Thursday 26 September 2013

ವಿಶ್ವದ ರಹಸ್ಯ ತ್ರಿವಿಕ್ರಮ - π (Pi)

ಕಳೆದ ಹಲವು ವಾರಗಳಿಂದ ಪರಮಪೂಜ್ಯ ಬಾಪೂರವರ ಪ್ರವಚನಗಳು ಶ್ರೀ ಅನಿರುದ್ಧ ಗುರುಕ್ಷೇತ್ರಮ್ ಮಂತ್ರದಲ್ಲಿರುವ ಅಂಕುರಮಂತ್ರದ ಭಾಗದಲ್ಲಿಯ ಮೂರನೇ ಪದವಾದ  "ಓಂ" ರಾಮವರದಾಯಿನಿ ಶ್ರೀಮಹಿಷಾಸುರಮರ್ದಿನೈ ನಮ: |" ದ ಮೇಲೆ ಆಗುತ್ತಿದೆ.


ಈ ಪ್ರವಚನದಲ್ಲಿ ಬಾಪೂರವರು ನಮಗೆ ಪರಮೇಶ್ವರಿ ಸೂತ್ರ  (algorithms) ಹಾಗು ಶುಭಚಿಹ್ನೆಗಳ ಪರಿಚಯವನ್ನು ಮಾಡಿಕೊಟ್ಟರು. ಈ ಸೂತ್ರದ ಮೂಲಕ ಬಾಪೂರವರು ನಮಗೆ ಸ್ಕಂದಚಿಹ್ನೆ, ಸ್ವಸ್ತಿಕ, ಸೃಷ್ಟಿಯ ಸೂರ್ಯ ಹಾಗು ಚಂದ್ರ, ದೀಪ, ಆರತಿಯಂತಹ ಅನೇಕ algorithms ಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಹೇಳಿದರು.

ಅದರನಂತರ ಜುಲೈ ತಿಂಗಳಿನಲ್ಲಿ ಬಾಪೂರವರು  ಪ್ರವಚನವನ್ನು ಆರಂಭ ಮಾಡುವ ಮೊದಲು ನಮಗೆ ಹೇಳಿದ್ದರು, "ಇವತ್ತು ನಮಗೆ ವಿಶ್ವದ ಬಹಳ ದೊಡ್ಡ ರಹಸ್ಯವನ್ನು ನೋಡಬೇಕಾಗಿದೆ" ಮತ್ತು ಈ ಪ್ರವಚನದಲ್ಲಿ ಬಾಪೂರವರು ಪ್ರಶ್ನೆ ಕೇಳಿದ್ದರು, ಗಣಿತದಲ್ಲಿರುವ Pi (π) constant (ಸ್ಥಿರಾಂಕ) ಹೇಗೆ ನಿರ್ಮಾಣವಾಯಿತು? ಮತ್ತು ಅದರ ಉತ್ತರ ಕೊಡುವಾಗ ತಿಳಿಸಿ ಹೇಳಿದರು, Pi (π) ಈ ಸ್ಥಿರಾಂಕ ಸೃಷ್ಟಿಯಲ್ಲಿ ಎಂದೂ ಬದಲಾಯಿಸುವುದಿಲ್ಲ ಹಾಗೆಯೇ ಈ ಸ್ಥಿರಾಂಕವೆಂದರೆ ವರ್ತುಳದ ಪರೀಘ ಭಾಗಿಲೆ ವ್ಯಾಸ. ಇದನ್ನು ಹೇಳುವಾಗ ಹನುಮಂತನೊಡನೆ ಇದರ ಸಂಬಂಧ ಹೇಗಿದೆ, ಹನುಮಂತನ ಈ ವರ್ತುಳದ ಸಂಬಂಧ ಹೇಗಾಗಿರುವುದನ್ನು ವಿವರಿಸುವಾಗ ಶ್ರೀಮಾರುತಿ ಸ್ತ್ರೋತ್ರದ" ಬ್ರಹ್ಮಾಂಡಭೋವತೆ ವೇಢೆ ವಜ್ರ ಪುಚ್ಛೆ ಕರು ಶಕೆ " ಈ ಸಾಲಿನ ಉಲ್ಲೇಖ ಮಾಡಿ ತಿಳಿಸಿದರು.  ಅದರ ನಂತರ ಈ ವರ್ತುಳಾಕೃತಿಯಾದ ಬ್ರಹ್ಮಾಂಡಕ್ಕೆ ಹನುಮಂತನ ಬೀಲದ ಸುತ್ತು ಹೇಗೆ ಚಿರಕಾಲದತನಕ ಇರುವುದನ್ನು ಕೂಡ ಬಾಪೂ ಸ್ಪಷ್ಟ ಮಾಡಿದರು.

