Saturday 2 November 2013

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ-೨)

[continued from Part I (dated: 5th October 2013)...]
ಯು ಎಸ್ ಮತ್ತು ರಶಿಯಾ ಎರಡೂ ದೇಶಗಳ ಹೇತುಗರ್ಭಿತವಾದ ಅಭಿರುಚಿ ಈ ಪ್ರದೇಶದಲ್ಲಿದೆ. ರಶಿಯಾದವರಿಗೆ, ಅವರಿಗೆ ಅನುಕೂಲವಾದ ಶಾಸನ ಶಿರಿಯಾದಲ್ಲಿರುವದು ಬಹಳ ಮಹತ್ವದ್ದಾಗಿದೆ. ಶಿರಿಯಾದ ಟಾರ್ಟ್ಸ್ ಪಟ್ಟಣದಲ್ಲಿ ಬಂದರು ಇದ್ದು ರಶಿಯಾದವರ ಬಹಳ ಮಹತ್ವದ ನೌಕಾದಲದ ಸೈನ್ಯದ ಮುಖ್ಯ ಸ್ಥಳವಾಗಿದೆ ಮತ್ತು ಮೊದಲಿನ ಸೋವಿಯತ್ ಯುನಿಯನ್ ನವರಿಂದ ಪರದೇಶದಲ್ಲಿ ಸ್ಥಾಪಿಸಲ್ಪಟ್ಟ ಇದೊಂದೇ ಸದ್ಯದ ಸೈನ್ಯ ಸೌಕರ್ಯವಾಗಿದೆ. ಮತ್ತು ಇದೇ  ಕಾರಣದಿಂದಾಗಿ ರಶಿಯಾ ಅಸ್ಸಾದಿನ ಶಾಸನಕ್ಕೆ ತನ್ನ ಸ್ಥಿರವಾದ ಬೆಂಬಲ ಕೊಡುತ್ತಿದೆ.

ಆದರೆ ಅದರ ಒಟ್ಟಿಗೆ ಮಿಡಲ್ ಈಸ್ಟೀನ ಇತರ ದೇಶಗಳು, ಮುಖ್ಯತ: ಯು ಎಸ್ ನ ಮಿತ್ರರಾಗಿದ್ದ  ಸುನ್ನಿ ರಾಷ್ಟ್ರಗಳು ಬಹಳ ಆತುರತೆಯಿಂದ ಅಸ್ಸಾದ್ ಸರಕಾರವನ್ನು ಪರಾಭವಗೊಳಿಸಲು ಕಾಯುತ್ತಿದ್ದಾರೆ. ಕತಾರ್ ದೇಶವು ಯುರೋಪಿಗೆ ನ್ಯಾಚುರಲ್ ಗ್ಯಾಸ್ ನ್ನು ಸರಬರಾಯಿ ಮಾಡುವ ಇಚ್ಛೆ ಪಡೆದುಕೊಂಡಿದೆ. ಕತಾರ್ ದೇಶವು ಯುರೋಪ್ ದೇಶಗಳಿಗೆ ನ್ಯಾಚುರಲ್ ಗ್ಯಾಸನ್ನು ಸರಬರಾಯಿ ಮಾಡುವ ಸಲುವಾಗಿ ಪೈಪ್ ಲಾಯಿನ್ ಹಾಕಿದಾಗ ಅದು ಶಿರಿಯಾದಿಂದ ಹೋಗಬೇಕಿತ್ತು. ಆದರೆ ಈ ಯೋಜನೆಗೆ ಶಿರಿಯಾದ ರಾಷ್ಟ್ರಪತಿಯಾದ ಬಶಾರ್ ಅಲ್-ಅಸ್ಸಾದ್ ಅವರು ವಿರೋಧ ಮಾಡಿದ್ದಾರೆ. ಒಂದು ಕಡೆಯಲ್ಲಿ ಅಸ್ಸಾದ್ ಶಾಸನ ಯುರೋಪ್ ದೇಶಗಳಲ್ಲಿ ಕತಾರಿನ ಪೈಪ್ ಲಾಯಿನಿನ ಪ್ರಸ್ತಾಪವನ್ನು ನಿರಾಕರಿಸಿದರೆ, ಇನ್ನೊಂದು ಕಡೆಯಲ್ಲಿ  ಹತ್ತು ಬಿಲಿಯನ್ ಡಾಲರಿನ ಅದೇ ಕರಾರಿಗೆ ಕಳೆದ ವರ್ಷ ಜುಲ್ಯ ತಿಂಗಳಿನಲ್ಲಿ ಇರಾಣ್ ಮತ್ತು ಇರಾಕ್ ಜೊತೆ ಕೂಡಿ ಸಮ್ಮತಿಯನ್ನು ಕೊಟ್ಟಿದ್ದಾರೆ. ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾದೆಂದರೆ ಶಿರಿಯಾದ ಸೈನ್ಯಬಲ ಮತ್ತು ದಂಡೆಕೋರರ ನಡುವಿನ ತಿಕ್ಕಾಟವು ಶಿರಿಯಾ ಮಾಡಿದ ಈ ಕರಾರಿನ ಸಮಯದಲ್ಲೇ ಆಗಿದೆ. ಕತಾರ್ ದೇಶವು ತನ್ನ ಗ್ಯಾಸ್ ಪೈಪ್ ಲಾಯಿನ್ ನ ಪ್ರಸ್ತಾಪವನ್ನು ಇಡುವ ಸಮಯದಲ್ಲಿ ಸೌದಿ ಅರೇಬಿಯಾದವರು ಕೂಡ ಸಮಿತಿಯಲ್ಲಿ ತನ್ನನ್ನು ಒಳಗೂಡಿಸಬೇಕೆಂದು ರಶಿಯಾದವರ ಮೇಲೆ ತನ್ನ ಪ್ರಭಾವ ಬೀಳಿಸಲು ಪ್ರಯತ್ನ ಪಟ್ಟಿದ್ದರೆಂದು ತಿಳಿಯಲಾಗುತ್ತಿದೆ. ಇಂಧನಿನ ಉದ್ದಿಮೆಯಲ್ಲಿ ತನ್ನ ವರ್ಚಸ್ಸನ್ನಿಡಲು ಹಾಗು ಅದನ್ನು ವೃದ್ಧಿಸುವ ದೃಷ್ಟಿಕೋನದಿಂದ ಸೌದಿ ಅರೇಬಿಯಾದವರು ಕೂಡ ಸಂವೇದನಶೀಲವಾದ ಶಿರಿಯಾದಂತಹ ಭೂರಾಜ್ಯದಲ್ಲಿ ಮೈತ್ರಿಯ ಶಾಸನವನ್ನು ಇಚ್ಛಿಸುತ್ತಿದ್ದಾರೆ.
 
