಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮತ್ತು ಹೆಝ್ ಬೊಲ್ಲಾಹರವರಿಂದ ಮಿಸ್ಸಾಯಿಲಿನ ಆಕ್ರಮಣದ ಭಯವು, ಮುಖ್ಯವಾಗಿ ಮಿಡಲ್ ಈಸ್ಟೀಗೆ ಹಾಗೆಯೇ ಪೂರ್ಣ ವಿಶ್ವಕ್ಕೆ ಬಹಳ ಭಯಂಕರವಾದ ಭಯ ಸೂಚನೆಕೊಡುತ್ತಿದೆ. ನಿಸ್ಸಂದೇಹಯವಾಗಿ ಈ ಸಮಯದಲ್ಲಿ ಪೂರ್ಣ ವಿಶ್ವವು ಮಿಡಲ್ ಈಸ್ಟೀನ ಕೂಡುಹಾದಿಯಲ್ಲಿ ಸಿಲುಕಿದಂತಿದೆ.

Friday 25 October 2013

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ ೧)

ಮಿಡಲ್ ಈಸ್ಟೀನ ವಸ್ತುಸ್ಥಿತಿ ಬೆಂದುತ್ತಿರುವಾಗ ಮತ್ತು ಯು ಎಸ್ ನವರು ಶಿರಿಯಾದ ಮೇಲೆ ಮಾಡಬಹುದಾದ ಆಕ್ರಮಣದಿಂದಾಗಿ ಉಲ್ಭಣವಾಗುವ ಪರಿಸ್ಥಿತಿಯು ಬಂದಾಗ ರಶಿಯಾದ ರಾಷ್ಟ್ರಪತಿಯಾದ, ಲಾದಿಮಿರ್ ಪುತೀನರವರು ತನ್ನ ಒಂದು ಚೂರು ಚಾತುರ್ಯ ಮತ್ತು ಜಾಣತನದಿಂದ ಅಂತರರಾಷ್ಟ್ರೀಯ ವ್ಯವಹಾರದ ನಿಪೂಣತೆಯನ್ನು ತೋರಿಸಿದಾಗ ಅದು ಯು ಎಸ್ ನವರ ಕೆಲಸಕ್ಕೆ ಬಂದಿತು. ಶಿರಿಯಾದ ಮೇಲೆ ಯು ಎಸ್ ನವರು ಮಾಡಬಹುದಾದ ಆಕ್ರಮಣವನ್ನು ಪ್ರಶ್ನಿಸಿ,   ಯು ಎನ್ ನ ಮಾನ್ಯತೆ ತೆಗೆದುಕೊಳ್ಳದಿದ್ದರಿಂದ ಅದನ್ನು ಕೇವಲ ಶಿರಿಯಾದ ಮೇಲಿನ ಆಕ್ರಮಣವೆಣಿಸದೆ, ಯು ಎನ್ ನ ಅಸ್ತಿತ್ವದ ಹಾಗು ಭವಿಷ್ಯದ ಮೇಲೆ ಮಾಡಿದ  ಆಕ್ರಮಣವಾಗಬಹುದೆಂದು ಮತ್ತು ಯಾವುದನ್ನು ಜಗತ್ತಿನಲ್ಲಿ ಚಿರಕಾಲದ ತನಕ ಶಾಂತಿ ಉಳಿಯಬೇಕೆಂದು ಸ್ಥಾಪಿಸಿದ ಸಂಸ್ಥೆಗೆ ಮಾಡಿದ ಆಕ್ರಮಣವೆಂದು ಪುತೀನರು ನಿವ್ ಯೋರ್ಕ್ ಟೈಮ್ಸಿನಲ್ಲಿ ತನ್ನ ಮತವನ್ನು ವ್ಯಕ್ತಪಡಿಸಿದರು. ಅವರು ಲೀಗ್ ಆಫ್ ನೇಶನ್ ಆಗಿರುವ ಯು ಎನ್ ನ ಅದೃಷ್ಟವನ್ನು  ಮೊದನೇಯ ಮಹಾಯುದ್ಧದ ನಂತರದ ಕಾಲದಂತಾಗಿರುವುದೆಂದು ಇದೊಂದು ಯು ಎನ್ ಗೆ ಮುನ್ಸೂಚನೆಯೆಂದು ಹೋಲಿಸಿದಾಗ ಪುತೀನಿನವರ ವಿಚಾರ ಗ್ಲೋಬಲ್ ಕಮ್ಯುನಿಟಿಗೆ (ಭೂಮಂಡಲದ ಸಮಾಜ) ಮುಖ್ಯವಾಗಿ ಯು ಎಸ್ಸ್ ಗೆ ಬೆರಗುಗೊಳಿಸುವ ಆಘಾತದಂತಿತ್ತು. ಈ ಒಂದೇ ಮಹತ್ವದ ಮಾತನ್ನು ಕೇಳಿದ ಯು ಎಸ್ ತನ್ನ ತಪ್ಪಿನ ಅರಿವಾಗಿ ಶಿರಿಯಾದಲ್ಲಿದ್ದ ವಿವಾದಾಂಶ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅತೀ ಮಹತ್ವದ ವಿಷಯವಾಗಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗದ ಬಗ್ಗೆ ರಶಿಯಾದ ಜೊತೆ ಒಮ್ಮತವಾಗಿ ವಿಚಾರವಿನಿಮಯ ಮಾಡಲು ಸಿದ್ಧವಾಯಿತು.

ಇದನ್ನು ನೋಡಿದಾಗ ಶಸ್ತ್ರಾಸ್ತ್ರಗಳ ತಿಕ್ಕಾಟದ ನಿವಾರಣೆ ಸದ್ಯಕ್ಕೆ ಆದಂತೆ ಕಂಡು ಬಂದರೂ ಮುಂದೆ ಭವಿಷ್ಯದಲ್ಲಿ ಇದರ ಪುನವರ್ತನೆಯಾಗುವ ಸಾದ್ಯತೆಯಿದೆ. ಆದ್ದರಿಂದ ರಶಿಯಾದವರಿಂದ ಬಂದ ಪ್ರಸ್ತಾಪದ ಪರಿಣಾಮವಾಗಿ ಶಿರಿಯಾ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಿಟ್ಟುಕೊಟ್ಟು ಅದರ ಉಪಯೋಗವನ್ನು ಮಾಡುವುದಿಲ್ಲವೆಂದು ಒಪ್ಪಿದೆ. ಶಿರಿಯಾದ ಸಂದಿಗ್ಧ ಪರಿಸ್ಥಿತಿ ಬಗ್ಗೆ ರಶಿಯಾದ ಜೊತೆ ಮಾಡಿದ ಪ್ರಸ್ತಾಪಕ್ಕೆ ಯು ಎಸ್ ಒಪ್ಪಿದ್ದರೂ ಅವರಿಬ್ಬರಲ್ಲಿ ಬಹಳ ವಿಶಾಲ ಮತ್ತು ಗಂಡಾಂತಕಾರಿಯಾದ ವಿಚಾರದ ಮತಭೇದವು ಉಳಿದೇ ಇದೆ. ಯಾಕೆಂದರೆ ಶಿರಿಯಾ ತನ್ನ ಮಾತನ್ನಿಡದಿದ್ದರೆ ಯು ಎಸ್ ಹೇಗೆ ಪ್ರತಿಕ್ರಿಯೆ ತೋರಿಸಬಹುದು ಇದನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಶಿರಿಯಾ ತಾನು ಕೊಟ್ಟ ಮಾತನ್ನಿಡದಿದ್ದರೆ ತನ್ನ ಸೈನ್ಯದ ಉಪಯೋಗ ಮಾಡುವುದೊಂದೇ ಅದರ ಪರಿಹಾರವಾಗಿದೆ ಎಂದು ಯು ಎಸ್  ಕೆಲವು ದಿವಸದ ಹಿಂದೆ ಸಂಕೇತ ಕೊಟ್ಟಿದೆ. ಆದರೆ ಯು ಎಸ್ ರಾಷ್ಟ್ರಪತಿಯಾದ ಬರಾಕ್ ಒಬಾಮಾ ಅವರು ಯುನೈಟೇಡ್ ನೇಶನ್ಸ್ ಜನರಲ್ ಎಸಂಬ್ಲಿಯಲ್ಲಿ ಕಳೆದ ವಾರ ಭಾಷಣ ಮಾಡಿದಾಗ ಈ ವಿಷಯದ ಉಲ್ಲೇಖ  ಮಾಡಲು ಬೇಕೆಂದೇ ತಳ್ಳಿದರು. ಆದರೆ ಒಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾಗಿರುವುದೆಂದರೆ ರಶಿಯಾ ಮಾಡಿದ ಮಧ್ಯಸ್ತಿಕೆಯ ಒಪ್ಪಂದಕ್ಕೆ ಯು ಎಸ್ ಒಪ್ಪಿದ್ದರೂ, ಅವರು ಶಿರಿಯಾದ ಶಾಸನದ ವಿರುದ್ಧ ಹೋರಾಡುವ ದಂಗೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಯು ಎಸ್ ನ ಜೊತೆ ಸೌದಿ ಅರೇಬಿಯಾ, ಯುನೈಟೇಡ್ ಅರಬ್ ಎಮಿರೇಟ್ಸ್ ಹಾಗು ಕತಾರ್ ದೇಶಗಳು ಎಲ್ಲಾ ಪ್ರಕಾರದ ಸಹಾಯವನ್ನು ಈ ದಂಗೆಕೋರರಿಗೆ ಕೊಡಲಾರಂಭಿಸಿದ್ದಾರೆ. ಶಿರಿಯಾದ ದಂಗೆಕೋರರಿಗೆ ಟರ್ಕಿ ಮತ್ತು ಜೊರ್ಡನಿನಿಂದ ಕೂಡ ಸಹಾನುಭೂತಿಯು ಸಿಗತೊಡಗಿದೆ. ಇಂತಹ ಸಮಯದಲ್ಲಿ ಶಿರಿಯಾದ ರಾಷ್ಟ್ರಪತಿಯವರು ಯಾವ-ಯಾವ ದೇಶಗಳು ಮತ್ತು ಮುಖ್ಯವಾಗಿ ಟರ್ಕಿ ದೇಶವು ದಂಡೆಕೋರರಿಗೆ ಸಹಾಯವನ್ನು ಕೊಡುತ್ತಿದ್ದು ಅವರಿಗೆ ಮುಂದೆ ಬರುವ ಕಾಲದಲ್ಲಿ ಪಶ್ಚಾತ್ತಾಪ ಪಡಬೇಕಾಗುವದು, ಯಾಕೆಂದರೆ ಅವರು ಈಗ ದಂಡೆಕೋರರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಅವರೇ ಮುಂದೆ ಬರುವ ಕಾಲದಲ್ಲಿ ಅವರ ವಿರುದ್ದ ನಿಲ್ಲಲ್ಲಿದ್ದಾರೆ ಎಂದು ಹೇಳಿರುವರು. ಈಗ ಆಗುತ್ತಿರುವ ಘಟನೆಗಳನ್ನು ನೋಡಿದರೆ ಮುಂದೆ ಬರುವ ಸಮಯದಲ್ಲಿ ಮುಖ್ಯವಾಗಿ ಶಿರಿಯಾದ ಸುತ್ತಮುತ್ತಲು ಮತ್ತು ಮಿಡಲ್ ಈಸ್ಟೀನಲ್ಲಿ ಬಹಳ ದೊಡ್ಡ ಪ್ರಕಾರದ ಕಚ್ಚಾಟ ಹಾಗು ಹಿಂಸೆಯ ಪರಿಮಾಣ ಹೆಚ್ಚಾಗಲಿದೆ.

ಮಧ್ಯಂತರದ ಸಮಯದಲ್ಲಿ ರಾಸಾಯನಿಕ ಶಷ್ತ್ರಾಸ್ತ್ರಗಳ ಉಪಯೋಗ ಸಾಧಾರಣ ನಾಗರಿಕರ ಮೇಲೆ ಮಾಡಿದ ಅವೇಶಯುಕ್ತ ದೋಷಾರೋಪಣೆಗಳನ್ನು ಯು ಎಸ್ ಮತ್ತು ಶಿರಿಯಾದ ದಂಡೆಕೋರರು ಒಂದಾಗಿ ಹಾಗು ಅಸ್ಸಾದ್ ರೆಜಿಮ್ ಮತ್ತು ರಶಿಯಾ ಇನ್ನೊಂದು ಕಡೆಯಲ್ಲಿ ಒಟ್ಟಾಗಿ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಆದರೆ ಪ್ರೊಹಿಬಿಶನ್ ಆಫ್ ಕೆಮಿಕಲ್ ವೆಪನ್ಸ್ ನ ಸಂಸ್ಥೆಯು (ಓಪಿಸಿಡಬ್ಲ್ಯೂ), ಇದು ಆಂತರಿಕ ಸರಕಾರದ ಸಂಸ್ಥೆಯಾಗಿ ಅದರ ನಿದರ್ ಲ್ಯಾಂಡ್ ಮುಖ್ಯಸ್ಥರಾಗಿದ್ದು ಅದು ಕೆಮಿಕಲ್ ವೆಪನ್ಸ್ ಕನ್ವೆಂಶನ್ (ರಾಸಾಯನಿಕ ಶಸ್ತ್ರಾಸ್ತ್ರದ ಒಪ್ಪಂದ)ಕ್ಕನುಗುಣವಾಗಿ ಪ್ರೊತ್ಸಾಹಿಸಿ ಹಾಗೆಯೇ ಅವಲಂಬಿಸಿರುವ ಮಾರ್ಗದ ಯಥಾರ್ಥವನ್ನು ನೋಡುತ್ತಿದ್ದು ಅವರಿಗೆ ರಶಿಯಾದವರು ಮಾಡಿದ ಮಧ್ಯಸ್ತಿಕೆಯ ಒಪ್ಪಂದದ ಪ್ರಕಾರ ಅಸ್ಸಾದ್ ಸರಕಾರದಿಂದ ಶಿರಿಯನ್ ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಹಾಗು ಅದರ ಸಾಮರ್ಥ್ಯದ ಬಗ್ಗೆ ಕೆಲವು ಪತ್ರಗಳು ಕಳುಹಿಸಲಾಗಿದೆಯೆಂದು ಒಪ್ಪಿದೆ, ಇದರಿಂದಾಗಿ ಯುದ್ಧದ ವಾತಾವರಣದಲ್ಲಿದ್ದ ಭಾಗಗಳಿಗೆ ಇದೊಂದು ಸ್ವಲ್ಪ ಬಿಡುವು ಸಿಕ್ಕಿದಂತಾಗಿದೆ. ಆದರೆ ಇಂತಹ ಮಹತ್ವದ ಸಮಯದಲ್ಲಿ ರಶಿಯಾದ ರಾಷ್ಟ್ರಪತಿಯವರು ಮಾಡಿದ ವಕ್ತವ್ಯದ ಪ್ರಕಾರ ಅದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಯಾಕೆಂದರೆ ಅಸ್ಸಾದ್ ರಾಜ್ಯಕಾರಭಾರದವರು ಇಷ್ಟೊಂದು ಒಟ್ಟು ಹಾಕಿಟ್ಟ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹಾಗು ಅವುಗಳ ಸೌಲಭ್ಯಗಳನ್ನು ಬಿಟ್ಟು ಕೊಡುವ ಮಾತು ಅದಲ್ಲದೆ ಅದರ ಸಂಪೂರ್ಣ ಏರ್ಪಾಡಿನ ಬಗ್ಗೆ ಪಾಶ್ಚಿಮಾತ್ಯ ಪ್ರಭುತ್ವಗಳು ಶಂಕಿತರಾಗಿರುವರು. ಅಸ್ಸಾದ್ ರೆಜಿಮ್ ದವರು ಈ ಸಂಪುರ್ಣ ಒಟ್ಟು ಹಾಕಿದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಸಾಧಾರಣ ಒಂದು ವರ್ಷದ ಅವಧಿ ಆಗಬಹುದೆಂದು ಮತ್ತು ಅದರ ಖರ್ಚು ಸಾಧಾರಣವಾಗಿ ಒಂದು ಬಿಲಿಯನ್ ಡಾಲರ್ ಆಗಬಹುದೆಂದು ಹೇಳಿದ್ದಾರೆ. ಅದಲ್ಲದೆ ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರುವಂತಹದೆಂದರೆ ಯು ಎಸ್ ನ ಗತಕಾಲದ ಸೆಕ್ರೆಟರಿ ಆಫ್ ಸ್ಟೇಟ್ ಯಾಗಿರುವ ಹಾಗು ಅನುಭವಿ ಡಿಪ್ಲೊಮ್ಯಾಟ್ ನಾಗಿರುವ ಹೇನ್ರಿ ಕಿಸ್ಸಿಂಜರ್ ಅವರು  ಶಿರಿಯಾ ಮತ್ತು ರಶಿಯಾದ ಒಪ್ಪಂದದ ಬಗ್ಗೆ ತನ್ನ ಸಂದೇಹ ವ್ಯಕ್ತಪಡಿಸಿದ್ದಾರೆ. ಪುತೀನಿನವರು ಹೇಳಿದಂತೆ ಕಿಸ್ಸಿಂಜರ್ ಕೂಡ ಶಿರಿಯಾ ಕೇವಲ ೯೦% ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಿ ಉಳಿದುದನ್ನು ಹಾಗೆಯೇ ಇಡಲಿಕ್ಕಿದೆಯೆಂದು ಹೇಳಿರುವರು. ಹಾಗೆಯೇ ಈ ಉಳಿದಿರುವ ಒಟ್ಟು  ರಾಸಾಯನಿಕ ಶಸ್ತ್ರಾಸ್ತ್ರಗಳು ಕೂಡ ಭವಿಷ್ಯದಲ್ಲಿ ಅಪಾಯಕಾರಿಯಾಗಲಿಕ್ಕಿದೆಯೆಂದು ಹೇಳಿರುವರು. ಆದರೆ ಇವರು ಒಂದು ಕಡೆಯಲ್ಲಿ ಶಿರಿಯಾವನ್ನು ದೂರಿದರೂ ಇನ್ನೊಂದು ಕಡೆಯಲ್ಲಿ ಕಿಸ್ಸಿಂಜರ್, ರಶಿಯಾದವರು ಶಿರಿಯಾದವರೊಡನೆ ಮಾಡಿಕೊಂಡ ಒಪ್ಪಂದವನ್ನು ನಂಬುವದು ಯು ಎಸ್ ನ ಹಿತಕ್ಕಾಗಿರುವುದೆಂದು ಆಶ್ಚರ್ಯದ ಮಾತು ಹೇಳಿರುವರು.


