Monday 4 March 2013

ನಾನು ಅನಿರುದ್ಧನಿದ್ದೇನೆ


ತನ್ನ ಐವತ್ತನೇಯ ಜನ್ಮದಿವಸದ ಅವಸರದಂದು ಪ್ರಕಾಶಿತವಾಗುವ ದೈನಿಕದ ವಿಶೇಷ ಆವೃತ್ತಿಯ ಅಗ್ರಲೇಖ ಹಾಗು ತನ್ನದೇ ವಿಷಯದಲ್ಲಿ ಬರೆಯುವ, ಬಹುಶಃ ನಾನು ಏಕಮೇವ ಕಾರ್ಯಕಾರೀ ಸಂಪಾದಕನಾಗಿರಬೇಕು. ನನ್ನ ಮಾಯೀ ನನ್ನ ಬಾಲ್ಯದಿಂದಲೂ ಅನೇಕವೇಳೆ, "ಇವನು ಏನು ಮಾಡುವನೊ, ಯಾವತ್ತು ತಿಳಿಯುವುದಿಲ್ಲ" ಯೆಂದು ಹೇಳುತ್ತಿದ್ದಳು.  ಆದರೆ ನನ್ನ ತಾಯೀ ನನಗೆ "ಚಕ್ರಮಾದಿತ್ಯ ಚಮತ್ಕಾರ" ಅನ್ನುತಿದ್ದಳು. ಬಹುಶಃ ನನ್ನ ಬಾಲ್ಯಕಾಲದ ಆ ವಿಚಿತ್ರ ಸ್ವಭಾವದ ವಿಕಾಸ ಸದಾ ಆಗುತ್ತಿರಬೇಕು. ಪ್ರತಿಯೊಬ್ಬನಿಗೂ ಶಾಲೆಯ ಶಿಕ್ಷಣ ಮುಗಿಸಿದ ನಂತರ ಒಂದು ವೇಳೆ ಯಾವುದೇ ಮಗ್ಗಿ ಮರೆತರೂ ಸಹ "ನಾನೊಂದಲೆ ನಾನು ರಿಂದ ಹಿಡಿದು ನಾನ್ಹತ್ಲೇ ನಾನು"  ಈ ಮಗ್ಗಿಯು ಸಹಜವಾಗಿ ಬರುತ್ತದೆ ಕಾರಣ ಈ "ಅಹಂ" ಹತ್ತು ದಿಕ್ಕುಗಳಲ್ಲಿ ಮನಸ್ಸಿನ ಕುದುರೆಯ ಮೇಲೆರಿಸಿ ಬೇಕಾಗಿರುವಾಗ ಬೇಕಾದಂತೆ  ಬಳಸಬಲ್ಲನು. ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು, ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ, ನನಗೆ ಇದು ಬೇಕು ಮತ್ತು ನನಗೆ ಅದು ಬೇಡಾ, ನಾನು ಇದನ್ನು ಮಾಡಿರುವೆನು ಮತ್ತು ನಾನು ಅದನ್ನು ಮಾಡಿರುವೆನು, ಹೀಗೆ ಅನೇಕ ರೂಪಗಳಲ್ಲಿ ಪ್ರತಿಯೊಬ್ಬನ ಈ "ಅಹಂ" ಜೀವನಪೂರ್ತಿ ಆಟಾಡವಾಡುತಿರುವದು. ಈ ಅನಿರುದ್ಧನಾದರು ಸಣ್ಣ ಮಕ್ಕಳ "ಧಾಂಗಡಧಿಂಗಾ" ಶಿಬಿರದ ಪ್ರಬಲ ಸಮರ್ಥಕನಾಗಿರುವೆನು.  ಹೀಗಿರುವಾಗ ಈ ಅನಿರುದ್ಧನ "ಅಹಂ" ಶಾಂತವಾಗಿ ಕೂಡಲೂ ಸಾಧ್ಯವೇ? 


