Monday 26 August 2013

ಇಂಗ್ಲೀಷ್ ಭಾಷೆಯನ್ನು ಕಲಿಯಲು ನಂದಾಯಿಯವರು ಬರೆದ ಪುಸ್ತಕಾದ ಪ್ರಕಾಶನೆ



ನಂದಾಯಿಯವರು ಆತ್ಮಬಲದ ವರ್ಗದಲ್ಲಿ ಇಂಗ್ಲೀಷ್ ಕಲಿಸುತ್ತಿದ್ದಾಗ

೨೦೧೦ ರ ಮೇ ೬ ರಂದು ’ರಾಮರಾಜ್ಯ ೨೦೨೫’ರ ಸಂಕಲ್ಪನೆಯ ಮೇಲೆ ಆದ ಪರಮಪೂಜ್ಯ ಬಾಪೂರವರ ಪ್ರವಚನವನ್ನು ಶ್ರದ್ಧಾವಾನರು ಕೇಳಿದ್ದಾರೆ. ಈ ಪ್ರವಚನದಲ್ಲಿ ಬಾಪೂರವರು ಅನೇಕವಿಧದ ವಿಷಯಗಳ ಮೇಲೆ ಮಹತ್ವಪೂರ್ಣವಾದ ಮಾತುಗಳನ್ನು ತಿಳಿಸಿರುವರು. ಅದರಲ್ಲಿ ಒಂದು ಮಹತ್ವದ ವಿಷಯವಿತ್ತು, ಅದೆಂದರೆ ’ಒಳ್ಳೆಯ ಪ್ರಕಾರದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಲು ಕಲಿಯುವದು. ಆಗ ಮಾತನಾಡುವಾಗ ಬಾಪೂರವರು ಹೇಳಿದ್ದರು,’ಇವತ್ತು ಇಂಗ್ಲೀಷ್ ಭಾಷೆಯು ಜಗತ್ತಿನ ವ್ಯವಹಾರದ ಭಾಷೆಯಾಗಿದೆ. ಮಾತೃಭಾಷೆಯ ಅಭಿಮಾನವಿರಬೇಕು, ಆದರೆ ಇಂದಿನ ಸಮಯದಲ್ಲಿ ನಮ್ಮ ಸಾಮಾಜಿಕ ಜೀವನದಲ್ಲಿ ಇಂಗ್ಲೀಷನ್ನು ಸುಧಾರಿಸುವುದು ಆವಶ್ಯಕವಾಗಿದೆ. ನಮಗೆ ವಿಶ್ವದ ಸ್ಪರ್ಧೆಯಲ್ಲಿ ಉಳಿದುಕೊಳ್ಳಬೇಕಿದ್ದರೆ ನಮಗೆ ನಿರರ್ಗಳವಾಗಿ (ತಡೆಯಿಲ್ಲದೆ) ಇಂಗ್ಲೀಷ್ ಮಾತನಾಡಲು ಬರಬೇಕು. ಅದಕ್ಕಾಗಿ ನಾವು ’ಅನಿರುದ್ದಾಜ್ ಇನ್ಸ್ಟಿಟ್ಯೂಟ್ ಆಂಡ್ ಲಿಂಗ್ವಿಸ್ಟಿಕ್ಸ್’ ಈ ಸಂಸ್ಥೆಯ ಸ್ಥಾಪನೆ ಮಾಡುತ್ತಿದ್ದೇವೆ. ಅದರ ನಂತರ ಬಾಪೂ ಹೇಳಿದ್ದರು,’ಅನೇಕ ಜನರು ಇಂಗ್ಲೀಷ್ ಮಾತನಾಡಬೇಕಾದರೆ ಮೊದಲು ತನ್ನ ಮಾತೃಭಾಷೆಯಲ್ಲಿ ಅದರ ವಿಚಾರವನ್ನು ಮಾಡುತ್ತಾರೆ ನಂತರ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಇದು ತಪ್ಪು. ಈ ತರಹ ವಿಚಾರ ಮಾಡುವುದರಲ್ಲಿ ಹಾಗು ವ್ಯಕ್ತ ಮಾಡುವಾಗ ಒಂದು ಕಂದರ ನಿರ್ಮಾಣವಾಗುವದು. ಈ ಕಂದರದಿಂದಾಗಿ ಭಾಷೆಯ ಪ್ರವಾಹ ಕುಂದುವದು. ಭಾಷೆಗೆ ಹರಿತವಿರುವುದು ಮಹತ್ವದ್ದಾಗಿರುವದು ಅದರ ನಿರರ್ಗಳತೆಯು ಮಹತ್ವದ್ದಾಗಿದೆ.