ಆದರೆ ಯುರೋಪ್ ದೇಶಗಳಿಗೆ ರಶಿಯಾ ಪರಂಪರೆಯಿಂದ ಇಂಧನನ್ನು ಪೂರೈಸುವದರಲ್ಲಿ ಅಗ್ರವಾಗಿದೆ. ಆದ್ದರಿಂದ ರಶಿಯಾವು ಯುರೋಪಿಯನ್ ದೇಶಗಳ ವಿರುದ್ಧ ಈ ಇಂಧನನ್ನು ಅಸ್ತ್ರದ ರೂಪದಲ್ಲಿ ಉಪಯೋಗ ಮಾಡುತ್ತಿದೆಯೆಂದು ಆರೋಪಣೆ ಮಾಡುತ್ತಿದ್ದಾರೆ. ಆದಕ್ಕಾಗಿ ಮಿಡಲ್ ಈಸ್ಟೀನಿಂದ ಯುರೋಪಿಗೆ ಇಂಧನ ತಲುಪಬಾರದೆಂದು ರಶಿಯಾ ಇಚ್ಛಿಸುತ್ತಿದೆ. ಈ ಒಂದು ಕಾರಣದಿಂದಾಗಿ ರಶಿಯಾ, ಶಿರಿಯಾದ ಅಸ್ಸಾದ್ ರೆಜಿಮಿಗೆ ನಿರಂತರ ಬೆಂಬಲ ಕೊಡುತ್ತಿದೆ. ಇದರ ಪರಿಣಾಮವಾಗಿ  ತನ್ನ ಲಾಭದ ಕುರಿತಾಗಿಯೇ ಆಸಕ್ತಿಯುಳ್ಳ ಎಲ್ಲಾ ಪಕ್ಷದಾರರು ಶಿರಿಯಾದಲ್ಲಿಯ ವಿಷಮ ಸ್ಥಿತಿಯನ್ನು ಜಟಿಲವಾದ ಜಾಲದಂತಾಗಿ ಮಾಡಿ ಅದಕ್ಕೆ ನಿರ್ಧಾರವಾದ ಪರಿಹರಣೆ ತರಬಹುದೆಂಬುದು ಒಂದು ದೂರದ ಮಾತಾಗಿದೆ ಮತ್ತು ಸದ್ಯದಲ್ಲಿ ಮಾಡಿದ ಶಾಂತತೆಯ ಪ್ರಯತ್ನವು ಕೇವಲ ತಾತ್ಕಾಲಿನ ವ್ಯವಸ್ಥೆಯಂತಾಗಿದೆ. 


 ಮಿಡಲ್ ಈಸ್ಟರ್ನ್ ರಾಷ್ಟ್ರದೊಡನೆ ಯು ಎಸ್ ಮತ್ತು ರಶಿಯಾ ಹಾಗು ಇತರ ರಾಷ್ಟ್ರಗಳು ಕೂಡ ಮೆಲ್ಲ ಮೆಲ್ಲನೆ ಈ ವಿವಾದದಲ್ಲಿ ಬರತೊಡಗಿದ್ದಾರೆ. ಯು ಎಸ್ ನ ಯುರೋಪದ ಮಿತ್ರ ರಾಷ್ಟ್ರಗಳಾದ, ಯುನೈಟೇಡ್ ಕಿಂಗ್ ಡಮ್, ಜರ್ಮನಿ, ಫ್ರಾಂಸ್, ಇಟಲಿ, ಡೆನ್ ಮಾರ್ಕ್, ಲಕ್ಜೆಂಬರ್ಗ್, ಸ್ಪೇನ್ ಹಾಗು ನಿದರ್ ಲ್ಯಾಂಡಗಳು ೪೩೦ ಮಿಲಿಯನ್ ಡಾಲರಿನ ಆರ್ಥಿಕ ಸಹಾಯ ಶಿರಿಯಾದ ನಿರಾಶ್ರಿತರಿಗೆ ಕೊಡಲು ಮಾತು ಕೊಟ್ಟಿದ್ದಾರೆ. ಯುನೈಟೇಡ್ ಕಿಂಗ್ ಡಮ್ ಮೂರು ಮಿಲಿಯನ್ ಡಾಲರ್ ಅತಿರಿಕ್ತ ಸಹಾಯ ಕೇವಲ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಮತ್ತು ಅದರ ಸೌಲಭ್ಯಗಳನ್ನು ನಾಶಮಾಡಲು ಕೊಡಲಾಗುವುದೆಂದು ಜಾಹಿರು ಮಾಡಿದೆ. ರಶಿಯಾದೊಡನೆ ಚೈನಾವು ಪಾರಂಪರೆಯಿಂದ ಶಿರಿಯಾದ ಜೊತೆಗಿದ್ದು, ಯು ಎಸ್ ನವರು ಶಿರಿಯಾದ ವಿರುದ್ಧ ಸಿದ್ಧ ಮಾಡಿದ ಹಲವು ಒಪ್ಪಂದಗಳಿಗೆ ಯು ಎನ್ ನಲ್ಲಿ ಅದಕ್ಕೆ ಅಡ್ಡ ಬಂದಿರುವರು. ಶಿರಿಯಾದ ವಿರುದ್ಧ ಯಾವುದೇ ಪ್ರಕಾರದ ಸೈನ್ಯ ಬಲದ ಉಪಯೋಗವನ್ನು ಚೈನಾ ಮಾಡಲು ಬಿಡುವುದಿಲ್ಲ. ಮತ್ತು ಇತ್ತೀಚೆಗೆ ಶಿರಿಯಾದ ವಿವಾದವನ್ನು ಬಿಡಿಸಲು ’ಸಂವಾದ’ವೇ ಒಂದು ಮಾರ್ಗ ಮತ್ತು ಒಳ್ಳೆಯ ವಿಕಲ್ಪವೆಂದು ಹೇಳಿದೆ.