ನಾನು ಹೀಗಿರುವೆನು ಮತ್ತು ನಾನು ಹಾಗಿರುವೆನು - ನಾನು ಹೇಗಿರುವೆನು ಅದು ಕೇವಲ ನನಗೆ ತಿಳಿದಿರುವುದು. ಆದರೆ ನಾನು ಹೇಗೆ ಇರುವುದಿಲ್ಲವೆಂಬುವುದು ಮಾತ್ರ ನನಗೆ ಗೊತ್ತಿಲ್ಲ. ನಾನು ಹೇಗಿರುವೆನು? ಅದು ನನ್ನ ಆ ಸನ್ನಿವೇಶದಲ್ಲಿ ಅಸ್ತಿತ್ವವಾಗಿದ್ದ ಆ ಮಾನವನನ್ನು ಅವಲಂಬಿಸಿರುವುದಿಲ್ಲ, ಆ ಪರಿಸ್ಥಿತಿಮೇಲೆ ಸಹ ಅವಲಂಬಿತವಾಗಿಲ್ಲ. ಪಕ್ಕದ ಮನುಷ್ಯನು ಮತ್ತು ಪರಿಸ್ಥಿತಿಯು ಯಾವುದೇ ಪ್ರಕಾರದಾಗಿರಲಿ, ನಾನು ಮಾತ್ರ ಹಾಗೆಯೇ ಇರುವೆನು ಕಾರಣ ನಾನು ಸದಾ ವರ್ತಮಾನಕಾಲದಲ್ಲಿಯೇ ಸಂಚರಿಸುವೆನು ಮತ್ತು ವಾಸ್ತವತೆಯ ಅರಿವನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ. ಭೂತಕಾಲದ ಅರಿವು ಹಾಗು ಸ್ಮೃತಿ ವರ್ತಮಾನಕಾಲದಲ್ಲಿ ಅಧಿಕಾಧಿಕ ಜಾಗರೂಕತೆಯಾಗಿರಲು ಮತ್ತು ಭವಿಷ್ಯಕಾಲದ ಮುನ್ಸೊಚನೆಯು ವರ್ತಮಾನಕಾಲದಲ್ಲಿ ಎಚ್ಚರಿಕೆಯಿಂದಿರಲು ಮಾತ್ರ, ಇದು ನನ್ನ ವೃತ್ತಿ.

ನಾನು ಒಳ್ಳೆಯವನು ಅಥವಾ ಕೆಟ್ಟವನು- ಇದನ್ನು ತೀರ್ಮಾನಿಸುವ ಅಧಿಕಾರವನ್ನು ಸಂಪೂರ್ಣವಾಗಿ ನಾನು ಇಡೀ ಜಗತ್ತಿಗೆ ಕೊಟ್ಟಿರುವೆನು ಕಾರಣ ಇತರ ಯಾರೇ  ಆಗಲಿ ನನ್ನನ್ನು ಏನೇ ಅಂದರು ಅದಕ್ಕೆ ನಾನು ಗಮನ ನೀಡುವುದಿಲ್ಲ. ಕೇವಲ ನನ್ನ ದತ್ತಗುರು ಹಾಗು ನನ್ನ ಗಾಯತ್ರಿಮಾತೆಯವರಿಗೆ ಇಷ್ಟಪಡುವ ರೀತಿಯಲ್ಲಿ ಇರಬೇಕು ಎಂಬುವುದೇ ನನ್ನ ಜೀವನದ ಏಕಮೇವ ಉದ್ದೇಶವಿದೆ ಮತ್ತು ಅವರದೇ ವಾತ್ಸಲ್ಯದಿಂದ ಅವರು ಬಯಸಿದಂತೆ ನಾನು ರೂಪಗೊಳ್ಳುವೆನು.   

ನಾನೇನು ಹೀಗಿಲ್ಲ ಮತ್ತು ನಾನೇನು ಹಾಗಿಲ್ಲ - ನಾನು ಹೇಗೆ, ಎಲ್ಲಿ ಮತ್ತು ಯಾವಾಗ ಇರುವುದಿಲ್ಲವೆಂಬುದು ಮಾತ್ರ ನನಗೆ ನಿಜವಾಗ್ಲೂ ಗೊತ್ತಿಲ್ಲ ಆದರೆ ನಾನು ಯಾವುದರಲ್ಲಿ ಇಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಮತ್ತು ಇದುವೇ ನನ್ನ ಪ್ರತಿಯೊಂದು ಹಾದಿಯ ಪ್ರಕಾಶ.     

ನನಗೆ ಇದು ಬೇಕು ಮತ್ತು ನನಗೆ ಅದು ಬೇಡ - ನನಗೆ ಭಕ್ತಕಾರಣ ಬೇಕು ಮತ್ತು ರಾಜಕಾರಣ ಬೇಡಾ, ನನಗೆ ಸೇವೆಯನ್ನು ಸಲ್ಲಿಸುವುದು ಬೇಕು ಆದರೆ ಯಾವುದೇ  ಸ್ಥಾನ ಬೇಡ, ನನಗೆ ಮಿತ್ರರ ಪ್ರೀತಿಯ ಸಿಂಹಾಸನ ಬೇಕು ಆದರೆ ಆಳ್ವಿಕೆ ಬೇಡ, ನನಗೆ ಅಹಿಂಸೆ ಬೇಕು ಆದರೆ ದುರ್ಬಲತೆ ಬೇಡ, ನನಗೆ ಸರ್ವಸಮರ್ಥತೆ ಬೇಕು ಆದರೆ ಅತ್ಯಾಚಾರ ಬೇಡ, ಬಲ ಬೇಕು ಆದರೆ ಹಿಂಸೆಯು ಬೇಡ, ನಾನು ಪರಮೇಶ್ವರನ ಪ್ರತ್ಯೇಕ ಭಕ್ತನ ದಾಸ್ಯತ್ವ ಸ್ವೀಕರಿಸಲು ಉತ್ಸುಕನಾಗಿರುವೆನು ಆದರೆ ದಾಂಭಿಕ ಮೋಸಗಾರಿಕೆ ಮತ್ತು ಮೂಢನಂಬಿಕೆಗಳ ನಾಯಕತ್ವ ಬೇಡ.   