ಹಾಗೆಯೇ ಈ ಇನ್ಸ್ಟಿಟ್ಯೂಟಿನ ಪ್ರಮುಖ ಹಾಗು ಸರ್ವೇಸರ್ವ ಸ್ವತ: ’ಸೌ. ಸ್ವಪ್ನಗಂಧಾವೀರಾ ಅನಿರುದ್ಧ ಜೋಶಿ’ (ಅಂದರೆ ನಮ್ಮೆಲ್ಲರ ಪ್ರೀತಿಯ ನಂದಾಯಿ) ಇರುವರೆಂದು ಆ ಸಮಯದಲ್ಲಿ ಬಾಪೂರವರು ವ್ಯಕ್ತ ಮಾಡಿರುವರು. ನಮಗೆಲ್ಲರಿಗೆ ಗೊತ್ತಿದ್ದಂತೆ ಕಳೆದ ಅನೇಕ ವರ್ಷಗಳಿಂದ ’ಸ್ತ್ರೀಯರ ಆತ್ಮಬಲವಿಕಾಸ ವರ್ಗ’ವನ್ನು ಅವರು ನಡೆಸುತ್ತಿದ್ದು ಅದರಲ್ಲಿ ಇಂಗ್ಲೀಷ್ ಕಲಿಯುವದು ಆತ್ಮಬಲದ ಅಭ್ಯಾಸಕ್ರಮದಲ್ಲಿಯ ಒಂದು ಮಹತ್ವದ ಅಂಗವಾಗಿದೆ. ಆತ್ಮಬಲದ ವರ್ಗದಲ್ಲಿ ಪ್ರವೇಶಿರುವ ಕೆಲವು ಸ್ತ್ರೀಯರಿಗೆ ಆರಂಭದಲ್ಲಿ ಇಂಗ್ಲೀಷ್ ಭಾಷೆಯ ಗಂಧವಿರುವಿದಿಲ್ಲ. ಆದರೆ ಅಂತಹ ಸ್ತ್ರೀಯರಿಗೆ ನಂದಾಯಿಯವರು ಆರು ತಿಂಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಹಾಗು ಬರೆಯಲು ಕಲಿಸುತ್ತಾರೆ. ಇದರಿಂದಾಗಿ ಆತ್ಮಬಲದ ಕ್ಲಾಸ್ ಮಾಡಿದ ಸ್ತ್ರೀಯರು ದೈನಂದಿನ ವ್ಯವಹಾರದಲ್ಲಿ ಸಾಕಷ್ಟು ಇಂಗ್ಲೀಷ್ ಭಾಷೆಯನ್ನು ಉಪಯೋಗಿಸಲು ಕಲಿಯುತ್ತಾರೆ ಹಾಗೆಯೇ ಆತ್ಮಬಲದ ಕೋರ್ಸಿನ ಮುಕ್ತಾಯದ ಸಮಯದಲ್ಲಿರುವ ಸ್ನೇಹಸಮ್ಮೇಲನದಲ್ಲಿ ಇದರಲ್ಲಿದ್ದ ಕೆಲವು ಸ್ತ್ರೀಯರು ಇಂಗ್ಲೀಷ್ ನಾಟಕದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿಕೊಳ್ಳುತ್ತಾರೆ.

ಇದನ್ನು ಅನುಸರಿಸಿ, ಸ್ವತ: ನಂದಾಯಿಯವರು ಇಂಗ್ಲೀಷ್ ಭಾಷೆಯನ್ನು ಕಲಿಯಲು ಉಪಯುಕ್ತವಾಗಲೆಂದು ಬರೆದ ಪುಸ್ತಕಗಳು ಸಂಚಯದ ಸ್ವರೂಪದಲ್ಲಿ ಬಹಳ ಬೇಗನೇ ಪ್ರಕಾಶಿತವಾಗುತ್ತಿದೆ. ಈ ಪುಸ್ತಕದ ಮೂಲಕ ಶ್ರದ್ಧಾವಾನರಿಗೆ ಇಂಗ್ಲೀಷ್ ಕಲಿಯಲು ಸುಲಭ ಹಾಗು ಸಹಜ ಮಾರ್ಗ ತೆರೆಯಲಿದೆ. ಈ ಪುಸ್ತಕವನ್ನು ನೋಡುವದು, ಓದುವದು ಹಾಗು ಉಪಯೋಗಿಸುವದು ಅಂದರೆ ಅದೊಂದು ಬಹಳ ಭಿನ್ನ ಪ್ರಕಾರದ ಆನಂದದಾಯಿಯಾದ ಅನುಭವವಾಗಲಿದೆ. ಹಾಗೆಯೇ ಬಾಪೂರವರಿಗೆ ಅಪೇಕ್ಷಿತವಾದ ರಾಮರಾಜ್ಯದ ಪ್ರವಾಸದಲ್ಲಿನ ಇದೊಂದು ಮಹತ್ವದ ಹೆಜ್ಜೆಯಾಗಿರುವುದೆಂದು ಮಾತ್ರ ನಿಶ್ಚಿತ.

Monday 5 August 2013

ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)

Recipe of Wheat Concentrate (Gavhache sattva)
ಗೋದಿಯ  ಸತ್ವವನ್ನು ಸಿದ್ಧ ಮಾಡುವ ಪಾಕಕೃತಿ (ರೆಸಿಪಿ)



೨೭ ನೇ ಜೂನ್ ೨೦೧೩ ರ ಪ್ರವಚನದಲ್ಲಿ ಬಾಪೂರವರು ವಿಶದ ಮಾಡಿದ  ಗೋದಿಯ ಸತ್ವವನ್ನು ಸಿದ್ಧ ಮಾಡುವ ಪಾಕಕೃತಿಯನ್ನು (ರೆಸಿಪಿ) ಇಲ್ಲಿ ಕೊಡಲಾಗಿದೆ. ಗೋದಿಯನ್ನು ರಾತ್ರಿ ನೀರಿನಲ್ಲಿ ನೆನೆದಿಡಬೇಕು. ಈ ನೀರನ್ನು ಮರುದಿವಸ ತೆಗೆದುಹಾಕಿ ಆ ಗೋದಿಯನ್ನು ಪುನ: ಬೇರೆ ನೀರು ಹಾಕಿ ನೆನೆದಿಡಬೇಕು. ಮೂರನೇಯ ದಿವಸ ಈ ನೀರನ್ನು ತೆಗೆದುಹಾಕಿ ಇದೇ ಗೋದಿಯನ್ನು ನೀರಿನಲ್ಲಿ ನೆನೆದಿಡಬೇಕು. ನಾಲ್ಕನೇ ದಿವಸ ಗೋದಿಯ ನೀರನ್ನು ತೆಗೆದುಹಾಕಿದ ನಂತರ ಈ ನೆನೆದಿಟ್ಟ ಗೋದಿಯಲ್ಲಿ ಸ್ವಲ್ಪ ಬೇರೆ ನೀರು ಹಾಕಿ ಈ ಗೋದಿಯನ್ನು ರುಬ್ಬಿಕೊಳ್ಳಬೇಕು. (ಮಿಕ್ಸರಿನಲ್ಲಿ ಅಥವಾ ಕಲ್ಲಿನಲ್ಲಿ) ಈ ಪ್ರಕಾರ ರುಬ್ಬಿದ ಗೋದಿಯನ್ನು ಹಿಂಡಿ ಅದನ್ನು ಸೋಸಿಕೊಂಡು ಬಂದ ಮೆದು ಪದಾರ್ಥವನ್ನು ಒಂದು ಪಾತ್ರೆಯಲ್ಲಿ ತೆಗೆದು ಅದನ್ನು ಮುಚ್ಚಿಡಬೇಕು.