 Bashar al-Assad – President of Syria

ಈ ಮಧ್ಯದ ಕಾಲದಲ್ಲಿ ಅಂದರೆ ಕಳೆದ ಶುಕ್ರವಾರ ದ ಯು ಎನ್ ಸೆಕ್ಯುರಿಟಿ ಕೌಂಸಿಲ್ ಏಕಮತದಿಂದ ಅಸ್ಸಾದ್ ರೆಜಿಮ್ ದವರಿಗೆ, ಓಪಿಸಿಡಬ್ಲ್ಯೂಹೇಳಿದಂತೆ ಕೇಳಬೇಕಾದದ್ದು ಕಾನೂನುಬದ್ಧವಾಗಿದೆಂದು ರೆಜ್ಯುಲುಶನ್ ಮಾಡಿತು. ಆದರೆ ಕಳೆದ ವಾರದಲ್ಲಾದ ರಶಿಯಾ ಮತ್ತು ಪಾಶ್ಚಿಮಾತ್ಯ ಪ್ರಭುತ್ವದೊಡನಾದ ಒಪ್ಪಂದವನ್ನು ಇತ್ಯರ್ಥ್ಯಗೊಳಿಸಲು ಮಾಡಿದ ರೆಜ್ಯುಲುಶನಿನ ಪ್ರಕಾರ ಶಿರಿಯನ್ ಸರಕಾರ ಸಮ್ಮತಿಸಲು ತಪ್ಪಿದರೆ ಅದಕ್ಕೆ ಸೂಕ್ತವಾಗಿ ದಂಡಿಸುವ ಅಧಿಕಾರ ರೆಜ್ಯುಲುಶನ್ ಪ್ರಕಾರ ಸಿಗುವುದಿಲ್ಲ. ಮಧ್ಯಂತರದ ಕಾಲದಲ್ಲಿ ಶಿರಿಯಾದ ಮೇಲೆ ಜಾರಿಗೆ ತಂದ ರೆಜ್ಯುಲುಶನ್ ನಂತೆ ಶಿರಿಯಾದಲ್ಲಿದ್ದ ಯು ಎನ್ ನ ಶಸ್ತ್ರಾಸ್ತ್ರಗಳ ನಿರೀಕ್ಷಿಕರು ಒಟ್ಟು ಏಳು ಸ್ಥಳಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮಾಡಲಾಗಿರುವುದಾಗಿ ತನ್ನ ಪರೀಕ್ಷಣೆಯನ್ನು ಮಾಡಿ ತಿಳಿಸಿದರು. ಅದರಲ್ಲಿ ಶಿರಿಯಾದ ನಾಗರಿಕರ ಮೇಲೆ ೨೧ ಅಗಷ್ಟ್ ನಂತರ ಮಾಡಲಾದ ಮೂರು ಆಕ್ರಮಣಗಳ ಘಟನೆಗಳನ್ನು ಕೂಡ ತಿಳಿಸಲಾಯಿತು. ಎಲ್ಲಾ ಪಕ್ಷದವರು ಕೂಡಿ ಮಿಡಲ್ ಈಸ್ಟೀನ ಮೇಲೆ ಬಂದ ಯುದ್ಧದ ಮೋಡವನ್ನು ಸರಿಸಲು ಒಮ್ಮತವಾಗಿದ್ದರೂ ಎರಡು ಪಕ್ಷಗಳಲ್ಲಿದ್ದ ತೀಕ್ಷ್ಣ ವಿರುದ್ದ ಅಭಿಪ್ರಾಯಗಳು ಇನ್ನು ಮುಂದೆಯೂ ಉಳಿಯಲಿಕ್ಕಿದೆ.
(ಮುಂದುವರಿಯಲಿದೆ...)

Saturday 19 October 2013

ಪರಮ ಪೂಜ್ಯ ಬಾಪೂರವರು ಕೊಟ್ಟ ೧೩ ಕಲಮಿನ (ನಿರ್ದಿಷ್ಟ) ಕಾರ್ಯಕ್ರಮಗಳು

ಹನ್ನೊಂದು ವರ್ಷಗಳ ಹಿಂದೆ ಅಂದರೆ ೩ ಅಕ್ಟೋಬರ್ ೨೦೦೨ರ ದಿನದಂದು, ಪರಮ ಪೂಜ್ಯ ಬಾಪೂರವರು ಹೃದಯ ಸ್ಪರ್ಷಿಸುವ ಹಾಗು ಪ್ರೇರಿಸುವ ಭಾಷಣವನ್ನು ಮಾಡಿದ್ದಾಗ ೧೩ ಕಲಮಿನ ಕಾರ್ಯಕ್ರಮಗಳನ್ನು ಕಲ್ಪಿಸಿದ್ದರು. ಈ ಕಾರ್ಯಕ್ರಮಗಳು ಇಂದಿಗೆ ಕಾರ್ಯರತವಾಗಿದ್ದು ಪರಮಪೂಜ್ಯ ಬಾಪೂರವರ ಮಾರ್ಗದರ್ಶನದಲ್ಲಿ ಸಫಲವಾಗಿ ನಡೆಯುತ್ತಿದ್ದು ಸಾವಿರಾರು ಶ್ರದ್ಧಾವಾನರು ಸ್ವಯಂ ಪ್ರೇರಿತರಾಗಿ ಪೂರ್ಣ ಶಕ್ತಿ ಹಾಗು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹನ್ನೊಂದು ವರ್ಷಗಳು ಕಳೆದರೂ ಅದರ ಮಹತ್ವ ಹೇತುಗರ್ಭಿತವಾಗಿ ಉಳಿದು ಮುಂದೆ ಬರುವ ವರ್ಷಗಳಲ್ಲಿ ಹಾಗೆಯೇ ಸಂಗತಮತವಾಗಿ ಮುಂದುವರಿಯಲ್ಲಿಕ್ಕಿದೆ.



ಆದ್ದರಿಂದ ಇವತ್ತಿನಿಂದ ಬಾಪೂರವರು ವಿವರಿಸಿದಂತೆ ಈ ಕಾರ್ಯಕ್ರಮದ ೧೩ ಕಲಮುಗಳು ಅಂತರ್ಭೂತವಾಗಿರುವ ಒಂದು ವಿಡಿಯೋ ಸಿರೀಜನ್ನು ನಾನು ಪ್ರಾರಂಭಿಸಲ್ಲಿದ್ದೇನೆ. ಇವತ್ತು ನಾನು ಈ ಪ್ರವಚನದ ಪೀಠಿಕೆಯನ್ನು ಪ್ರಸಿದ್ದ ಮಾಡಲಿದ್ದೇನೆ. ಮುಂದಕ್ಕೆ ನಾನು ಈ ಕಾರ್ಯಕ್ರಮದಲ್ಲಿದ್ದ ೧೩ ಕಲಮಿನ ಪ್ರತಿಯೊಂದು ಕಲಮಿನ ಬಗ್ಗೆ ಪ್ರದರ್ಶಿಸಲಿದ್ದೇನೆ.

Thursday 26 September 2013

ವಿಶ್ವದ ರಹಸ್ಯ ತ್ರಿವಿಕ್ರಮ - π (Pi)

ಕಳೆದ ಹಲವು ವಾರಗಳಿಂದ ಪರಮಪೂಜ್ಯ ಬಾಪೂರವರ ಪ್ರವಚನಗಳು ಶ್ರೀ ಅನಿರುದ್ಧ ಗುರುಕ್ಷೇತ್ರಮ್ ಮಂತ್ರದಲ್ಲಿರುವ ಅಂಕುರಮಂತ್ರದ ಭಾಗದಲ್ಲಿಯ ಮೂರನೇ ಪದವಾದ  "ಓಂ" ರಾಮವರದಾಯಿನಿ ಶ್ರೀಮಹಿಷಾಸುರಮರ್ದಿನೈ ನಮ: |" ದ ಮೇಲೆ ಆಗುತ್ತಿದೆ.


ಈ ಪ್ರವಚನದಲ್ಲಿ ಬಾಪೂರವರು ನಮಗೆ ಪರಮೇಶ್ವರಿ ಸೂತ್ರ  (algorithms) ಹಾಗು ಶುಭಚಿಹ್ನೆಗಳ ಪರಿಚಯವನ್ನು ಮಾಡಿಕೊಟ್ಟರು. ಈ ಸೂತ್ರದ ಮೂಲಕ ಬಾಪೂರವರು ನಮಗೆ ಸ್ಕಂದಚಿಹ್ನೆ, ಸ್ವಸ್ತಿಕ, ಸೃಷ್ಟಿಯ ಸೂರ್ಯ ಹಾಗು ಚಂದ್ರ, ದೀಪ, ಆರತಿಯಂತಹ ಅನೇಕ algorithms ಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಹೇಳಿದರು.

ಅದರನಂತರ ಜುಲೈ ತಿಂಗಳಿನಲ್ಲಿ ಬಾಪೂರವರು  ಪ್ರವಚನವನ್ನು ಆರಂಭ ಮಾಡುವ ಮೊದಲು ನಮಗೆ ಹೇಳಿದ್ದರು, "ಇವತ್ತು ನಮಗೆ ವಿಶ್ವದ ಬಹಳ ದೊಡ್ಡ ರಹಸ್ಯವನ್ನು ನೋಡಬೇಕಾಗಿದೆ" ಮತ್ತು ಈ ಪ್ರವಚನದಲ್ಲಿ ಬಾಪೂರವರು ಪ್ರಶ್ನೆ ಕೇಳಿದ್ದರು, ಗಣಿತದಲ್ಲಿರುವ Pi (π) constant (ಸ್ಥಿರಾಂಕ) ಹೇಗೆ ನಿರ್ಮಾಣವಾಯಿತು? ಮತ್ತು ಅದರ ಉತ್ತರ ಕೊಡುವಾಗ ತಿಳಿಸಿ ಹೇಳಿದರು, Pi (π) ಈ ಸ್ಥಿರಾಂಕ ಸೃಷ್ಟಿಯಲ್ಲಿ ಎಂದೂ ಬದಲಾಯಿಸುವುದಿಲ್ಲ ಹಾಗೆಯೇ ಈ ಸ್ಥಿರಾಂಕವೆಂದರೆ ವರ್ತುಳದ ಪರೀಘ ಭಾಗಿಲೆ ವ್ಯಾಸ. ಇದನ್ನು ಹೇಳುವಾಗ ಹನುಮಂತನೊಡನೆ ಇದರ ಸಂಬಂಧ ಹೇಗಿದೆ, ಹನುಮಂತನ ಈ ವರ್ತುಳದ ಸಂಬಂಧ ಹೇಗಾಗಿರುವುದನ್ನು ವಿವರಿಸುವಾಗ ಶ್ರೀಮಾರುತಿ ಸ್ತ್ರೋತ್ರದ" ಬ್ರಹ್ಮಾಂಡಭೋವತೆ ವೇಢೆ ವಜ್ರ ಪುಚ್ಛೆ ಕರು ಶಕೆ " ಈ ಸಾಲಿನ ಉಲ್ಲೇಖ ಮಾಡಿ ತಿಳಿಸಿದರು.  ಅದರ ನಂತರ ಈ ವರ್ತುಳಾಕೃತಿಯಾದ ಬ್ರಹ್ಮಾಂಡಕ್ಕೆ ಹನುಮಂತನ ಬೀಲದ ಸುತ್ತು ಹೇಗೆ ಚಿರಕಾಲದತನಕ ಇರುವುದನ್ನು ಕೂಡ ಬಾಪೂ ಸ್ಪಷ್ಟ ಮಾಡಿದರು.

ಹಿಂದೆ ಮಾಡಿರುವ ಪ್ರವಚನದಲ್ಲಿ ಅಂದರೆ ೮ ಆಗಷ್ಟ್ ೨೦೧೩ ರ ಪ್ರವಚನದಲ್ಲಿ ಬಾಪೂರವರು Pi (π) ಸ್ಥಿರಾಂಕದ ಮುನ್ನೂರ ಅರವತ್ತು ದಶಾಂಶದ ತನಕ ಬೆಲೆಯನ್ನು ತೋರಿಸಿಕೊಟ್ಟರು. ಈ ಬೆಲೆಯನ್ನು ಐದು-ಐದರ ಭಾಗ (set) ದಲ್ಲಿ ತೋರಿಸಿ ಅದು ಐದು-ಐದರ ಸೆಟ್ಟಿನಲ್ಲಿ ಯಾಕಿರುವುದನ್ನು ವಿಶದ ಮಾಡಿದರು.

ಆದರೆ ಅನೇಕರ ತಪ್ಪು ಕಲ್ಪನೆಯಿರುವುದೇನೆಂದರೆ ೨೨/೭ ಇದು Pi (π)  ಅದರ ಸರಿಯಾದ ಬೆಲೆ (exact value) ಆಗಿರುವದು. ಆದರೆ ಅದು ಹಾಗಿರದೆ  Pi (π) ಒಂದು ಸ್ಥಿರಾಂಕವಾಗಿದೆ. ’Pi or Π is an irrational number, which means that it cannot be expressed exactly as a ratio of any two integers. Fractions such as 22/7 are commonly used as an approximation of Π; no fraction can be its exact value.’ ಗಣಿತಜ್ನರು ಇಷ್ಟರವರೆಗೆ ದಶಾಂಶ ಚಿಹ್ನೆಯ ಮುಂದೆ ಐದು ದಶಲಕ್ಷ ಅಂಕೆಯ ತನಕ Pi (π) ಅದರ ಬೆಲೆಯನ್ನು ಕಂಡುಹಿಡಿದಿದ್ದಾರೆ.