ಹಿಂದೆ ಮಾಡಿರುವ ಪ್ರವಚನದಲ್ಲಿ ಅಂದರೆ ೮ ಆಗಷ್ಟ್ ೨೦೧೩ ರ ಪ್ರವಚನದಲ್ಲಿ ಬಾಪೂರವರು Pi (π) ಸ್ಥಿರಾಂಕದ ಮುನ್ನೂರ ಅರವತ್ತು ದಶಾಂಶದ ತನಕ ಬೆಲೆಯನ್ನು ತೋರಿಸಿಕೊಟ್ಟರು. ಈ ಬೆಲೆಯನ್ನು ಐದು-ಐದರ ಭಾಗ (set) ದಲ್ಲಿ ತೋರಿಸಿ ಅದು ಐದು-ಐದರ ಸೆಟ್ಟಿನಲ್ಲಿ ಯಾಕಿರುವುದನ್ನು ವಿಶದ ಮಾಡಿದರು.

ಆದರೆ ಅನೇಕರ ತಪ್ಪು ಕಲ್ಪನೆಯಿರುವುದೇನೆಂದರೆ ೨೨/೭ ಇದು Pi (π)  ಅದರ ಸರಿಯಾದ ಬೆಲೆ (exact value) ಆಗಿರುವದು. ಆದರೆ ಅದು ಹಾಗಿರದೆ  Pi (π) ಒಂದು ಸ್ಥಿರಾಂಕವಾಗಿದೆ. ’Pi or Π is an irrational number, which means that it cannot be expressed exactly as a ratio of any two integers. Fractions such as 22/7 are commonly used as an approximation of Π; no fraction can be its exact value.’ ಗಣಿತಜ್ನರು ಇಷ್ಟರವರೆಗೆ ದಶಾಂಶ ಚಿಹ್ನೆಯ ಮುಂದೆ ಐದು ದಶಲಕ್ಷ ಅಂಕೆಯ ತನಕ Pi (π) ಅದರ ಬೆಲೆಯನ್ನು ಕಂಡುಹಿಡಿದಿದ್ದಾರೆ.

ಭಾರತೀಯ ಅಧ್ಯಾತ್ಮ ಶಾಸ್ತ್ರದಲ್ಲಿ  Pi (π) ಈ ಸಂಜ್ನೆಯನ್ನು ತ್ರಿಪುರಾರಿ ತ್ರಿವಿಕ್ರಮ ಚಿಹ್ನೆಯಿಂದ ತೋರಿಸಲಾಗುತ್ತಿದೆ ಎಂದು ಬಾಪೂರವರು ವಿಶದ ಮಾಡಿದರು. ಇದನ್ನು ಹೇಳುವಾಗ ಬಾಪೂರವರು ಮುಂದೆ ಹೇಳಿದರು, "ಈ ಬ್ರಹ್ಮಾಂಡದ ಅಂದರೆ ಆದೀಮಾತೆಯು ನಿರ್ಮಾಣ ಮಾಡಿರುವ ವಿಶ್ವದ ವಿಸ್ತಾರವು ಸಂತುಲಿತವಾಗಿದೆ. ಅದರ ಮಿತಿ ಅಂದರೆ (ಲಿಮಿಟ್) ಹನುಮಂತನಾಗಿರುವನು. ಆದ್ದರಿಂದಲೇ ಅವನು ಪ್ರಥಮಪುತ್ರ (ದತ್ತಾತ್ರೇಯ ಸ್ವರೂಪ ಶುಭಪ್ರಕಾಶ) ನಾಗಿರುವನು. ಮತ್ತು ಈ ಬ್ರಹ್ಮಾಂಡದ ವ್ಯಾಸವು ಈ ತ್ರಿವಿಕ್ರಮ (ಹರಿಹರ) ಅಂದರೆ ಮಹಾವಿಷ್ನು ಮತ್ತು ಪರಮಶಿವ ಏಕತ್ರಿತವಾಗಿರುವದು; ಶ್ರೀರಾಮ ಮತ್ತು ಹನುಮಂತ ಏಕತ್ರಿತ; ಶೌರ್ಯ ಹಾಗು ಕ್ಷಮೆ ಏಕತ್ರಿತವಾಗಿರುವಂತೆ ಇರುವದು.