ಆರೇಳು ಗಂಟೆಯ ನಂತರ ಪಾತ್ರೆಯ ಮುಚ್ಚಳವನ್ನು ತೆಗೆದು ನೋಡಬೇಕು. ಗೋದಿಯ ಸತ್ವವು ಪಾತ್ರೆಯ ಬುಡದಲ್ಲಿದ್ದು ಮೇಲೆ ಕೇವಲ ನೀರು/ಸೋಸಿದ ನೀರು ಕಾಣುವದು. ಮೇಲೆ ಬಂದ ಸೋಸಿದ ನೀರು ತೆಗೆದುಹಾಕಬೇಕು. ಈ ಪ್ರಕಾರ ಸಿದ್ದವಾದ ಗೋದಿಯ ಸತ್ವವನ್ನು ಒಂದು ಸೀಸೆಯಲ್ಲಿ ಅಥವಾ ಡಬ್ಬಿಯಲ್ಲಿ ಹಾಕಿಡಬೇಕು.

ಪರ್ಯಾಯ ೧:
ಸ್ಥೂಲ ವ್ಯಕ್ಯಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ 
೨) ನೀರು - ನಾಲ್ಕು ವಾಟಿ
೩) ಹಿಂಗು - ಒಂದು ಚಿಕ್ಕ ಚಮಚೆ
೪) ಉಪ್ಪು (ರುಚಿಗನುಸಾರವಾಗಿ)
೫) ಜೀರಿಗೆ ಪುಡಿ (ರುಚಿಗನುಸಾರವಾಗಿ)
ಮೇಲೆ ಹೇಳಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಚಿಕ್ಕ (ಗ್ಯಾಸಿನ) ಉರಿಯ ಮೇಲೆ ಕುದಿಸಬೇಕು. ಈ ಮಿಶ್ರಣವನ್ನು ಸತತವಾಗಿ ತಿರಿಗಿಸುತ್ತಿರುವ ಆವಶ್ಯಕತೆ ಇದೆ, ಯಾಕೆಂದರೆ ಇದರ ಮುದ್ದೆಯಾಗಿ ಗಟ್ಟಿ ಆಗುವುದಿಲ್ಲ.

ಪರ್ಯಾಯ ೨ :-
ಕೃಶ (ತೆಳು) ವ್ಯಕ್ತಿಯರಿಗಾಗಿ :-
೧) ಗೋದಿಯ ಸತ್ವ - ಒಂದು ವಾಟಿ)
೨) ತುಪ್ಪ - ಎರಡು ಚಮಚೆ
೩) ಹಾಲು - ಒಂದು ವಾಟಿ
೪) ಸಕ್ಕರೆ - ಎರಡು ಚಮಚೆ
೫) ಏಲಕ್ಕಿ ಪುಡಿ (ರುಚಿಗನುಸಾರವಾಗಿ)
ಒಂದು ಪಾತ್ರೆಯಲ್ಲಿ ಎರಡು ಚಮಚೆ ತುಪ್ಪ ಹಾಕಿದ ನಂತರ ಇದರಲ್ಲಿ ಗೋದಿಯ ಸತ್ವವನ್ನು ಹಾಕಬೇಕು. ಆನಂತರ ಅದರಲ್ಲಿ ಒಂದು ವಾಟಿಯಷ್ಟು ಹಾಲು ಮತ್ತು ಎರಡು ಚಮಚೆ ಸಕ್ಕರೆ ಹಾಕಿ ಅದನ್ನು ಚಿಕ್ಕ ಗ್ಯಾಸಿನಲ್ಲಿ ಕುದಿಸಬೇಕು. ಏಲಕ್ಕಿ ಹುಡಿ (ಬೇಕಿದ್ದರೆ) ಹಾಕಿ ಅದನ್ನು ಸತತ ತಿರಿಗಿಸುತ್ತಿರಬೇಕು. ನುಣ್ಣಗಾದ ಮಿಶ್ರಣದಲ್ಲಿ ಮಿನುಗು ಬಂದ ಮೇಲೆ ಅದು ಚೆನ್ನಾಗಿ ಬೆಂದಿದೆಯೆಂದು ತಿಳಿದು ಗ್ಯಾಸ್ ಆರಿಸಬೇಕು.

ಗೋದಿಯ ಸತ್ವ ದಿನಕ್ಕೊಮ್ಮೆ ಒಂದು ಸಲವಾದರು ನಿತ್ಯ ಬಳಸುವ ವಾಟಿಯಷ್ಟು ತಿನ್ನಬೇಕು.