ಆ ಸ್ಥಳದಲ್ಲಿ ಹೆಚ್ಚುತ್ತಿರುವ ಅಶಾಂತಿಯು ಅಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸುವವರಿಗಾಗಿ ಮುಖ್ಯವಾದ ಅಹ್ವಾನವಾಗಿದೆ. ಆದರೆ ಅದರ ಜೊತೆ ಇದು ಭಾರತದಂತಹ ರಾಷ್ಟ್ರಗಳಿಗು ಕೂಡ ಗಂಭೀರವಾದ ಆವ್ಹಾನವಾಗಿದೆ. ಯಾಕೆಂದರೆ ಈ ರಾಷ್ಟ್ರಗಳು ೮೦% ಇಂಧನಿನ ಪೂರೈಕೆಯನ್ನು ಆಮದು ಮಾಡಿಕೊಳ್ಳುವರು ಮತ್ತು ಅದಕ್ಕಾಗಿ ಅವರು ಮಿಡಲ್ ಈಸ್ಟೀನ್ ದೇಶಗಳ ಮೇಲೆಯೇ ಹೊಂದಿವೆ. ಭಾರತಕ್ಕೆ ಇಂಧನನ್ನು ಮುಖ್ಯವಾಗಿ ಒದಗಿಸುವ ರಾಷ್ಟ್ರವಾದ ಇರಾಣಿನ ಮೇಲೆ ಯು ಎಸ್ ನವರು ನಿಷೇಧ ಹಾಕಿರುವರು. ಇರಾಣ ದೇಶವು ಹಣ ಜಮೆ ಮಾಡಲು ೯೦ ದಿವಸದ ಅವಧಿಯನ್ನು ಭಾರತದ ಎಣ್ಣೆ ಕಂಪನಿಗಳಿಗೆ ಕೊಡುತ್ತಿದೆ. ಮತ್ತು ಅವರಲ್ಲಿಯ ಕಚ್ಚಾ ಎಣ್ಣೆಯು (ಕ್ರೂಡ್ ಆಯಿಲ್) ಸೌದಿ ಅರೇಬಿಯ ಹಾಗು ಇರಾಕ್ ದೇಶಗಳಿಗಿಂತ ಅಗ್ಗವಾಗಿದೆ. ಮತ್ತು ಅದರ ವೆಚ್ಚದ ಹಣವನ್ನು ಅಲ್ಪ ಭಾಗದಲ್ಲಿ ಭಾರತದ ರೂಪಾಯಿಯ ಸ್ವರೂಪದಲ್ಲಿಯೂ ಸ್ವೀಕರಿಸುತ್ತಾರೆ. ಆದ್ದರಿಂದ ಭಾರತವು ಇರಾಣ್ ದೇಶದಿಂದ ಇಂಧನನ್ನು ಆಮದು ಮಾಡಿಕೊಳ್ಳುವುದರಿಂದ ಪರದೇಶಕ್ಕೆ ಹಣವನ್ನು ಬದಲಾಯಿಸುವಾಗ (ಫೊರೇನ್ ಎಕ್ಸ್ ಚೇಂಜ್) ತಾಗುವ ವೆಚ್ಚವನ್ನು ಉಳಿಸಿಕೊಳ್ಳುತ್ತದೆ. ಆದರೆ ಯು ಎಸ್ ನವರು ಇರಾಣಿನ ಮೇಲೆ ಬಂದಿಯನ್ನು ಹಾಕಿದ್ದರಿಂದ ಭಾರತಕ್ಕೆ ಅಲ್ಲಿಂದ ಇಂಧನನ್ನು ಆಮದು ಮಾಡುವ ಪ್ರಮಾಣ ಕಡಿಮೆ ಮಾಡಬೇಕಾಗಿದೆ. ಆದರೆ ಶಿರಿಯಾವು ಭಾರತಕ್ಕೆ ಎಣ್ಣೆ ಮತ್ತು ಗ್ಯಾಸ್ ಕ್ಷೇತ್ರಗಳಲ್ಲಿ ಸಹಾಯ ಸಲ್ಲಿಸಲು ಒಪ್ಪಿದ್ದಾರೆ. ಅವರಲ್ಲಿ ಸಮುದ್ರದ ಹೊರಗೆ ೧೪ ಎಣ್ಣೆಯ ಸಂಚಯ ಮತ್ತು  ೬ ಸಮುದ್ರದಲ್ಲಿಯ ಎಣ್ಣೆ ಸಂಚಯದ ಸ್ಥಳಗಳಿವೆ. ಆದರೆ ಶಿರಿಯಾದ ಸದ್ಯದ ಪರಿಸ್ಥಿತಿಯನ್ನು ನೋಡಿ ಭಾರತದ ಕಂಪನಿಗಳು ತಾತ್ಕಾಲಿನವಾಗಿ ತನ್ನ ಕೆಲಸವನ್ನು ನಿಲ್ಲಿಸಿವೆ. ಓಎನ್ ಜೀಸಿಯ ಪ್ರಕಲ್ಪ ಮತ್ತು ಭಾರತ್ ಎಲೆಕ್ತ್ರಿಕಲ್ಸ್ ಲಿಮಿಟೇಡ್ ಕಂಪನಿಗಳು ಇವುಗಳ ಭಾಗವಾಗಿವೆ. ಶಿರಿಯಾದಲ್ಲಿದ್ದ  ಕಬ್ಬಿಣದ ಪ್ಲಾಂಟ್ ನಲ್ಲಿ ಕೂಡ ಭಾರತ  ಸಮಾವೇಷಗೊಂಡಿದೆ.

ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಇಂಧನಿನಿಂದ ತುಂಬಿದ ಮಿಡಲ್ ಈಸ್ಟೀನಲ್ಲಿ ಇಂಧನಿನ ಬೆಲೆ ಮೇಲೆ ಕೆಳಗಾಗುತ್ತಿದೆ. ಭಾರತದ ರೂಪಾಯಿಯ ಬೆಲೆ ಕೆಳಗೆ ಬೀಳುತ್ತಿದ್ದರಿಂದ ಪರದೇಶದ ಇಂಧನವು ದುಬಾರಿಯಾಗತೊಡಗಿದೆ. ಇಂಧನಿನ ಬೆಲೆ ಹೆಚ್ಚಾಗುತ್ತಿದ್ದರಿಂದ ಮೊದಲೇ ಕುಂದುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿದ್ದ ಭಾರತೀಯ ಅರ್ಥಶಾಸ್ತ್ರದ ಮೇಲೆ ಪರಿಣಾಮ ಬೀರುತ್ತಿದೆ. ಎಣ್ಣೆಯ ಲೆಕ್ಕಾಚಾರವು ಭಾರತದ ಆಮದು ಬೆಲೆಪಟ್ಟಿಯ ಮೂರನೇ ಭಾಗವಾಗಿದೆ. ವಿಶ್ಲೇಷಕರ ಪ್ರಕಾರ ಶಿರಿಯಾದ ಆಕ್ರಮಣದಿಂದಾಗಿ ಎಣ್ಣೆಯ ದರವು ಈಗಿರುವ ೧೧೫ ಡಾಲರ್ ನಿಂದ ೧೫೦ ಡಾಲರ್ ತನಕ ಹೋಗಬಹುದು. ಎಣ್ಣೆಯ ದರ ಇಷ್ಟು ಮೇಲೆ ಹೋದರೆ ಭಾರತ ಸರಕಾರಕ್ಕೆ ಹಣ ಚಲಾವಣೆಯ ಉಬ್ಬರವನ್ನು (ಇನ್ ಫ್ಲೇಶನ್) ತಡೆಯಲು ಕಠಿಣವಾಗಬಹುದು.