೨೨/೭ ಈ ಗಣಿತಸಂಖ್ಯೆಯು  Pi (π) ನ approximation ಅಂದರೆ ಅಂದಾಜು ಹಾಕಿದ ಬೆಲೆಯಾಗಿರುವದು ಅಂದರೆ ಭೌತಿಕ ಜಗತ್ತಿನ ಸಾಮಾನ್ಯ ಗಣಿತದಲ್ಲಿ ಅದನ್ನು ಈ ಪದ್ಧತಿಯಲ್ಲಿ ಉಪಯೋಗ ಮಾಡಲಾಗುವದು.

ಬಾಪೂರವರು ಹೇಳಿದ ಪ್ರಕಾರ ತ್ರಿವಿಕ್ರಮವು ಅನಂತನಾಗಿರುವುದರಿಂದ Pi (π) ಗಣಿತಸಂಜ್ನೆಯ exact ಬೆಲೆಯನ್ನು ತೆಗೆಯಲು ಅಸಾಧ್ಯವಾಗಿದೆ.

Friday 13 September 2013

ಯೂ ಟ್ಯೂಬ್ ವಿಡಿಯೋ ಚ್ಯಾನೆಲ್ - ಅನಿರುದ್ಧಾ ಪ್ರೇಮಸಾಗರದ ಪ್ರಸಾರಣೆ

ಇವತ್ತು ನಾವು ಅನಿರುದ್ಧ ಪ್ರೇಮಸಾಗರದ ಹೆಸರಿನಲ್ಲಿ (http://www.youtube.com/watch?v=iWnOGGfHRRQ) ಯೂ ಟ್ಯೂಬ್ ವಿಡಿಯೋ ಚ್ಯಾನೆಲಿನ ಸ್ವತಂತ್ರರಿತ್ಯವಾಗಿ ಪ್ರಸಾರಣೆಯನ್ನು ಮಾಡುತ್ತಿರುವುದನ್ನು ತಿಳಿಸಲು ನನಗೆ ಬಹಳ ಆನಂದವಾಗುತ್ತಿದೆ. ನೀವು ಕೇವಲ ಯೂ ಟ್ಯೂಬಿನ ಹೆಸರನ್ನು ಹುಡುಕಿದರೆ ಅದನ್ನು ನೀವು ನೋಡಬಹುದು. ಈ ಚ್ಯಾನೆಲಿನ ಮೂಲಕ ಮೊದಲ ಬಾರಿಗೆ ಪ್ರಕಟವಾದ ವಿಡಿಯೋಗಳನ್ನು ಕೆಳಗೆ ಕೊಡಲಾಗಿದೆ.