ಭಾರತೀಯ ಅಧ್ಯಾತ್ಮ ಶಾಸ್ತ್ರದಲ್ಲಿ  Pi (π) ಈ ಸಂಜ್ನೆಯನ್ನು ತ್ರಿಪುರಾರಿ ತ್ರಿವಿಕ್ರಮ ಚಿಹ್ನೆಯಿಂದ ತೋರಿಸಲಾಗುತ್ತಿದೆ ಎಂದು ಬಾಪೂರವರು ವಿಶದ ಮಾಡಿದರು. ಇದನ್ನು ಹೇಳುವಾಗ ಬಾಪೂರವರು ಮುಂದೆ ಹೇಳಿದರು, "ಈ ಬ್ರಹ್ಮಾಂಡದ ಅಂದರೆ ಆದೀಮಾತೆಯು ನಿರ್ಮಾಣ ಮಾಡಿರುವ ವಿಶ್ವದ ವಿಸ್ತಾರವು ಸಂತುಲಿತವಾಗಿದೆ. ಅದರ ಮಿತಿ ಅಂದರೆ (ಲಿಮಿಟ್) ಹನುಮಂತನಾಗಿರುವನು. ಆದ್ದರಿಂದಲೇ ಅವನು ಪ್ರಥಮಪುತ್ರ (ದತ್ತಾತ್ರೇಯ ಸ್ವರೂಪ ಶುಭಪ್ರಕಾಶ) ನಾಗಿರುವನು. ಮತ್ತು ಈ ಬ್ರಹ್ಮಾಂಡದ ವ್ಯಾಸವು ಈ ತ್ರಿವಿಕ್ರಮ (ಹರಿಹರ) ಅಂದರೆ ಮಹಾವಿಷ್ನು ಮತ್ತು ಪರಮಶಿವ ಏಕತ್ರಿತವಾಗಿರುವದು; ಶ್ರೀರಾಮ ಮತ್ತು ಹನುಮಂತ ಏಕತ್ರಿತ; ಶೌರ್ಯ ಹಾಗು ಕ್ಷಮೆ ಏಕತ್ರಿತವಾಗಿರುವಂತೆ ಇರುವದು.

೨೨/೭ ಈ ಗಣಿತಸಂಖ್ಯೆಯು  Pi (π) ನ approximation ಅಂದರೆ ಅಂದಾಜು ಹಾಕಿದ ಬೆಲೆಯಾಗಿರುವದು ಅಂದರೆ ಭೌತಿಕ ಜಗತ್ತಿನ ಸಾಮಾನ್ಯ ಗಣಿತದಲ್ಲಿ ಅದನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಲಾಗುವದು.

ಬಾಪೂರವರು ಹೇಳಿದ ಪ್ರಕಾರ ತ್ರಿವಿಕ್ರಮವು ಅನಂತನಾಗಿರುವುದರಿಂದ Pi (π) ಗಣಿತಸಂಜ್ನೆಯ exact ಬೆಲೆಯನ್ನು ತೆಗೆಯಲು ಅಸಾಧ್ಯವಾಗಿದೆ.

Friday 13 September 2013

ಯೂ ಟ್ಯೂಬ್ ವಿಡಿಯೋ ಚ್ಯಾನೆಲ್ - ಅನಿರುದ್ಧಾ ಪ್ರೇಮಸಾಗರದ ಪ್ರಸಾರಣೆ

ಇವತ್ತು ನಾವು ಅನಿರುದ್ಧ ಪ್ರೇಮಸಾಗರದ ಹೆಸರಿನಲ್ಲಿ (http://www.youtube.com/watch?v=iWnOGGfHRRQ) ಯೂ ಟ್ಯೂಬ್ ವಿಡಿಯೋ ಚ್ಯಾನೆಲಿನ ಸ್ವತಂತ್ರರಿತ್ಯವಾಗಿ ಪ್ರಸಾರಣೆಯನ್ನು ಮಾಡುತ್ತಿರುವುದನ್ನು ತಿಳಿಸಲು ನನಗೆ ಬಹಳ ಆನಂದವಾಗುತ್ತಿದೆ. ನೀವು ಕೇವಲ ಯೂ ಟ್ಯೂಬಿನ ಹೆಸರನ್ನು ಹುಡುಕಿದರೆ ಅದನ್ನು ನೀವು ನೋಡಬಹುದು. ಈ ಚ್ಯಾನೆಲಿನ ಮೂಲಕ ಮೊದಲ ಬಾರಿಗೆ ಪ್ರಕಟವಾದ ವಿಡಿಯೋಗಳನ್ನು ಕೆಳಗೆ ಕೊಡಲಾಗಿದೆ.




ಅನಿರುದ್ಧ ಪ್ರೇಮಸಾಗರದ ಈ ಚ್ಯಾನೆಲ್ ಶ್ರದ್ಧಾವಾನರರಿಂದ ಶ್ರದ್ಧಾವಾನರಿಗಾಗಿರುವುದು. ಪ್ರಾರಂಭದಲ್ಲಿ, ಎರಡು ಮೂರು ವಾರಗಳ ಅವಧಿಯಲ್ಲಿ ಅನಿರುದ್ಧಾ ಪ್ರೇಮಸಾಗರ ಚ್ಯಾನೆಲಿನಲ್ಲಿ ನಾವು ೧೫೦ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಅದರಲ್ಲಿ ಪರಮ ಪೂಜ್ಯ ಬಾಪೂರವರ ಕೆಲವಾರು ಸಂದರ್ಭಗಳಲ್ಲಿ, ಅಂದರೆ ದೊಡ್ಡ ಕಾರ್ಯಕ್ರಮಗಳಂತಹ ರಾಮನವಮಿ, ಗುರುಪೂರ್ಣಿಮೆ, ಅನಿರುದ್ಧ ಪೂರ್ಣಿಮ ಇತ್ಯಾದಿ, ಹಾಗೆಯೇ ಶ್ರದ್ಧಾವಾನರು ಆಚರಿಸುವತ್ತಿರುವ ಪಾದುಕಾ ಪೂಜನೆ, ಸಚ್ಚಿದಾನಂದ ಆನಂದೋತ್ಸವ, ಕಂಠಕೂಪ ಪಾಷಾಣ ಪೂಜೆ (೨೦೦೩) ಮತ್ತು ಧರ್ಮಚಕ್ರ ಪೂಜನೆ (೧೯೯೯) ಅದಲ್ಲದೆ ಇದರ ಮೊದಲು ಮಾಡಿರುವ ಹಲವಾರು ಕಾರ್ಯಕ್ರಮಗಳು, ಅದರಂತೆ ಅನಿರುದ್ಧ ಚಲಿಸದ ಸ್ಲೈಡ್ ಶೋಜ್, ಪಿಪಾಸದ ಅಭಂಗಗಳು,  ತನ್ನ ಮಿತ್ರರ ಹಾಗು ಶ್ರದ್ಧಾವಾನರ ಕೆಲವು ಕೌಟುಂಬಿಕ ಸಮಾರಂಭಗಳಿಗೆ ಬಾಪೂರವರು  ಬಂದು ಗೌರವಿಸಿದ್ದು ಮೊದಲಾದವುಗಳು ಇರುವವು. ಶ್ರದ್ಧಾವಾನರು ಮೇಲೆ ಹೇಳಿರುವ ದೊಡ್ಡ ಕಾರ್ಯಕ್ರಮಗಳ ಹಾಗು ಪಾದುಕಾ ಪೂಜನೆಯ ಆಚರಣೆಯ ವಿಡಿಯೋ ಫೂಟೇಜ್ ಅಥವಾ ಸ್ಲೈಡ್ ಶೋಜ್ ಅವರಲ್ಲಿದ್ದರೆ ಅದನ್ನು ನೇರವಾಗಿ aniruddhapremsagara@gmail.com ಗೆ ಕಳುಹಿಸಬಹುದು ಅಥವಾ ನೀವು ವಿಡಿಯೋಗಳನ್ನು ನಮಗೆ www.dropbox.com, Google Drive – www.google.com/drive ಅಥವಾ ಇನ್ನಿತರ ಸಂಬಂಧಿತ ಸೈಟ್ ಗಳ ಮೂಲಕ ಕಳುಹಿಸಬಹುದು. ಆದರೆ ಈ ಫೂಟೇಜಿನ ಕಾಲಾವಧಿ ಐದು ನಿಮಿಷಗಳ ಮೇಲಿರಬಾರದೆಂದು ಗಮನದಲ್ಲಿಡಬೇಕು. ಅದಾಗದಿದ್ದರೆ ಈ ವಿಡಿಯೋಗಳ ಸೀಡಿಯನ್ನು ಶ್ರೀ ಹರಿಗುರುಗ್ರಾಮದಲ್ಲಿ ಗುರುವಾರದಂದು ಅಥವಾ ಹ್ಯಾಪ್ಪಿ ಹೋಮ್ ನ ಎರಡನೆಯ ಮಾಳಿಗೆಯಲ್ಲಿಯ ಗುಣಸಂಕೀರ್ತನದ ವಿಭಾಗದಲ್ಲಿ ತಂದು ಕೊಡಬಹುದು.

Monday 26 August 2013

ಇಂಗ್ಲೀಷ್ ಭಾಷೆಯನ್ನು ಕಲಿಯಲು ನಂದಾಯಿಯವರು ಬರೆದ ಪುಸ್ತಕಾದ ಪ್ರಕಾಶನೆ



ನಂದಾಯಿಯವರು ಆತ್ಮಬಲದ ವರ್ಗದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾಗ

೨೦೧೦ ರ ಮೇ ೬ ರಂದು ’ರಾಮರಾಜ್ಯ ೨೦೨೫’ರ ಸಂಕಲ್ಪನೆಯ ಮೇಲೆ ಆದ ಪರಮಪೂಜ್ಯ ಬಾಪೂರವರ ಪ್ರವಚನವನ್ನು ಶ್ರದ್ಧಾವಾನರು ಕೇಳಿದ್ದಾರೆ. ಈ ಪ್ರವಚನದಲ್ಲಿ ಬಾಪೂರವರು ಅನೇಕವಿಧದ ವಿಷಯಗಳ ಮೇಲೆ ಮಹತ್ವಪೂರ್ಣವಾದ ಮಾತುಗಳನ್ನು ತಿಳಿಸಿರುವರು. ಅದರಲ್ಲಿ ಒಂದು ಮಹತ್ವದ ವಿಷಯವಿತ್ತು, ಅದೆಂದರೆ ’ಒಳ್ಳೆಯ ಪ್ರಕಾರದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಕಲಿಯುವದು. ಆಗ ಮಾತನಾಡುವಾಗ ಬಾಪೂರವರು ಹೇಳಿದ್ದರು,’ಇವತ್ತು ಇಂಗ್ಲೀಷ್ ಭಾಷೆಯು ಜಗತ್ತಿನ ವ್ಯವಹಾರದ ಭಾಷೆಯಾಗಿದೆ. ಮಾತೃಭಾಷೆಯ ಅಭಿಮಾನವಿರಬೇಕು, ಆದರೆ ಇಂದಿನ ಸಮಯದಲ್ಲಿ ನಮ್ಮ ಸಾಮಾಜಿಕ ಜೀವನದಲ್ಲಿ ಇಂಗ್ಲೀಷನ್ನು ಸುಧಾರಿಸುವುದು ಆವಶ್ಯಕವಾಗಿದೆ. ನಮಗೆ ವಿಶ್ವದ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ನಮಗೆ ನಿರರ್ಗಳವಾಗಿ (ತಡೆಯಿಲ್ಲದೆ) ಇಂಗ್ಲೀಷ್ ಮಾತನಾಡಲು ಬರಬೇಕು. ಅದಕ್ಕಾಗಿ ನಾವು ’ಅನಿರುದ್ದಾಜ್ ಇನ್ಸ್ಟಿಟ್ಯೂಟ್ ಆಂಡ್ ಲಿಂಗ್ವಿಸ್ಟಿಕ್ಸ್’ ಈ ಸಂಸ್ಥೆಯ ಸ್ಥಾಪನೆ ಮಾಡುತ್ತಿದ್ದೇವೆ. ಅದರ ನಂತರ ಬಾಪೂ ಹೇಳಿದ್ದರು,’ಅನೇಕ ಜನರು ಇಂಗ್ಲೀಷ್ ಮಾತನಾಡಬೇಕಾದರೆ ಮೊದಲು ತನ್ನ ಮಾತೃಭಾಷೆಯಲ್ಲಿ ಅದರ ವಿಚಾರವನ್ನು ಮಾಡುತ್ತಾರೆ ನಂತರ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಇದು ತಪ್ಪು. ಈ ತರಹ ವಿಚಾರ ಮಾಡುವುದರಲ್ಲಿ ಹಾಗು ವ್ಯಕ್ತ ಮಾಡುವಾಗ ಒಂದು ಕಂದರ ನಿರ್ಮಾಣವಾಗುವದು. ಈ ಕಂದರದಿಂದಾಗಿ ಭಾಷೆಯ ಪ್ರವಾಹ ಕುಂದುವದು. ಭಾಷೆಗೆ ಹರಿತವಿರುವುದು ಮಹತ್ವದ್ದಾಗಿರುವದು ಅದರ ನಿರರ್ಗಳತೆಯು ಮಹತ್ವದ್ದಾಗಿದೆ.

ಹಾಗೆಯೇ ಈ ಇನ್ಸ್ಟಿಟ್ಯೂಟಿನ ಪ್ರಮುಖ ಹಾಗು ಸರ್ವೇಸರ್ವ ಸ್ವತ: ’ಸೌ. ಸ್ವಪ್ನಗಂಧಾವೀರಾ ಅನಿರುದ್ಧ ಜೋಶಿ’ (ಅಂದರೆ ನಮ್ಮೆಲ್ಲರ ಪ್ರೀತಿಯ ನಂದಾಯಿ) ಇರುವರೆಂದು ಆ ಸಮಯದಲ್ಲಿ ಬಾಪೂರವರು ವ್ಯಕ್ತ ಮಾಡಿರುವರು. ನಮಗೆಲ್ಲರಿಗೆ ಗೊತ್ತಿದ್ದಂತೆ ಕಳೆದ ಅನೇಕ ವರ್ಷಗಳಿಂದ ’ಸ್ತ್ರೀಯರ ಆತ್ಮಬಲವಿಕಾಸ ವರ್ಗ’ವನ್ನು ಅವರು ನಡೆಸುತ್ತಿದ್ದು ಅದರಲ್ಲಿ ಇಂಗ್ಲೀಷ್ ಕಲಿಯುವದು ಆತ್ಮಬಲದ ಅಭ್ಯಾಸಕ್ರಮದಲ್ಲಿಯ ಒಂದು ಮಹತ್ವದ ಅಂಗವಾಗಿದೆ. ಆತ್ಮಬಲದ ವರ್ಗದಲ್ಲಿ ಪ್ರವೇಶಿರುವ ಕೆಲವು ಸ್ತ್ರೀಯರಿಗೆ ಆರಂಭದಲ್ಲಿ ಇಂಗ್ಲೀಷ್ ಭಾಷೆಯ ಗಂಧವಿರುವಿದಿಲ್ಲ. ಆದರೆ ಅಂತಹ ಸ್ತ್ರೀಯರಿಗೆ ನಂದಾಯಿಯವರು ಆರು ತಿಂಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಹಾಗು ಬರೆಯಲು ಕಲಿಸುತ್ತಾರೆ. ಇದರಿಂದಾಗಿ ಆತ್ಮಬಲದ ಕ್ಲಾಸ್ ಮಾಡಿದ ಸ್ತ್ರೀಯರು ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ಇಂಗ್ಲೀಷ್ ಭಾಷೆಯನ್ನು ಉಪಯೋಗಿಸಲು ಕಲಿಯುತ್ತಾರೆ ಹಾಗೆಯೇ ಆತ್ಮಬಲದ ಕೋರ್ಸಿನ ಮುಕ್ತಾಯದ ಸಮಯದಲ್ಲಿರುವ ಸ್ನೇಹಸಮ್ಮೇಲನದಲ್ಲಿ ಇದರಲ್ಲಿದ್ದ ಕೆಲವು ಸ್ತ್ರೀಯರು ಇಂಗ್ಲೀಷ್ ನಾಟಕದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿಕೊಳ್ಳುತ್ತಾರೆ.