ಈಗಿನ ಪರಿಸ್ಥಿತಿಯು ಅರ್ಥವ್ಯವಸ್ಥೆಗೊಂದು ಆವ್ಹಾನವಾಗಿದೆ ಆದರೆ ಅದಕ್ಕಿಂತ ಮಹತ್ವದೆಂದರೆ ಇದು ಯುದ್ಧ ಕುಶಲರ ಕೂಟ ನೀತಿಯಾಗಿರುವುದರಿಂದ ಬಹಳವೇ ಅಪಾಯಕಾರಿಯಾಗಿದೆ ಎಂದು ತೋರಿಸಿ ಕೊಡುತ್ತದೆ. ಯಾಕೆಂದರೆ ಇಸ್ರಾಯಿಲಿನ ಪ್ರಕಾರ ಇರಾಣ್ ದೇಶದವರು ಅಣುಶಕ್ತಿಯ ಉಪಯೋಗ ಮಾಡಲು ಕೇವಲ ಆರು ತಿಂಗಳಿನ ದೂರದಲ್ಲಿರುವರು. ಲಿಬನಿನ ಹೆಝ್ ಬೊಲ್ಲಾಹ ರವರು ಮಿಸ್ಸಾಯಿಲನ್ನು ಪಡೆದಿದ್ದು ಇಸ್ರಾಯಿಲ್ ನಂತಹ ಸೈನ್ಯಬಲದಿಂದ ಬಹಳ ಸಮರ್ಥವಾದ ದೇಶವನ್ನು ಕೂಡ ಬಗ್ಗಿಸಲು ಯಶಸ್ವಿಯಾಗಿದ್ದಾರೆ. ಅದಲ್ಲದೆ ಶಿರಿಯಾದ ಸೈನ್ಯ ಪರಿತ್ಯಜಿಸಿದ ಬ್ರಿಗೇಡಿಯರ್ ಜನರಲ್ ಝಾಹೇರ್ ಸಾಕೇತ್ ಶಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರಗಳ ಕಮಾಂಡರ್ ರಾಗಿದ್ದು ಅವರು ಕಳೆದ ವಾರದಲ್ಲಿ ಯು ಎನ್ ಎಸ್ ಸಿ ಒಪ್ಪಂದದ ಪ್ರಕಾರ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಅಸ್ಸಾದ್ ರೆಜಿಮ್ ಒಪ್ಪಿದ್ದರು ಕೂಡ ಅದನ್ನು ಗುಪ್ತರೂಪದಲ್ಲಿ ಲಿಬನಿನ ಹೆಝ್ ಬೊಲ್ಲಾಹ ರಲ್ಲಿಗೆ ಮತ್ತು ಇರಾಕಿಗೆ ಕಳುಹಿಸುತ್ತಿದೆ ಎಂದು ಹೇಳಿರುವರು. ತಮ್ಮ ಮೇಲೆ ಹೆಚ್ಚುತ್ತಿರುವ ಸಂಕಟಗಳಿಂದಾಗಿ ಇಸ್ರಾಯಿಲ್ ತವಕಗೊಳ್ಳುತ್ತಿದೆ ಮತ್ತು ಇರಾಣ್ ಹಾಗು ಶಿರಿಯಾದ ವಿರುದ್ಧ ಸೈನ್ಯಬಲದ ಉಪಯೋಗ ಮಾಡಬೇಕೆನ್ನುವ ಮಾತನ್ನು ಬಹಳ ಸಮಯದಿಂದ ಹೇಳುತ್ತಿದೆ. ಆದರೆ ಇನ್ನೊಂದು ಕಡೆಯಲ್ಲಿ ಯು ಎಸ್ ಈ ಭಾಗದಲ್ಲಿ ತನ್ನ ಸೈನ್ಯಬಲದ ಸ್ಥಾಪಿತವನ್ನು ಕತಾರ್, ಯುಏಈ, ಹಾಗು ಸೌದಿ ಅರೇಬಿಯಾ ದೇಶದ ಸಮ್ಮತದೊಡನೆ ಹೆಚ್ಚಿಸುತ್ತಿದೆ. ಇಸ್ರಾಯಿಲ್ ಹಾಗು ಟರ್ಕಿಯವರು ಕೂಡ ಇತ್ತೀಚಿಗೆ ತನ್ನ ಬಲಪ್ರದರ್ಶನವನ್ನು ಮಾಡಿರುವರು ಮತ್ತು ಒಮ್ಮತದಿಂದ ಶಿರಿಯಾದ ವಿರುದ್ಧ ಸೈನ್ಯಬಲವನ್ನು ಉಪಯೋಗಿಸಿರುವರು. ಈ ಪರಿಸ್ಥಿತಿಯನ್ನು ಸಮತೋಲಮಾಡಲೆಂದು ಮಿಡಲ್ ಇಸ್ಟೀನಲ್ಲಿ ರಶಿಯಾ ತನ್ನ ಸೈನ್ಯ ಬಲವನ್ನು ಹೆಚ್ಚಿಸಿದೆ. ಆದ್ದರಿಂದ ಇರಾಣಿನಿಂದ ಅಣುಶಕ್ತಿಯ ಭಯ ಅದರೊಡನೆ ಇರಾಣಿನ ಎರಡು ಮಿತ್ರರಾಷ್ಟ್ರಗಳಾದ ಶಿರಿಯಾದಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮತ್ತು ಹೆಝ್ ಬೊಲ್ಲಾಹರವರಿಂದ ಮಿಸ್ಸಾಯಿಲಿನ ಆಕ್ರಮಣದ ಭಯವು, ಮುಖ್ಯವಾಗಿ ಮಿಡಲ್ ಈಸ್ಟೀಗೆ ಹಾಗೆಯೇ ಪೂರ್ಣ ವಿಶ್ವಕ್ಕೆ ಬಹಳ ಭಯಂಕರವಾದ ಭಯ ಸೂಚನೆಕೊಡುತ್ತಿದೆ. ನಿಸ್ಸಂದೇಹಯವಾಗಿ ಈ ಸಮಯದಲ್ಲಿ ಪೂರ್ಣ ವಿಶ್ವವು ಮಿಡಲ್ ಈಸ್ಟೀನ ಕೂಡುಹಾದಿಯಲ್ಲಿ ಸಿಲುಕಿದಂತಿದೆ.