ಅನಿರುದ್ಧ ಪ್ರೇಮಸಾಗರದ ಈ ಚ್ಯಾನೆಲ್ ಶ್ರದ್ಧಾವಾನರರಿಂದ ಶ್ರದ್ಧಾವಾನರಿಗಾಗಿರುವುದು. ಪ್ರಾರಂಭದಲ್ಲಿ, ಎರಡು ಮೂರು ವಾರಗಳ ಅವಧಿಯಲ್ಲಿ ಅನಿರುದ್ಧಾ ಪ್ರೇಮಸಾಗರ ಚ್ಯಾನೆಲಿನಲ್ಲಿ ನಾವು ೧೫೦ ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಅದರಲ್ಲಿ ಪರಮ ಪೂಜ್ಯ ಬಾಪೂರವರ ಕೆಲವಾರು ಸಂದರ್ಭಗಳಲ್ಲಿ, ಅಂದರೆ ದೊಡ್ಡ ಕಾರ್ಯಕ್ರಮಗಳಂತಹ ರಾಮನವಮಿ, ಗುರುಪೂರ್ಣಿಮೆ, ಅನಿರುದ್ಧ ಪೂರ್ಣಿಮ ಇತ್ಯಾದಿ, ಹಾಗೆಯೇ ಶ್ರದ್ಧಾವಾನರು ಆಚರಿಸುವತ್ತಿರುವ ಪಾದುಕಾ ಪೂಜನೆ, ಸಚ್ಚಿದಾನಂದ ಆನಂದೋತ್ಸವ, ಕಂಠಕೂಪ ಪಾಷಾಣ ಪೂಜೆ (೨೦೦೩) ಮತ್ತು ಧರ್ಮಚಕ್ರ ಪೂಜನೆ (೧೯೯೯) ಅದಲ್ಲದೆ ಇದರ ಮೊದಲು ಮಾಡಿರುವ ಹಲವಾರು ಕಾರ್ಯಕ್ರಮಗಳು, ಅದರಂತೆ ಅನಿರುದ್ಧ ಚಲಿಸದ ಸ್ಲೈಡ್ ಶೋಜ್, ಪಿಪಾಸದ ಅಭಂಗಗಳು,  ತನ್ನ ಮಿತ್ರರ ಹಾಗು ಶ್ರದ್ಧಾವಾನರ ಕೆಲವು ಕೌಟುಂಬಿಕ ಸಮಾರಂಭಗಳಿಗೆ ಬಾಪೂರವರು  ಬಂದು ಗೌರವಿಸಿದ್ದು ಮೊದಲಾದವುಗಳು ಇರುವವು. ಶ್ರದ್ಧಾವಾನರು ಮೇಲೆ ಹೇಳಿರುವ ದೊಡ್ಡ ಕಾರ್ಯಕ್ರಮಗಳ ಹಾಗು ಪಾದುಕಾ ಪೂಜನೆಯ ಆಚರಣೆಯ ವಿಡಿಯೋ ಫೂಟೇಜ್ ಅಥವಾ ಸ್ಲೈಡ್ ಶೋಜ್ ಅವರಲ್ಲಿದ್ದರೆ ಅದನ್ನು ನೇರವಾಗಿ aniruddhapremsagara@gmail.com ಗೆ ಕಳುಹಿಸಬಹುದು ಅಥವಾ ನೀವು ವಿಡಿಯೋಗಳನ್ನು ನಮಗೆ www.dropbox.com, Google Drive – www.google.com/drive ಅಥವಾ ಇನ್ನಿತರ ಸಂಬಂಧಿತ ಸೈಟ್ ಗಳ ಮೂಲಕ ಕಳುಹಿಸಬಹುದು. ಆದರೆ ಈ ಫೂಟೇಜಿನ ಕಾಲಾವಧಿ ಐದು ನಿಮಿಷಗಳ ಮೇಲಿರಬಾರದೆಂದು ಗಮನದಲ್ಲಿಡಬೇಕು. ಅದಾಗದಿದ್ದರೆ ಈ ವಿಡಿಯೋಗಳ ಸೀಡಿಯನ್ನು ಶ್ರೀ ಹರಿಗುರುಗ್ರಾಮದಲ್ಲಿ ಗುರುವಾರದಂದು ಅಥವಾ ಹ್ಯಾಪ್ಪಿ ಹೋಮ್ ನ ಎರಡನೆಯ ಮಾಳಿಗೆಯಲ್ಲಿಯ ಗುಣಸಂಕೀರ್ತನದ ವಿಭಾಗದಲ್ಲಿ ತಂದು ಕೊಡಬಹುದು.