ಇದನ್ನು ಅನುಸರಿಸಿ, ಸ್ವತ: ನಂದಾಯಿಯವರು ಇಂಗ್ಲೀಷ್ ಭಾಷೆಯನ್ನು ಕಲಿಯಲು ಉಪಯುಕ್ತವಾಗಲೆಂದು ಬರೆದ ಪುಸ್ತಕಗಳು ಸಂಚಯದ ಸ್ವರೂಪದಲ್ಲಿ ಬಹಳ ಬೇಗನೇ ಪ್ರಕಾಶಿತವಾಗುತ್ತಿದೆ. ಈ ಪುಸ್ತಕದ ಮೂಲಕ ಶ್ರದ್ಧಾವಾನರಿಗೆ ಇಂಗ್ಲೀಷ್ ಕಲಿಯಲು ಸುಲಭ ಹಾಗು ಸಹಜ ಮಾರ್ಗ ತೆರೆಯಲಿದೆ. ಈ ಪುಸ್ತಕವನ್ನು ನೋಡುವದು, ಓದುವದು ಹಾಗು ಉಪಯೋಗಿಸುವದು ಅಂದರೆ ಅದೊಂದು ಬಹಳ ಭಿನ್ನ ಪ್ರಕಾರದ ಆನಂದದಾಯಿಯಾದ ಅನುಭವವಾಗಲಿದೆ. ಹಾಗೆಯೇ ಬಾಪೂರವರಿಗೆ ಅಪೇಕ್ಷಿತವಾದ ರಾಮರಾಜ್ಯದ ಪ್ರವಾಸದಲ್ಲಿನ ಇದೊಂದು ಮಹತ್ವದ ಹೆಜ್ಜೆಯಾಗಿರುವುದೆಂದು ಮಾತ್ರ ನಿಶ್ಚಿತ.

Monday 5 August 2013

ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)

Recipe of Wheat Concentrate (Gavhache sattva)
ಗೋದಿಯ  ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)



೨೭ ನೇ ಜೂನ್ ೨೦೧೩ ರ ಪ್ರವಚನದಲ್ಲಿ ಬಾಪೂರವರು ವಿಶದ ಮಾಡಿದ  ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿಯನ್ನು (ರೆಸಿಪಿ) ಇಲ್ಲಿ ಕೊಡಲಾಗಿದೆ. ಗೋದಿಯನ್ನು ರಾತ್ರಿ ನೀರಿನಲ್ಲಿ ನೆನೆದಿಡಬೇಕು. ಈ ನೀರನ್ನು ಮರುದಿವಸ ತೆಗೆದುಹಾಕಿ ಆ ಗೋದಿಯನ್ನು ಪುನ: ಬೇರೆ ನೀರು ಹಾಕಿ ನೆನೆದಿಡಬೇಕು. ಮೂರನೇಯ ದಿವಸ ಈ ನೀರನ್ನು ತೆಗೆದುಹಾಕಿ ಇದೇ ಗೋದಿಯನ್ನು ನೀರಿನಲ್ಲಿ ನೆನೆದಿಡಬೇಕು. ನಾಲ್ಕನೇ ದಿವಸ ಗೋದಿಯ ನೀರನ್ನು ತೆಗೆದುಹಾಕಿದ ನಂತರ ಈ ನೆನೆದಿಟ್ಟ ಗೋದಿಯಲ್ಲಿ ಸ್ವಲ್ಪ ಬೇರೆ ನೀರು ಹಾಕಿ ಈ ಗೋದಿಯನ್ನು ರುಬ್ಬಿಕೊಳ್ಳಬೇಕು. (ಮಿಕ್ಸರಿನಲ್ಲಿ ಅಥವಾ ಕಲ್ಲಿನಲ್ಲಿ) ಈ ಪ್ರಕಾರ ರುಬ್ಬಿದ ಗೋದಿಯನ್ನು ಹಿಂಡಿ ಅದನ್ನು ಸೋಸಿಕೊಂಡು ಬಂದ ಮೆದು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ತೆಗೆದು ಅದನ್ನು ಮುಚ್ಚಿಡಬೇಕು.

ಆರೇಳು ಗಂಟೆಯ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದು ನೋಡಬೇಕು. ಗೋದಿಯ ಸತ್ವವು ಪಾತ್ರೆಯ ಬುಡದಲ್ಲಿದ್ದು ಮೇಲೆ ಕೇವಲ ನೀರು/ಸೋಸಿದ ನೀರು ಕಾಣುವದು. ಮೇಲೆ ಬಂದ ಸೋಸಿದ ನೀರು ತೆಗೆದುಹಾಕಬೇಕು. ಈ ಪ್ರಕಾರ ಸಿದ್ದವಾದ ಗೋದಿಯ ಸತ್ವವನ್ನು ಒಂದು ಸೀಸೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿಡಬೇಕು.

ಪರ್ಯಾಯ ೧:
ಸ್ಥೂಲ ವ್ಯಕ್ಯಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ 
೨) ನೀರು - ನಾಲ್ಕು ವಾಟಿ
೩) ಹಿಂಗು - ಒಂದು ಚಿಕ್ಕ ಚಮಚೆ
೪) ಉಪ್ಪು (ರುಚಿಗನುಸಾರವಾಗಿ)
೫) ಜೀರಿಗೆ ಪುಡಿ (ರುಚಿಗನುಸಾರವಾಗಿ)
ಮೇಲೆ ಹೇಳಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಚಿಕ್ಕ (ಗ್ಯಾಸಿನ) ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣವನ್ನು ಸತತವಾಗಿ ತಿರಿಗಿಸುತ್ತಿರುವ ಆವಶ್ಯಕತೆ ಇದೆ, ಯಾಕೆಂದರೆ ಇದರ ಮುದ್ದೆಯಾಗಿ ಗಟ್ಟಿ ಆಗುವುದಿಲ್ಲ.

ಪರ್ಯಾಯ ೨ :-
ಕೃಶ (ತೆಳು) ವ್ಯಕ್ತಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ)
೨) ತುಪ್ಪ - ಎರಡು ಚಮಚೆ
೩) ಹಾಲು - ಒಂದು ವಾಟಿ
೪) ಸಕ್ಕರೆ - ಎರಡು ಚಮಚೆ
೫) ಏಲಕ್ಕಿ ಪುಡಿ (ರುಚಿಗನುಸಾರವಾಗಿ)
ಒಂದು ಪಾತ್ರೆಯಲ್ಲಿ ಎರಡು ಚಮಚೆ ತುಪ್ಪ ಹಾಕಿದ ನಂತರ ಇದರಲ್ಲಿ ಗೋದಿಯ ಸತ್ವವನ್ನು ಹಾಕಬೇಕು. ಆನಂತರ ಅದರಲ್ಲಿ ಒಂದು ವಾಟಿಯಷ್ಟು ಹಾಲು ಮತ್ತು ಎರಡು ಚಮಚೆ ಸಕ್ಕರೆ ಹಾಕಿ ಅದನ್ನು ಚಿಕ್ಕ ಗ್ಯಾಸಿನಲ್ಲಿ ಕುದಿಸಬೇಕು. ಏಲಕ್ಕಿ ಹುಡಿ (ಬೇಕಿದ್ದರೆ) ಹಾಕಿ ಅದನ್ನು ಸತತ ತಿರಿಗಿಸುತ್ತಿರಬೇಕು. ನುಣ್ಣಗಾದ ಮಿಶ್ರಣದಲ್ಲಿ ಮಿನುಗು ಬಂದ ಮೇಲೆ ಅದು ಚೆನ್ನಾಗಿ ಬೆಂದಿದೆಯೆಂದು ತಿಳಿದು ಗ್ಯಾಸ್ ಆರಿಸಬೇಕು.

ಗೋದಿಯ ಸತ್ವ ದಿನಕ್ಕೊಮ್ಮೆ ಒಂದು ಸಲವಾದರು ನಿತ್ಯ ಬಳಸುವ ವಾಟಿಯಷ್ಟು ತಿನ್ನಬೇಕು.

(ಟಿಪ್ಪಣೆ: ಈ ರೆಸಿಪಿಯ ವ್ಹಿಡಿಯೊ ಬೇಗನೇ ಕೊಡಲಾಗುವದು)

Saturday 29 June 2013

ಧಾರೀ ದೇವಿಯ (ಧಾರಾ ಮಾತಾ) ಪ್ರಕೋಪ

ಚಾರ್ (ನಾಲ್ಕು) ಧಾಮಿನ ಯಾತ್ರೆಯನ್ನು ಮಾಡುವ ಭಾವಿಕರ ಸಂರಕ್ಷಣೆಯನ್ನು ಧಾರೀದೇವಿಯು ಮಾಡುತ್ತಾಳೆಂದು ವಿಶ್ವಾಸವಿದೆ. ಆದ್ದರಿಂದಲೇ ಉತ್ತರಾಖಂಡದ ಶ್ರೀನಗರಿನ ಅಲಕನಂದಾ ನದಿಯ ದಡದಲ್ಲಿರುವ ಧಾರೀದೇವಿಯ ಮಂದಿರವನ್ನು ಸರ್ಕಾರವು ಬೀಳಿಸಬಾರದೆಂದು ಕಳೆದ ಎರಡು ವರ್ಷಗಳಿಂದ ಕೇಳಲಾಗುತ್ತಿತ್ತು. ಅಲಕನಂದಾ ನದಿಯ ಪ್ರವಾಹವನ್ನು ಧಾರೀದೇವಿಯು ನಿಯಂತ್ರಿತ ಮಾಡುವಳು ಮತ್ತು ಆ ನಿಯಂತ್ರಣದ ಕಾರಣದಿಂದಾಗಿ ಅಲಕಾನಂದಾ ನದಿಯ ಸ್ವರೂಪ ಸೌಮ್ಯವಾಗಿರುವದೆಂಬ ಅಲ್ಲಿಯ ಸ್ಥಾನಿಕ ಜನತೆಯರ ವಿಶ್ವಾಸವಿತ್ತು. ಆದ್ದರಿಂದಲೇ ಸ್ಥಾನಿಕ ಧಾರ್ಮಿಕ ಸಂಘಟನೆಯಿಂದ ಸರ್ವಸಾಮಾನ್ಯ ಜನರತನಕ ಎಲ್ಲರೂ ಧಾರೀದೇವಿಯ ಮಂದಿರದ ಕುರಿತಾಗಿ ಸರ್ಕಾರವು ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಾರದೆಂದು ವಿನಂತಿಸುತ್ತಿತ್ತು. ಆದರೆ ವಿಕಾಸಕ್ಕಾಗಿ ವಿದ್ಯುತ್ತಿನ ಆವಶ್ಯಕತೆವಿರುವ ಕಾರಣವನ್ನು ಮುಂದೆ ಮಾಡಿ ಸರ್ಕಾರವು ಈ ಕೋರಿಕೆಯ ಕಡೆ ದುರ್ಲಕ್ಷ ಮಾಡಿತು.  ಜೂನ್ ತಿಂಗಳಿನ ೧೬ ರಂದು ಸಾಯಂಕಾಲ ಆರು ಗಂಟೆಗೆ ಧಾರೀದೇವಿಯ ಮಂದಿರವನ್ನು ಬೀಳಿಸಲಾಯಿತು. ಮಂದಿರದಲ್ಲಿಯ ಧಾರೀದೇವಿಯ ಮೂರ್ತಿಯನ್ನು ಅಲ್ಲಿಂದ ಸ್ಥಲಾಂತರಿಸಲಾಯಿತು.

ಇದೇ ವೇಳೆಗೆ ಕೇದಾರ್ ನಾಥಿನಲ್ಲಿ ಮೋಡಸಿಡಿಯಿತು ಮತ್ತು ಅದರನಂತರ ಎರಡು ಗಂಟೆಗಳಲ್ಲಿ ಅತಿವೃಷ್ಟಿಯಾಗಿ ಗೊಂದಲ ಹರಡಿಸಿತು. ಚಾರ್ ಧಾಮಿನ ಯಾತ್ರೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಭಾವಿಕರು ಈ ಸ್ಥಳದಲ್ಲಿ ಸಿಲುಕಿ ಬಿದ್ದರು. ಅತಿಯಾಗಿ ಸುರಿಯುವ ಮಳೆ, ಭೂಸ್ಖಲನದಿಂದ ಅಲ್ಲಿ ಸಿಲುಕಿರುವ ಭಾವಿಕರನ್ನು ಸುಖರೂಪವಾಗಿ ಹೊರಗೆ ತೆಗೆಯುವುದು ತೊಡಕಿನದ್ದಾಯಿತು. ಮತ್ತು ಈ ಆಪತ್ತಿನ ತೀವ್ರತೆಯು ಹೆಚ್ಚುತ್ತ ಹೋಯಿತು. ಈ ಪ್ರಕಾರದ ಆಪತ್ತಿಗಳು ಬಂದಾಗ ಅದಕ್ಕೆ ಯಾರು ಹೊಣೆಗಾರರು ಇದನ್ನು ಹುಡುಕುವ ಹೊಣೆಗಾರಿಕೆಯನ್ನು ಪ್ರಸಾರಮಾಧ್ಯಮವು ತಾವಾಗಿಯೇ ಸ್ವೀಕರಿಸುತ್ತದೆ. ಉತ್ತರಾಖಂಡದ ಆಪತ್ತಿಯ ನಂತರವೂ ಹೀಗೆಯೇ ಆಯಿತು. ಬಲಿಹೋದವರ ಸಂಖ್ಯೆ ಮತ್ತು ಅಲ್ಲಿ ಸಿಲುಕಿರುವ ಭಾವಿಕರ ಬಗ್ಗೆ ಮಾಹಿತಿಯನ್ನು ಕೊಡುವಾಗ , ಪರಿಸರದ ವಿಚಾರ ಮಾಡದೆ ತಿಳಿಗೇಡಿಯವರಂತೆ ಸಿದ್ಧ ಮಾಡಿದ ಯೋಜನೆಗಳು ಹಾಗು ಪ್ರಕಲ್ಪದ ಬಗ್ಗೆ ವೃತ್ತಾಂತವನ್ನು ಕೊಟ್ಟು ಪ್ರಸಾರಮಾಧ್ಯಮಗಳು  ಸರಕಾರವನ್ನು ಚುಚ್ಚ ತೊಡಗಿತು. ಆದರೆ ಇದನ್ನೆಲ್ಲ ಸ್ವೀಕರಿಸಿ ಕೂಡ, ಸ್ಥಾನಿಕ ಜನರು ಧಾರೀದೇವಿಯ ಮಂದಿರದಕಡೆ ಬೆರಳು ತೋರಿಸಿ ತನ್ನ ಅಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದರು.

ಕಳೆದ ೮೦೦ ವರ್ಷಗಳಿಂದ ಧಾರೀದೇವಿಯ ಮಂದಿರವು ಇದೇ ಸ್ಥಳದಲ್ಲಿತ್ತು. ಇದು ಪ್ರಾಚೀನ ಸಿದ್ಧಪೀಠವಾಗಿದೆಯೆಂದು ತಿಳಿಯಲಾಗಿದೆ. ಧಾರೀದೇವಿಯು ಕಾಲಿಮಾತೆಯ ಇನ್ನೊಂದು ರೂಪವೆಂದು ಧಾರಣೆಯಿದೆ. ಈ ಸಿದ್ಧಪೀಠದ ಬಗ್ಗೆ ಮಾಹಿತಿಯು ಶ್ರೀಮದ್ ಭಾಗವತದಲ್ಲಿ ಕೂಡ ನಮೂದಿಸಲಾಗಿದೆ. ಉತ್ತರಾಖಂಡದ ಶ್ರೀನಗರದ ಹತ್ತಿರ (ಜಮ್ಮು-ಕಾಶ್ಮೀರಿನ ಶ್ರೀನಗರವಲ್ಲ) ಕಾಲಿಯಾಸೂರವೆಂಬ ಸ್ಥಳದಲ್ಲಿರುವ ಈ ಧಾರೀದೇವಿಯ ಮಂದಿರವು ಸ್ಥಾನಿಕರ ಶೃದ್ಧೆಯ ಸ್ಥಾನವಾಗಿದೆ. ಧಾರೀದೇವಿಯ ಮೂರ್ತಿಯು ಬಹಳ  ಉಗ್ರವಾಗಿದ್ದರೂ ಆ ತಾಯಿಯು ಸ್ವೀಕರಸಿದ ಉಗ್ರರೂಪವು ನಮ್ಮೆಲ್ಲರ ರಕ್ಷಣೆಗಾಗಿಯೇ ಇರುವುದೆಂದು ಪಾರಂಪರಿಕ ತಿಳುವಳಿಕೆಯಾಗಿದೆ. ಇದರ ಕುರಿತಾಗಿ ಐತಿಹಾಸಿಕ ಕಥೆಗಳನ್ನು ಕೂಡ ಹೇಳಲಾಗುವದು.