Friday 25 October 2013

ಮಿಡಲ್ ಈಸ್ಟೀನ ವಸ್ತುಸ್ಥಿತಿ - ಕೂಡುಹಾದಿಯಲ್ಲಿ ಸಿಲುಕಿದ ವಿಶ್ವ (ಭಾಗ ೧)

ಮಿಡಲ್ ಈಸ್ಟೀನ ವಸ್ತುಸ್ಥಿತಿ ಬೆಂದುತ್ತಿರುವಾಗ ಮತ್ತು ಯು ಎಸ್ ನವರು ಶಿರಿಯಾದ ಮೇಲೆ ಮಾಡಬಹುದಾದ ಆಕ್ರಮಣದಿಂದಾಗಿ ಉಲ್ಭಣವಾಗುವ ಪರಿಸ್ಥಿತಿಯು ಬಂದಾಗ ರಶಿಯಾದ ರಾಷ್ಟ್ರಪತಿಯಾದ, ಲಾದಿಮಿರ್ ಪುತೀನರವರು ತನ್ನ ಒಂದು ಚೂರು ಚಾತುರ್ಯ ಮತ್ತು ಜಾಣತನದಿಂದ ಅಂತರರಾಷ್ಟ್ರೀಯ ವ್ಯವಹಾರದ ನಿಪೂಣತೆಯನ್ನು ತೋರಿಸಿದಾಗ ಅದು ಯು ಎಸ್ ನವರ ಕೆಲಸಕ್ಕೆ ಬಂದಿತು. ಶಿರಿಯಾದ ಮೇಲೆ ಯು ಎಸ್ ನವರು ಮಾಡಬಹುದಾದ ಆಕ್ರಮಣವನ್ನು ಪ್ರಶ್ನಿಸಿ,   ಯು ಎನ್ ನ ಮಾನ್ಯತೆ ತೆಗೆದುಕೊಳ್ಳದಿದ್ದರಿಂದ ಅದನ್ನು ಕೇವಲ ಶಿರಿಯಾದ ಮೇಲಿನ ಆಕ್ರಮಣವೆಣಿಸದೆ, ಯು ಎನ್ ನ ಅಸ್ತಿತ್ವದ ಹಾಗು ಭವಿಷ್ಯದ ಮೇಲೆ ಮಾಡಿದ  ಆಕ್ರಮಣವಾಗಬಹುದೆಂದು ಮತ್ತು ಯಾವುದನ್ನು ಜಗತ್ತಿನಲ್ಲಿ ಚಿರಕಾಲದ ತನಕ ಶಾಂತಿ ಉಳಿಯಬೇಕೆಂದು ಸ್ಥಾಪಿಸಿದ ಸಂಸ್ಥೆಗೆ ಮಾಡಿದ ಆಕ್ರಮಣವೆಂದು ಪುತೀನರು ನಿವ್ ಯೋರ್ಕ್ ಟೈಮ್ಸಿನಲ್ಲಿ ತನ್ನ ಮತವನ್ನು ವ್ಯಕ್ತಪಡಿಸಿದರು. ಅವರು ಲೀಗ್ ಆಫ್ ನೇಶನ್ ಆಗಿರುವ ಯು ಎನ್ ನ ಅದೃಷ್ಟವನ್ನು  ಮೊದನೇಯ ಮಹಾಯುದ್ಧದ ನಂತರದ ಕಾಲದಂತಾಗಿರುವುದೆಂದು ಇದೊಂದು ಯು ಎನ್ ಗೆ ಮುನ್ಸೂಚನೆಯೆಂದು ಹೋಲಿಸಿದಾಗ ಪುತೀನಿನವರ ವಿಚಾರ ಗ್ಲೋಬಲ್ ಕಮ್ಯುನಿಟಿಗೆ (ಭೂಮಂಡಲದ ಸಮಾಜ) ಮುಖ್ಯವಾಗಿ ಯು ಎಸ್ಸ್ ಗೆ ಬೆರಗುಗೊಳಿಸುವ ಆಘಾತದಂತಿತ್ತು. ಈ ಒಂದೇ ಮಹತ್ವದ ಮಾತನ್ನು ಕೇಳಿದ ಯು ಎಸ್ ತನ್ನ ತಪ್ಪಿನ ಅರಿವಾಗಿ ಶಿರಿಯಾದಲ್ಲಿದ್ದ ವಿವಾದಾಂಶ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅತೀ ಮಹತ್ವದ ವಿಷಯವಾಗಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗದ ಬಗ್ಗೆ ರಶಿಯಾದ ಜೊತೆ ಒಮ್ಮತವಾಗಿ ವಿಚಾರವಿನಿಮಯ ಮಾಡಲು ಸಿದ್ಧವಾಯಿತು.