(ಟಿಪ್ಪಣೆ: ಈ ರೆಸಿಪಿಯ ವ್ಹಿಡಿಯೊ ಬೇಗನೇ ಕೊಡಲಾಗುವದು)

Saturday 29 June 2013

ಧಾರೀ ದೇವಿಯ (ಧಾರಾ ಮಾತಾ) ಪ್ರಕೋಪ

ಚಾರ್ (ನಾಲ್ಕು) ಧಾಮಿನ ಯಾತ್ರೆಯನ್ನು ಮಾಡುವ ಭಾವಿಕರ ಸಂರಕ್ಷಣೆಯನ್ನು ಧಾರೀದೇವಿಯು ಮಾಡುತ್ತಾಳೆಂದು ವಿಶ್ವಾಸವಿದೆ. ಆದ್ದರಿಂದಲೇ ಉತ್ತರಾಖಂಡದ ಶ್ರೀನಗರಿನ ಅಲಕನಂದಾ ನದಿಯ ದಡದಲ್ಲಿರುವ ಧಾರೀದೇವಿಯ ಮಂದಿರವನ್ನು ಸರ್ಕಾರವು ಬೀಳಿಸಬಾರದೆಂದು ಕಳೆದ ಎರಡು ವರ್ಷಗಳಿಂದ ಕೇಳಲಾಗುತ್ತಿತ್ತು. ಅಲಕನಂದಾ ನದಿಯ ಪ್ರವಾಹವನ್ನು ಧಾರೀದೇವಿಯು ನಿಯಂತ್ರಿತ ಮಾಡುವಳು ಮತ್ತು ಆ ನಿಯಂತ್ರಣದ ಕಾರಣದಿಂದಾಗಿ ಅಲಕಾನಂದಾ ನದಿಯ ಸ್ವರೂಪ ಸೌಮ್ಯವಾಗಿರುವದೆಂಬ ಅಲ್ಲಿಯ ಸ್ಥಾನಿಕ ಜನತೆಯರ ವಿಶ್ವಾಸವಿತ್ತು. ಆದ್ದರಿಂದಲೇ ಸ್ಥಾನಿಕ ಧಾರ್ಮಿಕ ಸಂಘಟನೆಯಿಂದ ಸರ್ವಸಾಮಾನ್ಯ ಜನರತನಕ ಎಲ್ಲರೂ ಧಾರೀದೇವಿಯ ಮಂದಿರದ ಕುರಿತಾಗಿ ಸರ್ಕಾರವು ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಾರದೆಂದು ವಿನಂತಿಸುತ್ತಿತ್ತು. ಆದರೆ ವಿಕಾಸಕ್ಕಾಗಿ ವಿದ್ಯುತ್ತಿನ ಆವಶ್ಯಕತೆವಿರುವ ಕಾರಣವನ್ನು ಮುಂದೆ ಮಾಡಿ ಸರ್ಕಾರವು ಈ ಕೋರಿಕೆಯ ಕಡೆ ದುರ್ಲಕ್ಷ ಮಾಡಿತು.  ಜೂನ್ ತಿಂಗಳಿನ ೧೬ ರಂದು ಸಾಯಂಕಾಲ ಆರು ಗಂಟೆಗೆ ಧಾರೀದೇವಿಯ ಮಂದಿರವನ್ನು ಬೀಳಿಸಲಾಯಿತು. ಮಂದಿರದಲ್ಲಿಯ ಧಾರೀದೇವಿಯ ಮೂರ್ತಿಯನ್ನು ಅಲ್ಲಿಂದ ಸ್ಥಲಾಂತರಿಸಲಾಯಿತು.

ಇದೇ ವೇಳೆಗೆ ಕೇದಾರ್ ನಾಥಿನಲ್ಲಿ ಮೋಡಸಿಡಿಯಿತು ಮತ್ತು ಅದರನಂತರ ಎರಡು ಗಂಟೆಗಳಲ್ಲಿ ಅತಿವೃಷ್ಟಿಯಾಗಿ ಗೊಂದಲ ಹರಡಿಸಿತು. ಚಾರ್ ಧಾಮಿನ ಯಾತ್ರೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದ ಭಾವಿಕರು ಈ ಸ್ಥಳದಲ್ಲಿ ಸಿಲುಕಿ ಬಿದ್ದರು. ಅತಿಯಾಗಿ ಸುರಿಯುವ ಮಳೆ, ಭೂಸ್ಖಲನದಿಂದ ಅಲ್ಲಿ ಸಿಲುಕಿರುವ ಭಾವಿಕರನ್ನು ಸುಖರೂಪವಾಗಿ ಹೊರಗೆ ತೆಗೆಯುವುದು ತೊಡಕಿನದ್ದಾಯಿತು. ಮತ್ತು ಈ ಆಪತ್ತಿನ ತೀವ್ರತೆಯು ಹೆಚ್ಚುತ್ತ ಹೋಯಿತು. ಈ ಪ್ರಕಾರದ ಆಪತ್ತಿಗಳು ಬಂದಾಗ ಅದಕ್ಕೆ ಯಾರು ಹೊಣೆಗಾರರು ಇದನ್ನು ಹುಡುಕುವ ಹೊಣೆಗಾರಿಕೆಯನ್ನು ಪ್ರಸಾರಮಾಧ್ಯಮವು ತಾವಾಗಿಯೇ ಸ್ವೀಕರಿಸುತ್ತದೆ. ಉತ್ತರಾಖಂಡದ ಆಪತ್ತಿಯ ನಂತರವೂ ಹೀಗೆಯೇ ಆಯಿತು. ಬಲಿಹೋದವರ ಸಂಖ್ಯೆ ಮತ್ತು ಅಲ್ಲಿ ಸಿಲುಕಿರುವ ಭಾವಿಕರ ಬಗ್ಗೆ ಮಾಹಿತಿಯನ್ನು ಕೊಡುವಾಗ , ಪರಿಸರದ ವಿಚಾರ ಮಾಡದೆ ತಿಳಿಗೇಡಿಯವರಂತೆ ಸಿದ್ಧ ಮಾಡಿದ ಯೋಜನೆಗಳು ಹಾಗು ಪ್ರಕಲ್ಪದ ಬಗ್ಗೆ ವೃತ್ತಾಂತವನ್ನು ಕೊಟ್ಟು ಪ್ರಸಾರಮಾಧ್ಯಮಗಳು  ಸರಕಾರವನ್ನು ಚುಚ್ಚ ತೊಡಗಿತು. ಆದರೆ ಇದನ್ನೆಲ್ಲ ಸ್ವೀಕರಿಸಿ ಕೂಡ, ಸ್ಥಾನಿಕ ಜನರು ಧಾರೀದೇವಿಯ ಮಂದಿರದಕಡೆ ಬೆರಳು ತೋರಿಸಿ ತನ್ನ ಅಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದರು.