ಅನೇಕರಿಗೆ ನಾನು ಯಾರಿಗೂ ಭೇಟಿಯಾಗಲು ಹೋಗುದಿಲ್ಲವೆಂದು ಕೋಪ ಬರುತ್ತದೆ ಆದರೆ ನನಗೆ ಯಾರಿಂದಲೂ ಏನು ಸ್ವೀಕರಿಸುವುದಿರುವುದಿಲ್ಲ  ಹಾಗೆಯೇ ಯಾರಿಗೂ ಏನು ನೀಡುವುದಿರುವುದಿಲ್ಲ. ಆಗ ಯಾರಿಗೂ ಭೇಟಿಯಾಗುವ ಪ್ರಶ್ನೆ ಎಲ್ಲಿ ಉದ್ಭವಿಸುತದೆ? ನಾನು ನನ್ನ ಮಿತ್ರರಿಗೆ ಮಾತ್ರ ಬೇಟಿಯಾಗುವೆನು ಕಾರಣ "ಆಪ್ತಸಂಬಂಧ" ಅಂದರೆ ಲೇವಾ-ದೇವಿವಲ್ಲದ ಏಕಮೇವ ಒಲುಮೆಯ ಭೇಟಿಯೇ ಕಾರಣವಾಗಿರುತ್ತದೆ, ಆದ್ದರಿಂದ ನಾನು ಬಡ್ಡಿರಹಿತ ಭೇಟಿಯನ್ನು ಬಯಸುತ್ತೆನೆ, ಆದರೆ ಲೇಣಿ-ದೇಣಿ ಅಥವಾ ವಿಚಾರಮಂಥನದ ಭೇಟಿಯು ಬಯಸುವುದಿಲ್ಲ.

ನನಗೆ ಜ್ಞಾನ ಬೇಡ ಅಂದರೆ ಜ್ಞಾನದ ಕಾರ್ಯಶೂನ್ಯ ಶಬ್ದಗಳು ಮತ್ತು ಪ್ರದರ್ಶನ ಬೇಡವಾಗುವುದು ಆದರೆ ನನಗೆ ಪರಿಶ್ರಮಪೂರ್ವಕ ಜ್ಞಾನದ ಸೃಜನಾತ್ಮಕ ಕಾರ್ಯಕ್ಕಾಗಿ ನಿಸ್ವಾರ್ಥ ಬಳಕೆಯು ಅಗತ್ಯವಾಗಿದೆ.

ನಾನು ಇದನ್ನು ಮಾಡಿದೆನು ಮತ್ತು ನಾನು ಅದನ್ನು ಮಾಡಿದೆನು - "ನಾನು ಏನೂ ಮಾಡುವುದಿಲ್ಲ, ಅಥವಾ ನಾನು ಯಾವತ್ತಿಗೂ ಎಲ್ಲವನ್ನು ಮಾಡುತ್ತಿರುವುದಿಲ್ಲ" ಇದು ನನ್ನ ಅಂತಿಮ ಶ್ರದ್ಧೆಯಿರುವುದು.  ಆಗ ಈ ನನ್ನ "ಅಹಂ" ಸ್ವಸ್ಥವಾಗಿ ಕುಳಿತು ನಿಷ್ಕ್ರಿಯವಿರುವುದೇ? ಅದಂತು ಸಾಧ್ಯವೇ ಇಲ್ಲ. ಈ ಅನಿರುದ್ಧನ "ಅಹಂ" ಆ "ಅಹಂ ಇಲ್ಲದ" ಪ್ರತ್ಯೇಕ ಶ್ರದ್ಧಾವಾನನ ಜೀವನಪ್ರವಾಹವನ್ನು ಗಮನಿಸುತ್ತಿರುವನು ಮತ್ತು ಆ ಪ್ರವಾಹದ ವೇಗ ನಿಲ್ಲುವುದಿಲ್ಲ ಹಾಗು ಪಾತ್ರ ಒಣಗುವುದಿಲ್ಲ, ಎಂಬುದರ ಕಾಳಜಿವಹಿಸಲು  "ಅಹಂ ಇಲ್ಲದ" ಉಗಮ ಅವನದೇ ಪ್ರೇಮದಿಂದ ಶ್ರದ್ಧಾವಾನನ ಜೀವನನದಿಯಲ್ಲಿನ ಎಲ್ಲಾ ಅಡೆತಡೆಗಳನ್ನು ದೂರ ಮಾಡುತ್ತಾ ಸತತವಾಗಿ ಹರಿಯುತ್ತಿರಲು ಸುರಿಯುತ್ತಿರುವೆನು. ನನಗೆ ಹೇಳಿ, ಇದರಲ್ಲಿ ನನ್ನದೇನಿದೆ?