ಇದನ್ನು ನೋಡಿದಾಗ ಶಸ್ತ್ರಾಸ್ತ್ರಗಳ ತಿಕ್ಕಾಟದ ನಿವಾರಣೆ ಸದ್ಯಕ್ಕೆ ಆದಂತೆ ಕಂಡು ಬಂದರೂ ಮುಂದೆ ಭವಿಷ್ಯದಲ್ಲಿ ಇದರ ಪುನವರ್ತನೆಯಾಗುವ ಸಾದ್ಯತೆಯಿದೆ. ಆದ್ದರಿಂದ ರಶಿಯಾದವರಿಂದ ಬಂದ ಪ್ರಸ್ತಾಪದ ಪರಿಣಾಮವಾಗಿ ಶಿರಿಯಾ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಿಟ್ಟುಕೊಟ್ಟು ಅದರ ಉಪಯೋಗವನ್ನು ಮಾಡುವುದಿಲ್ಲವೆಂದು ಒಪ್ಪಿದೆ. ಶಿರಿಯಾದ ಸಂದಿಗ್ಧ ಪರಿಸ್ಥಿತಿ ಬಗ್ಗೆ ರಶಿಯಾದ ಜೊತೆ ಮಾಡಿದ ಪ್ರಸ್ತಾಪಕ್ಕೆ ಯು ಎಸ್ ಒಪ್ಪಿದ್ದರೂ ಅವರಿಬ್ಬರಲ್ಲಿ ಬಹಳ ವಿಶಾಲ ಮತ್ತು ಗಂಡಾಂತಕಾರಿಯಾದ ವಿಚಾರದ ಮತಭೇದವು ಉಳಿದೇ ಇದೆ. ಯಾಕೆಂದರೆ ಶಿರಿಯಾ ತನ್ನ ಮಾತನ್ನಿಡದಿದ್ದರೆ ಯು ಎಸ್ ಹೇಗೆ ಪ್ರತಿಕ್ರಿಯೆ ತೋರಿಸಬಹುದು ಇದನ್ನು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಶಿರಿಯಾ ತಾನು ಕೊಟ್ಟ ಮಾತನ್ನಿಡದಿದ್ದರೆ ತನ್ನ ಸೈನ್ಯದ ಉಪಯೋಗ ಮಾಡುವುದೊಂದೇ ಅದರ ಪರಿಹಾರವಾಗಿದೆ ಎಂದು ಯು ಎಸ್  ಕೆಲವು ದಿವಸದ ಹಿಂದೆ ಸಂಕೇತ ಕೊಟ್ಟಿದೆ. ಆದರೆ ಯು ಎಸ್ ರಾಷ್ಟ್ರಪತಿಯಾದ ಬರಾಕ್ ಒಬಾಮಾ ಅವರು ಯುನೈಟೇಡ್ ನೇಶನ್ಸ್ ಜನರಲ್ ಎಸಂಬ್ಲಿಯಲ್ಲಿ ಕಳೆದ ವಾರ ಭಾಷಣ ಮಾಡಿದಾಗ ಈ ವಿಷಯದ ಉಲ್ಲೇಖ  ಮಾಡಲು ಬೇಕೆಂದೇ ತಳ್ಳಿದರು. ಆದರೆ ಒಂದು ಮಹತ್ವದ ವಿಷಯ ಗಮನಕ್ಕೆ ತರಬೇಕಾಗಿರುವುದೆಂದರೆ ರಶಿಯಾ ಮಾಡಿದ ಮಧ್ಯಸ್ತಿಕೆಯ ಒಪ್ಪಂದಕ್ಕೆ ಯು ಎಸ್ ಒಪ್ಪಿದ್ದರೂ, ಅವರು ಶಿರಿಯಾದ ಶಾಸನದ ವಿರುದ್ಧ ಹೋರಾಡುವ ದಂಗೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ. ಯು ಎಸ್ ನ ಜೊತೆ ಸೌದಿ ಅರೇಬಿಯಾ, ಯುನೈಟೇಡ್ ಅರಬ್ ಎಮಿರೇಟ್ಸ್ ಹಾಗು ಕತಾರ್ ದೇಶಗಳು ಎಲ್ಲಾ ಪ್ರಕಾರದ ಸಹಾಯವನ್ನು ಈ ದಂಗೆಕೋರರಿಗೆ ಕೊಡಲಾರಂಭಿಸಿದ್ದಾರೆ. ಶಿರಿಯಾದ ದಂಗೆಕೋರರಿಗೆ ಟರ್ಕಿ ಮತ್ತು ಜೊರ್ಡನಿನಿಂದ ಕೂಡ ಸಹಾನುಭೂತಿಯು ಸಿಗತೊಡಗಿದೆ. ಇಂತಹ ಸಮಯದಲ್ಲಿ ಶಿರಿಯಾದ ರಾಷ್ಟ್ರಪತಿಯವರು ಯಾವ-ಯಾವ ದೇಶಗಳು ಮತ್ತು ಮುಖ್ಯವಾಗಿ ಟರ್ಕಿ ದೇಶವು ದಂಡೆಕೋರರಿಗೆ ಸಹಾಯವನ್ನು ಕೊಡುತ್ತಿದ್ದು ಅವರಿಗೆ ಮುಂದೆ ಬರುವ ಕಾಲದಲ್ಲಿ ಪಶ್ಚಾತ್ತಾಪ ಪಡಬೇಕಾಗುವದು, ಯಾಕೆಂದರೆ ಅವರು ಈಗ ದಂಡೆಕೋರರಿಗೆ ಸಹಾಯ ಮಾಡುತ್ತಿದ್ದಾರೆ ಆದರೆ ಅವರೇ ಮುಂದೆ ಬರುವ ಕಾಲದಲ್ಲಿ ಅವರ ವಿರುದ್ದ ನಿಲ್ಲಲ್ಲಿದ್ದಾರೆ ಎಂದು ಹೇಳಿರುವರು. ಈಗ ಆಗುತ್ತಿರುವ ಘಟನೆಗಳನ್ನು ನೋಡಿದರೆ ಮುಂದೆ ಬರುವ ಸಮಯದಲ್ಲಿ ಮುಖ್ಯವಾಗಿ ಶಿರಿಯಾದ ಸುತ್ತಮುತ್ತಲು ಮತ್ತು ಮಿಡಲ್ ಈಸ್ಟೀನಲ್ಲಿ ಬಹಳ ದೊಡ್ಡ ಪ್ರಕಾರದ ಕಚ್ಚಾಟ ಹಾಗು ಹಿಂಸೆಯ ಪರಿಮಾಣ ಹೆಚ್ಚಾಗಲಿದೆ.