Monday 26 August 2013

ಇಂಗ್ಲೀಷ್ ಭಾಷೆಯನ್ನು ಕಲಿಯಲು ನಂದಾಯಿಯವರು ಬರೆದ ಪುಸ್ತಕಾದ ಪ್ರಕಾಶನೆ



ನಂದಾಯಿಯವರು ಆತ್ಮಬಲದ ವರ್ಗದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾಗ

೨೦೧೦ ರ ಮೇ ೬ ರಂದು ’ರಾಮರಾಜ್ಯ ೨೦೨೫’ರ ಸಂಕಲ್ಪನೆಯ ಮೇಲೆ ಆದ ಪರಮಪೂಜ್ಯ ಬಾಪೂರವರ ಪ್ರವಚನವನ್ನು ಶ್ರದ್ಧಾವಾನರು ಕೇಳಿದ್ದಾರೆ. ಈ ಪ್ರವಚನದಲ್ಲಿ ಬಾಪೂರವರು ಅನೇಕವಿಧದ ವಿಷಯಗಳ ಮೇಲೆ ಮಹತ್ವಪೂರ್ಣವಾದ ಮಾತುಗಳನ್ನು ತಿಳಿಸಿರುವರು. ಅದರಲ್ಲಿ ಒಂದು ಮಹತ್ವದ ವಿಷಯವಿತ್ತು, ಅದೆಂದರೆ ’ಒಳ್ಳೆಯ ಪ್ರಕಾರದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಕಲಿಯುವದು. ಆಗ ಮಾತನಾಡುವಾಗ ಬಾಪೂರವರು ಹೇಳಿದ್ದರು,’ಇವತ್ತು ಇಂಗ್ಲೀಷ್ ಭಾಷೆಯು ಜಗತ್ತಿನ ವ್ಯವಹಾರದ ಭಾಷೆಯಾಗಿದೆ. ಮಾತೃಭಾಷೆಯ ಅಭಿಮಾನವಿರಬೇಕು, ಆದರೆ ಇಂದಿನ ಸಮಯದಲ್ಲಿ ನಮ್ಮ ಸಾಮಾಜಿಕ ಜೀವನದಲ್ಲಿ ಇಂಗ್ಲೀಷನ್ನು ಸುಧಾರಿಸುವುದು ಆವಶ್ಯಕವಾಗಿದೆ. ನಮಗೆ ವಿಶ್ವದ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ನಮಗೆ ನಿರರ್ಗಳವಾಗಿ (ತಡೆಯಿಲ್ಲದೆ) ಇಂಗ್ಲೀಷ್ ಮಾತನಾಡಲು ಬರಬೇಕು. ಅದಕ್ಕಾಗಿ ನಾವು ’ಅನಿರುದ್ದಾಜ್ ಇನ್ಸ್ಟಿಟ್ಯೂಟ್ ಆಂಡ್ ಲಿಂಗ್ವಿಸ್ಟಿಕ್ಸ್’ ಈ ಸಂಸ್ಥೆಯ ಸ್ಥಾಪನೆ ಮಾಡುತ್ತಿದ್ದೇವೆ. ಅದರ ನಂತರ ಬಾಪೂ ಹೇಳಿದ್ದರು,’ಅನೇಕ ಜನರು ಇಂಗ್ಲೀಷ್ ಮಾತನಾಡಬೇಕಾದರೆ ಮೊದಲು ತನ್ನ ಮಾತೃಭಾಷೆಯಲ್ಲಿ ಅದರ ವಿಚಾರವನ್ನು ಮಾಡುತ್ತಾರೆ ನಂತರ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಇದು ತಪ್ಪು. ಈ ತರಹ ವಿಚಾರ ಮಾಡುವುದರಲ್ಲಿ ಹಾಗು ವ್ಯಕ್ತ ಮಾಡುವಾಗ ಒಂದು ಕಂದರ ನಿರ್ಮಾಣವಾಗುವದು. ಈ ಕಂದರದಿಂದಾಗಿ ಭಾಷೆಯ ಪ್ರವಾಹ ಕುಂದುವದು. ಭಾಷೆಗೆ ಹರಿತವಿರುವುದು ಮಹತ್ವದ್ದಾಗಿರುವದು ಅದರ ನಿರರ್ಗಳತೆಯು ಮಹತ್ವದ್ದಾಗಿದೆ.