ಕಳೆದ ೮೦೦ ವರ್ಷಗಳಿಂದ ಧಾರೀದೇವಿಯ ಮಂದಿರವು ಇದೇ ಸ್ಥಳದಲ್ಲಿತ್ತು. ಇದು ಪ್ರಾಚೀನ ಸಿದ್ಧಪೀಠವಾಗಿದೆಯೆಂದು ತಿಳಿಯಲಾಗಿದೆ. ಧಾರೀದೇವಿಯು ಕಾಲಿಮಾತೆಯ ಇನ್ನೊಂದು ರೂಪವೆಂದು ಧಾರಣೆಯಿದೆ. ಈ ಸಿದ್ಧಪೀಠದ ಬಗ್ಗೆ ಮಾಹಿತಿಯು ಶ್ರೀಮದ್ ಭಾಗವತದಲ್ಲಿ ಕೂಡ ನಮೂದಿಸಲಾಗಿದೆ. ಉತ್ತರಾಖಂಡದ ಶ್ರೀನಗರದ ಹತ್ತಿರ (ಜಮ್ಮು-ಕಾಶ್ಮೀರಿನ ಶ್ರೀನಗರವಲ್ಲ) ಕಾಲಿಯಾಸೂರವೆಂಬ ಸ್ಥಳದಲ್ಲಿರುವ ಈ ಧಾರೀದೇವಿಯ ಮಂದಿರವು ಸ್ಥಾನಿಕರ ಶೃದ್ಧೆಯ ಸ್ಥಾನವಾಗಿದೆ. ಧಾರೀದೇವಿಯ ಮೂರ್ತಿಯು ಬಹಳ  ಉಗ್ರವಾಗಿದ್ದರೂ ಆ ತಾಯಿಯು ಸ್ವೀಕರಸಿದ ಉಗ್ರರೂಪವು ನಮ್ಮೆಲ್ಲರ ರಕ್ಷಣೆಗಾಗಿಯೇ ಇರುವುದೆಂದು ಪಾರಂಪರಿಕ ತಿಳುವಳಿಕೆಯಾಗಿದೆ. ಇದರ ಕುರಿತಾಗಿ ಐತಿಹಾಸಿಕ ಕಥೆಗಳನ್ನು ಕೂಡ ಹೇಳಲಾಗುವದು.

೧೮೮೨ ರಲ್ಲಿ ಒಬ್ಬ ತಲೆತಿರುಕ ರಾಜನು ಈ ಮಂದಿರದೊಡನೆ ಹೀಗೆಯೇ ಕುಚೋದ್ಯ ಮಾಡಲು ಪ್ರಯತ್ನಿಸಿದಾಗ, ಆ ಸಮಯದಲ್ಲೂ ಕೂಡ ಭಯಂಕರ ನೈಸರ್ಗಿಕ ಸಂಕಟಗಳು ಉದ್ಭವಿಸಿತ್ತೆಂದು ಹೇಳಲಾಗುತ್ತದೆ. ಆದ್ದರಿಂದ ರಕ್ಷಣಕರ್ತ್ಯೆ ಧಾರೀದೇವಿಯ ಮಂದಿರದ ಬಗ್ಗೆ ಅಲ್ಲಿಯ ಸ್ಥಾನಿಕರ ಭಾವನೆಯು ಬಹಳ  ತೀವ್ರವಾಗಿರುವದು ಆಶ್ಚರ್ಯದಾಯಕದಲ್ಲ.

ಈ ಮಂದಿರವನ್ನು ಸರಕಾರವು ಬೀಳಿಸಿದರೆ, ಅದರ ಭಯಂಕರ ಪರಿಣಾಮವನ್ನು ಮಾತ್ರ ಎಲ್ಲರಿಗೂ ಸಹಿಸಬೇಕಾಗುವದು ಇದು ಅಲ್ಲಿಯ ಸ್ಥಾನಿಕರಿಗೆ ಮನದಟ್ಟಾಗಿತ್ತು. ಮತ್ತು  ಆದದ್ದು ಹಾಗೆಯೇ. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಕೇವಲ ಕೆಲವೇ ಗಂಟೆಗಳ ಕಾಲದೊಳಗೆ ಪ್ರಳಯಂಕಾರಿ ವೃಷ್ಟಿಯಾಗುತ್ತದೆ. ಗಂಗೆಯ ಉಪನದಿಯಾದ ಅಲಕನಂದೆಯು ತನ್ನ ರೌದ್ರಭೀಷಣ ರೂಪವನ್ನು ಪ್ರಕಟ ಮಾಡುತ್ತದೆ., ಇದು ಯೋಗಾಯೋಗದ ವಿಷಯವೇ ಅಲ್ಲವೆಂದು ಶ್ರದ್ಧಾವಾನರು ನಂಬುತ್ತಾರೆ. ಸ್ಥಾನಿಕ ಮಾಧ್ಯಮದವರು ಜನರ ಈ ಮಾತನ್ನು ಪ್ರಸಿದ್ಧ ಮಾಡಿದ್ದಾರೆ, ಇಲ್ಲಿಯ ಧಾರ್ಮಿಕ ಸಂಘಟನೆಗಳು ಮತ್ತು ಧರ್ಮಾಚಾರ್ಯರು ಕೂಡ ಧಾರೀದೇವಿಯ ಮಂದಿರವನ್ನು ಬೀಳಿಸಿರುವ ಸರ್ಕಾರವನ್ನು ಕಠೋರ ಶಬ್ದಗಳಲ್ಲಿ ದೂಷಿಸಿದ್ದಾರೆ. ಉತ್ತರಾಖಂಡದಲ್ಲಿ ಪರಿಸರದ ವಿಚಾರ ಮಾಡದೆ ಕೇಂದ್ರ ಸರ್ಕಾರವು ನೂರಾರು ಪ್ರಕಲ್ಪಗಳನ್ನು ಮಾಡಲು ಒಪ್ಪಿಗೆಯನ್ನು ಕೊಟ್ಟಿದೆ. ಧಾರೀದೇವಿಯ ಮಂದಿರವನ್ನು ಬೀಳಿಸಿ ಅಲಕನಂದಾ ನದಿಯ ಮೇಲೆ ಅಣೆಕಟ್ಟನ್ನು ಕಟ್ಟುವ ಯೋಜನೆಯು ಈ ಅನೇಕ ಪ್ರಕಲ್ಪದ ಒಂದು ಭಾಗವಾಗಿದೆ.