ಮಧ್ಯಂತರದ ಸಮಯದಲ್ಲಿ ರಾಸಾಯನಿಕ ಶಷ್ತ್ರಾಸ್ತ್ರಗಳ ಉಪಯೋಗ ಸಾಧಾರಣ ನಾಗರಿಕರ ಮೇಲೆ ಮಾಡಿದ ಅವೇಶಯುಕ್ತ ದೋಷಾರೋಪಣೆಗಳನ್ನು ಯು ಎಸ್ ಮತ್ತು ಶಿರಿಯಾದ ದಂಡೆಕೋರರು ಒಂದಾಗಿ ಹಾಗು ಅಸ್ಸಾದ್ ರೆಜಿಮ್ ಮತ್ತು ರಶಿಯಾ ಇನ್ನೊಂದು ಕಡೆಯಲ್ಲಿ ಒಟ್ಟಾಗಿ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ. ಆದರೆ ಪ್ರೊಹಿಬಿಶನ್ ಆಫ್ ಕೆಮಿಕಲ್ ವೆಪನ್ಸ್ ನ ಸಂಸ್ಥೆಯು (ಓಪಿಸಿಡಬ್ಲ್ಯೂ), ಇದು ಆಂತರಿಕ ಸರಕಾರದ ಸಂಸ್ಥೆಯಾಗಿ ಅದರ ನಿದರ್ ಲ್ಯಾಂಡ್ ಮುಖ್ಯಸ್ಥರಾಗಿದ್ದು ಅದು ಕೆಮಿಕಲ್ ವೆಪನ್ಸ್ ಕನ್ವೆಂಶನ್ (ರಾಸಾಯನಿಕ ಶಸ್ತ್ರಾಸ್ತ್ರದ ಒಪ್ಪಂದ)ಕ್ಕನುಗುಣವಾಗಿ ಪ್ರೊತ್ಸಾಹಿಸಿ ಹಾಗೆಯೇ ಅವಲಂಬಿಸಿರುವ ಮಾರ್ಗದ ಯಥಾರ್ಥವನ್ನು ನೋಡುತ್ತಿದ್ದು ಅವರಿಗೆ ರಶಿಯಾದವರು ಮಾಡಿದ ಮಧ್ಯಸ್ತಿಕೆಯ ಒಪ್ಪಂದದ ಪ್ರಕಾರ ಅಸ್ಸಾದ್ ಸರಕಾರದಿಂದ ಶಿರಿಯನ್ ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಹಾಗು ಅದರ ಸಾಮರ್ಥ್ಯದ ಬಗ್ಗೆ ಕೆಲವು ಪತ್ರಗಳು ಕಳುಹಿಸಲಾಗಿದೆಯೆಂದು ಒಪ್ಪಿದೆ, ಇದರಿಂದಾಗಿ ಯುದ್ಧದ ವಾತಾವರಣದಲ್ಲಿದ್ದ ಭಾಗಗಳಿಗೆ ಇದೊಂದು ಸ್ವಲ್ಪ ಬಿಡುವು ಸಿಕ್ಕಿದಂತಾಗಿದೆ. ಆದರೆ ಇಂತಹ ಮಹತ್ವದ ಸಮಯದಲ್ಲಿ ರಶಿಯಾದ ರಾಷ್ಟ್ರಪತಿಯವರು ಮಾಡಿದ ವಕ್ತವ್ಯದ ಪ್ರಕಾರ ಅದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಯಾಕೆಂದರೆ ಅಸ್ಸಾದ್ ರಾಜ್ಯಕಾರಭಾರದವರು ಇಷ್ಟೊಂದು ಒಟ್ಟು ಹಾಕಿಟ್ಟ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಹಾಗು ಅವುಗಳ ಸೌಲಭ್ಯಗಳನ್ನು ಬಿಟ್ಟು ಕೊಡುವ ಮಾತು ಅದಲ್ಲದೆ ಅದರ ಸಂಪೂರ್ಣ ಏರ್ಪಾಡಿನ ಬಗ್ಗೆ ಪಾಶ್ಚಿಮಾತ್ಯ ಪ್ರಭುತ್ವಗಳು ಶಂಕಿತರಾಗಿರುವರು. ಅಸ್ಸಾದ್ ರೆಜಿಮ್ ದವರು ಈ ಸಂಪುರ್ಣ ಒಟ್ಟು ಹಾಕಿದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಸಾಧಾರಣ ಒಂದು ವರ್ಷದ ಅವಧಿ ಆಗಬಹುದೆಂದು ಮತ್ತು ಅದರ ಖರ್ಚು ಸಾಧಾರಣವಾಗಿ ಒಂದು ಬಿಲಿಯನ್ ಡಾಲರ್ ಆಗಬಹುದೆಂದು ಹೇಳಿದ್ದಾರೆ. ಅದಲ್ಲದೆ ಮತ್ತೊಂದು ಮಹತ್ವದ ವಿಷಯ ಗಮನಕ್ಕೆ ತರುವಂತಹದೆಂದರೆ ಯು ಎಸ್ ನ ಗತಕಾಲದ ಸೆಕ್ರೆಟರಿ ಆಫ್ ಸ್ಟೇಟ್ ಯಾಗಿರುವ ಹಾಗು ಅನುಭವಿ ಡಿಪ್ಲೊಮ್ಯಾಟ್ ನಾಗಿರುವ ಹೇನ್ರಿ ಕಿಸ್ಸಿಂಜರ್ ಅವರು  ಶಿರಿಯಾ ಮತ್ತು ರಶಿಯಾದ ಒಪ್ಪಂದದ ಬಗ್ಗೆ ತನ್ನ ಸಂದೇಹ ವ್ಯಕ್ತಪಡಿಸಿದ್ದಾರೆ. ಪುತೀನಿನವರು ಹೇಳಿದಂತೆ ಕಿಸ್ಸಿಂಜರ್ ಕೂಡ ಶಿರಿಯಾ ಕೇವಲ ೯೦% ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಮಾಡಿ ಉಳಿದುದನ್ನು ಹಾಗೆಯೇ ಇಡಲಿಕ್ಕಿದೆಯೆಂದು ಹೇಳಿರುವರು. ಹಾಗೆಯೇ ಈ ಉಳಿದಿರುವ ಒಟ್ಟು  ರಾಸಾಯನಿಕ ಶಸ್ತ್ರಾಸ್ತ್ರಗಳು ಕೂಡ ಭವಿಷ್ಯದಲ್ಲಿ ಅಪಾಯಕಾರಿಯಾಗಲಿಕ್ಕಿದೆಯೆಂದು ಹೇಳಿರುವರು. ಆದರೆ ಇವರು ಒಂದು ಕಡೆಯಲ್ಲಿ ಶಿರಿಯಾವನ್ನು ದೂರಿದರೂ ಇನ್ನೊಂದು ಕಡೆಯಲ್ಲಿ ಕಿಸ್ಸಿಂಜರ್, ರಶಿಯಾದವರು ಶಿರಿಯಾದವರೊಡನೆ ಮಾಡಿಕೊಂಡ ಒಪ್ಪಂದವನ್ನು ನಂಬುವದು ಯು ಎಸ್ ನ ಹಿತಕ್ಕಾಗಿರುವುದೆಂದು ಆಶ್ಚರ್ಯದ ಮಾತು ಹೇಳಿರುವರು.