೧೮೮೨ ರಲ್ಲಿ ಒಬ್ಬ ತಲೆತಿರುಕ ರಾಜನು ಈ ಮಂದಿರದೊಡನೆ ಹೀಗೆಯೇ ಕುಚೋದ್ಯ ಮಾಡಲು ಪ್ರಯತ್ನಿಸಿದಾಗ, ಆ ಸಮಯದಲ್ಲೂ ಕೂಡ ಭಯಂಕರ ನೈಸರ್ಗಿಕ ಸಂಕಟಗಳು ಉದ್ಭವಿಸಿತ್ತೆಂದು ಹೇಳಲಾಗುತ್ತದೆ. ಆದ್ದರಿಂದ ರಕ್ಷಣಕರ್ತ್ಯೆ ಧಾರೀದೇವಿಯ ಮಂದಿರದ ಬಗ್ಗೆ ಅಲ್ಲಿಯ ಸ್ಥಾನಿಕರ ಭಾವನೆಯು ಬಹಳ  ತೀವ್ರವಾಗಿರುವದು ಆಶ್ಚರ್ಯದಾಯಕದಲ್ಲ.

ಈ ಮಂದಿರವನ್ನು ಸರಕಾರವು ಬೀಳಿಸಿದರೆ, ಅದರ ಭಯಂಕರ ಪರಿಣಾಮವನ್ನು ಮಾತ್ರ ಎಲ್ಲರಿಗೂ ಸಹಿಸಬೇಕಾಗುವದು ಇದು ಅಲ್ಲಿಯ ಸ್ಥಾನಿಕರಿಗೆ ಮನದಟ್ಟಾಗಿತ್ತು. ಮತ್ತು  ಆದದ್ದು ಹಾಗೆಯೇ. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಕೇವಲ ಕೆಲವೇ ಗಂಟೆಗಳ ಕಾಲದೊಳಗೆ ಪ್ರಳಯಂಕಾರಿ ವೃಷ್ಟಿಯಾಗುತ್ತದೆ. ಗಂಗೆಯ ಉಪನದಿಯಾದ ಅಲಕನಂದೆಯು ತನ್ನ ರೌದ್ರಭೀಷಣ ರೂಪವನ್ನು ಪ್ರಕಟ ಮಾಡುತ್ತದೆ., ಇದು ಯೋಗಾಯೋಗದ ವಿಷಯವೇ ಅಲ್ಲವೆಂದು ಶ್ರದ್ಧಾವಾನರು ನಂಬುತ್ತಾರೆ. ಸ್ಥಾನಿಕ ಮಾಧ್ಯಮದವರು ಜನರ ಈ ಮಾತನ್ನು ಪ್ರಸಿದ್ಧ ಮಾಡಿದ್ದಾರೆ, ಇಲ್ಲಿಯ ಧಾರ್ಮಿಕ ಸಂಘಟನೆಗಳು ಮತ್ತು ಧರ್ಮಾಚಾರ್ಯರು ಕೂಡ ಧಾರೀದೇವಿಯ ಮಂದಿರವನ್ನು ಬೀಳಿಸಿರುವ ಸರ್ಕಾರವನ್ನು ಕಠೋರ ಶಬ್ದಗಳಲ್ಲಿ ದೂಷಿಸಿದ್ದಾರೆ. ಉತ್ತರಾಖಂಡದಲ್ಲಿ ಪರಿಸರದ ವಿಚಾರ ಮಾಡದೆ ಕೇಂದ್ರ ಸರ್ಕಾರವು ನೂರಾರು ಪ್ರಕಲ್ಪಗಳನ್ನು ಮಾಡಲು ಒಪ್ಪಿಗೆಯನ್ನು ಕೊಟ್ಟಿದೆ. ಧಾರೀದೇವಿಯ ಮಂದಿರವನ್ನು ಬೀಳಿಸಿ ಅಲಕನಂದಾ ನದಿಯ ಮೇಲೆ ಅಣೆಕಟ್ಟನ್ನು ಕಟ್ಟುವ ಯೋಜನೆಯು ಈ ಅನೇಕ ಪ್ರಕಲ್ಪದ ಒಂದು ಭಾಗವಾಗಿದೆ.

ವಿಕಾಸ ಪ್ರಕಲ್ಪಗಳಿಗೆ ಸ್ಥಾನಿಕರ ವಿರೋಧಗಳು ಆಗುತ್ತಲೇ ಇರುವವು. ಧಾರೀದೇವಿಯ  ಮಂದಿರವನ್ನು ಬೀಳಿಸಿ ಅಣೆಕಟ್ಟನ್ನು ಕಟ್ಟುವ ಯೋಜನೆಗೆ ಕೂಡ ಇದೇ ಪ್ರಕಾರದ ವಿರೋಧವಾಗಿರಬೇಕೆಂದು ಸರ್ಕಾರವು ಎಣಿಸಿಕೊಂಡಿತ್ತು. ಆದ್ದರಿಂದ ಈ ಮಂದಿರದೊಡನೆ ಜೋಡಿದ್ದ ಶ್ರದ್ಧಾಭಾವನೆಯ ವಿಚಾರವನ್ನು ಮಾಡುವ ಅಗತ್ಯ ಸರ್ಕಾರಕ್ಕೆ ತೋರಲಿಲ್ಲ. ಮಾತ್ರ ಯಾವ ಶ್ರದ್ಧೆಯಿಂದ  ಈ ಚಾರ್ ಧಾಮಿನ ಯಾತ್ರೆಯನ್ನು ಮಾಡುವರು , ಆ ಶ್ರದ್ಧಾಭಾವನೆಯ ಮೇಲೆಯೇ ಈ ನಮ್ಮ ಪ್ರಕಲ್ಪವು ಆಘಾತವನ್ನು ಮಾಡುತ್ತಿದೆ ಇದನ್ನು ಪ್ರಕಲ್ಪ ಯೋಜಿಸುವವರು ಮರೆತು ಹೋದರು. ಅದರ ಭಯಂಕರ ವೆಚ್ಚವನ್ನು ನಾವು ಹಿಂದಿರುಗಿ ಕೊಡಬೇಕಾಗುತ್ತಿದೆಯೆಂದು ಸ್ಥಾನಿಕರು ಹೇಳುತ್ತಿದ್ದಾರೆ. ಮತ್ತು ವಿಶೇಷವೆಂದರೆ ಧರ್ಮಶ್ರದ್ಧೆಯ ವಿಷಯದಲ್ಲಿ ಬಹಳ ದೊಡ್ಡ ಆಸ್ಥೆವಿಲ್ಲದ ಪರಿಸರವಾದಿಗಳು ಕೂಡ ಅಣೆಕಟ್ಟಿನ ವಿರೋಧ ಮಾಡುತ್ತಿದ್ದರು. ಅಂದರೆ ಶ್ರದ್ಧಾಭಾವ ಮತ್ತು ಪರಿಸರ ಇವೆರಡರ ಅನಾದರ ಮಾಡಿ ಸರ್ಕಾರವು ಅಲಕನಂದೆಗೆ ಅಣೆಕಟ್ಟು ಕಟ್ಟುವ ನಿರ್ಣಯವನ್ನು ತೆಗೆದುಕೊಂಡಿತು.

ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಈ ಆಪತ್ತಿಯು ಬರಲಿಲ್ಲ, ಆದರೆ ಈ ಆಪತ್ತಿಯ ಕಾರಣ ಪರಿಸರವಾಗಿದೆ ಎಂದು ತಿಳಿಯುತ್ತಿರುವವರು ಕೂಡ ೮೦೦ ವರ್ಷದ ಪುರಾತನದ ದೇವಸ್ಥಾನವನ್ನು ಸಮಭೂಮಿ ಮಾಡುವಾಗ, ಸರ್ಕಾರ ತೋರಿಸಿದ ಅಜಾಗರೂಕತೆ ನಂಬಲು ಅಸಾಧ್ಯ. ಈ ಆಪತ್ತಿ ಬಂದಿರದಿರದಿದ್ದರೆ ಕೂಡ ಸರ್ಕಾರವು ಜನತೆಯವರ ಭಾವನೆಯ ಬಗ್ಗೆ ಇಷ್ಟು ಅಸಂವೇದನೆಶೀಲವಾಗಿರುವದು ಸರ್ವಥಾ ಅಯೋಗ್ಯವೇ ಆಗಿದೆ. ಆದರೆ ವಿದ್ಯುತ್ತಿನ ಪ್ರಕಲ್ಪಕದ ಹೆಸರಿನಲ್ಲಿ ’ದೇವಭೂಮಿ’ಯಾಗಿರುವ ಹಿಮಾಲಯದಲ್ಲಿ ಮನಸ್ಸಿಗೆ ಬಂದಂತೆ ಮಾಡುವುದನ್ನು ನೋಡಿದರೆ , ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಭೂಮಿಯಲ್ಲಿ ಶ್ರದ್ಧೆಯ ಜೊತೆಗೆ ಪರಿಸರವನ್ನು ಕೂಡ ದುರ್ಲಕ್ಷಿಸುತ್ತಿದೆ ಎಂದು ತೋರಿ ಬರುವದು.

ಗಂಗೆಯ ಪ್ರವಾಹದ ಮೇಲೆ ಕಟ್ಟಲ್ಪಟ್ಟ ಅಣೆಕಟ್ಟು ವಿಧ್ಯುತ್ತಿನ ನಿರ್ಮಾಣಕ್ಕಾಗಿ ಆವಶ್ಯಕವೆಂದು ಸರ್ಕಾರದ ಕಡೆಯಿಂದ ಹೇಳಲಾಗುತ್ತಿದೆ. ಆದರೆ ಇದರದ್ದು ಗಂಗೆಯ ಪ್ರವಾಹದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಪ್ರವಾಹದ ಮೇಲೆ ಪರಿಣಾಮವಾಗುವುದರಿಂದ ಗಂಗೆಯು ಹೆಚ್ಚು ಪ್ರದೂಷಿತವಾಗುತ್ತಿದೆ ಇದನ್ನು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲ. ಇದು ಕೇವಲ ಶ್ರದ್ಧೆಗೆ ಸೀಮಿತವಾದ ವಿಷಯವಾಗಿರದೆ ಹಿಮಾಲಯದ ನದಿಗಳ ಮೇಲೆ ಭಾರತೀಯವರ ಜೀವನ ಅವಲಂಬಿಸಿದೆ ಇದನ್ನು ಸರ್ಕಾರಕ್ಕೆ ಮನಗಾಣಿಸಿಕೊಡಬೇಕಾಗಿದೆ. ಪರಿಸರದ ನಾಶದಬಗ್ಗೆ ಚಿಂತೆ ವ್ಯಕ್ತ ಮಾಡುವಾಗ , ಭಾರತದ ಧರ್ಮಸಂಸಕೃತಿಯಿಂದ ಅರ್ಥಕಾರಣದವರೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ್ದಾಗಿರುವ ನದಿಗಳ ಕುರಿತಾಗಿ ಸರ್ಕಾರದ ಯಂತ್ರಣೆಯು ಇಷ್ಟು ಅಜಾಗರೂಕತೆಯನ್ನು ಹೇಗೆ ತೋರಿಸಬಲ್ಲದು ಇಂತಹ ಪ್ರಶ್ನೆಯನ್ನು ಉತ್ತರಾಖಂಡದಲ್ಲಿ ಈ ಆಪತ್ತಿಯ ಕಾರಣದಿಂದಾಗಿ ಕೇಳಲಾಗುತ್ತಿದೆ. ಸಂಪೂರ್ಣ ಲೋಕಶಾಹಿವಾದಿಯ ಮಾಧ್ಯಮವೆನಿಸಿಕೊಂಡ ಇಂಟರ್ ನೆಟ್ಟಿನ ಮೇಲೆ ಬರುತ್ತಿರುವ ಪ್ರತಿಕ್ರಿಯೆಗಳು ಸರ್ಕಾರದ ಈ ಅಜಾಗರೂಕತೆಯ ಮೇಲೆ ಆಕ್ರಮಣವನ್ನು ಮಾಡುತ್ತಿದೆ.

ಸೋಶಲ್ ನೆಟ್ ವರ್ಕಿಂಗ್ ಸಂಕೇತ ಸ್ಥಳಗಳಲ್ಲಿ ಕೂಡ ಸರ್ಕಾರವು ತೋರಿಸುತ್ತಿರುವ ಅಸಂವೇದನೆಶೀಲತೆಯ ಮೇಲೆ ಬಹಳ ಪ್ರಖರವಾದ ಮತಪ್ರದರ್ಶನಗಳು ಆಗುತ್ತಿವೆ. ಇದರಕಡೆ ರಾಷ್ಟ್ರೀಯ ಮಾಧ್ಯಮಗಳಿಗೂ ಕೂಡ  ಗಮನ ಸೆಳೆಯಬೇಕಾಯಿತು. ಈ ಪ್ರಳಯವು ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಅಯಿತೇನು? ಇಂತಹ ಪ್ರಶ್ನಾರ್ಥಕ ಶೀರ್ಷಿಕೆಯನ್ನು ಕೊಟ್ಟು, ಇದರ ಕುರಿತಾಗಿ ವೃತ್ತವನ್ನು ಪ್ರಸಿದ್ಧ ಮಾಡಲಾಗುತ್ತಿದೆ. ಮತ್ತು ಅದೇ ಸಮಯದಲ್ಲಿ ಗಂಗಾ ನದಿಯನ್ನು ರಾಷ್ಟೀಯಕರಣ ಮಾಡಬೇಕೆಂಬ ಕೇಳಿಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಲ್ಲಿ ಮಾಡಲಾಗುತ್ತಿದೆ. ಭಾರತೀಯ ಸಂಸಕೃತಿಯಲ್ಲಿ ಅಸಾಧಾರಣ ಸ್ಥಾನವಿರುವ ಹಿಮಾಲಯದ ನದಿಗಳ ಮತ್ತು ಅದರಿಂದ ಪರಿಸರದ ಸಂರಕ್ಷಣೆ ಮಾಡುವ ಕೋರಿಕೆ ಕೇವಲ ಧರ್ಮದ ಮೇಲೆ ಶ್ರದ್ಧೆವಿರುವ ಜನರಲ್ಲದೆ ಪರಿಸರದ ರಕ್ಷಣೆಗಾಗಿ ಹೋರಾಡುವವರು ಕೂಡ ಅಷ್ಟೇ ಆಸ್ಥೆಯಿಂದ ಮಾಡುತ್ತಿದ್ದಾರೆ. ಆದ್ದರಿಂದ ಯಾರಿಗೂ ಕೂಡ ಇದರೆಡೆ ದುರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ .

ಜನರ ಭಾವನೆಯ ಕಡೆ ದುರ್ಲಕ್ಷ್ಯ ಮಾಡಿ ಯಾವ ಪ್ರಕಾರದ ನಿರ್ಣಯವನ್ನು ಕೂಡ ತೆಗೆದುಕೊಳ್ಳಬಹುದು ಮತ್ತು ಅದರ ಪರಿಣಾಮದಿಂದ ತನ್ನನ್ನು ಬೇರೆ ಮಾಡಿಡಬಹುದು ಈ ಭ್ರಮೆಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಕೂಡದು. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಆದ ವಿನಾಶ, ಬಲಿಹೋದ ಸಂಬಂಧಿಕರಿಗೆ ಸಹಾಯನಿಧಿ ಘೋಷಣೆ ಮಾಡಿ ಅಥವಾ ಹೊಸ ಯೋಜನೆಗಳನ್ನು ಕೈಕೊಳ್ಳುವ ಘೋಷಣೆಮಾಡುವುದರಿಂದ ಕಳೆದದ್ದನ್ನು ಪಡೆಯಲು ಸಾಧ್ಯವಿಲ್ಲ.