ವಿಕಾಸ ಪ್ರಕಲ್ಪಗಳಿಗೆ ಸ್ಥಾನಿಕರ ವಿರೋಧಗಳು ಆಗುತ್ತಲೇ ಇರುವವು. ಧಾರೀದೇವಿಯ  ಮಂದಿರವನ್ನು ಬೀಳಿಸಿ ಅಣೆಕಟ್ಟನ್ನು ಕಟ್ಟುವ ಯೋಜನೆಗೆ ಕೂಡ ಇದೇ ಪ್ರಕಾರದ ವಿರೋಧವಾಗಿರಬೇಕೆಂದು ಸರ್ಕಾರವು ಎಣಿಸಿಕೊಂಡಿತ್ತು. ಆದ್ದರಿಂದ ಈ ಮಂದಿರದೊಡನೆ ಜೋಡಿದ್ದ ಶ್ರದ್ಧಾಭಾವನೆಯ ವಿಚಾರವನ್ನು ಮಾಡುವ ಅಗತ್ಯ ಸರ್ಕಾರಕ್ಕೆ ತೋರಲಿಲ್ಲ. ಮಾತ್ರ ಯಾವ ಶ್ರದ್ಧೆಯಿಂದ  ಈ ಚಾರ್ ಧಾಮಿನ ಯಾತ್ರೆಯನ್ನು ಮಾಡುವರು , ಆ ಶ್ರದ್ಧಾಭಾವನೆಯ ಮೇಲೆಯೇ ಈ ನಮ್ಮ ಪ್ರಕಲ್ಪವು ಆಘಾತವನ್ನು ಮಾಡುತ್ತಿದೆ ಇದನ್ನು ಪ್ರಕಲ್ಪ ಯೋಜಿಸುವವರು ಮರೆತು ಹೋದರು. ಅದರ ಭಯಂಕರ ವೆಚ್ಚವನ್ನು ನಾವು ಹಿಂದಿರುಗಿ ಕೊಡಬೇಕಾಗುತ್ತಿದೆಯೆಂದು ಸ್ಥಾನಿಕರು ಹೇಳುತ್ತಿದ್ದಾರೆ. ಮತ್ತು ವಿಶೇಷವೆಂದರೆ ಧರ್ಮಶ್ರದ್ಧೆಯ ವಿಷಯದಲ್ಲಿ ಬಹಳ ದೊಡ್ಡ ಆಸ್ಥೆವಿಲ್ಲದ ಪರಿಸರವಾದಿಗಳು ಕೂಡ ಅಣೆಕಟ್ಟಿನ ವಿರೋಧ ಮಾಡುತ್ತಿದ್ದರು. ಅಂದರೆ ಶ್ರದ್ಧಾಭಾವ ಮತ್ತು ಪರಿಸರ ಇವೆರಡರ ಅನಾದರ ಮಾಡಿ ಸರ್ಕಾರವು ಅಲಕನಂದೆಗೆ ಅಣೆಕಟ್ಟು ಕಟ್ಟುವ ನಿರ್ಣಯವನ್ನು ತೆಗೆದುಕೊಂಡಿತು.

ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಈ ಆಪತ್ತಿಯು ಬರಲಿಲ್ಲ, ಆದರೆ ಈ ಆಪತ್ತಿಯ ಕಾರಣ ಪರಿಸರವಾಗಿದೆ ಎಂದು ತಿಳಿಯುತ್ತಿರುವವರು ಕೂಡ ೮೦೦ ವರ್ಷದ ಪುರಾತನದ ದೇವಸ್ಥಾನವನ್ನು ಸಮಭೂಮಿ ಮಾಡುವಾಗ, ಸರ್ಕಾರ ತೋರಿಸಿದ ಅಜಾಗರೂಕತೆ ನಂಬಲು ಅಸಾಧ್ಯ. ಈ ಆಪತ್ತಿ ಬಂದಿರದಿರದಿದ್ದರೆ ಕೂಡ ಸರ್ಕಾರವು ಜನತೆಯವರ ಭಾವನೆಯ ಬಗ್ಗೆ ಇಷ್ಟು ಅಸಂವೇದನೆಶೀಲವಾಗಿರುವದು ಸರ್ವಥಾ ಅಯೋಗ್ಯವೇ ಆಗಿದೆ. ಆದರೆ ವಿದ್ಯುತ್ತಿನ ಪ್ರಕಲ್ಪಕದ ಹೆಸರಿನಲ್ಲಿ ’ದೇವಭೂಮಿ’ಯಾಗಿರುವ ಹಿಮಾಲಯದಲ್ಲಿ ಮನಸ್ಸಿಗೆ ಬಂದಂತೆ ಮಾಡುವುದನ್ನು ನೋಡಿದರೆ , ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಭೂಮಿಯಲ್ಲಿ ಶ್ರದ್ಧೆಯ ಜೊತೆಗೆ ಪರಿಸರವನ್ನು ಕೂಡ ದುರ್ಲಕ್ಷಿಸುತ್ತಿದೆ ಎಂದು ತೋರಿ ಬರುವದು.