ನಾನು ಸತ್ಯ, ಪ್ರೇಮ ಮತ್ತು ಆನಂದ ಈ ಮೂರು ಮೂಲಭೂತ ಗುಣಗಳನ್ನು ಅತ್ಯಂತ ಮೆಚ್ಚುವೆನು ಆದುದ್ದರಿಂದ ಅಸತ್ಯ, ದ್ವೇಷ ಮತ್ತು ದುಃಖ ಇವುಗಳ ವಿರೋಧ ನನ್ನ ನೈಸರ್ಗಿಕ ಗುಣಧರ್ಮವಾಗಿದೆ; ಇದರರ್ಥ, ಈ ಕಾರ್ಯವು ತನ್ನಿಂದ ತಾನೆ ಕಾರ್ಯಗತವಾಗಿದೆ. ಕಾರಣ ಯಾವ ಸ್ವಭಾವವಿರುವುದೋ ಅದು ತನ್ನಿಂದ ತಾನೆ ಕಾರ್ಯಗತವಾಗುತ್ತದೆ, ಅದಕ್ಕೊಸ್ಕರ ಬೇಕೆಂದಲೇ ಏನು ಮಾಡುವ ಆವಶ್ಯಕತೆಯು ಇರುವುದಿಲ್ಲ.

ಪ್ರಭುರಾಮಚಂದ್ರರ ಮರ್ಯಾದಾಯೋಗ, ಭಗವಾನ ಶ್ರೀಕೃಷ್ಣರ ನಿಷ್ಕಾಮ ಕರ್ಮಯೋಗ ಮತ್ತು ಶ್ರೀಸಾಯೀನಾಥರ ಮರ್ಯಾದಾಧಿಷ್ಠಿತ ಭಕ್ತಿಯೋಗ ಇವು ನನ್ನ ಆದರ್ಶವಾಗಿವೆ. ನಾನು ಸ್ಥಿತಪ್ರಜ್ಞನಲ್ಲ, ನಾನು ಪ್ರೇಮಪ್ರಜ್ಞನಾಗಿರುವೆನು. ನಾನು "ವಾಸ್ತವತೆಯ" ಅಂದರೆ ಸ್ಥೂಲ ಸತ್ಯದೊಂದಿಗೆ ಬದ್ಧನಾಗದೆ ಯಾವುದರಲ್ಲಿ ಪಾವಿತ್ರ್ಯ ಉತ್ಪನ್ನವಾಗುವುದು ಅಂತಃ ಮೂಲಭೂತ ಸತ್ಯದೊಂದಿಗೆ ಬದ್ಧನಾಗಿರುವೆನು.                   

ನಾನು ಏನು ಮಾಡಬೇಕೆಂದು ಬಯಸುತ್ತೆನೆ? ನಾನು ಏನು ಮಾಡಲು ಹೋಗುತಿದ್ದೆನೆ? ನನ್ನ ಅಗ್ರಲೇಖ ಬರೆಯುವ ಕಾರಣವೇನಿದೆ? ನಾನು ಮೂರನೆ ವಿಶ್ವ ಮಹಾಯುಧ್ದದ ವಿಷಯದಲ್ಲಿ ಅಷ್ಟೊಂದು ಬರೆಯುವ ಕಾರಣವೇನಿದೆ? ನಾನು ಪ್ರವಚನ ಮಾಡುವುದು ಏತಕ್ಕಾಗಿ? ಇವುಗಳ ಉತ್ತರ ನನ್ನ ಹೃದಯಕ್ರಿಯೆ ಹೇಗೆ ನಡೆಯುತ್ತದೆ ಮತ್ತು ನಾನು ಉಸಿರಾಡುವಿಕೆ ಹೇಗೆ ಮಾಡುವೆನು ಅಷ್ಟೇ ಸುಲಭವಾಗಿದೆ, ನಿಜವೆಂದರೆ ಅದುವೇ ಉತ್ತರವಾಗಿದೆ.  

ನನ್ನ ಸ್ನೇಹಿತರೆ, ಕೇವಲ ಪವಿತ್ರತೆ ಮತ್ತು ಪ್ರೇಮ ಎಂಬ ಎರಡು ನಾಣ್ಯಗಳಿಗೆ ನಾನು ಒಲೆಯುವೆನು, ಇತರ ಯಾವುದೇ ಚಲನ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ನಿಜವೆಂದರೆ, ಈ ಅನಿರುದ್ಧನ "ಅಹಂ" ಕೇವಲ ನಿಮ್ಮದೇ ಆಗಿದೆ, ಅದು ಎಂದಿಗೂ ನನ್ನದಾಗಿರಲಿಲ್ಲ ಮತ್ತು ಎಂದಿಗೂ ನನ್ನದಾಗುವುದಿಲ್ಲ.

ಮಿತ್ರರ ಮಿತ್ರ,
ಅನಿರುದ್ಧ. 

Wednesday 27 February 2013

ಡಾ ಅನಿರುದ್ದ ಡಿ ಜೋಷಿಯವರ ಮೂರನೇ ವಿಶ್ವಯುಧ್ದ ಪುಸ್ತಕದ ಪ್ರಸ್ತಾವನೆ



ಕಾರಣವೆಂದರೆ........