ಬೇರೆಯವರ ಶ್ರದ್ಧೆಯ ಮೇಲೆ ಹಲ್ಲೆ ಮಾಡುವಾಗ ,ಅದರ ಮೇಲೆ ಯಾವ ಮಾರ್ಗದಿಂದಲಾದರೂ ಪ್ರತಿಕ್ರಿಯೆ ಬರುವುದು , ಇದನ್ನು ಸರ್ಕಾರ ಧ್ಯಾನ ಕೊಟ್ಟರೆ ಒಳ್ಳೆದು. ಹತೋಟಿಯಲ್ಲಿರದ ನದಿಗಳನ್ನು ತಡೆಗಟ್ಟಲು ಅಥವಾ ಕೋಪಿತಗೊಂಡ ನಿಸರ್ಗವನ್ನು ನಿರ್ಬಂಧಿಸುವ ಉಪಾಯಗಳು ಇಂದೂ ಕೂಡ ವಿಜ್ನಾನ ತಂತ್ರಜ್ನಾನಿಗಳಿಗೆ ಸಿಗಲಿಲ್ಲ. ಆದ್ದರಿಂದ ವಿನಾಶಕ್ಕೆ ಆಮಂತ್ರಣವನ್ನು ಕೊಡುವ ’ಅಧಾರ್ಮಿಕ ವಿಕಾಸ’ದ ಪುರಸ್ಕಾರ ಮಾಡುವುದನ್ನು ಸರ್ಕಾರ ಇಲ್ಲಿಯೇ ನಿಲ್ಲಿಸಬೇಕು. ಕೋಪ ದೈವಿವಿದೆಯೇ ಅಥವಾ ನೈಸರ್ಗಿಕ ಇದರ ಅಲೋಚನೆ ಮಾಡುವುದಕ್ಕಿಂತ ,ತನ್ನ ತಪ್ಪನ್ನು ಸ್ವೀಕರಿಸಿ ಅದನ್ನು ತಿದ್ದಲು ಸರ್ಕಾರ ಮುಂದೆಹೆಜ್ಜೆ ಹಾಕಬೇಕು. ಹೀಗೆ ಮಾಡಿದ್ದಲ್ಲಿ ಸರ್ಕಾರದ  ಸಂವೇದನಶೀಲತೆಯು ಇನ್ನೂ ಉಳಿದಿದೆಯೆಂದು ಸಿದ್ಧವಾಗುವದು. ಮತ್ತು ಸ್ವಲ್ಪ ಪ್ರಮಾಣದಲ್ಲಿಯಾದರೂ ವಿಶ್ವಾಸವಿಡುವಂತಹದಾಗುವದು. ಇಲ್ಲದಿದ್ದರೆ ಭಯಾನಕ ಸಂಕಟಗಳ ಮಾಲೆಗಳಿಗೆ ಎದುರು ಹೋಗುವಾಗ , ಸರ್ಕಾರಕ್ಕೆ ಒಂದೇ ಸಮಯದಲ್ಲಿ ದೈವಿ, ನೈಸರ್ಗಿಕ ಹಾಗು ಜನರ ಅವಕೃಪೆಯನ್ನು ಎದುರಿಸಬೇಕಾಗುವದು.



- ಸಿದ್ಧಾರ್ಥ ನಾಯೀಕ್

Thursday 20 June 2013

ಯುರೋಪಿನ ಆರ್ಥಿಕಪರಿಸ್ಥಿತಿ ( European Economy )

ಕಳೆದ ವಾರದಲ್ಲಿ, ರೆಡ್ ಕ್ರಾಸ್ ನ ಪ್ರಧಾನ ಕಾರ್ಯದರ್ಶಿಯರಾದ (Bekele Geleta) ಬೆಕೆಲೇ ಗೆಲೇಟಾರವರು ಯುರೋಪಿಯನ್ ದೇಶಗಳಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನವು ಅಶಾಂತಿಯನ್ನು ಉದ್ದೀಪನಗೊಳಿಸುವ ಕಾರಣವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಮತ್ತು ಈ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಇದು ಒಮ್ಮೆಲೇ ಬಂಡಾಯಕ್ಕೆ ಕಾರಣವಾಗಬಹುದು. ಜರ್ಮನಿಯ ಹಣಕಾಸು ಸಚಿವರಾದ Wolfgang Schaeuble, ಇದೇ ವಿಷಯಗಳ ಬಗ್ಗೆ ಮಾತನಾಡುತ್ತಿರುವಾಗ,ನಿರುದ್ಯೋಗ ಸಮಸ್ಯೆಯನ್ನು ಕೇಂದ್ರೀಕೃತವಾಗಿ ಪರಿಹರಿಸದೇ ಹೋದರೆ, ಯುರೋಪ್ ವಿಭಜನೆ ಆಗುವ ಸಾಧ್ಯತೆವಿದೆ  ಎಚ್ಚರಿಸಿದ್ದಾರೆ. 



ಯುರೋಪಿನ ಅತ್ಯಂತ ಸುಸ್ಥಾಪಿತ ಮತ್ತು ಆರ್ಥಿಕಸ್ಥಿರತೆಯುಳ್ಳ ದೇಶಗಳಲ್ಲಿ ಒಂದಾಗಿರುವ ಸ್ವೀಡನ್  ರಾಜಧಾನಿ ನಗರ  ಸ್ಟೊಖೋಲ್ಮ್ , ಏಕಾಏಕಿ ಆರಂಭಗೊಂಡ  ಭಾರಿ ಹಿಂಸಾಚಾರಗಳ ಸಾಕ್ಷಿಯಾಗಿದೆ. ನಿಜವಾಗಿಯೂ, ಸ್ವೀಡಿಷ್ ರಾಜಧಾನಿಯಾದ  ಸ್ಟೊಖೋಲ್ಮ್ ನಗರ ಯುರೋಪಿನ ಒಂದು ಆರ್ಥಿಕವಾಗಿ ಅತ್ಯಂತ  ಸಮೃದ್ಧ ನಗರವೆಂದು ಪರಿಗಣಿಸಲಾಗುತ್ತದೆ. ಈ ಮೊದಲು, ಸ್ವೀಡನ್ ಇಂತಹ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರಗಳನ್ನು ಎಂದಿಗೂ ಕಂಡಿರಲಿಲ್ಲ. ಈ ಹಿಂಸಾಚಾರಗಳು ಪರಿಣಾಮಕಾರಿಯಾಗಿ ಲೋಕಪ್ರಸಿದ್ಧವಾದ ಯುರೋಪಿನ ಸಮೃದ್ಧಿಯ ಗುಳ್ಳೆಯು ಕಾಲಾಂತರವಾಗಿ ಸಿಡಿದು ಬಂದಿದೆ ಎಂಬ ವಾಸ್ತವತೆಯನ್ನು ಎತ್ತಿತೋರಿಸುತ್ತವೆ.

ಯುರೋಪಿನ ಬಹುತೇಕ ದೇಶಗಳು ತಮ್ಮ GDPs ಗಳ ಗಮನಾರ್ಹವಾದ ಕಡಿತದ ಜೊತೆಯಲ್ಲಿ ಸಾಲ ಹೆಚ್ಚುತ್ತಿರುವ ಪರ್ವತವನ್ನು ಎದುರಿಸುತ್ತಿವೆ. ಈ ನಡುವೆ, ಸ್ವೀಡನ್ ಒಂದು ಒಳ್ಳೆಯ ಆರ್ಥಿಕ ಬೆಳವಣಿಗೆಯ ದರವನ್ನು ಕಾಪಾಡಿಕೊಳ್ಳಲು ನಿರ್ವಹಿಸುತ್ತಿದ್ದ ಕಾರಣ, ಇಂದು ಸ್ವೀಡನ್ ಆರ್ಥಿಕವಾಗಿ ಜರ್ಮನಿ ಮತ್ತು ಫ್ರಾನ್ಸ್ ಗಿಂತ ಅಧಿಕ ಪ್ರಬಲವಾಗಿದೆ ಎಂದು ಪರಿಗಣಿಸಲಾಗುತ್ತದೆ. ಸ್ವೀಡನ್ ಆರ್ಥಿಕಸ್ಥಿರತೆಯುಳ್ಳ ದೇಶವಾಗಿದ್ದರೂ ಕೂಡ ಇಂತಹ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಆರಂಭಗೊಂಡಿರುವುದು ಎಲ್ಲರಿಗೂ ಗೊಂದಲಕ್ಕೀಡಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆಯ ಸನ್ನಿವೇಶಗಳಲ್ಲಿ, ಆರ್ಥಿಕ ಹಿಂಜರಿತದ ನಂತರದ ಪರಿಸ್ಥಿತಿಗಳು ಈ ಗಲಭೆಗೆ ಕಾರಣವೆನ್ನಲಾಗಿದೆ.  ಸ್ಟೊಖೋಲ್ಮ್ ಹಾಗೂ ಪಕ್ಕದ ಪ್ರದೇಶಗಳು ವಲಸಿಗರ ಭಾರಿ ಒಳಹರಿವಿನ ಸಾಕ್ಷಿಯಾಗಿದ್ದಾರೆ. ಒಂದು ಉತ್ತಮ ಭವಿಷ್ಯದ ಸ್ವಪ್ನವನ್ನು ಕಾಣುತ್ತಾ ಜನರು ತಂಡಗಳಲ್ಲಿ ಉದ್ಯೋಗಗಳನ್ನು ಹುಡುಕಿಕೊಂಡು ಬಂದಿರುವರು, ಆದರೆ ಇನ್ನೂ ಈ ಮಾತು ಅವರಿಗೆ ದೂರದ ವಾಸ್ತವಗಳಾಗಿ ಉಳಿದಿದೆ. ಉದ್ಯೋಗಗಳ ಅವಕಾಶಗಳು ತೀವ್ರವಾಗಿ ಕಡಿಮೆಯಾಗಿವೆ ಮತ್ತು ಯುವಕ ಹಾಗು ಶಿಕ್ಷಿತ ವರ್ಗದವರಿಗೂ ಕೂಡ ಉದ್ಯೋಗ ಪಡೆಯುವುದು ಕಠಿಣವಾಗಿದೆ. ಯುರೋಪಿನಲ್ಲೆಲ್ಲಾ ಇದೇ ರೀತಿಯ ಪರಿಸ್ಥಿತಿಯು ಎದುರಿಸುತ್ತಿರುವುದು ಕಂಡು ಬರುತ್ತಿದೆ. ಯುರೋಪಿನ ಅತ್ಯಾಧಿಕ ನಿರುದ್ಯೋಗ ದರ   ಗ್ರೀಸ್ ದಲ್ಲಿ 64.2% ಗಗನಕ್ಕೆರಿದ್ದು ಕಂಡುಬಂದಿರುವುದು ಮತ್ತು ದೇಶದ ಕೆಲವು ಭಾಗಗಳಲ್ಲಿ ಈ ದರ 75% ಗೆ ತಲಪುವ ಸಾಧ್ಯತೆ ಇದೆ. ಸ್ಪೇನ್ ಕೂಡ ಈ ವಿಪರೀತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅಲ್ಲಿ ಯುವ ನಿರುದ್ಯೋಗ ದರವು ದಿಗ್ಭ್ರಮೆಗೊಳಿಸುವ 56.4% ಗೆ ಮುಟ್ಟಿದೆ. ಪೋರ್ಚುಗಲ್ ನಲ್ಲಿ ಕೂಡ ಯುವ ನಿರುದ್ಯೋಗ ದರ 42.5%ರಷ್ಟು ಹೆಚ್ಚಿನ ಮಟದಲ್ಲಿದ್ದು ಈ ಸಮಸ್ಯೆಯಲ್ಲಿ ಹಿಂದಿಲ್ಲ. ಅದೇ ಸಮಯದಲ್ಲಿ, ಇತರ EU ಸದಸ್ಯರು ಉದಾಹರಣೆಗೆ. ಸೈಪ್ರಸ್, ಲಾಟ್ವಿಯಾ, ಐರ್ಲೆಂಡ್, ಲಿಥುವೇನಿಯಾ ಮತ್ತು ಎಸ್ಟೋನಿಯಾ ಕೂಡ ಹೆಚ್ಚಿನ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ದರಗಳನ್ನು ಕಾಣುತ್ತಿದೆ. ಅಲ್ಲದೇ EU ದಲ್ಲಿ ಒ೦ದನೇ ಮೂರು ಅ೦ಶ, 15 ರಿ೦ದ 24 ವಯಸ್ಸಿನ ನಡುವಿನ ವ್ಯಕ್ತಿಗಳಿಗೆ ಬಡತನದ ಅಪಾಯವಿರುವುದು.

ಅದರ ಜೊತೆಯಲ್ಲಿ, ಕಳೆದ ಎರಡು ವರ್ಷಗಳಲ್ಲಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಸಹ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಮೇಲಿನ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡಿದ್ದಾರೆ, ಅದರಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ ಕಡಿತ ಒಳಗೊಂಡಿದೆ. ಈ ಕ್ರಮವು ಯುವಕರಲ್ಲಿ ನಿರಾಶೆ ಮತ್ತು ಖಿನ್ನತೆಯನ್ನು ಇನ್ನಷ್ಟು ಕೆರಳಿಸಿರುವುದನ್ನು ಸ್ಟಾಖೋಲ್ಮ್ ಗಲಭೆಯ ರೂಪದಲ್ಲಿ ಅಭಿವ್ಯಕ್ತವಾಗಿರುವುದನ್ನು ಕಂಡುಕೊಂಡಿದೆ. 

ಇದೇ ರೀತಿಯ ಗಲಭೆಗಳು ವರ್ಷ ೨೦೦೧ ರಲ್ಲಿ ಯುನೈಟೆಡ್ ಕಿಂಗ್ಡಮ್ ಬೀದಿಗಳಲ್ಲಿ ಕಂಡಿರುವುದು. ಲಂಡನ್ ಐದು ದಿನಗಳವರೆಗೂ ಜ್ವಾಲೆಯಲ್ಲಿ ಸುಡುತ್ತಿತ್ತು. ಈ ಹಿಂಸೆ ಮತ್ತು ಕ್ಷೋಭೆಯು ಶೀಘ್ರದಲ್ಲೇ ತನ್ನ ನೆರೆಹೊರೆಯ ಮತ್ತು ಪಕ್ಕದ ಪಟ್ಟಣಗಳಲ್ಲಿ ಹರಡಿತು. ಅಂಗಡಿಗಳು ಕೊಳ್ಳೆಗೊಳಗಾಗಿದ್ದವು ಮತ್ತು ಪೊಲೀಸ್ ಅಸಹಾಯಕರಾಗಿರುವುದು ಕಂಡುಬರುತ್ತಿತ್ತು. ಈ ಗಲಭೆಗಳು ಕೂಡ ಬೆಳೆಯುತ್ತಿರುವ ನಿರುದ್ಯೋಗ, ಬಡತನ, ವಲಸೆಗಳ ಒಳಹರಿವು ಮತ್ತು ವಿಸ್ತರಿಸುತ್ತಿರುವ ಶ್ರೀಮಂತ- ಬಡವರ ವಿಭಜನೆ ಮುಂತಾದ ಹೋಲುವ ಆರ್ಥಿಕ ಸಮಸ್ಯೆಗಳಲ್ಲಿ ತಮ್ಮ ಬೇರುಗಳನ್ನು ಹೊಂದಿರುವುದು ಎಂದು  ಕಂಡುಬಂದಿತ್ತು.