ಗಂಗೆಯ ಪ್ರವಾಹದ ಮೇಲೆ ಕಟ್ಟಲ್ಪಟ್ಟ ಅಣೆಕಟ್ಟು ವಿಧ್ಯುತ್ತಿನ ನಿರ್ಮಾಣಕ್ಕಾಗಿ ಆವಶ್ಯಕವೆಂದು ಸರ್ಕಾರದ ಕಡೆಯಿಂದ ಹೇಳಲಾಗುತ್ತಿದೆ. ಆದರೆ ಇದರದ್ದು ಗಂಗೆಯ ಪ್ರವಾಹದ ಮೇಲೆ ವಿಪರೀತ ಪರಿಣಾಮವಾಗುತ್ತಿದೆ. ಪ್ರವಾಹದ ಮೇಲೆ ಪರಿಣಾಮವಾಗುವುದರಿಂದ ಗಂಗೆಯು ಹೆಚ್ಚು ಪ್ರದೂಷಿತವಾಗುತ್ತಿದೆ ಇದನ್ನು ಸರ್ಕಾರ ಸ್ವೀಕರಿಸಲು ಸಿದ್ಧವಿಲ್ಲ. ಇದು ಕೇವಲ ಶ್ರದ್ಧೆಗೆ ಸೀಮಿತವಾದ ವಿಷಯವಾಗಿರದೆ ಹಿಮಾಲಯದ ನದಿಗಳ ಮೇಲೆ ಭಾರತೀಯವರ ಜೀವನ ಅವಲಂಬಿಸಿದೆ ಇದನ್ನು ಸರ್ಕಾರಕ್ಕೆ ಮನಗಾಣಿಸಿಕೊಡಬೇಕಾಗಿದೆ. ಪರಿಸರದ ನಾಶದಬಗ್ಗೆ ಚಿಂತೆ ವ್ಯಕ್ತ ಮಾಡುವಾಗ , ಭಾರತದ ಧರ್ಮಸಂಸಕೃತಿಯಿಂದ ಅರ್ಥಕಾರಣದವರೆಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ವದ್ದಾಗಿರುವ ನದಿಗಳ ಕುರಿತಾಗಿ ಸರ್ಕಾರದ ಯಂತ್ರಣೆಯು ಇಷ್ಟು ಅಜಾಗರೂಕತೆಯನ್ನು ಹೇಗೆ ತೋರಿಸಬಲ್ಲದು ಇಂತಹ ಪ್ರಶ್ನೆಯನ್ನು ಉತ್ತರಾಖಂಡದಲ್ಲಿ ಈ ಆಪತ್ತಿಯ ಕಾರಣದಿಂದಾಗಿ ಕೇಳಲಾಗುತ್ತಿದೆ. ಸಂಪೂರ್ಣ ಲೋಕಶಾಹಿವಾದಿಯ ಮಾಧ್ಯಮವೆನಿಸಿಕೊಂಡ ಇಂಟರ್ ನೆಟ್ಟಿನ ಮೇಲೆ ಬರುತ್ತಿರುವ ಪ್ರತಿಕ್ರಿಯೆಗಳು ಸರ್ಕಾರದ ಈ ಅಜಾಗರೂಕತೆಯ ಮೇಲೆ ಆಕ್ರಮಣವನ್ನು ಮಾಡುತ್ತಿದೆ.

ಸೋಶಲ್ ನೆಟ್ ವರ್ಕಿಂಗ್ ಸಂಕೇತ ಸ್ಥಳಗಳಲ್ಲಿ ಕೂಡ ಸರ್ಕಾರವು ತೋರಿಸುತ್ತಿರುವ ಅಸಂವೇದನೆಶೀಲತೆಯ ಮೇಲೆ ಬಹಳ ಪ್ರಖರವಾದ ಮತಪ್ರದರ್ಶನಗಳು ಆಗುತ್ತಿವೆ. ಇದರಕಡೆ ರಾಷ್ಟ್ರೀಯ ಮಾಧ್ಯಮಗಳಿಗೂ ಕೂಡ  ಗಮನ ಸೆಳೆಯಬೇಕಾಯಿತು. ಈ ಪ್ರಳಯವು ಧಾರೀದೇವಿಯ ಮಂದಿರವನ್ನು ಬೀಳಿಸಿದ್ದರಿಂದ ಅಯಿತೇನು? ಇಂತಹ ಪ್ರಶ್ನಾರ್ಥಕ ಶೀರ್ಷಿಕೆಯನ್ನು ಕೊಟ್ಟು, ಇದರ ಕುರಿತಾಗಿ ವೃತ್ತವನ್ನು ಪ್ರಸಿದ್ಧ ಮಾಡಲಾಗುತ್ತಿದೆ. ಮತ್ತು ಅದೇ ಸಮಯದಲ್ಲಿ ಗಂಗಾ ನದಿಯನ್ನು ರಾಷ್ಟೀಯಕರಣ ಮಾಡಬೇಕೆಂಬ ಕೇಳಿಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಲ್ಲಿ ಮಾಡಲಾಗುತ್ತಿದೆ. ಭಾರತೀಯ ಸಂಸಕೃತಿಯಲ್ಲಿ ಅಸಾಧಾರಣ ಸ್ಥಾನವಿರುವ ಹಿಮಾಲಯದ ನದಿಗಳ ಮತ್ತು ಅದರಿಂದ ಪರಿಸರದ ಸಂರಕ್ಷಣೆ ಮಾಡುವ ಕೋರಿಕೆ ಕೇವಲ ಧರ್ಮದ ಮೇಲೆ ಶ್ರದ್ಧೆವಿರುವ ಜನರಲ್ಲದೆ ಪರಿಸರದ ರಕ್ಷಣೆಗಾಗಿ ಹೋರಾಡುವವರು ಕೂಡ ಅಷ್ಟೇ ಆಸ್ಥೆಯಿಂದ ಮಾಡುತ್ತಿದ್ದಾರೆ. ಆದ್ದರಿಂದ ಯಾರಿಗೂ ಕೂಡ ಇದರೆಡೆ ದುರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ .

ಜನರ ಭಾವನೆಯ ಕಡೆ ದುರ್ಲಕ್ಷ್ಯ ಮಾಡಿ ಯಾವ ಪ್ರಕಾರದ ನಿರ್ಣಯವನ್ನು ಕೂಡ ತೆಗೆದುಕೊಳ್ಳಬಹುದು ಮತ್ತು ಅದರ ಪರಿಣಾಮದಿಂದ ತನ್ನನ್ನು ಬೇರೆ ಮಾಡಿಡಬಹುದು ಈ ಭ್ರಮೆಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಇರಕೂಡದು. ಧಾರೀದೇವಿಯ ಮಂದಿರವನ್ನು ಬೀಳಿಸಿದ ಮೇಲೆ ಆದ ವಿನಾಶ, ಬಲಿಹೋದ ಸಂಬಂಧಿಕರಿಗೆ ಸಹಾಯನಿಧಿ ಘೋಷಣೆ ಮಾಡಿ ಅಥವಾ ಹೊಸ ಯೋಜನೆಗಳನ್ನು ಕೈಕೊಳ್ಳುವ ಘೋಷಣೆಮಾಡುವುದರಿಂದ ಕಳೆದದ್ದನ್ನು ಪಡೆಯಲು ಸಾಧ್ಯವಿಲ್ಲ.

ಬೇರೆಯವರ ಶ್ರದ್ಧೆಯ ಮೇಲೆ ಹಲ್ಲೆ ಮಾಡುವಾಗ ,ಅದರ ಮೇಲೆ ಯಾವ ಮಾರ್ಗದಿಂದಲಾದರೂ ಪ್ರತಿಕ್ರಿಯೆ ಬರುವುದು , ಇದನ್ನು ಸರ್ಕಾರ ಧ್ಯಾನ ಕೊಟ್ಟರೆ ಒಳ್ಳೆದು. ಹತೋಟಿಯಲ್ಲಿರದ ನದಿಗಳನ್ನು ತಡೆಗಟ್ಟಲು ಅಥವಾ ಕೋಪಿತಗೊಂಡ ನಿಸರ್ಗವನ್ನು ನಿರ್ಬಂಧಿಸುವ ಉಪಾಯಗಳು ಇಂದೂ ಕೂಡ ವಿಜ್ನಾನ ತಂತ್ರಜ್ನಾನಿಗಳಿಗೆ ಸಿಗಲಿಲ್ಲ. ಆದ್ದರಿಂದ ವಿನಾಶಕ್ಕೆ ಆಮಂತ್ರಣವನ್ನು ಕೊಡುವ ’ಅಧಾರ್ಮಿಕ ವಿಕಾಸ’ದ ಪುರಸ್ಕಾರ ಮಾಡುವುದನ್ನು ಸರ್ಕಾರ ಇಲ್ಲಿಯೇ ನಿಲ್ಲಿಸಬೇಕು. ಕೋಪ ದೈವಿವಿದೆಯೇ ಅಥವಾ ನೈಸರ್ಗಿಕ ಇದರ ಅಲೋಚನೆ ಮಾಡುವುದಕ್ಕಿಂತ ,ತನ್ನ ತಪ್ಪನ್ನು ಸ್ವೀಕರಿಸಿ ಅದನ್ನು ತಿದ್ದಲು ಸರ್ಕಾರ ಮುಂದೆಹೆಜ್ಜೆ ಹಾಕಬೇಕು. ಹೀಗೆ ಮಾಡಿದ್ದಲ್ಲಿ ಸರ್ಕಾರದ  ಸಂವೇದನಶೀಲತೆಯು ಇನ್ನೂ ಉಳಿದಿದೆಯೆಂದು ಸಿದ್ಧವಾಗುವದು. ಮತ್ತು ಸ್ವಲ್ಪ ಪ್ರಮಾಣದಲ್ಲಿಯಾದರೂ ವಿಶ್ವಾಸವಿಡುವಂತಹದಾಗುವದು. ಇಲ್ಲದಿದ್ದರೆ ಭಯಾನಕ ಸಂಕಟಗಳ ಮಾಲೆಗಳಿಗೆ ಎದುರು ಹೋಗುವಾಗ , ಸರ್ಕಾರಕ್ಕೆ ಒಂದೇ ಸಮಯದಲ್ಲಿ ದೈವಿ, ನೈಸರ್ಗಿಕ ಹಾಗು ಜನರ ಅವಕೃಪೆಯನ್ನು ಎದುರಿಸಬೇಕಾಗುವದು.



- ಸಿದ್ಧಾರ್ಥ ನಾಯೀಕ್