 Bashar al-Assad – President of Syria

ಈ ಮಧ್ಯದ ಕಾಲದಲ್ಲಿ ಅಂದರೆ ಕಳೆದ ಶುಕ್ರವಾರ ದ ಯು ಎನ್ ಸೆಕ್ಯುರಿಟಿ ಕೌಂಸಿಲ್ ಏಕಮತದಿಂದ ಅಸ್ಸಾದ್ ರೆಜಿಮ್ ದವರಿಗೆ, ಓಪಿಸಿಡಬ್ಲ್ಯೂಹೇಳಿದಂತೆ ಕೇಳಬೇಕಾದದ್ದು ಕಾನೂನುಬದ್ಧವಾಗಿದೆಂದು ರೆಜ್ಯುಲುಶನ್ ಮಾಡಿತು. ಆದರೆ ಕಳೆದ ವಾರದಲ್ಲಾದ ರಶಿಯಾ ಮತ್ತು ಪಾಶ್ಚಿಮಾತ್ಯ ಪ್ರಭುತ್ವದೊಡನಾದ ಒಪ್ಪಂದವನ್ನು ಇತ್ಯರ್ಥ್ಯಗೊಳಿಸಲು ಮಾಡಿದ ರೆಜ್ಯುಲುಶನಿನ ಪ್ರಕಾರ ಶಿರಿಯನ್ ಸರಕಾರ ಸಮ್ಮತಿಸಲು ತಪ್ಪಿದರೆ ಅದಕ್ಕೆ ಸೂಕ್ತವಾಗಿ ದಂಡಿಸುವ ಅಧಿಕಾರ ರೆಜ್ಯುಲುಶನ್ ಪ್ರಕಾರ ಸಿಗುವುದಿಲ್ಲ. ಮಧ್ಯಂತರದ ಕಾಲದಲ್ಲಿ ಶಿರಿಯಾದ ಮೇಲೆ ಜಾರಿಗೆ ತಂದ ರೆಜ್ಯುಲುಶನ್ ನಂತೆ ಶಿರಿಯಾದಲ್ಲಿದ್ದ ಯು ಎನ್ ನ ಶಸ್ತ್ರಾಸ್ತ್ರಗಳ ನಿರೀಕ್ಷಿಕರು ಒಟ್ಟು ಏಳು ಸ್ಥಳಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಉಪಯೋಗ ಮಾಡಲಾಗಿರುವುದಾಗಿ ತನ್ನ ಪರೀಕ್ಷಣೆಯನ್ನು ಮಾಡಿ ತಿಳಿಸಿದರು. ಅದರಲ್ಲಿ ಶಿರಿಯಾದ ನಾಗರಿಕರ ಮೇಲೆ ೨೧ ಅಗಷ್ಟ್ ನಂತರ ಮಾಡಲಾದ ಮೂರು ಆಕ್ರಮಣಗಳ ಘಟನೆಗಳನ್ನು ಕೂಡ ತಿಳಿಸಲಾಯಿತು. ಎಲ್ಲಾ ಪಕ್ಷದವರು ಕೂಡಿ ಮಿಡಲ್ ಈಸ್ಟೀನ ಮೇಲೆ ಬಂದ ಯುದ್ಧದ ಮೋಡವನ್ನು ಸರಿಸಲು ಒಮ್ಮತವಾಗಿದ್ದರೂ ಎರಡು ಪಕ್ಷಗಳಲ್ಲಿದ್ದ ತೀಕ್ಷ್ಣ ವಿರುದ್ದ ಅಭಿಪ್ರಾಯಗಳು ಇನ್ನು ಮುಂದೆಯೂ ಉಳಿಯಲಿಕ್ಕಿದೆ.
(ಮುಂದುವರಿಯಲಿದೆ...)

Saturday 19 October 2013

ಪರಮ ಪೂಜ್ಯ ಬಾಪೂರವರು ಕೊಟ್ಟ ೧೩ ಕಲಮಿನ (ನಿರ್ದಿಷ್ಟ) ಕಾರ್ಯಕ್ರಮಗಳು

ಹನ್ನೊಂದು ವರ್ಷಗಳ ಹಿಂದೆ ಅಂದರೆ ೩ ಅಕ್ಟೋಬರ್ ೨೦೦೨ರ ದಿನದಂದು, ಪರಮ ಪೂಜ್ಯ ಬಾಪೂರವರು ಹೃದಯ ಸ್ಪರ್ಷಿಸುವ ಹಾಗು ಪ್ರೇರಿಸುವ ಭಾಷಣವನ್ನು ಮಾಡಿದ್ದಾಗ ೧೩ ಕಲಮಿನ ಕಾರ್ಯಕ್ರಮಗಳನ್ನು ಕಲ್ಪಿಸಿದ್ದರು. ಈ ಕಾರ್ಯಕ್ರಮಗಳು ಇಂದಿಗೆ ಕಾರ್ಯರತವಾಗಿದ್ದು ಪರಮಪೂಜ್ಯ ಬಾಪೂರವರ ಮಾರ್ಗದರ್ಶನದಲ್ಲಿ ಸಫಲವಾಗಿ ನಡೆಯುತ್ತಿದ್ದು ಸಾವಿರಾರು ಶ್ರದ್ಧಾವಾನರು ಸ್ವಯಂ ಪ್ರೇರಿತರಾಗಿ ಪೂರ್ಣ ಶಕ್ತಿ ಹಾಗು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹನ್ನೊಂದು ವರ್ಷಗಳು ಕಳೆದರೂ ಅದರ ಮಹತ್ವ ಹೇತುಗರ್ಭಿತವಾಗಿ ಉಳಿದು ಮುಂದೆ ಬರುವ ವರ್ಷಗಳಲ್ಲಿ ಹಾಗೆಯೇ ಸಂಗತಮತವಾಗಿ ಮುಂದುವರಿಯಲ್ಲಿಕ್ಕಿದೆ.



ಆದ್ದರಿಂದ ಇವತ್ತಿನಿಂದ ಬಾಪೂರವರು ವಿವರಿಸಿದಂತೆ ಈ ಕಾರ್ಯಕ್ರಮದ ೧೩ ಕಲಮುಗಳು ಅಂತರ್ಭೂತವಾಗಿರುವ ಒಂದು ವಿಡಿಯೋ ಸಿರೀಜನ್ನು ನಾನು ಪ್ರಾರಂಭಿಸಲ್ಲಿದ್ದೇನೆ. ಇವತ್ತು ನಾನು ಈ ಪ್ರವಚನದ ಪೀಠಿಕೆಯನ್ನು ಪ್ರಸಿದ್ದ ಮಾಡಲಿದ್ದೇನೆ. ಮುಂದಕ್ಕೆ ನಾನು ಈ ಕಾರ್ಯಕ್ರಮದಲ್ಲಿದ್ದ ೧೩ ಕಲಮಿನ ಪ್ರತಿಯೊಂದು ಕಲಮಿನ ಬಗ್ಗೆ ಪ್ರದರ್ಶಿಸಲಿದ್ದೇನೆ.