ಹಾಗೆಯೇ ಈ ಇನ್ಸ್ಟಿಟ್ಯೂಟಿನ ಪ್ರಮುಖ ಹಾಗು ಸರ್ವೇಸರ್ವ ಸ್ವತ: ’ಸೌ. ಸ್ವಪ್ನಗಂಧಾವೀರಾ ಅನಿರುದ್ಧ ಜೋಶಿ’ (ಅಂದರೆ ನಮ್ಮೆಲ್ಲರ ಪ್ರೀತಿಯ ನಂದಾಯಿ) ಇರುವರೆಂದು ಆ ಸಮಯದಲ್ಲಿ ಬಾಪೂರವರು ವ್ಯಕ್ತ ಮಾಡಿರುವರು. ನಮಗೆಲ್ಲರಿಗೆ ಗೊತ್ತಿದ್ದಂತೆ ಕಳೆದ ಅನೇಕ ವರ್ಷಗಳಿಂದ ’ಸ್ತ್ರೀಯರ ಆತ್ಮಬಲವಿಕಾಸ ವರ್ಗ’ವನ್ನು ಅವರು ನಡೆಸುತ್ತಿದ್ದು ಅದರಲ್ಲಿ ಇಂಗ್ಲೀಷ್ ಕಲಿಯುವದು ಆತ್ಮಬಲದ ಅಭ್ಯಾಸಕ್ರಮದಲ್ಲಿಯ ಒಂದು ಮಹತ್ವದ ಅಂಗವಾಗಿದೆ. ಆತ್ಮಬಲದ ವರ್ಗದಲ್ಲಿ ಪ್ರವೇಶಿರುವ ಕೆಲವು ಸ್ತ್ರೀಯರಿಗೆ ಆರಂಭದಲ್ಲಿ ಇಂಗ್ಲೀಷ್ ಭಾಷೆಯ ಗಂಧವಿರುವಿದಿಲ್ಲ. ಆದರೆ ಅಂತಹ ಸ್ತ್ರೀಯರಿಗೆ ನಂದಾಯಿಯವರು ಆರು ತಿಂಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಹಾಗು ಬರೆಯಲು ಕಲಿಸುತ್ತಾರೆ. ಇದರಿಂದಾಗಿ ಆತ್ಮಬಲದ ಕ್ಲಾಸ್ ಮಾಡಿದ ಸ್ತ್ರೀಯರು ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ಇಂಗ್ಲೀಷ್ ಭಾಷೆಯನ್ನು ಉಪಯೋಗಿಸಲು ಕಲಿಯುತ್ತಾರೆ ಹಾಗೆಯೇ ಆತ್ಮಬಲದ ಕೋರ್ಸಿನ ಮುಕ್ತಾಯದ ಸಮಯದಲ್ಲಿರುವ ಸ್ನೇಹಸಮ್ಮೇಲನದಲ್ಲಿ ಇದರಲ್ಲಿದ್ದ ಕೆಲವು ಸ್ತ್ರೀಯರು ಇಂಗ್ಲೀಷ್ ನಾಟಕದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿಕೊಳ್ಳುತ್ತಾರೆ.

ಇದನ್ನು ಅನುಸರಿಸಿ, ಸ್ವತ: ನಂದಾಯಿಯವರು ಇಂಗ್ಲೀಷ್ ಭಾಷೆಯನ್ನು ಕಲಿಯಲು ಉಪಯುಕ್ತವಾಗಲೆಂದು ಬರೆದ ಪುಸ್ತಕಗಳು ಸಂಚಯದ ಸ್ವರೂಪದಲ್ಲಿ ಬಹಳ ಬೇಗನೇ ಪ್ರಕಾಶಿತವಾಗುತ್ತಿದೆ. ಈ ಪುಸ್ತಕದ ಮೂಲಕ ಶ್ರದ್ಧಾವಾನರಿಗೆ ಇಂಗ್ಲೀಷ್ ಕಲಿಯಲು ಸುಲಭ ಹಾಗು ಸಹಜ ಮಾರ್ಗ ತೆರೆಯಲಿದೆ. ಈ ಪುಸ್ತಕವನ್ನು ನೋಡುವದು, ಓದುವದು ಹಾಗು ಉಪಯೋಗಿಸುವದು ಅಂದರೆ ಅದೊಂದು ಬಹಳ ಭಿನ್ನ ಪ್ರಕಾರದ ಆನಂದದಾಯಿಯಾದ ಅನುಭವವಾಗಲಿದೆ. ಹಾಗೆಯೇ ಬಾಪೂರವರಿಗೆ ಅಪೇಕ್ಷಿತವಾದ ರಾಮರಾಜ್ಯದ ಪ್ರವಾಸದಲ್ಲಿನ ಇದೊಂದು ಮಹತ್ವದ ಹೆಜ್ಜೆಯಾಗಿರುವುದೆಂದು ಮಾತ್ರ ನಿಶ್ಚಿತ.