ಮೂರನೆ ಸಹಸ್ತ್ರಕ ಆರಂಭವಾದಾಗಲೇ ಅಂದರೆ 11 ಸಪ್ತೆಂಬರ್ 2001 ರಂದು ಜಗತ್ತಿನ ಪ್ರತಿಯೊಂದು ರಾಷ್ಟ್ರವು ತನ್ನ ಸಂರಕ್ಷಣೆ ಮತ್ತು ಭವಿಷ್ಯದ ರಾಜಕೀಯ ಧೋರಣೆಯನ್ನು ಹೊಸತಾಗಿ ಪುನರ್ವಿಚಾರ ಮಾಡತೊಡಗಿತು. ಜಗೆತ್ತಿನ ಬಹುತೇಕ ಪ್ರಮುಖ ರಾಷ್ತ್ರಗಳಿಗೆ ಆತಂಕವಾದದ ಮಾರ್ಗಗಳ ಮೊದಲೇ ಪರಿಚಯವಾಗಿತ್ತು. ಅಮೇರಿಕಾ ಮತ್ತು ರಶ್ಯವು ಇಂತಹ ಆತಂಕವಾದಿಗಳ ಸಂಘಟನೆಗಳನ್ನು ಒಬ್ಬರೊಬ್ಬರ ವಿರುದ್ಧ ಪ್ರೋತ್ಸಾಹನೆ ಕೊಟ್ಟು ಉಪಯೋಗಿಸಿದ್ದರು. ಆದರೆ ಸಪ್ಟೆಂಬರ್ 11 ರಂದು ಆದ ಘಟನೆಯು ಕಡಿಮೆ ಸಮಯದಲ್ಲಿ ಹಾಗು ಕಡಿಮೆ ಖರ್ಚಿನಲ್ಲಿ ಆಗಿ ಹೋದದ್ದರಿಂದ ಆತಂಕವಾದಿಗಳ ಒಳಸಂಚಿನ ನಿಜ ಸಾಮರ್ಥ್ಯ ಪೃಥ್ವಿ ಮೇಲಿನ ಏಕಮೇವರಾಗಿರುವ ಅನಿರ್ಬಂಧರಾದ  ಅಮೇರಿಕೆಗೆ ಪೂರ್ಣವಾಗಿ ಅರಿವಾಯಿತು. ಕಳೆದ ಹಲವು ವರ್ಷಗಳಿಂದ ಭಾರತವು ಅನುಭವಿಸುತ್ತಿರುವ ಈ ಆತಂಕವಾದಿಗಳ ಒಳಸಂಚಿನ ಅನುಭವ ಅಮೇರಿಕಯ ಹಣೆಯ ಮೇಲೆ ಇಷ್ಟು ಜೋರಾಗಿ ಅಪ್ಪಳಿಸಿತು ಎಂದರೆ ಒಂದೇ ಕ್ಷಣದಲ್ಲಿ ಅಮೇರಿಕೆಯ ಮುಖ ಪೂರ್ಣವಾಗಿ ಸುಟ್ಟಿ ಹೋಯಿತು ಹಾಗು ಅಷ್ಟರ ತನಕ ಭಾರತವು ಆತಂಕವಾದಿಗಳ ಒಳಸಂಚಿನಕುರಿತಾಗಿ ಮಂಡಿಸಿದ ಪುರಾವೆಯನ್ನು ದುರ್ಲಕ್ಸಿಸಿದ ಅಮೇರಿಕೆಗೆ ಒಂದುಕಾಲದಲ್ಲಿ ತಾವೇ ಬೆಂಬಲಕೊಟ್ಟು ಜೋಪಾನ ಮಾಡಿದ ಈ ಆತಂಕವಾದಿಗಳ ವಿರುದ್ಧ ದೃಢದಿಂದ ಬಹಿರಂಗವಾಗಿ ನಿಲ್ಲಲೇಬೇಕಾಯಿತು.

ಈ ಲೇಖಮಾಲೆಯ ವಿಷಯ ಕೇವಲ ಆತಂಕವಾದ ಹಾಗು ಆತಂಕವಾದಿಗಳ ವಿರುದ್ಧ ಯುದ್ಧವಲ್ಲದೆ ಬರುವ ಕಾಲದಲ್ಲಿ ತೋರಿಬರುತ್ತಿರುವ ಜಾಗತೀಕ ಬದಲಾವಣೆಯ ಸಾಧ್ಯತೆಯ ವಿಚಾರವನ್ನು ಇಷ್ಟರವರೆಗೆ ಘಟಿಸಿದ ಘಟನೆಯ ಅಭ್ಯಾಸದ ಆಧಾರದ ಮೂಲಕ ಮಾಡುವುದಾಗಿದೆ.