ಸ್ಟೊಖೋಲ್ಮದಲ್ಲಿ ನಡೆದ ಹಿಂಸಾಚಾರಗಳು ಯುರೋಪಿನಲ್ಲಿ ಪರಿಸ್ಥಿತಿಗಳು ೨೦೧೧ ರಿಂದ ಸುಧಾರಿಸಿರುವುದಿಲ್ಲ ಎಂಬುವ ವಾಸ್ತವತೆಯನ್ನು ಕೇವಲ ದರ್ಶಿಸದೇ, ಬದಲಿಗೆ ಯುರೋಜೋನ್ನ ಒಡಕಿ ಹೋಗುವ ಸಾಧ್ಯತೆಯನ್ನು ಸೂಚಿಸಿರುವುದರಿಂದ ಅಂತಿಮವಾಗಿ ಇದು ಯುರೋಪಿನ ಒಡಕಿ ಹೋಗುವ ಕಾರಣವಾಗುತ್ತದೆ.
ಯೋಜಿತವಾದ ಆರ್ಥಿಕ ಪರಿಸ್ಥಿತಿಗಳ ಸುಧಾರಣೆ ಮತ್ತು ಕಡಿತವಾಗುತ್ತಿದ್ದ ಹಿಂಜರಿಕೆಯ ಚಿತ್ರ, ವಾಸ್ತವದಲ್ಲಿ ನಿಜವಾದ ದರಕಿಂತ ಬಹಳ ಕೆಳಗಿರುವುದು.  

ತಮ್ಮ exchequers ಮೇಲೆ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಬಹುತೇಕ ರಾಷ್ಟ್ರಗಳಲ್ಲಿ ಅನೇಕ ಕಟ್ಟುನಿಟ್ಟಾದ ಯೋಜನೆಗಳನ್ನು ಆರಂಭಿಸಿದ್ದಾರೆ.  ಉದ್ಯೋಗದ ನಷ್ಟ ಬೆಳೆಯುತ್ತಿರುವ ಅಸಹಾಯಕತೆಯ ಕಾರಣವಾಗಿ ಕುಟುಂಬ ಖರ್ಚಿನ ಶ್ರಮದಾಯಕತೆ ಮತ್ತು ಪುಷ್ಟಿಯು, ಜೊತೆಯಲ್ಲಿ ಸರ್ಕಾರಿ ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಗಮನಾರ್ಹವಾದ ಕಡಿತ ಸೇರಿಕೊಂಡು ಯುರೋಪಿನಲ್ಲೆಲ್ಲಾ ಅಸಮಾಧಾನತೆಯು ಹರಡಿರುವುದು ಕಾಣಿಸಿಕೊಳ್ಳುತ್ತಿದೆ.
ಇತ್ತೀಚಿನ ಪೂರ್ವದಲ್ಲಿ ಗ್ರೀಸ್, ಪೋರ್ಚುಗಲ್, ಇಟಲಿ, ಐರ್ಲೆಂಡ್ ಮತ್ತು ಸ್ಪೇನ್ ರಾಷ್ಟ್ರಗಳು ಸ್ಪಷ್ಟವಾಗಿ ಸಾಮಾಜಿಕ ವೆಚ್ಚದಲ್ಲಿ ಕಡಿತದ ವಿರುದ್ಧ ಈ ಪ್ರಸಿದ್ಧ ಅಸಮಾಧಾನತೆಯ ಸಾಕ್ಷಿಯಾಗಿದ್ದರು. ಆದರೂ, ಈ ಅಸಮಾಧಾನತೆ ಕೂಡ ಜರ್ಮನಿಯಂತಹ ಆರ್ಥಿಕ ಸ್ಥಿರತೆಯುಳ್ಳ ರಾಷ್ಟ್ರದಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ.




ವರ್ಷ ೨೦೧೧ ರಲ್ಲಿ, ಅರಬ್ ರಾಷ್ಟ್ರಗಳಲ್ಲಿ ಕ್ರಾಂತಿಯ ಜ್ವಾಲೆ ಅವರಿಸಿದ್ದ ಸಮಯದಲ್ಲಿ ಅಮೇರಿಕಾ ಮತ್ತು ಯುರೋಪಿ ಬೀದಿಗಳಲ್ಲಿ "Occupy" ಚಳವಳಿ ದಿಗ್ಭ್ರಮೆಗೊಳಿಸುತಿತ್ತು.ಈ ಚಳವಳಿ ಬಂಡವಾಳಶಾಹಿ ಉದ್ಯಮಿಗಳ ಆಸಕ್ತಿಗಳನ್ನು ಮಾತ್ರ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಸರ್ಕಾರಗಳ ವಿರುದ್ಧ  ಗುರಿಮಾಡಲಾಗಿದ ಸಂದರ್ಭದಲ್ಲಿ  ಅಸಂಖ್ಯ ಜನರು ಬೀದಿಗಿಳಿದು ವಿರೋಧ ಪ್ರದರ್ಶಿಸಿದರು. ವಿಶ್ವದಾದ್ಯಂತ ಅನೇಕ ಪ್ರಮುಖ ನಗರಗಳು ಈ ಚಳವಳಿಯ ಸಾಕ್ಷಿಯಾಗಿದ್ದರು. ಸುಮಾರು ಒಂದು ವರ್ಷದಿಂದ ಯುರೋಪ್ನಲ್ಲಿ "Blockupy" ಹೆಸರಿನಲ್ಲಿ ಇದೇ ರೀತಿಯ ಚಳವಳಿ ಅಭಿವೃದ್ಧಿ ಹೊಂದುತ್ತಿರುವುದು, ಈಗ ಪರಿಸ್ಥಿತಿ ಅತ್ಯಂತ ವಿರುದ್ಧವಾಗಿ ಕಾಣುತ್ತದೆ ಕಾರಣ ಯುರೋಪಿನ ಬಂಡವಾಳಶಾಹಿ ಯೋಜನೆಗಳಿಂದ ಲಾಭ ಮತ್ತು ಅಭಿವೃದ್ಧಿ ಪಡೆಯುತ್ತಿರುವ ರಾಷ್ಟ್ರಗಳು ಈಗ ವಾಸ್ತವದಲ್ಲಿ ಅದೇ ವಿರೋಧದಲ್ಲಿ ಕ್ರಾಂತಿ ಎದುರಿಸುತ್ತಿವೆ. ಯುರೋಪ್ ಮತ್ತು ಆರ್ಥಿಕ ಸ್ಥಿರತೆಯುಳ್ಳ ಜರ್ಮನಿ ಕೂಡ ಈ ಪ್ರತಿಭಟನೆಯ ಮೂಲಭೂಮಿಯಾಗಿದೆ ಎಂದು ಗಮನಿಸುವುದು ಮುಖ್ಯವಾದ ವಿಷಯ. ವಿವಿಧ ಯುರೋಪಿಯನ್ ಸರ್ಕಾಗಳ ಮೇಲೆ ಯುರೋಪಿಯನ್ ಯೂನಿಯನ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಹೇರಿದ ಕಟ್ಟುನಿಟ್ಟಿನ ಕ್ರಮಗಳು ವಿರುದ್ಧವಾಗಿ ಈ ಚಳವಳಿ ನಡೆದಿದೆ. ಕಾರಣ, ಈ ಸಂಸ್ಥೆಗಳ ಮೂಲಕ ಅವರಿಗೆ  bailouts (ವಿಮೋಚನೆಗಳು) ವಿತರಿಸಲಾಗಿದೆ. ಈ ಬಿಕ್ಕಟ್ಟುಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿರುವ ಕಾರಣ ವಿವಿಧ ಯುರೋಪಿಯನ್ ದೇಶಗಳಲ್ಲಿ ತಮ್ಮ ಸ್ವಾತಂತ್ರ್ಯಕ್ಕಾಗಿ ಎದುರುನೋಡುತ್ತಿರುವ ಅನೇಕ ಆರ್ಥಿಕವಾಗಿ ಸಮೃದ್ಧ ಪ್ರದೇಶಗಳು ಮಾಡಲಾಗಿದ ಬೇಡಿಕೆ. ಈ ಪ್ರದೇಶಗಳ ಪಟ್ಟಿ ಬಹಳ ಉದ್ದವಾಗಿದೆ ಮತ್ತು ಅವುಗಳಲ್ಲಿ ಇಟಲಿ ನಲ್ಲಿ ವೆನೆಟೊ ಹಾಗು ಲೊಂಬಾರ್ಡಿ ಪ್ರದೇಶಗಳು, ಯುನೈಟೆಡ್ ಕಿಂಗ್ಡಮ್ ಭಾಗವಾದ ಸ್ಕಾಟ್ಲೆಂಡ್, ಸ್ಪೇನ್ ನಲ್ಲಿ ಕಟಾಲೋನಿಯಾ, ಬೆಲ್ಜಿಯಂ ನಲ್ಲಿ ಫ್ಲಾಂಡರ್ಸ್, ಫ್ರಾನ್ಸ್ ನಲ್ಲಿ ಕೊರ್ಸಿಕಾ, ಮುಂತಾದವು. ಈ ಪ್ರದೇಶಗಳು ಸಮೃದ್ಧವಾಗಿದ್ದರಿಂದ ತಮ್ಮ ರಾಷ್ಟ್ರೀಯ GDPs ಮತ್ತು ತೆರಿಗೆ ಸಂಗ್ರಹಣೆಗಳಿಗೆ  ಗರಿಷ್ಠ ಕೊಡುಗೆಯನ್ನು ನೀಡುತ್ತಿದ್ದಾರೆ, ಆದರೆ ಇದಕ್ಕೆ ಪ್ರತಿಯಾಗಿ ಅವರು ಪಡೆಯುತ್ತಿರುವ ಲಾಭ, ಸೌಲಭ್ಯಗಳು ಮತ್ತು ಅಭಿವೃದ್ಧಿಯ ಯೋಜನೆಗಳು ತೀರಾ ಕೆಟ್ಟದಾಗಿವೆ. ಈ ಅಸಮಾನತೆಯು ಈಗ ಸ್ವಾತಂತ್ರ್ಯ ಅಬ್ಬರಿಸುವ ಬೇಡಿಕೆಗಳಲ್ಲಿ ರೂಪಾಂತರಿಸಿಕೊಂಡು ಈ ಪ್ರದೇಶಗಳಲ್ಲಿ ಒಂದು ದೀರ್ಘಾವಧಿಯ ಅತೃಪ್ತಿಯನ್ನು ಉದ್ದೀಪನಗೊಳಿಸಲಾಗಿದೆ. ಆದ್ದರಿಂದ, ಸಂಕ್ಷಿಪ್ತದಲ್ಲಿ, ಯುರೋಪಿನ ಆರ್ಥಿಕ ಅವನತಿ ಕೇವಲ ಯುರೋಜೋನ್ನ ವಿಘಟನೆಗೊಳಿಸುವ ಪರಿಣಾಮವಾಗದೇ, ವಿವಿಧ ಪ್ರದೇಶಗಳ ಮತ್ತು ಹಲವು ಯುರೋಪಿಯನ್ ರಾಷ್ಟ್ರಗಳ ಪ್ರಾಂತಗಳ ಬೇರ್ಪಡಿಯ ಪರಿಣಾಮವಾಗಿಸುವುದು.





ಅಮೇರಿಕನ್ ಡಾಲರ್ ಈಗಾಗಲೇ ಅಸ್ಥಿರ ಮಾರ್ಪಟ್ಟಿದ ಸಮಯದಲ್ಲಿ, ಯುರೋದ ಭವಿಷ್ಯ ಕೂಡ ಅನಿಶ್ಚಿತವೆಂದು ಕಂಡುಬರುತ್ತಿದೆ. ನಿರುದ್ಯೋಗ ಮತ್ತು ಬಡತನಗಳ ಭಾರೀ ಏರಿಕೆಯ ಜೊತೆಯಲ್ಲಿ ಯುರೋಪಿನ ಆರ್ಥಿಕ ಸ್ಥಿತಿ ಇಳಿಕೆಯಾಗುತ್ತಿರುವ ಬೆಳವಣಿಗೆಯ ದರಗಳು ಸೇರಿಕೊಂಡು ಮತ್ತೊಂದು ಕುಸಿತ ಆರಂಭವಾಗುವ ಸಂಭಾವನೆಯನ್ನು ತೋರಿಸುತ್ತಿದೆ ಎಂದು ಖಚಿತವಾಗಿ ಹೇಳಬಹುದು, ಆದ್ದರಿಂದ ಕೇವಲ ಯುರೋಜೋನ್ನಲ್ಲದೇ ಸಂಪೂರ್ಣ ಯುರೋಪ್ ಮುಳುಗಿ ಹೋಗುವ ಪರಿಣಾಮವಾಗಬಹುವುದು. ಈ ಘಟನೆಗಳ ಹಿನ್ನೆಲೆಯ ವಿರುದ್ಧವಾಗಿ ಅಮೇರಿಕನ್ ಡಾಲರ್ ವಿರುದ್ಧ ಭಾರತೀಯ ರುಪಾಯಿಯ ಭಾರೀ ಕುಸಿತ ಕಂಡು ಬಂದಿದೆ ಮತ್ತು ಇಂದಿರುವ ಮಾಹಿತಿ ಪ್ರಕಾರ ಅಮೇರಿಕನ್ ಡಾಲರ್ ವಿರುದ್ಧ ರುಪಾಯಿ ದರ 57.14 ಆಗಿದ್ದು, ಈವರೆಗಿನ ಅತ್ಯಂತ ಕಡಿಮೆ ದರಕ್ಕೆ ಇಳಿದಿರುವುದು ಗಮನಿಸಬೇಕಾಗಿದೆ.  


                                                                   

Monday 4 March 2013

ನಾನು ಅನಿರುದ್ಧನಿದ್ದೇನೆ


ತನ್ನ ಐವತ್ತನೇಯ ಜನ್ಮದಿವಸದ ಅವಸರದಂದು ಪ್ರಕಾಶಿತವಾಗುವ ದೈನಿಕದ ವಿಶೇಷ ಆವೃತ್ತಿಯ ಅಗ್ರಲೇಖ ಹಾಗು ತನ್ನದೇ ವಿಷಯದಲ್ಲಿ ಬರೆಯುವ, ಬಹುಶಃ ನಾನು ಏಕಮೇವ ಕಾರ್ಯಕಾರೀ ಸಂಪಾದಕನಾಗಿರಬೇಕು. ನನ್ನ ಮಾಯೀ ನನ್ನ ಬಾಲ್ಯದಿಂದಲೂ ಅನೇಕವೇಳೆ, "ಇವನು ಏನು ಮಾಡುವನೊ, ಯಾವತ್ತು ತಿಳಿಯುವುದಿಲ್ಲ" ಯೆಂದು ಹೇಳುತ್ತಿದ್ದಳು.  ಆದರೆ ನನ್ನ ತಾಯೀ ನನಗೆ "ಚಕ್ರಮಾದಿತ್ಯ ಚಮತ್ಕಾರ" ಅನ್ನುತಿದ್ದಳು. ಬಹುಶಃ ನನ್ನ ಬಾಲ್ಯಕಾಲದ ಆ ವಿಚಿತ್ರ ಸ್ವಭಾವದ ವಿಕಾಸ ಸದಾ ಆಗುತ್ತಿರಬೇಕು. ಪ್ರತಿಯೊಬ್ಬನಿಗೂ ಶಾಲೆಯ ಶಿಕ್ಷಣ ಮುಗಿಸಿದ ನಂತರ ಒಂದು ವೇಳೆ ಯಾವುದೇ ಮಗ್ಗಿ ಮರೆತರೂ ಸಹ "ನಾನೊಂದಲೆ ನಾನು ರಿಂದ ಹಿಡಿದು ನಾನ್ಹತ್ಲೇ ನಾನು"  ಈ ಮಗ್ಗಿಯು ಸಹಜವಾಗಿ ಬರುತ್ತದೆ ಕಾರಣ ಈ "ಅಹಂ" ಹತ್ತು ದಿಕ್ಕುಗಳಲ್ಲಿ ಮನಸ್ಸಿನ ಕುದುರೆಯ ಮೇಲೆರಿಸಿ ಬೇಕಾಗಿರುವಾಗ ಬೇಕಾದಂತೆ  ಬಳಸಬಲ್ಲನು. ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು, ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ, ನನಗೆ ಇದು ಬೇಕು ಮತ್ತು ನನಗೆ ಅದು ಬೇಡಾ, ನಾನು ಇದನ್ನು ಮಾಡಿರುವೆನು ಮತ್ತು ನಾನು ಅದನ್ನು ಮಾಡಿರುವೆನು, ಹೀಗೆ ಅನೇಕ ರೂಪಗಳಲ್ಲಿ ಪ್ರತಿಯೊಬ್ಬನ ಈ "ಅಹಂ" ಜೀವನಪೂರ್ತಿ ಆಟಾಡವಾಡುತಿರುವದು. ಈ ಅನಿರುದ್ಧನಾದರು ಸಣ್ಣ ಮಕ್ಕಳ "ಧಾಂಗಡಧಿಂಗಾ" ಶಿಬಿರದ ಪ್ರಬಲ ಸಮರ್ಥಕನಾಗಿರುವೆನು.  ಹೀಗಿರುವಾಗ ಈ ಅನಿರುದ್ಧನ "ಅಹಂ" ಶಾಂತವಾಗಿ ಕೂಡಲೂ ಸಾಧ್ಯವೇ? 


ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು - ನಾನು ಹೇಗಿರುವೆನು ಅದು ಕೇವಲ ನನಗೆ ತಿಳಿದಿರುವುದು. ಆದರೆ ನಾನು ಹೇಗೆ ಇರುವುದಿಲ್ಲವೆಂಬುವುದು ಮಾತ್ರ ನನಗೆ ಗೊತ್ತಿಲ್ಲ. ನಾನು ಹೇಗಿರುವೆನು? ಅದು ನನ್ನ ಆ ಸನ್ನಿವೇಶದಲ್ಲಿ ಅಸ್ತಿತ್ವವಾಗಿದ್ದ ಆ ಮಾನವನನ್ನು ಅವಲಂಬಿಸಿರುವುದಿಲ್ಲ, ಆ ಪರಿಸ್ಥಿತಿಮೇಲೆ ಸಹ ಅವಲಂಬಿತವಾಗಿಲ್ಲ. ಪಕ್ಕದ ಮನುಷ್ಯನು ಮತ್ತು ಪರಿಸ್ಥಿತಿಯು ಯಾವುದೇ ಪ್ರಕಾರದಾಗಿರಲಿ, ನಾನು ಮಾತ್ರ ಹಾಗೆಯೇ ಇರುವೆನು ಕಾರಣ ನಾನು ಸದಾ ವರ್ತಮಾನಕಾಲದಲ್ಲಿಯೇ ಸಂಚರಿಸುವೆನು ಮತ್ತು ವಾಸ್ತವತೆಯ ಅರಿವನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ. ಭೂತಕಾಲದ ಅರಿವು ಹಾಗು ಸ್ಮೃತಿ ವರ್ತಮಾನಕಾಲದಲ್ಲಿ ಅಧಿಕಾಧಿಕ ಜಾಗರೂಕತೆಯಾಗಿರಲು ಮತ್ತು ಭವಿಷ್ಯಕಾಲದ ಮುನ್ಸೊಚನೆಯು ವರ್ತಮಾನಕಾಲದಲ್ಲಿ ಎಚ್ಚರಿಕೆಯಿಂದಿರಲು ಮಾತ್ರ, ಇದು ನನ್ನ ವೃತ್ತಿ.

ನಾನು ಒಳ್ಳೆಯವನು ಅಥವಾ ಕೆಟ್ಟವನು- ಇದನ್ನು ತೀರ್ಮಾನಿಸುವ ಅಧಿಕಾರವನ್ನು ಸಂಪೂರ್ಣವಾಗಿ ನಾನು ಇಡೀ ಜಗತ್ತಿಗೆ ಕೊಟ್ಟಿರುವೆನು ಕಾರಣ ಇತರ ಯಾರೇ  ಆಗಲಿ ನನ್ನನ್ನು ಏನೇ ಅಂದರು ಅದಕ್ಕೆ ನಾನು ಗಮನ ನೀಡುವುದಿಲ್ಲ. ಕೇವಲ ನನ್ನ ದತ್ತಗುರು ಹಾಗು ನನ್ನ ಗಾಯತ್ರಿಮಾತೆಯವರಿಗೆ ಇಷ್ಟಪಡುವ ರೀತಿಯಲ್ಲಿ ಇರಬೇಕು ಎಂಬುವುದೇ ನನ್ನ ಜೀವನದ ಏಕಮೇವ ಉದ್ದೇಶವಿದೆ ಮತ್ತು ಅವರದೇ ವಾತ್ಸಲ್ಯದಿಂದ ಅವರು ಬಯಸಿದಂತೆ ನಾನು ರೂಪಗೊಳ್ಳುವೆನು.   

ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ - ನಾನು ಹೇಗೆ, ಎಲ್ಲಿ ಮತ್ತು ಯಾವಾಗ ಇರುವುದಿಲ್ಲವೆಂಬುದು ಮಾತ್ರ ನನಗೆ ನಿಜವಾಗ್ಲೂ ಗೊತ್ತಿಲ್ಲ ಆದರೆ ನಾನು ಯಾವುದರಲ್ಲಿ ಇಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಮತ್ತು ಇದುವೇ ನನ್ನ ಪ್ರತಿಯೊಂದು ಹಾದಿಯ ಪ್ರಕಾಶ.     

ನನಗೆ ಇದು ಬೇಕು ಮತ್ತು ನನಗೆ ಅದು ಬೇಡ - ನನಗೆ ಭಕ್ತಕಾರಣ ಬೇಕು ಮತ್ತು ರಾಜಕಾರಣ ಬೇಡಾ, ನನಗೆ ಸೇವೆಯನ್ನು ಸಲ್ಲಿಸುವುದು ಬೇಕು ಆದರೆ ಯಾವುದೇ  ಸ್ಥಾನ ಬೇಡ, ನನಗೆ ಮಿತ್ರರ ಪ್ರೀತಿಯ ಸಿಂಹಾಸನ ಬೇಕು ಆದರೆ ಆಳ್ವಿಕೆ ಬೇಡ, ನನಗೆ ಅಹಿಂಸೆ ಬೇಕು ಆದರೆ ದುರ್ಬಲತೆ ಬೇಡ, ನನಗೆ ಸರ್ವಸಮರ್ಥತೆ ಬೇಕು ಆದರೆ ಅತ್ಯಾಚಾರ ಬೇಡ, ಬಲ ಬೇಕು ಆದರೆ ಹಿಂಸೆಯು ಬೇಡ, ನಾನು ಪರಮೇಶ್ವರನ ಪ್ರತ್ಯೇಕ ಭಕ್ತನ ದಾಸ್ಯತ್ವ ಸ್ವೀಕರಿಸಲು ಉತ್ಸುಕನಾಗಿರುವೆನು ಆದರೆ ದಾಂಭಿಕ ಮೋಸಗಾರಿಕೆ ಮತ್ತು ಮೂಢನಂಬಿಕೆಗಳ ನಾಯಕತ್ವ ಬೇಡ.   

ಅನೇಕರಿಗೆ ನಾನು ಯಾರಿಗೂ ಭೇಟಿಯಾಗಲು ಹೋಗುದಿಲ್ಲವೆಂದು ಕೋಪ ಬರುತ್ತದೆ ಆದರೆ ನನಗೆ ಯಾರಿಂದಲೂ ಏನು ಸ್ವೀಕರಿಸುವುದಿರುವುದಿಲ್ಲ  ಹಾಗೆಯೇ ಯಾರಿಗೂ ಏನು ನೀಡುವುದಿರುವುದಿಲ್ಲ. ಆಗ ಯಾರಿಗೂ ಭೇಟಿಯಾಗುವ ಪ್ರಶ್ನೆ ಎಲ್ಲಿ ಉದ್ಭವಿಸುತದೆ? ನಾನು ನನ್ನ ಮಿತ್ರರಿಗೆ ಮಾತ್ರ ಬೇಟಿಯಾಗುವೆನು ಕಾರಣ "ಆಪ್ತಸಂಬಂಧ" ಅಂದರೆ ಲೇವಾ-ದೇವಿವಲ್ಲದ ಏಕಮೇವ ಒಲುಮೆಯ ಭೇಟಿಯೇ ಕಾರಣವಾಗಿರುತ್ತದೆ, ಆದ್ದರಿಂದ ನಾನು ಬಡ್ಡಿರಹಿತ ಭೇಟಿಯನ್ನು ಬಯಸುತ್ತೆನೆ, ಆದರೆ ಲೇಣಿ-ದೇಣಿ ಅಥವಾ ವಿಚಾರಮಂಥನದ ಭೇಟಿಯು ಬಯಸುವುದಿಲ್ಲ.

ನನಗೆ ಜ್ಞಾನ ಬೇಡ ಅಂದರೆ ಜ್ಞಾನದ ಕಾರ್ಯಶೂನ್ಯ ಶಬ್ದಗಳು ಮತ್ತು ಪ್ರದರ್ಶನ ಬೇಡವಾಗುವುದು ಆದರೆ ನನಗೆ ಪರಿಶ್ರಮಪೂರ್ವಕ ಜ್ಞಾನದ ಸೃಜನಾತ್ಮಕ ಕಾರ್ಯಕ್ಕಾಗಿ ನಿಸ್ವಾರ್ಥ ಬಳಕೆಯು ಅಗತ್ಯವಾಗಿದೆ.

ನಾನು ಇದನ್ನು ಮಾಡಿದೆನು ಮತ್ತು ನಾನು ಅದನ್ನು ಮಾಡಿದೆನು - "ನಾನು ಏನೂ ಮಾಡುವುದಿಲ್ಲ, ಅಥವಾ ನಾನು ಯಾವತ್ತಿಗೂ ಎಲ್ಲವನ್ನು ಮಾಡುತ್ತಿರುವುದಿಲ್ಲ" ಇದು ನನ್ನ ಅಂತಿಮ ಶ್ರದ್ಧೆಯಿರುವುದು.  ಆಗ ಈ ನನ್ನ "ಅಹಂ" ಸ್ವಸ್ಥವಾಗಿ ಕುಳಿತು ನಿಷ್ಕ್ರಿಯವಿರುವುದೇ? ಅದಂತು ಸಾಧ್ಯವೇ ಇಲ್ಲ. ಈ ಅನಿರುದ್ಧನ "ಅಹಂ" ಆ "ಅಹಂ ಇಲ್ಲದ" ಪ್ರತ್ಯೇಕ ಶ್ರದ್ಧಾವಾನನ ಜೀವನಪ್ರವಾಹವನ್ನು ಗಮನಿಸುತ್ತಿರುವನು ಮತ್ತು ಆ ಪ್ರವಾಹದ ವೇಗ ನಿಲ್ಲುವುದಿಲ್ಲ ಹಾಗು ಪಾತ್ರ ಒಣಗುವುದಿಲ್ಲ, ಎಂಬುದರ ಕಾಳಜಿವಹಿಸಲು  "ಅಹಂ ಇಲ್ಲದ" ಉಗಮ ಅವನದೇ ಪ್ರೇಮದಿಂದ ಶ್ರದ್ಧಾವಾನನ ಜೀವನನದಿಯಲ್ಲಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾ ಸತತವಾಗಿ ಹರಿಯುತ್ತಿರಲು ಸುರಿಯುತ್ತಿರುವೆನು. ನನಗೆ ಹೇಳಿ, ಇದರಲ್ಲಿ ನನ್ನದೇನಿದೆ?

ನಾನು ಸತ್ಯ, ಪ್ರೇಮ ಮತ್ತು ಆನಂದ ಈ ಮೂರು ಮೂಲಭೂತ ಗುಣಗಳನ್ನು ಅತ್ಯಂತ ಮೆಚ್ಚುವೆನು ಆದುದ್ದರಿಂದ ಅಸತ್ಯ, ದ್ವೇಷ ಮತ್ತು ದುಃಖ ಇವುಗಳ ವಿರೋಧ ನನ್ನ ನೈಸರ್ಗಿಕ ಗುಣಧರ್ಮವಾಗಿದೆ; ಇದರರ್ಥ, ಈ ಕಾರ್ಯವು ತನ್ನಿಂದ ತಾನೆ ಕಾರ್ಯಗತವಾಗಿದೆ. ಕಾರಣ ಯಾವ ಸ್ವಭಾವವಿರುವುದೋ ಅದು ತನ್ನಿಂದ ತಾನೆ ಕಾರ್ಯಗತವಾಗುತ್ತದೆ, ಅದಕ್ಕೊಸ್ಕರ ಬೇಕೆಂದಲೇ ಏನು ಮಾಡುವ ಆವಶ್ಯಕತೆಯು ಇರುವುದಿಲ್ಲ.

ಪ್ರಭುರಾಮಚಂದ್ರರ ಮರ್ಯಾದಾಯೋಗ, ಭಗವಾನ ಶ್ರೀಕೃಷ್ಣರ ನಿಷ್ಕಾಮ ಕರ್ಮಯೋಗ ಮತ್ತು ಶ್ರೀಸಾಯೀನಾಥರ ಮರ್ಯಾದಾಧಿಷ್ಠಿತ ಭಕ್ತಿಯೋಗ ಇವು ನನ್ನ ಆದರ್ಶವಾಗಿವೆ. ನಾನು ಸ್ಥಿತಪ್ರಜ್ಞನಲ್ಲ, ನಾನು ಪ್ರೇಮಪ್ರಜ್ಞನಾಗಿರುವೆನು. ನಾನು "ವಾಸ್ತವತೆಯ" ಅಂದರೆ ಸ್ಥೂಲ ಸತ್ಯದೊಂದಿಗೆ ಬದ್ಧನಾಗದೆ ಯಾವುದರಲ್ಲಿ ಪಾವಿತ್ರ್ಯ ಉತ್ಪನ್ನವಾಗುವುದು ಅಂತಃ ಮೂಲಭೂತ ಸತ್ಯದೊಂದಿಗೆ ಬದ್ಧನಾಗಿರುವೆನು.                   

ನಾನು ಏನು ಮಾಡಬೇಕೆಂದು ಬಯಸುತ್ತೆನೆ? ನಾನು ಏನು ಮಾಡಲು ಹೋಗುತಿದ್ದೆನೆ? ನನ್ನ ಅಗ್ರಲೇಖ ಬರೆಯುವ ಕಾರಣವೇನಿದೆ? ನಾನು ಮೂರನೆ ವಿಶ್ವ ಮಹಾಯುಧ್ದದ ವಿಷಯದಲ್ಲಿ ಅಷ್ಟೊಂದು ಬರೆಯುವ ಕಾರಣವೇನಿದೆ? ನಾನು ಪ್ರವಚನ ಮಾಡುವುದು ಏತಕ್ಕಾಗಿ? ಇವುಗಳ ಉತ್ತರ ನನ್ನ ಹೃದಯಕ್ರಿಯೆ ಹೇಗೆ ನಡೆಯುತ್ತದೆ ಮತ್ತು ನಾನು ಉಸಿರಾಡುವಿಕೆ ಹೇಗೆ ಮಾಡುವೆನು ಅಷ್ಟೇ ಸುಲಭವಾಗಿದೆ, ನಿಜವೆಂದರೆ ಅದುವೇ ಉತ್ತರವಾಗಿದೆ.  

ನನ್ನ ಸ್ನೇಹಿತರೆ, ಕೇವಲ ಪವಿತ್ರತೆ ಮತ್ತು ಪ್ರೇಮ ಎಂಬ ಎರಡು ನಾಣ್ಯಗಳಿಗೆ ನಾನು ಒಲೆಯುವೆನು, ಇತರ ಯಾವುದೇ ಚಲನ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ನಿಜವೆಂದರೆ, ಈ ಅನಿರುದ್ಧನ "ಅಹಂ" ಕೇವಲ ನಿಮ್ಮದೇ ಆಗಿದೆ, ಅದು ಎಂದಿಗೂ ನನ್ನದಾಗಿರಲಿಲ್ಲ ಮತ್ತು ಎಂದಿಗೂ ನನ್ನದಾಗುವುದಿಲ್ಲ.

ಮಿತ್ರರ ಮಿತ್ರ,
ಅನಿರುದ್ಧ.