ಸಂಘರ್ಷವೇ ಮುಂದೆ ಬರಲಿರುವ ಇಪತ್ತರಿಂದ ಇಪ್ಪತ್ತೈದು ವರ್ಷಗಳ ಕಾಲಕ್ಕಾಗಿ ಪೃಥ್ವಿಯ ಮೇಲೆ ಪ್ರತಿಯೊಂದು ಸ್ಥಳದಲ್ಲಿ ದೈನಂದಿನ ವ್ಯವಹಾರವಾಗಲಿದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ಮುಖ್ಯವೆಂದರೆ ಈ ಸಂಘರ್ಷದಲ್ಲಿ ಸೈಧ್ಯಾಂತಿಕ ಅಥವಾ ತಾತ್ವಿಕ ಮೂಲ್ಯಕ್ಕೆ ಯಾವುದೇ ಸ್ಥಾನವಿರುವದಿಲ್ಲ "ಬಲವೇ ಶ್ರೇಷ್ಟ"ವೆಂಬುವದು ಏಕಮೇವ ಸಿದ್ಧಾಂತವಾಗಲಿದೆ.  ಅದಕ್ಕಾಗಿ ರಾಜಕೀಯ ಕುಟಿಲಯುಕ್ತಿ ಹಾಗು ಕೂಟನೀತಿಗಳ ಉಪಯೋಗವಾಗಲಿದ್ದರೂ ಆಕ್ರಮಕ, ಹಿಂಸಕ ಹಾಗು ಅತ್ಯಂತಿಕ ಕ್ರೌರ್ಯದ ಅವಲಂಬನೆ ಮಾಡುವ ಸಂಖ್ಯಾತ್ಮಕ  ಬಲವು ಬಹಳ ಕಾಲದ ತನಕ ಈ ಸಂಘರ್ಷದಲ್ಲಿ ಅಧಿಕ ಬಲಶಾಲಿ ಹಾಗು ಯಶಸ್ವಿ ಆಗಲಿದೆ. ಒಮ್ಮೆ ಈ ಯುದ್ಧವು ಪ್ರಾರಂಭವಾಯಿತೆಂದರೆ ಹಾಗು ಅದರಲ್ಲಿ ಎರಡು ಕಡೆಯಿಂದ ಅಧಿಕಾಧಿಕ ಮಿತ್ರ ರಾಷ್ಟ್ರಗಳ ಸಮಾವೇಶವಾಗತೊಡಗಿದಾಗ ಅದೇ ಗತಿಯಲ್ಲಿ ಒಂದೊಂದೇ ಎಲ್ಲ ನೀತಿಮೂಲ್ಯಗಳ ಹಾಗು ಮರ್ಯಾದೆಗಳ ಉಲ್ಲಂಘನೆಯು ಬಹಿರಂಗವಾಗಿ ಆರಂಭವಾಗುವದು ಮತ್ತು ಅದರಲ್ಲಿ ತಮ್ಮ ಕೃತ್ಯಕ್ಕೆ ಸೋಗುಹಾಕಿ ನೈತಿಕ ಸಮರ್ಥನೆಯನ್ನು ಕೊಡುವ ಅವಶ್ಯಕತೆಯು ಯಾವ ಪಕ್ಶವು ಕೂಡ ಮಾಡಲಿಚ್ಛಿಸುವದಿಲ್ಲ ಇದು ಈಗಲು ಕೂಡ ಕೆಲವು ಅಂಶದಲ್ಲಿ ಅಗುತ್ತಲಿದೆ ಮತ್ತು ಇನ್ನು ಪ್ರತಿ ವರ್ಷಕ್ಕೆ ಇದರ ಪ್ರಮಾಣ ಪ್ರಚಂಡ ವೇಗದಲ್ಲಿ ಹೆಚ್ಚುತ್ತ ಹೋಗುವದು.


ಸಾಮನ್ಯ ಜನರ ಅಥವಾ ಕೆಲವು ಸಲ ರಾಜಕೀಯ ನೇತೃತ್ವದವರ ಕೂಡ ಯುದ್ಧಚರ್ಚೆ ಹಾಗು ಯುದ್ಧಮಿಮಾಂಸೆ ಇದು ಬಹಿರಂಗವಾಗಿ ಆಗಲು ಸಾಧ್ಯವೇ ಇಲ್ಲವೆಂದು ಅವರ ವಿಚಾರವಿರುವದು ಯಾಕೆಂದರೆ ಯುದ್ಧವೆಂದರೆ ರಹಸ್ಯಮಯ ಒಳಸಂಚಿನ ಆಕಸ್ಮಿಕ ಪ್ರಗಟಣೆಯ ಆವಿಷ್ಕಾರವಿರುವದು. ಅದರ ಜೊತೆ ಭಾರತದವರೇ ಆಗದೆ ಜಗತ್ತಿನ ಪ್ರತಿಯೊಂದು ದೇಶದ ತೊಂಬತ್ತು ಪ್ರತಿಶೇಕಡಕ್ಕಿಂತ ಹೆಚ್ಚು ಜನತೆಯರು ಯುದ್ಧ, ಯುದ್ಧದ ಹಿನ್ನೆಲೆಯ ರಾಜಕೀಯ ಕಾರಣ ಹಾಗು ಅದರ ಪರಿಪೂರ್ತಿ ಇದರ ವಿಷಯವಾಗಿ ಕೇವಲ ಅಲ್ಪ ಮಾಹಿತಿಯ ಮೇಲೆ ಯುದ್ಧದ ವಿಷಯವಾಗಿ ವಿಚಾರ ಮಾಡಬಲ್ಲರು ಆದರೆ ಯುದ್ಧದ ಪರಿಣಾಮ ಮಾತ್ರ ಈ ಸಾಮಾನ್ಯ ಜನತೆಯರಿಗೆ ನೂರು ಪಾಲಿನಷ್ಟು  ಸಹಿಸಬೇಕಾಗುವದು ಮತ್ತು ಹೊರೆಯಬೇಕಾಗುವದು.
                    
ಕೇವಲ ಪ್ರಜಾಸತ್ತಾತ್ಮಕವೇ ಈ ಯುದ್ಧದ ಭೀಷಣ ಸ್ವರೂಪವನ್ನು ಸೌಮ್ಯ ಮಾಡುವ ಏಕಮೇವ ಶಕ್ತಿಯಾಗಿರುವದು ಆದರೆ ಇಂದು ಜಗತ್ತಿನ ಎಷ್ಟು ರಾಜ್ಯದಲ್ಲಿ ಇಂತಹ ನಿಜವಾದ ಪ್ರಜಾಸತ್ತೆಯಿದೆ? ಸಂಸದೀಯ ಪ್ರಜಾಸತ್ತಾತ್ಮಕದ ಜನಕತ್ವವನ್ನು ಮೆರೆಯುವ ಬ್ರಿಟನ್ನಿನಲ್ಲಿ ಕೂಡ ಲೋಕಸತ್ತೆಯು ಭ್ರಷ್ಟಾಚಾರ ಹಾಗು ಸುಂದೋಪಸುಂದಿನದಿಂದ ಕ್ಸೀಣವಾಗುತ್ತ ಹೋಗುತ್ತಿದೆ. ಭಾರತದಂತ ಭೂಖಂಡ ದೇಶದಲ್ಲಿ ಭದ್ರವಾಗಿ ನೆಟ್ಟಿದ ಲೋಕಸತ್ತೆಯು ಕೂಡ, ಅಸಂಖ್ಯೆ ಚಿಕ್ಕ-ದೊಡ್ಡ ಪಕ್ಷದ ಕಾರಣದಿಂದಾಗಿ ದಿಶೆಹೀನವಾಗುತ್ತಿದೆ  ಹಾಗು ಭ್ರಷ್ಟಾಚಾರದ ಜೋರಾಗಿ ಸತತ ಸುರಿಯುತ್ತಿರುವ ಮಳೆಯಿಂದಾಗಿ "ಒದ್ದೆ ಬರಗಾಲದ" ದು:ಖ ಅನುಭವಿಸುತ್ತಿದೆ. ರಶಿಯ ಮತ್ತು ಚೀನ ಈ ಎರಡು ಮಹಾಸತ್ತಾತ್ಮಕದ ಹತ್ತಿರ ಲೋಕಸತ್ತೆಯು ಒಂದಂಶ ಕೂಡ ಸಂಶೋಧನೆಗಾಗಿಯೂ ಉಳಿದಿಲ್ಲ. ಅಮೇರಿಕೆಯ ಲೋಕಸತ್ತೆಯು ಆ ದೃಷ್ಟಿಯಿಂದ ನೋಡಲು ಅಧಿಕ ಸಶಕ್ತ ಹಾಗು ಸಕ್ಷಮ ಕಾಣುತ್ತಿದ್ದರು ಅತ್ಯಂತ   ವೇಗದಿಂದ ತರುಣ ವರ್ಗದಲ್ಲಿ ವ್ಯಸನದ ಪ್ರಮಾಣ ಹೆಚ್ಚುತ್ತಿದ್ದು ಮುಲ ಅಮೇರಿಕ ನಾಗರಿಕರಲ್ಲಿ ಉಚ್ಚಶಿಕ್ಸಣದ ಪ್ರಮಾಣ ಕಡಿಮೆ ಆಗುತ್ತಿದೆ, ಈ ಸಮಸ್ಯದೊಡನೆ ನಾಗರಿಕರ ಸಹಭಾಗ ಕಡಿಮೆಯಾಗುತ್ತಿರುವದರಿಂದ ಅಮೇರಿಕದ ಲೋಕಸತ್ತೆಯು ಕೂಡ ದೋಷರಹಿತವಾಗಿ ಉಳಿಯಲಿಲ್ಲ. ಅದರಲ್ಲಿ ಅಮೇರಿಕೆಯ ಗುಪ್ತಚರ ಸಂಘಟನೆಗಳು ಸ್ಥಾಪಿಸಿದ ಪ್ರಚಂಡ ಹಾಗು ಪ್ರಸಾರ ಶಾಖೆಗಳು ಅಮೇರಿಕೆಯಲ್ಲದೆ ಇತರ ದೇಶಗಳ ಪ್ರಸಾರಮಾಧ್ಯಮಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯಶಸ್ವಿಯಾಗುತ್ತಿದೆ.  ಭಾರತದ ಜನ್ಮ ಶತ್ರುವಾದ ಪಾಕಿಸ್ತಾನವೇ ಆತಂಕವಾದಿ ಗ್ರಂಥದ "ಅಮಂಗಲಾಚರಣ" ವಾಗಿದೆ ಹಾಗು ಇನ್ನು ಮುಂದಿನ ಕಾಲದಲ್ಲಿ ಪಾಕಿಸ್ತಾನ ಬಹಿರಂಗವಾಗಿ ಈ ಯುದ್ಧನಾಟ್ಯದ ಕಥೆಯನ್ನು ಆತಂಕವಾದಿಯ ನೇಪಥ್ಯದಿಂದ ಸಿಂಗರಿಸಲು ಆರಂಭಿಸಲಿದೆ.

ಮುಂದಿನ ಕಾಲದಲ್ಲಿ ಇವತ್ತಿನ ಸಮೀಕರಣ ನಾಳೆ ಇದ್ದೆ ಇರಬಹುದಿಂದಿಲ್ಲ, ಹಾಗಿರುವಾಗ ಬೆಳಗ್ಗಿನ ಏಳು ಗಂಟೆಯ ಸಮೀಕರಣ ಏಳಾಗಿ ಐದು ನಿಮಿಷದಲ್ಲಿ ಮೂಲ ಉದ್ದೇಶ ಸಾಧ್ಯವಾದ ಕೂಡಲೇ ಸಂಪೂರ್ಣವಾಗಿ ಎಸೆದುಬಿಟ್ಟದ್ದನ್ನು ಕಾಣಲು ಸಿಗುವದು.

ಇದು ಭವಿಷ್ಯಕಥೆನೆಯಲ್ಲ. ಈ ಅಭ್ಯಾಸ ಇತಿಹಾಸದದ್ದು ಮತ್ತು ಇಂದಿನ ಸ್ಥಿತಿಗಳ ಹಾಗು ಈ ಸಂಶೋಧನೆಯು ಜಾಗತಿಕ ರಂಗಮಂಚದ ಮೇಲಿನ ವಿವಿಧ ಪಾತ್ರಗಳ ಮನೋಗತದ. ಬರುವ ಇಪ್ಪತ್ತು ವರ್ಷದಲ್ಲಿ ಅಕ್ಷರಶ: ನೂರಾರು ಸ್ಥಳಗಳಲ್ಲಿ ಸಾವಿರಾರು ಘಟನೆಗಳು ಘಟಿಸಲಿರುವ ಅರಿವು ಪ್ರತಿಯೊಬ್ಬ ಸುಬುದ್ಧಿಗೆ ಹಾಗು ಕಲಿತ ವಿಚಾರವಂತನಿಗಾಗುತ್ತಿದೆ. ಈ ಕ್ಷಣಕ್ಕೆ ನೂರು ಘಟನೆಗಳಾಗುತ್ತಿರಬಹುದು ಆದರೆ ಇಲ್ಲಿ ಮಾತ್ರ ಕೇವಲ ಲೆಕ್ಕಮಾಡಿ ಹತ್ತು ಪ್ರಾತಿನಿಧಿಕಗಳ ಉಲ್ಲೇಖವಿದೆ. ಆದಕಾರಣ ಇನ್ನುಳಿದ ತೊಂಬತ್ತು ಘಟನೆಗಳ ದಾಖಲೆ ಮಾಡಲಿಲ್ಲ ಅಷ್ಟೆ, ಆದರೆ ಅದರ ಅಂತರ್ಭಾವ ಅಭ್ಯಾಸದಲ್ಲಿ ಖಂಡಿತ ಮಾಡಲಾಗಿದೆ.

ಪ್ರತಿವರ್ಷ ಕ್ಯಾಲೆಂಡರ್ (ದಿನದರ್ಶಿಕೆ) ಬರುವದು, ಕಾರಣ ಅದರಲ್ಲಿ ಒಂದು ನಿಶ್ಚಿತವಾದ ಸ್ವರೂಪದ ಗಣಿತ ಸೂತ್ರವಿದ್ದು ರಚನೆಯು ಇರುವದು ಆದರೆ ಬರಲಿರುವ "ಮೂರನೇ ಮಹಾಯುದ್ಧದ" ಕ್ಯಾಲೆಂಡರ್ ಮಾತ್ರ ದಿನನಿತ್ಯ ಹೊಸತಿರುವದು. 

ನನ್ನಂತಹ ನನ್ನ ಸಾಮಾನ್ಯ ಮಿತ್ರರಿಗೆ ಈ ಮೂರನೇ ಮಹಾಯುದ್ಧದ ಕಿಂಚಿತವಾಗಿ ಎರಡಂಶದಷ್ಟಾದರು ಪರಿಚಯವಾಗಲೆಂದು ಮಾಡಿದ ಈ ಲೇಖನಪ್ರಪಂಚ.
                                                                                                                                             .... ನನ್ನ ಮಿತ್ರರಿಗೆ,